ಪ್ರಯಾಗರಾಜ ಮಹಾಕಂಭ ಮೇಳ ೨೦೨೫

ಪ್ರಯಾಗರಾಜ್, ಜನೆವರಿ ೨೬ (ವಾರ್ತೆ) – ಪ್ರಯಾಗರಾಜ ಮಹಾಕುಂಭ ಮೇಳದ ಹಿನ್ನೆಲೆಯಲ್ಲಿ ಅನೇಕ ಸಾಧು, ಸಂತರು, ಮಹಂತರು ಮುಂತಾದವರು ಕುಂಭ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಅನೇಕ ಸಂತರ ಕಥಾವಾಚನ, ಪ್ರವಚನ ಮುಂತಾದ ಫಲಕಗಳು ಕುಂಭ ಕ್ಷೇತ್ರದಲ್ಲಿ ಹಾಕಲಾಗಿವೆ. ಇಂತಹದರಲ್ಲಿ ಮಹಾರಾಷ್ಟ್ರದ ರತ್ನಗಿರಿಯ ನಾಣಿಜಧಾಮದ ಜಗದ್ಗುರು ರಾಮಾನಂದಾಚಾರ್ಯ ನರೇಂದ್ರ ಆಚಾರ್ಯಜಿ ಮಹಾರಾಜ್ ಇವರು ಕೂಡ ದೊಡ್ಡ ಆಕಾರದ ೩ ಫಲಕಗಳನ್ನು ತ್ರಿವೇಣಿ ಮಾರ್ಗದ ಹತ್ತಿರ ‘ಖೋಯಾ-ಪಾಯಾ ಕೇಂದ್ರ’ ದ ಮುಂದೆ ಹಾಕಿದ್ದಾರೆ.

ಇದರಲ್ಲಿನ ಒಂದು ಫಲಕದ ಮೇಲೆ ‘ಸನಾತನ ಸಾತ್ವಿಕ ಹೈ, ಪರ್ ಕಾಯರ ನಹಿ’ (ಸನಾತನ ಸಾತ್ವಿಕವಾಗಿದೆ, ಆದರೆ ಹೇಡಿ ಅಲ್ಲ) ಹಾಗೂ ಇನ್ನೊಂದು ಫಲಕದ ಮೇಲೆ ‘ಡರೇಂಗೆ ತೋ ಮರೆಂಗೆ’ (ಹೆದರಿದರೆ ಸಾಯುವೆವು), ‘ವಕ್ಫ್ ಕೆ ನಾಮ್ ಪರ್ ಸಂಪತ್ತಿ ಕೀ ಲೂಟ ಹೈ ! ಧರ್ಮನಿರಪೇಕ್ಷ ದೇಶ ಮೇ ಯೇ ಕೈಸಿ ಛೂಟ ಹೈ !’ (ವಕ್ಫ್ ಹೆಸರಿನಲ್ಲಿ ಸಂಪತ್ತಿಯ ಲೂಟಿ ಆಗುತ್ತಿದೆ ಜಾತ್ಯತೀತ ದೇಶದಲ್ಲಿ ಇದೆಂಥ ಸವಲತ್ತು ನೀಡಲಾಗುತ್ತಿದೆ ?) ಎಂಬ ವಾಕ್ಯ ಬರೆಯಲಾಗಿದೆ.

ಇದರಲ್ಲಿ ‘ಡರೇಂಗೆ ತೋ ಮರೆಂಗೆ’ ಈ ಫಲಕ ಗಮನ ಸೆಳೆಯುತ್ತಿದ್ದು ಕುಂಭ ಕ್ಷೇತ್ರದಲ್ಲಿ ಚರ್ಚೆಯ ವಿಷಯವಾಗಿದೆ. ಇತ್ತೀಚಿಗೆ ನಡೆದಿರುವ ಲೋಕಸಭೆಯ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ‘ಬಟೆಂಗೆ ತೋ ಕಟೆಂಗೆ’ (ವಿಭಜನೆಯಾದರೆ ಕೊಲ್ಲಲ್ಪಡುವೆವು) ನೀಡಿರುವ ಈ ಘೋಷಣೆ ಬಹಳ ಜನಪ್ರಿಯವಾಗಿತ್ತು. ಅದರ ಆಧಾರದಲ್ಲಿಯೇ ‘ಡರೇಂಗೆ ತೋ ಮರೆಂಗೆ’ ನೀಡಿರುವ ಈ ಘೋಷಣೆಯ ಚರ್ಚೆ ನಡೆಯುತ್ತಿದೆ.
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ