ಛತ್ರಪತಿ ಶಿವಾಜಿ ಮಹಾರಾಜರ ಕಾರ್ಯವನ್ನು ಸರ್ವಸಾಮಾನ್ಯರ ವರೆಗೆ ತಲುಪಿಸಲು ಆಯುಷ್ಯದುದ್ದಕ್ಕೂ ಸವೆಯುತ್ತಿರುವ ಕರ್ಮಯೋಗಿ ಬಾಳಕೃಷ್ಣ ಅಲಿಯಾಸ್ ಆಪ್ಪಾ ಪರಬ (84 ವರ್ಷ ವಯಸ್ಸು) !

ಶ್ರೀ. ಆಪ್ಪಾ ಪರಬ ಅಂದರೆ ಶ್ರೀ. ಬಾಳಕೃಷ್ಣ ಸದಾಶಿವ ಪರಬ ! ಇವರು ಮೇ 8, 1940 ರಲ್ಲಿ ಮುಂಬೈಯಲ್ಲಿ ಜನಿಸಿದರು. ಅವರಿಗೆ ಬಾಲ್ಯಾವಸ್ಥೆಯಿಂದಲೇ ಶಿವಾಜಿಯ ಕಾಲದ ಕೋಟೆ-ದುರ್ಗಗಳ ಬಗ್ಗೆ ಅಪಾರ ಆಕರ್ಷಣೆ ! ಶಾಲೆಯ ಜೀವನದಿಂದ ಅವರು ಕೋಟೆಕೊತ್ತಲಗಳನ್ನು ಕಾಲನಾಡಿಗೆಯಿಂದ ಅವರಿಸಲು ಆರಂಭಿಸಿದರು. ಮೆಟ್ರಿಕ್ ಶಿಕ್ಷಣದ ನಂತರ ತಂದೆಯವರ ನಿಧನದ ನಂತರ ಸಹೋದರಿಯ ವಿವಾಹ ಹಾಗೂ ಇತರ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸುವಾಗಲೂ ಅವರು ದುರ್ಗಗಳ ಭ್ರಮಣದ ಹವ್ಯಾಸವನ್ನು ಬಿಡಲಿಲ್ಲ. ಸದ್ಯ ಶ್ರೀ. ಆಪ್ಪಾ ರವರಿಗೆ 84 ವರ್ಷ ವ್ಯಯಸ್ಸಾಗಿದೆ. ಅವರು ಒಟ್ಟು 250 ಕೋಟೆ-ಕೊತ್ತಲಗಳ ಭ್ರಮಣ ಮಾಡಿದ್ದಾರೆ. ಅವರಷ್ಟು ಕೋಟೆ-ಕೊತ್ತಲಗಳ ಭ್ರಮಣ ಮಾಡಿದವರಲ್ಲಿ ದೇಶದಲ್ಲಿ ಬೇರೊಬ್ಬರಿಲ್ಲ. ದುರ್ಗಗಳ ಭ್ರಮಣ ಮಾಡುವವರು ಹಾಗೂ ಅದರಲ್ಲಿ ಆಸಕ್ತಿಯಿರುವ ಅನೇಕ ಜನರಿದ್ದಾರೆ. ಆದರೆ ಅವರು ಮಾತನಾಡದ ಕೋಟೆ-ಕೊತ್ತಲಗಳಲ್ಲಿನ ಹಿಂದೂಗಳ ಪರಾಕ್ರಮದ ಇತಿಹಾಸ, ಮಾವಳೆಯರ ಶೌರ್ಯ, ಶಿವ-ಶಂಭುರವರ ಪರಾಕ್ರಮವನ್ನು ಮಹಾರಾಷ್ಟ್ರದಲ್ಲಿನ ಲಕ್ಷಾಂತರ ಯುವಕರ ವರೆಗೆ ತಲುಪಿಸಿದರು ಹಾಗೂ ಅವರಲ್ಲಿನ ಹಿಂದುತ್ವವನ್ನು ಜಾಗೃತಗೊಳಿಸಿದರು. ಶ್ರೀ. ಆಪ್ಪಾರವರ ಈ ಕೊಡುಗೆಯು ಆತುಲನೀಯವಾಗಿದೆ. ಶಿವಕಾಲೀನ ಕೋಟೆ-ಕೊತ್ತಲಗಳು ಶಿವಪ್ರತಾಪವನ್ನು ಕಂಡವು; ಆದರೆ ಈ ಮಾತುಬಾರದ ಕೋಟೆಗಳಿಗೆ ಗಂಡು ಮಾವಳೆಯರ ಇತಿಹಾಸವನ್ನು ಬರೆಯಲು ಬರುತ್ತಿರಲಿಲ್ಲ, ಹಾಡುಗಳನ್ನು ಹೇಳಲೂ ಬರುತ್ತಿರಲಿಲ್ಲ, ಸಾಹಿತ್ಯವನ್ನೂ ಮಂಡಿಸಲು ಬರುತ್ತಿರಲಿಲ್ಲ. ಆಪ್ಪಾರವರು ಸ್ವತಃ ಈ ಭಾವನೆಯ ಅಧ್ಯಯನ ಮಾಡಿದರು, ಸತ್ಯತೆಯನ್ನು ಪರೀಕ್ಷಿಸಲು ಸಂಶೋಧನೆ ಮಾಡಿದರು ಹಾಗೂ ಸಂದರ್ಭದೊಂದಿಗೆ ಶಿವಪ್ರತಾಪವನ್ನು ಮಹರಾಷ್ಟ್ರದೊಂದಿಗೆ ದೇಶವಾಸಿಗಳ ವರೆಗೆ ತಲುಪಿಸಿದರು. ಈ ಲೇಖನದ ಮಾಧ್ಯಮದಿಂದ ಆಧುನಿಕ ಮಾವಳೆಯ ಈ ಶಿವಕಾರ್ಯವು ಅವರದ್ದೇ ಶಬ್ದಗಳಲ್ಲಿ ತಿಳಿದುಕೊಳ್ಳೋಣ !


ವಿಶೇಷ ಮಾಲಿಕೆ

ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು

1. ರಕ್ತವನ್ನು ಹರಿಸಿ ಇತಿಹಾಸವನ್ನು ರಚಿಸಿದವರ ಇತಿಹಾಸವನ್ನು ಹೇಳಲು ಹಣ ಪಡೆಯುವುದು ಮಾನ್ಯವಿಲ್ಲ !

ಶ್ರೀ. ಅಪ್ಪ ಪರಬ ಅ<ದರೆ ಶ್ರೀ. ಬಾಳಕೃಷ್ಣ ಸದಾಶಿವ ಪರಬ

ಅನೇಕ ಇತಿಹಾಸಕಾರರು, ಭಾಷಣಕಾರರು ಹಣ ಪಡೆದು ರಾಷ್ಟ್ರಪುರುಷರ ಇತಿಹಾಸವನ್ನು ಹೇಳುತ್ತಾರೆ. ಇದು ಇವರೆಲ್ಲರದ್ದೂ ಉದ್ಯೋಗವಾಗಿರದೆ ಕೌಟುಂಬಿಕ ಜವಾಬ್ದಾರಿಗಳಿಂದಾಗಿ ಭಾಷಣಕಾರರು ಹಣ ಪಡೆಯುತ್ತಾರೆ. ಅನೇಕ ಜನರು ಭಾಷಣಗಳಿಗಾಗಿ ಉದ್ಯೋಗಿಗಳಂತೆ ಅಪಾರ ಪ್ರಮಾಣದಲ್ಲಿ ಹಣ ಪಡೆಯುತ್ತಾರೆ. ಆದರೆ ಆರ್ಥಿಕ ಸ್ಥಿತಿಯೂ ಉತ್ತಮವಾಗಿಲ್ಲದಿದ್ದರೂ ಶ್ರೀ. ಆಪ್ಪಾ ರವರು ಎಂದಿಗೂ ಇತಿಹಾಸವನ್ನು ಹೇಳಲು ಹಣ ಪಡೆಯಲಿಲ್ಲ. ಇತಿಹಾಸ ಹೇಳುವ ಸೇವೆಗಾಗಿ ಪ್ರದರ್ಶನದ ಆಯೋಜಕರು ನೀಡಲು ಇಚ್ಛಿಸಿದ ಮಾನಧನದಲ್ಲಿನ ಒಂದು ರೂಪಾಯಿಯನ್ನೂ ಅವರು ಸ್ವೀಕರಿಸಿಲ್ಲ. ಆಪ್ಪಾರವರು ತಮ್ಮ 10 ನೇ ವಯಸ್ಸಿನಲ್ಲಿ ಸಿಂಹಗಡದ ಪ್ರವಾಸದಲ್ಲಿ ಶಪಥ ಮಾಡಿದ್ದರು. ಅದು ಏನೆಂದರೆ, ಶಿವಕಾಲದಲ್ಲಿ ರಕ್ತವನ್ನು ಹರಿಸಿ ಇತಿಹಾಸವನ್ನು ರಚಿಸಿರುವ ವೀರರ ಇತಿಹಾಸವನ್ನು ಹೇಳುವ ಅಥವಾ ಬರೆಯುವ ಅವಕಾಶ ದೊರೆತರೆ ಅದಕ್ಕೆ ಮಾನಧನ ಪಡೆಯುವುದಿಲ್ಲ. ಅವರು ಆಯುಷ್ಯದುದ್ದಕ್ಕೂ ಈ ಶಪಥವನ್ನು ಚಾಚೂತಪ್ಪದೆ ಪಾಲಿಸಿದರು. ರಾಷ್ಟ್ರದ ಬಗ್ಗೆ ಸ್ವಾಭಿಮಾನಿಯಾಗಿರುವ ಪ್ರಖರ ಹಿಂದುತ್ವನಿಷ್ಠರೇ ಹೀಗೆ ಮಾಡಬಹುದು. ರಾಷ್ಟ್ರದ ಬಗ್ಗೆ ಸ್ವಾಭಿಮಾನವಿರುವ ಪ್ರಖರ ರಾಷ್ಟ್ರನಿಷ್ಠರೇ ಹೀಗೆ ಮಾಡಬಹುದು. ರಾಷ್ಟ್ರನಿಷ್ಠೆಯ ಬಗ್ಗೆ ಅನೇಕರು ಹರಟೆ ಹೊಡೆಯಬಹುದು; ಆದರೆ ವೈಯಕ್ತಿಕ ಜೀವನದಲ್ಲಿ ಅದನ್ನು ಅಂಗೀಕರಿಸುವವರು ಬೆರಳೆಣಿಕೆಯಷ್ಟೆ ಇರುತ್ತಾರೆ. ಶ್ರೀ. ಆಪ್ಪಾರವರು ಇವರಲ್ಲಿನ ಓರ್ವ ಕರ್ಮಯೋಗಿಯೇ ಆಗಿದ್ದಾರೆ.

2. ವಿವಿಧ ಸಂದರ್ಭಗಳ ಆಳವಾದ ಅಧ್ಯಯನ

ಅವರ ಮನೆಯ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರಲಿಲ್ಲ. ತಂದೆಯವರ ಮರಣದ ನಂತರ ಮನೆಯ ಖರ್ಚನ್ನು ನಿಭಾಯಿಸಲು ಅವರು ದಾದರ (ಪಶ್ಚಿಮ) ನಲ್ಲಿ ಪುಸ್ತಕಗಳ ಮಾರಾಟ ಆರಂಭಿಸಿದರು. ಇದನ್ನು ಸಂಭಾಳಿಸಿ ರಜಾದಿನಗಳಲ್ಲಿ ಕೋಟೆ-ಕೊತ್ತಲಗಳನ್ನು ಭ್ರಮಣ ಮಾಡುತ್ತಿದ್ದರು. ಈ ಭ್ರಮಣವು ಕೇವಲ ಪ್ರವಾಸವಾಗಿರದೇ ಸಂಶೋಧನೆಯಾಗಿತ್ತು. ಶ್ರೀ. ಆಪ್ಪಾರವರು ಶಿವಕಾಲೀನ ಸಂದರ್ಭಗಳು, ಕಾದಂಬರಿಗಳು, ಶಿಲಾ ಲೇಖನಗಳು, ಪೀಳಿಗೆಗಳಿಂದ ಬಂದಂತಹ ಕಾಗದಪತ್ರಗಳು ಇತ್ಯಾದಿಗಳ ಆಳವಾದ ಅಧ್ಯಯನ ಮಾಡಿದರು. ವಿವಿಧ ಸಂದರ್ಭಗಳಲ್ಲಿನ ಟಿಪ್ಪಣಿಗಳನ್ನು ತಾವೇ ನೋಂದಾಯಿಸಿ ಇಟ್ಟರು. ಅವುಗಳನ್ನು ಪರಿಶೀಲಿಸಿ ಅವುಗಳ ಸತ್ಯತೆಯನ್ನು ನಿಶ್ಚಯಿಸಿದರು. ಅವುಗಳನ್ನು ಪರಿಶೀಲಿಸಿ ಅವುಗಳ ಸತ್ಯತೆಯನ್ನು ಖಾತ್ರಿಪಡಿಸಿಕೊಂಡರು. ಮಹಾರಾಷ್ಟ್ರದಲ್ಲಿ ಇಂತಹ ನೂರಾರು ಕೋಟೆ-ಕೊತ್ತಲಗಳ ಸಂದರ್ಭಗಳನ್ನು ಲಿಖಿತ ಸ್ವರೂಪದಲ್ಲಿಟ್ಟರು. ಶ್ರೀ. ಆಪ್ಪಾರವರ ಪುಸ್ತಕಗಳು ಹಾಗೂ ಅವರ ಬಾಯಿಂದ ಹೊರಡುವ ವೀರರಸಯುಕ್ತ ಇತಿಹಾಸವು ಅವರ ಈ ಆಳವಾದ ಅಧ್ಯಯನದ ಫಲಿತಾಂಶವೇ ಆಗಿದೆ.

3. ಬಡತನವನ್ನು ದೂರಗೊಳಿಸಿದರು; ಆದರೆ ವೃತವನ್ನು ಬಿಡಲಿಲ್ಲ !

ಮೆಟ್ರಿಕ್ ವರೆಗೆ ಶಿಕ್ಷಣ ಪಡೆದ ನಂತರ ಹಾಗೂ ತಂದೆಯವರ ಸಾವಿನ ನಂತರ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಲು ಮನೆಮನೆಗೆ ವೃತ್ತಪತ್ರಿಕೆಗಳನ್ನು ವಿತರಿಸುವ ಕೆಲಸ ಮಾಡುವುದು, ಬೇಸಿಗೆಯಲ್ಲಿ ಪರೀಕ್ಷೆಯ ಫಲಿತಾಂಶ ಬಂದಾಗ ಪುಸ್ತಕಗಳ ಮಾರಾಟದ ಅಂಗಡಿಗಳಲ್ಲಿ ಕೆಲಸ ಮಾಡುವುದು ಹೀಗೆ ಅರ್ಥಾರ್ಜನೆ ಮಾಡಿ ಅವರು ಕುಟುಂಬವನ್ನು ನಡೆಸಿದರು. ತಂದೆಯವರು ಕೆಲಸ ಮಾಡುತ್ತಿದ್ದ ಮಿಲ್ ನಲ್ಲಿ ಶ್ರೀ. ಆಪ್ಪಾರವರು ಕೆಲಸಕ್ಕೆ ಸೇರಿದರು. ಆದರೆ ಗಿರಣಿ ಕಾರ್ಮಿಕರ ಮುಷ್ಕರದ ನಂತರ ಮಿಲ್ ನಿಂತುಹೋಯಿತು. ಆನಂತರ ಶ್ರೀ. ಆಪ್ಪಾರವರು ಹಳೆಯ ಪುಸ್ತಕಗಳು, ಅಂಕಗಳ ಮಾರಾಟವನ್ನು ಆರಂಭಿಸಿದರು. ಇದರಿಂದ ಅವರು ಸಹೋದರಿಯ ಮದುವೆಯ ಕೌಟುಂಬಿಕ ಕರ್ತವ್ಯವನ್ನು ನಿರ್ವಹಿಸಿದರು. ಈ ಕಾಲದಲ್ಲಿ ಅನೇಕ ಸಂಸ್ಥೆ, ಸಂಘಟನೆಗಳೊಂದಿಗೆ ಕೋಟೆ-ಕೊತ್ತಲಗಳ ಭ್ರಮಣ ಮಾಡಿ ಶ್ರೀ. ಆಪ್ಪಾರವರು ಛತ್ರಪತಿ ಶಿವರಾಯರ ಪರಾಕ್ರಮದ ಇತಿಹಾಸವನ್ನು ಅನೇಕ ಯುವಕರಿಗೆ ತಲುಪಿಸಿದರು. ಆದರೆ ಇದೆಲ್ಲವನ್ನೂ ಅವರು ಸೇವಾಭಾವದಿಂದ ಮಾಡಿದರು. ಇದಕ್ಕಾಗಿ ಅವರು ಎಂದಿಗೂ ಮಾನಧನವನ್ನು ಪಡೆಯಲಿಲ್ಲ.


ಕೇವಲ ಇತಿಹಾಸವಲ್ಲ, ಸಂಸ್ಕಾರ ಬೆಳೆಸುವ ಆಪ್ಪಾ !

2023 ರ ಚತುರಂಗ ರಂಗಸಮ್ಮೇಳನದಲ್ಲಿ ಶ್ರೀ. ಆಪ್ಪಾರವರ ಕಾರ್ಯದ ಮೇಲೆ `ತ್ರಿವೇಣಿ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಇದರಲ್ಲಿ ಆಪ್ಪಾರವರ ಅಳಿಯಂದಿರಾದ ಶ್ರೀ. ಅರವಿಂದ ಶಿಂದೆಯವರ `ಏಕ ಆಧಾರವಡ ಮಿತ್ರ’ ಎಂಬ ಶ್ರೀ. ಆಪ್ಪಾರವರ ಮೇಲಿನ ಲೇಖನವಿದೆ. ಅದರಲ್ಲಿ ಅವರು ಆಪ್ಪಾರವರ ವಿಷಯದಲ್ಲಿ ಒಂದು ಪ್ರಸಂಗವನ್ನು ಬರೆದಿದ್ದಾರೆ. ಶ್ರೀ. ಆಪ್ಪಾ ರವರು ಒಂದು ವೇಳೆ ನನ್ನ ಮಗಳನ್ನು ಹಸಿವಿನಿಂದ ಇಟ್ಟರೂ ಪರವಾಗಿಲ್ಲ, ಆದರೆ ತಪ್ಪು ಮಾರ್ಗದಿಂದ ಎಂದಿಗೂ ಹಣವನ್ನು ಸಂಪಾದಿಸಬೇಡ, ಎಂದು ಹೇಳಿರುವ ಬಗ್ಗೆ ಬರೆದಿದ್ದಾರೆ. ಇದರಿಂದ ಶ್ರೀ. ಆಪ್ಪಾರವರಲ್ಲಿರುವ ಸಜ್ಜನತೆಯು ಗಮನಕ್ಕೆ ಬರುತ್ತದೆ. ಅವರ ಈ ಉಪದೇಶದಂತೆ ತಮ್ಮ ಸ್ವಂತದ ಜೀವನದಲ್ಲಿ ಅದನ್ನು ಚಾಚೂತಪ್ಪದೆ ಪಾಲನೆ ಮಾಡಿದ್ದಾರೆ. ಶ್ರೀ. ಆಪ್ಪಾರವರು ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳ ಮೇಲೆ ಉತ್ತಮ ಸಂಸ್ಕಾರ ಮಾಡಿದ್ದಾರೆ ಹಾಗೂ ಅವರಿಗೆ ಛತ್ರಪತಿ ಶಿವರಾಯರ ಇತಿಹಾಸವನ್ನು ಕಲಿಸಿದ್ದಾರೆ. `ನಮ್ಮ ಮುಂಬರುವ ಪೀಳಿಗೆಯನ್ನು ಶಿಕ್ಷಿತ ಮಾತ್ರವಲ್ಲ, ಸುಸಂಸ್ಕೃತಗೊಳಿಸಲು ಪ್ರಯತ್ನಿಸಬೇಕು, ಎಂಬುದು ಶ್ರೀ. ಆಪ್ಪಾರವರ ಕೃತಿಗಳಿಂದ ಎಲ್ಲರೂ ಕಲಿಯುವಂತಿದೆ.

ಕೋಟೆ-ದುರ್ಗಗಳ ಭ್ರಮಣದೊಂದಿಗೆ ವ್ಯಾಖ್ಯಾನಗಳು, ಲೇಖನಗಳು, ಮಾರ್ಗದರ್ಶನಗಳ ಮೂಲಕ ಶ್ರೀ. ಆಪ್ಪಾರವರು ಆಯುಷ್ಯದುದ್ದಕ್ಕೂ ಇತಿಹಾಸವನ್ನು ಎಲ್ಲರ ವರೆಗೆ ತಲುಪಿಸಲು ಪ್ರಯತ್ನಿಸಿದರು. ಇದಕ್ಕಾಗಿ ಶ್ರೀ. ಆಪ್ಪಾರವರು ಅಪಾರ ಕಷ್ಟಪಟ್ಟರು. ಅವರ ಈ ನಿರಂತರ ಪ್ರಯತ್ನಗಳಿಂದಾಗಿ ಮುಂದಿನ ಪೀಳಿಗೆಗಾಗಿ ಮೌಲ್ಯಗಳ ಅಮೂಲ್ಯ ಸಂಗ್ರಹ ದೊರೆತಿದೆ. ಶ್ರೀ. ಆಪ್ಪಾರವರ ಈ ನಿರಪೇಕ್ಷ ಕಾರ್ಯದಿಂದ ಹಾಗೂ ರಾಷ್ಟ್ರಪ್ರೇಮದಿಂದ ಲಕ್ಷಾಂತರ ಯುವಕರಲ್ಲಿ ರಾಷ್ಟ್ರಕಾರ್ಯ ಮಾಡುವ ಪ್ರೇರಣೆ ನಿರ್ಮಾಣವಾಗಿದೆ, ಎಂಬುದನ್ನು ಖಂಡಿತವಾಗಿಯೂ ಹೇಳಬಹುದು.

4. ಹಿಂದುತ್ವದ ಅಭಿಮಾನ ಹಾಗೂ ಸ್ವರಾಜ್ಯದ ಸ್ವಾಭಿಮಾನವನ್ನು ನಿರ್ಮಿಸುವ ಇತಿಹಾಸವನ್ನು ಹೇಳುವ ಶೈಲಿ !

`ಇದರ ಹೊಸ್ತಿಲನ್ನು ದಾಟಿ ಒಳಗೆ ಬರುವ ಮೊದಲು ಒಂದು ಸಂಗತಿಯನ್ನು ಗಮನದಲ್ಲಿಡಿ. ಹಿಂದವಿ ಸ್ವರಾಜ್ಯದ ಸಂಸ್ಥಾಪಕ ಹಾಗೂ ಸ್ವತಂತ್ರತೆಯ ಮಂತ್ರವನ್ನು ಹೇಳುವ ಛತ್ರಪತಿ ಶಿವಾಜಿ ಮಹಾರಾಜ, ಶತ್ರುಗಳನ್ನು ಸೋಲಿಸಿ, ಸ್ವಧರ್ಮಕ್ಕಾಗಿ ಹೇಗೆ ಸಾಯುವುದು ಎಂಬುದನ್ನು ಹೇಳುವ ಛತ್ರಪತಿ ಸಂಭಾಜಿ ಮಹಾರಾಜರು, ನಾಲ್ಕೂ ಬದಿಗಳಲ್ಲಿ ಶತ್ರುಗಳಿಂದ ಅವರಿಸಲ್ಪಟ್ಟ ನಂತರ ಹೇಗೆ ಹೋರಾಡುವುದು, ಎಂಬುದನ್ನು ಹೇಳುವ ಛತ್ರಪತಿ ರಾಜಾರಾಮ ಮಹಾರಾಜರು, ತಮ್ಮ ಪ್ರಧಾನಿಗಳನ್ನು (ಹಿರಿಯ ಬಾಜಿರಾವ ಪೇಶವೆಯವರು ) ಬಂಧನದ ಹೊರಗೆ ಧ್ವಜ ಹಾರಿಸಲು ಕಳಿಸುವ ಛತ್ರಪತಿ ಶಾಹೂ ಮಹಾರಾಜ ಹಾಗೂ ಈ ನಾಲ್ಕೂ ಛತ್ರಪತಿಗಳಿಗೆ ಸಂಸ್ಕಾರ ನೀಡಿದ ರಾಜಮಾತಾ ಜಿಜಾವೂ ! ಇವರೆಲ್ಲರ ಪಾದಸ್ಪರ್ಷವು ಈ ಹೊಸ್ತಿಲಿಗೆ ಆಗಿದೆ. ಅವರ ಪಾದಸ್ಪರ್ಶದಿಂದ ಈ ಭೂಮಿಯು ಪಾವನವಾಗಿದೆ. ಅವರ ಅದರ್ಶಗಳ ಒಂದು ಕಿರಣವಾದರೂ ತಮ್ಮ ಚಾರಿತ್ರ್ಯದಲ್ಲಿ ಸೇರಿಸಿಕೊಳ್ಳಿ ಮತ್ತು ಆ ನಂತರವೇ ತಮ್ಮ ಹೆಜ್ಜೆಯನ್ನು ಹೊಸ್ತಿಲಿನ ಒಳಗಡೆ ಇಡಿ; ಆದರೆ ಮನಸ್ಸಿನಲ್ಲಿ ಕೆಟ್ಟ ವಿಚಾರಗಳಿದ್ದರೆ ಬಂದಿರುವ ಹೆಜ್ಜೆಯನ್ನು ಹಿಂದೆ ತೆಗೆದುಕೊಳ್ಳಿರಿ, ಎಂದು ಶ್ರೀ. ಆಪ್ಪಾರವರು ಕೋಟೆಯ ಮಹಾದ್ವಾರದ ವರ್ಣನೆ ಮಾಡುತ್ತಾರೆ. ಹಿಂದುತ್ವದ ಅಭಿಮಾನ ಹಾಗೂ ಸ್ವರಾಜ್ಯದ ಸ್ವಾಭಿಮಾನವನ್ನು ನಿರ್ಮಿಸುವ ಇತಿಹಾಸವು ಹೀಗೆಯೇ ತುಟಿಯಲ್ಲಿ ಬರುವುದಿಲ್ಲ, ಅದು ಅಂತಃಕರಣದಲ್ಲಿ ಇರಬೇಕಾಗುತ್ತದೆ, ಹೀಗೆ ಶ್ರೀ. ಆಪ್ಪಾರವರ ಅಂತಃಕರಣವು ತೇಜಸ್ವಿ ಇತಿಹಾಸದ ಸಂಗ್ರಹಾಲಯವಾಗಿದೆ.

5. ಮುಂಬರುವ ಪೀಳಿಗೆಯ ವರೆಗೆ ಶಿವಪ್ರತಾಪವನ್ನು ತಲುಪಿಸುವ ಮಹತ್ಕಾರ್ಯ !

ಅನೇಕ ಶಿವಪ್ರೇಮಿಗಳು, ದುರ್ಗ ಸಂವರ್ಧಕ ಸಂಸ್ಥೆಗಳು ಕೋಟೆಯ ಭ್ರಮಣಕ್ಕಾಗಿ ಶ್ರೀ. ಆಪ್ಪಾರವರನ್ನು ಸಂಪರ್ಕಿಸಿ ಕೋಟೆ-ಕೊತ್ತಲಗಳ ಇತಿಹಾಸವನ್ನು ತಿಳಿಯಲು ಮಾರ್ಗದರ್ಶಕರೆಂದು ಅಮಂತ್ರಿಸುತ್ತಾರೆ. ಆಗ ಶ್ರೀ. ಆಪ್ಪಾರವರು ಉತ್ಸಾಹದಿಂದ ಅವರೊಂದಿಗೆ ಹೋಗುತ್ತಾರೆ. ಕೋಟೆಯ ಹೊಸ್ತಿಲಿನಿಂದ ವಿಸ್ತೃತವಾದ ಇತಿಹಾಸವನ್ನು ಹೇಳುತ್ತಾರೆ. ಒಂದು ಅಂತಃಕರಣದಿಂದ ಇತರರ ಅಂತಃಕರಣಕ್ಕೆ ಹೋಗುವ ಈ ಇತಿಹಾಸವು ಮಹಾರಾಷ್ಟ್ರದ ಹಾಗೂ ಭಾರತದ ಭಾವೀ ಪೀಳಿಗೆಯ ಅದೃಷ್ಟವಾಗಿದೆ. `ಇತಿಹಾಸದ ಆಕಲನವು ಕೇವಲ ಪುಸ್ತಕಗಳನ್ನು ಓದುವುದರಿಂದ ಆಗುವುದಿಲ್ಲ, ಅದಕ್ಕಾಗಿ ಪ್ರತ್ಯಕ್ಷ ಸ್ಥಳಕ್ಕೆ ಹೋಗಿ ಅಲ್ಲಿನ ಭೌಗೋಳಿಕ ರಚನೆಯ ಸಾಂಗತ್ಯವನ್ನು ಅದರೊಂದಿಗೆ ಜೋಡಿಸಬೇಕು, ಎಂಬುದು ಶ್ರೀ. ಆಪ್ಪಾರವರ ಬೋಧವಾಕ್ಯವಾಗಿದೆ. ಅವರು ದಣಿಯದೆ ಅಖಂಡ ಉತ್ಸಾಹದಿಂದ ಯುವಕರಿಗೆ ಶಿವಪ್ರತಾಪವನ್ನು ಹೇಳುತ್ತಾರೆ ಹಾಗೂ ಯುವಪೀಳಿಗೆಯು ಅಷ್ಟೇ ತನ್ಮಯರಾಗಿ ಇತಿಹಾಸವನ್ನು ಕೇಳುತ್ತದೆ.

ಆಪ್ಪಾರವರ ಗ್ರಂಥಸಂಪತ್ತು

ಶ್ರೀ. ಆಪ್ಪಾರವರು 2004 ರಲ್ಲಿ `ಛತ್ರಪತಿ ಶಿವರಾಯಾಂಚೆ ಆರಮಾರಿ ಸುಭೇದಾರ ಮಾಯಾಜಿ ನಾಯಿಕ ಭಾಟಕರ’ ಎಂಬ ಮೊದಲ ಪುಸ್ತಕವನ್ನು ಬರೆದರು. ಆನಂತರ ಶ್ರೀ. ಆಪ್ಪಾರವರು `ಶಿವಜನ್ಮ’, `ಕಿಲ್ಲೆ ಪನ್ಹಾಳಾ ಔರಂಗಹಣಾಖ್ಯಾನ’, `ಕಿಲ್ಲೆ ರಾಯಗಡ ಪ್ರದಕ್ಷಿಣೆಚ್ಯಾ ವಾಟೆವರ’, `ಶಿವರಾಯಾಂಚ್ಯಾ ಅಷ್ಟಾಕ್ಷರಿ’, `ಕಿಲ್ಲೆ ರಾಜಗಡ ಪ್ರದಕ್ಷಿಣೆಚ್ಯಾ ವಾಟೆವರ’, ಶ್ರೀ ಭವಾನಿ ತಲವಾರ’, `ಕಿಲ್ಲೆ ರಾಜಗಡ ಬಖರ’, `ಘೋಡಖಿಂಡಿಚಿ ಸಾಕ್ಷ’ ಮುಂತಾದ 34 ಪುಸ್ತಕಗಳನ್ನು ಬರೆದಿದ್ದಾರೆ.

ಇನ್ನೂ 6 ಪುಸ್ತಕಗಳ ಪ್ರಕಾಶನ ಬಾಕಿ ಇದೆ. ಈ ಎಲ್ಲ ಪುಸ್ತಕಗಳನ್ನು ಶ್ರೀ. ಆಪ್ಪಾರವರು ಕೋಟೆ-ಕೊತ್ತಲಗಳ ಭ್ರಮಣ ಮಾಡಿ, ಐತಿಹಾಸಿಕ ಕಾಗದಪತ್ರಗಳ ಸಂದರ್ಭ ಹಾಗೂ ಅವುಗಳ ಆಳವಾದ ಅಧ್ಯಯನ ಮಾಡಿ ಬರೆದಿದ್ದಾರೆ. ಅವರ ಈ ಪುಸ್ತಕಗಳಿಂದ ದೇಶದಾದ್ಯಂತ ಲಕ್ಷಾಂತರ ಯುವಕರ ವರೆಗೆ ಛತ್ರಪತಿ ಶಿವರಾಯರ ಪರಾಕ್ರಮದ ಇತಿಹಾಸವನ್ನು ತಲುಪಿಸಿದ್ದಾರೆ.

6. ಶಿವಕಾರ್ಯದ ಪ್ರಸಾರಕ್ಕೆ ಕುಟುಂಬದಿಂದ ಅಮೂಲ್ಯ ಪಾಲು !

ಮಹಾನ ಪುರುಷರ ಹಿರಿತನದ ಕಥನವಾಗುತ್ತಿರುವಾಗ ಖಂಡಿತವಾಗಿಯೂ ಅದರ ಹಿಂದಿನ ಅವರ ಕುಟುಂಬದವರ ತ್ಯಾಗವೂ ಹಿರಿದಾಗಿರುತ್ತದೆ. ಶಿವಕಾರ್ಯದ ಪ್ರಸಾರವು ಶ್ರೀ. ಆಪ್ಪಾರವರ ಉದ್ಯೋಗವಾಗಿರಲಿಲ್ಲ, ಅವರು ಕರ್ತವ್ಯ ಭಾವನೆಯಿಂದ ಆತ್ಮೀಯತೆಯಿಂದ ಮಾಡಿದ ಕೆಲಸವಾಗಿದೆ. ಇದಕ್ಕಾಗಿ ಶ್ರೀ. ಆಪ್ಪಾರವರು ಅನೇಕ ಬಾರಿ ಕೋಟೆ-ಕೊತ್ತಲಗಳಿಗೆ ಅನೇಕ ದಿನಗಳ ವರೆಗೆ ಹೋಗುತ್ತಾರೆ. ಇದರಿಂದ ಯಾವುದೇ ಅರ್ಥಾರ್ಜನೆ ಇಲ್ಲದಿರುವುದರಿಂದ ಕುಟುಂಬದವರಿಗೆ ಆರ್ಥಿಕ ತೊಂದರೆಗಳಾಗುವುದು ಸಹಜವೇ ಆಗಿದೆ. ಆದರೆ ಇದರಿಂದಾಗಿ ಶ್ರೀ. ಆಪ್ಪಾರವರ ಹೆಂಡತಿ ಮಕ್ಕಳು ಎಂದಿಗೂ ಕಿರಿಕಿರಿ ಮಾಡಿಲ್ಲ. ಇದು ಒಂದು ರೀತಿಯಲ್ಲಿ ಶ್ರೀ. ಆಪ್ಪಾರವರ ಶಿವಕಾರ್ಯ ಪ್ರಸಾರದ ಕಾರ್ಯದಲ್ಲಿನ ಮಹತ್ವದ ಯೋಗದಾನವಾಗಿದೆ ಎಂದು ಹೇಳಬಹುದು.

7. ಅನೇಕ ಪ್ರಶಸ್ತಿಗಳಿಂದ ಸನ್ಮಾನ

`ಗಿರಿಮಿತ್ರ’ ಸಮ್ಮೇಳನದಲ್ಲಿ `ಜೀವನಗೌರವ’ ಪ್ರಶಸ್ತಿ, `ವೈದ್ಯ ಪಾಟಣಕರ ಕಾಢ ಜೀವನಗೌರವ’ ಪ್ರಶಸ್ತಿ, `ಮುಂಬೈ ಕಾಯಿನ್ಸ್ ಕಲೆಕ್ಟರ್ ಜೀವನಗೌರವ’ ಪ್ರಶಸ್ತಿ, `ಚತುರಂಗ ಜೀವನಗೌರವ’ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳಿಂದ ಶ್ರೀ. ಆಪ್ಪಾರವರನ್ನು ಸನ್ಮಾನಿಸಲಾಗಿದೆ. ಮಹಾರಾಷ್ಟ್ರದಲ್ಲಿನ ಅನೇಕ ಸಂಸ್ಥೆಗಳ ಪ್ರತಿನಿಧಿಗಳು, ಕಾರ್ಯಕರ್ತರೊಂದಿಗೆ ಶ್ರೀ. ಆಪ್ಪಾ ರವರು ಒಂದು ರೂಪಾಯಿಯಷ್ಟು ಮಾನಧನವನ್ನೂ ಪಡೆಯದೆ ಕೋಟೆಗಳ ಭ್ರಮಣ ಮಾಡುತ್ತ ಅವರಿಗೆ ಮಾಹಿತಿ ನೀಡುತ್ತಾರೆ.