ಗೋಹತ್ಯೆ ಪ್ರಕರಣದಲ್ಲಿ ೩ ಮುಸ್ಲಿಮರಿಗೆ ತಲಾ ೧೦ ವರ್ಷಗಳ ಜೈಲು ಶಿಕ್ಷೆ

ತಲಾ ೮ ಲಕ್ಷ ರೂಪಾಯಿ ದಂಡ

ಮುಜಫರ್‌ನಗರ (ಉತ್ತರ ಪ್ರದೇಶ) – ಗೋಹತ್ಯೆ ಪ್ರಕರಣದಲ್ಲಿ ಇಲ್ಲಿನ ನ್ಯಾಯಾಲಯವು ೩ ಮುಸ್ಲಿಮರಿಗೆ ತಲಾ ೧೦ ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ ೮ ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.

ಗೋಹತ್ಯೆಯಿಂದಾಗಿ ಬಹುಸಂಖ್ಯಾತ ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ತಿಳಿಸಿದೆ. ಗೋವಂಶ ಸಂರಕ್ಷಣಾ ಕಾಯ್ದೆಯನ್ನು ಪಾಲಿಸುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಮತ್ತು ಗೋವಂಶದ ಹತ್ಯೆಯು ಕಾನೂನಿನ ಉಲ್ಲಂಘನೆಯಾಗಿದೆ. ಇದರಿಂದಾಗಿ ಧಾರ್ಮಿಕ ಸೌಹಾರ್ದತೆ ಮತ್ತು ಸಹೋದರತ್ವದ ಮೇಲೆ ಪರಿಣಾಮ ಬೀರುತ್ತದೆ; ಆದ್ದರಿಂದ ಸಮಾಜಕ್ಕೆ ಕಠಿಣ ಸಂದೇಶ ರವಾನೆಯಾಗುವುದು ಅಗತ್ಯವಾಗಿದೆ ಎಂದು ನ್ಯಾಯಾಲಯವು ಹೇಳಿದೆ.

ಜನವರಿ 24, ೨೦೨೧ ರ ರಾತ್ರಿ ತಿತಾವಿ ಭಾಗದ ಬುಡಿನಾ ಖುರ್ದ್‌ನಲ್ಲಿ ಮುನ್ಶಾದ್ ಮತ್ತು ಆಸ್ ಮಹಮ್ಮದ್ ಅಲಿಯಾಸ್ ಆಶು ಎಂಬುವವರ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಇಲ್ಲಿ ಅವರು ಮುಫ್ತಿ ಅಬೂಜರ್ ಜೊತೆಗೆ ಸೇರಿ ಗೋವಂಶದ ಹತ್ಯೆ ಮಾಡುತ್ತಿದ್ದರು.

ಸಂಪಾದಕೀಯ ನಿಲುವು

ಗೋಹತ್ಯೆ ಮಾಡುವವರಿಗೆ ಈಗ ಗಲ್ಲು ಶಿಕ್ಷೆಯನ್ನೇ ವಿಧಿಸುವ ಕಾನೂನನ್ನು ರೂಪಿಸುವುದು ಅತ್ಯಗತ್ಯವಾಗಿದೆ !