ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News

ಅಭಿಜೀತ್ ದೀಪ್ಕೆ ಮತ್ತು ಬರ್ಖಾ ಟ್ರೆಹಾನ್

ನವದೆಹಲಿ – ಇಲ್ಲಿನ ಜಂತರ್ ಮಂತರ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ಪೊಲೀಸರು ಬಲವಂತವಾಗಿ ಪ್ರತಿಭಟನಾ ಸ್ಥಳದಿಂದ ಕರೆದೊಯ್ದು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಜಂತರ್ ಮಂತರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರ ಮೇಲೆ ಬರ್ಖಾ ತ್ರೇಹನ್ ಎಂಬ ಮಹಿಳೆಯೊಬ್ಬರು ಜನಸಂದಣಿಯಿಂದ ಬಂದು ಶಾಯಿ ಎರಚಿದರು. ಇದರ ನಂತರ, ಪಕ್ಷದ ಕಾರ್ಯಕರ್ತರು ಬರ್ಖಾ ತ್ರೇಹನ್ ಅವರನ್ನು ಹಿಡಿದು ಸಂಸದ್ ಮಾರ್ಗ ಪೊಲೀಸ್ ಠಾಣೆಗೆ ಕರೆದೊಯ್ದರು. ಯಾವುದೇ ಲಿಖಿತ ದೂರು ಇಲ್ಲದ ಕಾರಣ ಪೊಲೀಸರು ಅವರನ್ನು ಬಿಡುಗಡೆ ಮಾಡಿದರು.

ಈ ಕುರಿತು ಬರ್ಖಾ ತ್ರೇಹನ್ ಅವರು ‘ಎಕ್ಸ್’ ಪೋಸ್ಟ್ ಮಾಡಿ, ‘ಹೌದು, ನಾನು ಬರ್ಖಾ ತ್ರೇಹನ್. ಆ ಕಟ್ಟರ್ ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ನಾನೇ ಶಾಯಿ ಎರಚಿದ್ದೇನೆ; ಏಕೆಂದರೆ ನನ್ನ ಪ್ರಭು ಶ್ರೀರಾಮನನ್ನು ಕಾಕ್ರೋಚ್ ಜನತಾ ಪಕ್ಷದ ವೇದಿಕೆಯಲ್ಲಿ ಅವಮಾನಿಸಿದಾಗ ಆತ ನಗುತ್ತಿದ್ದ. ನಾನು ಕಟ್ಟರ್ ಹಿಂದೂ. ನಾನು ಇದರಿಂದ ತೀವ್ರವಾಗಿ ನೊಂದಿದ್ದೆ. ಈ ಮೂಲಕ ನಾನು ನನ್ನ ಪ್ರತಿಭಟನೆ ದಾಖಲಿಸಿದ್ದೇನೆ. ನನಗೆ ಇದರ ಬಗ್ಗೆ ಹೆಮ್ಮೆಯಿದೆ. ಜೈ ಹಿಂದ್, ಜೈ ಶ್ರೀರಾಮ್’ ಎಂದು ಬರೆದಿದ್ದಾರೆ.

ಅಭಿಜೀತ್ ದಿಪ್ಕೆ ಬೆಂಬಲಿಗರ ಮೇಲೆ ಹಲ್ಲೆಯ ಆರೋಪ

ಇನ್ನು ಬರ್ಖಾ ತ್ರೇಹನ್ ಅವರು, ಜಂತರ್ ಮಂತರ್‌ನಲ್ಲಿ ಅಭಿಜೀತ್ ದಿಪ್ಕೆ ಅವರ ಗೂಂಡಾಗಳು ನನ್ನ ಮೇಲೆ ಹಲ್ಲೆ ನಡೆಸಿದರು, ನನ್ನ ಕೂದಲು ಎಳೆದರು ಮತ್ತು ನನ್ನ ಎದೆಯ ಭಾಗವನ್ನು ಒತ್ತಿದರು ಎಂದು ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ಕಾಕ್ರೋಚ್ ಜನತಾ ಪಕ್ಷವು ಹಿಂದೂ ವಿರೋಧಿ ಮತ್ತು ಕಮ್ಯುನಿಸ್ಟ್ ಆಗಿರುವುದರಿಂದ ಅದರ ನಾಯಕರಿಂದ ಇಂತಹದ್ದೇ ನಿರೀಕ್ಷಿಸಬಹುದು, ಹಾಗಾಗಿ ಧರ್ಮಪ್ರೇಮಿಗಳು ಇಂತವರನ್ನು ಲೆಕ್ಕಿಸುವುದಿಲ್ಲ ಎಂಬುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ!