ಶ್ರೀ ದತ್ತ ಪರಿವಾರ ಮತ್ತು ಮೂರ್ತಿವಿಜ್ಞಾನ

ದತ್ತನೆಂದರೆ ‘(ನಿರ್ಗುಣದ ಅನುಭೂತಿಯನ್ನು) ಪಡೆದವನು. ‘ನಾನು ಬ್ರಹ್ಮನೇ ಆಗಿದ್ದೇನೆ, ಮುಕ್ತನೇ ಆಗಿದ್ದೇನೆ, ಆತ್ಮನೇ ಆಗಿದ್ದೇನೆ ಎಂಬ ನಿರ್ಗುಣದ ಅನುಭೂತಿಯನ್ನು ಯಾರಿಗೆ ಕೊಡಲಾಗಿದೆಯೋ ಅವನೇ ದತ್ತ. ಜನ್ಮದಿಂದಲೇ ದತ್ತನಿಗೆ ನಿರ್ಗುಣದ ಅನುಭೂತಿ ಇತ್ತು, ಸಾಧಕರಿಗೆ ಇಂತಹ ಅನುಭೂತಿ ಬರಲು ಎಷ್ಟೋ ಜನ್ಮಗಳವರೆಗೆ ಸಾಧನೆಯನ್ನು ಮಾಡಬೇಕಾಗುತ್ತದೆ.

ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಮೇಲೆ ದತ್ತನ ತಾರಕ ಮತ್ತು ಮಾರಕ ನಾಮಜಪಗಳಿಂದಾದ ಪರಿಣಾಮ

‘ಸಮಾಜದಲ್ಲಿ ಹೆಚ್ಚುಕಡಿಮೆ  ಪ್ರಮಾಣದಲ್ಲಿ ಎಲ್ಲರಿಗೂ ಕೆಟ್ಟ ಶಕ್ತಿಗಳ ತೊಂದರೆ ಇರುತ್ತದೆ. ಕೆಟ್ಟ ಶಕ್ತಿಗಳಿಂದಾಗಿ ವ್ಯಕ್ತಿಗೆ ಶಾರೀರಿಕ ಮತ್ತು ಮಾನಸಿಕ ತೊಂದರೆಗಳಾಗುತ್ತವೆ, ಹಾಗೆಯೇ ಜೀವನದಲ್ಲಿ ಇತರ ಅಡಚಣೆಗಳೂ ಬರುತ್ತವೆ. ಕೆಟ್ಟ ಶಕ್ತಿಗಳು ಸಾಧಕರಿಗೆ ಸಾಧನೆಯಲ್ಲಿಯೂ ಅಡಚಣೆ ತರುತ್ತದೆ; ಆದರೆ ದುರ್ದೈವದಿಂದ ಹೆಚ್ಚಿನವರಿಗೆ ಕೆಟ್ಟ ಶಕ್ತಿಗಳ ತೊಂದರೆಯ ಕುರಿತು ಜ್ಞಾನವಿಲ್ಲ.

ದತ್ತಗುರುಗಳ ಕಾಲಾನುಸಾರ ಆವಶ್ಯಕ ಉಪಾಸನೆ

ಆಧ್ಯಾತ್ಮಿಕ ಉನ್ನತಿಗಾಗಿ ಸ್ವತಃ ಉಪಾಸನೆ ಮಾಡುವುದು ಮತ್ತು ಧರ್ಮಾಚರಣೆಯನ್ನು ಮಾಡುವುದಕ್ಕೆ ‘ವ್ಯಷ್ಟಿ ಸಾಧನೆ’ ಎನ್ನುತ್ತಾರೆ. ಸದ್ಯದ ಕಲಿಯುಗದಲ್ಲಿ ಸಮಾಜದಲ್ಲಿ ರಜ-ತಮ ಗುಣಗಳ ಪ್ರಾಬಲ್ಯವು ಹೆಚ್ಚಿದೆ. ಆದುದರಿಂದ ಸಮಾಜದ ಸಾತ್ತ್ವಿಕತೆಯನ್ನು ಹೆಚ್ಚಿಸಲು ಸ್ವತಃ ಸಾಧನೆಯನ್ನು ಮತ್ತು ಧರ್ಮಾಚರಣೆಯನ್ನು ಮಾಡುವುದರೊಂದಿಗೆ ಸಮಾಜವನ್ನೂ ಸಾಧನೆಗೆ ಮತ್ತು ಧರ್ಮಾಚರಣೆಗೆ ಪ್ರವೃತ್ತಗೊಳಿಸುವುದು ಅನಿವಾರ್ಯವಾಗಿದೆ. ಇದಕ್ಕೆ ‘ಸಮಷ್ಟಿ ಸಾಧನೆ’ ಎನ್ನುತ್ತಾರೆ.

ದತ್ತನಿಗೆ ಮಾಡಬೇಕಾದ ಕೆಲವು ಪ್ರಾರ್ಥನೆಗಳು

ಹೇ ದತ್ತಾತ್ರೇಯಾ, ನನ್ನನ್ನು ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸು. ನಿನ್ನ ರಕ್ಷಾ ಕವಚವು ನನ್ನ ಸುತ್ತಲೂ ಯಾವಾಗಲೂ ಇರಲಿ, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ.

ದತ್ತನ ಗುರುಗಳು

ಶ್ರೀಮದ್ಭಾಗವತದ ಹನ್ನೊಂದನೆಯ ಸ್ಕಂದದಲ್ಲಿಯದು ಮತ್ತು ಅವಧೂತರ ಸಂವಾದವಿದೆ. ಇದರಲ್ಲಿ ಅವಧೂತರು ‘ತಾವು ಯಾವ ಗುರುಗಳನ್ನು ಮಾಡಿಕೊಂಡರು ಮತ್ತು ಅವರಿಂದ ಏನು ಕಲಿತರು, ಎನ್ನುವುದನ್ನು ಹೇಳಿದ್ದಾರೆ. ಅವಧೂತ ಹೇಳುತ್ತಾನೆ, ಜಗತ್ತಿನಲ್ಲಿರುವ ಪ್ರತಿಯೊಂದು ವಿಷಯವೂ ಗುರುವಾಗಿದೆ; ಏಕೆಂದರೆ ಪ್ರತಿಯೊಂದು ವಿಷಯದಿಂದಲೂ ಏನಾದರೊಂದು ಕಲಿಯಲು ಸಿಗುತ್ತದೆ.

ದತ್ತತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿ

ಕೆಲವು ರಂಗೋಲಿಗಳಿಂದ ದತ್ತತತ್ತ್ವ ಆಕರ್ಷಿತವಾಗಲು ಸಹಾಯವಾಗುತ್ತದೆ. ದತ್ತನ ಪೂಜೆಯ ಮೊದಲು ಹಾಗೆಯೇ ದತ್ತ ಜಯಂತಿಯಂದು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ದತ್ತತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳನ್ನು ಹಾಕಬೇಕು. ಇಂತಹ ರಂಗೋಲಿಗಳಿಂದಾಗಿ  ದತ್ತತತ್ತ್ವ ಆಕರ್ಷಿತ ಮತ್ತು ಪ್ರಕ್ಷೇಪಿತವಾಗುವುದರಿಂದ ವಾತಾವರಣವು ದತ್ತತತ್ತ್ವ ಭರಿತವಾಗಿ ಭಕ್ತರಿಗೆ ಅದರ ಲಾಭವಾಗುತ್ತದೆ

ಶ್ರೀಪಾದ ಶ್ರೀವಲ್ಲಭರಿಂದ ವಾಸ್ತವ್ಯದಿಂದ ಪಾವನಗೊಂಡ ಕುರವಪುರ

ರಾಯಚೂರಿನ ಅತ್ಯಂತ ಜಾಗೃತ ತೀರ್ಥಕ್ಷೇತ್ರವೆಂದರೆ ಕುರವಪುರ. ಶ್ರೀಪಾದ ಶ್ರೀವಲ್ಲಭರು ಕೃಷ್ಣಾ ನದಿಯ ಮಧ್ಯದಲ್ಲಿರುವ ನೈಸರ್ಗಿಕ ದ್ವೀಪದಲ್ಲಿ ೧೪ ವರ್ಷಗಳ ಕಾಲ ನೆಲೆಸಿದ್ದರು. ಅವರ ಅವತಾರಿಕಾರ್ಯ ಮುಗಿದ ನಂತರ ಅವರು ಅದೃಶ್ಯರಾದರು. ಶ್ರೀ ದತ್ತಾವತಾರಿ ಯೋಗಿರಾಜ ಶ್ರೀ ವಾಸುದೇವಾನಂದ ಸರಸ್ವತಿಯವರಿಗೆ (ಟೇಂಬೇಸ್ವಾಮಿ) ಶ್ರೀಕ್ಷೇತ್ರ ಕುರವಪುರದಲ್ಲಿಯೇ ‘ದಿಗಂಬರಾ ದಿಗಂಬರಾ ಶ್ರೀಪಾದ ವಲ್ಲಭ ದಿಗಂಬರಾ ಎಂಬ ಹದಿನೆಂಟು ಅಕ್ಷರಗಳ ಮಂತ್ರದ ಸಾಕ್ಷಾತ್ಕಾರವಾಯಿತು.

ದತ್ತನ ಪೂಜನೀಯ ರೂಪವಾದ ಔದುಂಬರ ವೃಕ್ಷದ ಮಹತ್ವ

ಕರ್ಮಕಾಂಡ ಮತ್ತು ಉಪಾಸನಾಕಾಂಡಕ್ಕನುಸಾರ ಸಾಧನೆಯನ್ನು ಮಾಡುವ ಜೀವದ ಒಲವು ದತ್ತತತ್ತ್ವದ ಪ್ರತೀಕವಾಗಿರುವ ಬಾಹ್ಯ ಔದುಂಬರದ ಕಡೆಗೆ ಇರುತ್ತದೆ. ಇದರಿಂದ ಆಧ್ಯಾತ್ಮಿಕ ಉನ್ನತಿಯು ನಿಧಾನವಾಗಿ ಮತ್ತು ಸ್ವಲ್ಪ ಪ್ರಮಾಣದಲ್ಲಿ ಆಗುತ್ತದೆ. ಜ್ಞಾನ ಕಾಂಡದಲ್ಲಿ ಆಂತರಿಕ ಔದುಂಬರದ, ಅಂದರೆ ಆಂತರಿಕ ಆಧ್ಯಾತ್ಮಿಕ ಪ್ರವಾಸದ ಅರಿವಿರುತ್ತದೆ ಮತ್ತು ಕುಂಡಲಿನಿಯನ್ನು ಸಹಸ್ರಾರಚಕ್ರದಲ್ಲಿ ಸ್ಥಿರಗೊಳಿಸಿ ನಿರ್ಗುಣದ ಅನುಭೂತಿಯನ್ನು ಪಡೆಯಲು ಬರುತ್ತದೆ.

ಶ್ರೀ ಗುರು ದತ್ತಾತ್ರೇಯರ ಬಾಲರೂಪದ ಛಾಯಾಚಿತ್ರದ ವೈಶಿಷ್ಟ್ಯ

ದೇವತೆಗಳ ಬಾಲರೂಪದಲ್ಲಿ ಅವರ ತತ್ತ್ವ ಅಪ್ರಕಟ ಸ್ವರೂಪದಲ್ಲಿ ಇರುತ್ತದೆ. ಈ ಚಿತ್ರದ ವೈಶಿಷ್ಟ್ಯ ಎಂದರೆ ದತ್ತನೊಂದಿಗೆ ಸಂಬಂಧಿಸಿದ ಇತರ ಘಟಕಗಳು, ಉದಾ. ಗೋವು, ಶ್ವಾನ (ನಾಯಿಗಳು) ಮತ್ತು ವೃಕ್ಷವನ್ನು ಚಿತ್ರಕಾರನು ಬಾಲರೂಪದಲ್ಲಿ ತೋರಿಸಿದ್ದಾನೆ.

ಸನಾತನ ನಿರ್ಮಿತ ‘ದತ್ತನ ಸಾತ್ತ್ವಿಕ ನಾಮಪಟ್ಟಿ

‘ದತ್ತನಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ ಈ ಮೂರೂ ದೇವತೆಗಳು ಮತ್ತು ಅವರ ಶಕ್ತಿಯು ಇರುತ್ತದೆ. ಆದುದರಿಂದ ಪ್ರತಿಯೊಬ್ಬ ವ್ಯಕ್ತಿಯ ಕುಟುಂಬದ ಗೋತ್ರ, ಕುಲ, ಕುಲದೇವತೆ, ಮಹಾಪುರುಷ ಇವರ ತತ್ತ್ವಗಳು ಏಕತ್ರಿತವಾಗಿ ಈ ದೇವತೆಯಲ್ಲಿ ಇರುವುದರಿಂದ ಕೂಡಲೇ ಪೂರ್ವಜರ ತೊಂದರೆಗಳ ನಿವಾರಣೆಯಾಗಿ ಕುಟುಂಬಕ್ಕೆ ಲಾಭವಾಗುತ್ತದೆ.