ದೆಹಲಿ: ಜಂತರ್ ಮಂತರ್ನಲ್ಲಿ ಹಿಂದೂ ದೇವತೆಗಳ ಅವಮಾನ; ದ್ವೇಷಪೂರಿತ ಭಾಷಣ

ನವದೆಹಲಿ – ಇಲ್ಲಿನ ಜಂತರ್ ಮಂತರ್ನಲ್ಲಿ ‘ಕಾಕ್ರಾಚ್ ಜನತಾ ಪಾರ್ಟಿ’ ಮತ್ತು ಸೋನಮ್ ವಾಂಗ್ಚುಕ್ ಅವರ ನೇತೃತ್ವದಲ್ಲಿ ‘ನೀಟ್’ (ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರನ್ಸ್ ಟೆಸ್ಟ್ – ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ಕಡ್ಡಾಯ ಪರೀಕ್ಷೆ) ಪರೀಕ್ಷೆಯ ವಿಷಯವಾಗಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಬಹಿರಂಗವಾಗಿ ಹಿಂದೂ ಧರ್ಮವನ್ನು ಅವಮಾನಿಸುತ್ತಿರುವುದು ಮತ್ತು ದೇಶವಿರೋಧಿ ಪ್ರಚೋದನೆ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಇದರ ವಿರುದ್ಧ ಜುಲೈ 18 ರಂದು ಸುಪ್ರೀಂ ಕೋರ್ಟ್ ವಕೀಲರು ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಜಂಟಿ ನಿಯೋಗವು ನವದೆಹಲಿಯ ಸಂಸತ್ ಮಾರ್ಗ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದು, ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿದೆ.
ಸಂಸತ್ ಮಾರ್ಗ ಪೊಲೀಸ್ ಠಾಣೆಯ ಮುಖ್ಯಸ್ಥರನ್ನು ಖುದ್ದಾಗಿ ಭೇಟಿ ಮಾಡಿ ಈ ಮನವಿ ಸಲ್ಲಿಸಲಾಯಿತು. ಈ ನಿಯೋಗದಲ್ಲಿ ಸುಪ್ರೀಂ ಕೋರ್ಟ್ ವಕೀಲರಾದ ಮಕರಂದ್ ಅಡ್ಕರ್, ಅಮಿತಾ ಸಚ್ದೇವ್, ಅತುಲ್ ಶರ್ಮಾ, ಮಯಾಂಕ್ ದ್ವಿವೇದಿ, ಕೇಶರಿ ಸತ್ಯ, ಹರ್ಷ್ ವರ್ಧನ್, ಸೌರಭ್ ಮಿಶ್ರಾ ಅವರೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ದೆಹಲಿ ರಾಜ್ಯ ಸಂಯೋಜಕರಾದ ಶ್ರೀ ಕಾರ್ತಿಕ್ ಸಾಳುಂಕೆ ಮತ್ತು ಶ್ರೀ ಶ್ರೀರಾಮ್ ಲುಕತುಕೆ ಉಪಸ್ಥಿತರಿದ್ದರು.
No One Is Above the Law – Register Cases Against Kunal Kamra & Prakash Raj!@HinduJagrutiOrg and Supreme Court advocates have demanded criminal cases over insults to Hindu deities, hate speech, and anti-national remarks at the Jantar Mantar NEET protest by Cockroach Janata… pic.twitter.com/xG8ig1MMMj
— Sanatan Prabhat (@SanatanPrabhat) July 18, 2026
1. ‘ಸ್ಟ್ಯಾಂಡ್-ಅಪ್ ಕಾಮಿಡಿಯನ್’ ಕುನಾಲ್ ಕಮ್ರಾ ವೇದಿಕೆಯ ಮೇಲಿಂದ “ಈ ಸರಕಾರವು ಹಲವು ವರ್ಷಗಳಿಂದ ಸೀತೆಯ ಗಂಡನ (ರಾಮನ) ಹೆಸರು ಹೇಳಿಕೊಂಡು, ನೀತಾಳ ಗಂಡನ (ಮುಕೇಶ್ ಅಂಬಾನಿ) ಕೆಲಸ ಮಾಡುತ್ತಿದೆ” ಎಂದು ಅತ್ಯಂತ ಅವಮಾನಕರ ಹೇಳಿಕೆ ನೀಡುವ ಮೂಲಕ 100 ಕೋಟಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ಪ್ರತಿಭಟನೆಯ ವೇದಿಕೆಯಿಂದ ಮಹಿಳೆಯೊಬ್ಬರು ಪಾಕಿಸ್ತಾನಿ ಕವಿ ಫೈಜ್ ಅಹ್ಮದ್ ಫೈಜ್ ಅವರ “ಸಬ್ ಬುತ್ ಉಠ್ವಾಯೆ ಜಾಯೇಂಗೆ… ಬಸ್ ನಾಮ್ ರಹೇಗಾ ಅಲ್ಲಾ ಕಾ” (ಎಲ್ಲಾ ಮೂರ್ತಿಗಳನ್ನು ತೆಗೆದುಹಾಕಲಾಗುವುದು ಮತ್ತು ಕೇವಲ ಅಲ್ಲಾನ ಹೆಸರು ಉಳಿಯುತ್ತದೆ) ಎಂಬ ಪ್ರಚೋದನಾಕಾರಿ ಗೀತೆ ಹಾಡಿದರು. ಇದು ನೇರವಾಗಿ ಮೂರ್ತಿಪೂಜೆ ಮಾಡುವ ಹಿಂದೂ ಧರ್ಮದ ಮೇಲಿನ ದಾಳಿಯಾಗಿದೆ. ಈ ವೇದಿಕೆಯಲ್ಲಿ ಭಾರತ ಸರಕಾರದಿಂದ ನಿಷೇಧಿಸಲ್ಪಟ್ಟಿರುವ ‘ಸಿಮಿ’ ಎಂಬ ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಹಾಗೂ ದೆಹಲಿ ಗಲಭೆಯ ಆರೋಪಿಯಾಗಿರುವ ಉಮರ್ ಖಾಲಿದ್ನ ತಂದೆ ಸೈಯದ್ ಕಾಸಿಮ್ ರಸೂಲ್ ಇಲ್ಯಾಸ್ ಕೂಡ ಉಪಸ್ಥಿತರಿದ್ದರು. ಅಲ್ಲದೇ, ನಟ ಪ್ರಕಾಶ್ ರಾಜ್ ಅವರು ವೇದಿಕೆಯಿಂದ “ನಮ್ಮನ್ನು ಭಯೋತ್ಪಾದಕರು ಅಥವಾ ಪಾಕಿಸ್ತಾನಿಗಳು ಎಂದು ಕರೆದರೂ ಪರವಾಗಿಲ್ಲ” ಎಂದು ಹೇಳುತ್ತಾ ವ್ಯವಸ್ಥೆಯ ವಿರುದ್ಧ ದಂಗೆ ಏಳಲು ಯುವಕರನ್ನು ಪ್ರಚೋದಿಸಿದರು ಎಂದು ದೂರಲಾಗಿದೆ.
A complaint has been filed on behalf of Hindu Janajagruti Samiti (@HinduJagrutiOrg) & Supreme Court Advocates.
Well said by Sr. Adv. Makarand D. Adkar Ji (@AdkarMakarand) that if you will say, "सब बुत उठवाए जाएंगे… बस नाम रहेगा अल्लाह का।" – यह हमें मंज़ूर नहीं@Ramesh_hjs pic.twitter.com/U0L7Fqihib
— Amita Sachdeva, Advocate (@SachdevaAmita) July 18, 2026

A joint delegation of Supreme Court advocates and Hindu Janajagruti Samiti has approached the Parliament Street Police Station in New Delhi, demanding the registration of an FIR over speeches and activities at the Jantar Mantar protest held under the banner of the "Cockroach… pic.twitter.com/ZSyDcbh7h4
— HinduJagrutiOrg (@HinduJagrutiOrg) July 18, 2026
2. ಇದು ಕೇವಲ ವಿದ್ಯಾರ್ಥಿಗಳ ಪ್ರತಿಭಟನೆಯಾಗಿರದೆ, ದೇಶವಿರೋಧಿ ಮತ್ತು ಕಮ್ಯುನಿಸ್ಟ್ (ಸಾಮ್ಯವಾದಿ) ಸಿದ್ಧಾಂತದ ಜನರ ರಾಜಕೀಯ ಕಾರ್ಯಸೂಚಿಯಾಗಿದೆ (ಅಜೆಂಡಾ) ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
Today, 18 July 2026, we submitted a detailed complaint to the ACP, Parliament Street Police Station, seeking the registration of an FIR under the relevant provisions of the Bharatiya Nyaya Sanhita, 2023.
The complaint raises serious concerns regarding the hate speech and… pic.twitter.com/QemyOoXHrP
— Amita Sachdeva, Advocate (@SachdevaAmita) July 18, 2026
3. ಈ ಮನವಿಯಲ್ಲಿ, ಸುಪ್ರೀಂ ಕೋರ್ಟ್ ‘ಹೇಟ್ ಸ್ಪೀಚ್’ (ದ್ವೇಷ ಭಾಷಣ) ಪ್ರಕರಣದಲ್ಲಿ ನೀಡಿರುವ ಐತಿಹಾಸಿಕ ತೀರ್ಪನ್ನು (ಶಾಹೀನ್ ಅಬ್ದುಲ್ಲಾ ವಿರುದ್ಧ ಭಾರತ ಸರಕಾರ) ಉಲ್ಲೇಖಿಸಲಾಗಿದ್ದು, ಅದರಂತೆ ಪೊಲೀಸರು ಸ್ವಯಂಪ್ರೇರಿತರಾಗಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಅಲ್ಲದೇ ಭಾರತೀಯ ನ್ಯಾಯ ಸಂಹಿತೆ 2023 ರ ಸೆಕ್ಷನ್ 299 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು), 196 (ದ್ವೇಷ ಹರಡುವುದು), 152 (ದೇಶದ ಅಖಂಡತೆಗೆ ಧಕ್ಕೆ) ಮತ್ತು 353 (ಪ್ರಚೋದನಾಕಾರಿ ಹೇಳಿಕೆಗಳು) ಅಡಿಯಲ್ಲಿ ತಕ್ಷಣ ಪ್ರಕರಣ ದಾಖಲಿಸಲು ಆಗ್ರಹಿಸಲಾಗಿದೆ. ಇದರ ಜೊತೆಗೆ, ಪ್ರತಿಭಟನೆಗೆ ಹಣಕಾಸಿನ ನೆರವು ನೀಡಿರುವವರು ಮತ್ತು ‘ಸಿಮಿ’ ಸಂಘಟನೆಗೆ ಸಂಬಂಧಿಸಿದ ಜನರ ಭಾಗವಹಿಸುವಿಕೆಯ ಬಗ್ಗೆ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ (UAPA) ಅಡಿಯಲ್ಲಿ ಆಳವಾದ ತನಿಖೆ ನಡೆಸಬೇಕೆಂದು ಕೇಂದ್ರ ಗೃಹ ಸಚಿವರು ಮತ್ತು ದೆಹಲಿ ಪೊಲೀಸ್ ಕಮಿಷನರ್ ಅವರಿಗೆ ಪತ್ರದ ಮೂಲಕ ಒತ್ತಾಯಿಸಲಾಗಿದೆ.
ಹಿಂಸಾಚಾರಕ್ಕೆ ತಿರುಗಿದ ‘ಕಾಕರೋಚ್ ಜನತಾ ಪಾರ್ಟಿ’ಯ ಸಂಸತ್ ಭವನ ಚಲೋ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ
5 ವರ್ಷಗಳಲ್ಲಿ 1 ಸಾವಿರ 676 ಪ್ರಕರಣಗಳು ದಾಖಲು: ಕೋಟ್ಯಂತರ ರೂಪಾಯಿ ಮೌಲ್ಯದ ಟಿಕೆಟ್ ಜಪ್ತಿ : Railway Tickets Seized
ಈ ಹಿಂದೆ ನನ್ನನ್ನು ಬಂಗಾಳದಿಂದ ಹೊರಗಟ್ಟಿದ ನಾಯಕರು ಈಗಲೂ ನನ್ನನ್ನು ಭಾಜಪ ಮತ್ತು ಸಂಘವನ್ನು ಬೆಂಬಲಿಸುವವಳು ಎಂದು ಬಿಂಬಿಸುತ್ತಿದ್ದಾರೆ! : Taslima Nasrin
ಬಂಗಾಳದಲ್ಲಿ ಸೆಪ್ಟೆಂಬರ್ 1 ರಿಂದ ಎಲ್ಲಾ ಸರಕಾರಿ ಕಲಾಪಗಳು ಬಂಗಾಳಿ ಭಾಷೆಯಲ್ಲೇ ನಡೆಯಲಿವೆ! – ಮುಖ್ಯಮಂತ್ರಿ : Only Bengali in Bengal
‘ಕಳೆದ ವರ್ಷ ನಡೆದ ಸಂಘರ್ಷವು ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ಒಳಸಂಚಾಗಿತ್ತು!’ (ಅಂತೆ) : Imran Khan Sister’s Claim
‘ಹಿಂದೂ ದೇವತೆಗಳು ಮಾಂಸ-ಮದ್ಯ ಸೇವಿಸುತ್ತಿದ್ದರು’ ಎಂದು ಹೇಳುವ ಧ್ರುವ್ ರಾಠಿಯ ವೀಡಿಯೊವನ್ನು ೨೪ ಗಂಟೆಗಳಲ್ಲಿ ತೆಗೆದುಹಾಕಿ !