ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಭಾಜಪದ ಸರಪಂಚನ ಹತ್ಯೆ
ಕುಲ್ಗಾಮ್ನಲ್ಲಿ ಭಯೋತ್ಪಾದಕರು ಭಾರತೀಯ ಜನತಾ ಪಕ್ಷದ ಸರಪಂಚರಾದ ಸಜ್ಜಾದ್ ಅಹಮದ್ರ ಹತ್ಯೆಯನ್ನು ಮಾಡಿದರು. ಅಹಮದ್ ಇವರು ತಮ್ಮ ಮನೆಯ ಹೊರಗೆ ಕುಳಿತ್ತಿದ್ದಾಗ ಭಯೋತ್ಪಾದಕರು ಅವರ ಮೇಲೆ ಗುಂಡು ಹಾರಿಸಿ ಅವರ ಹತ್ಯೆಯನ್ನು ಮಾಡಿದರು.
ಕುಲ್ಗಾಮ್ನಲ್ಲಿ ಭಯೋತ್ಪಾದಕರು ಭಾರತೀಯ ಜನತಾ ಪಕ್ಷದ ಸರಪಂಚರಾದ ಸಜ್ಜಾದ್ ಅಹಮದ್ರ ಹತ್ಯೆಯನ್ನು ಮಾಡಿದರು. ಅಹಮದ್ ಇವರು ತಮ್ಮ ಮನೆಯ ಹೊರಗೆ ಕುಳಿತ್ತಿದ್ದಾಗ ಭಯೋತ್ಪಾದಕರು ಅವರ ಮೇಲೆ ಗುಂಡು ಹಾರಿಸಿ ಅವರ ಹತ್ಯೆಯನ್ನು ಮಾಡಿದರು.
“ರಾಮಮಂದಿರದ ಭೂಮಿ ಪೂಜೆಯಾಯಿತು, ಇದು ಒಂದು ಒಳ್ಳೆಯ ಸಂಗತಿಯಾಗಿದೆ; ಆದರೆ ಈಗ ಕಾಶಿ ಮತ್ತು ಮಥುರಾ ಇವುಗಳನ್ನೂ ಕೂಡ ಮುಕ್ತಗೊಳಿಸುವುದು ಆವಶ್ಯಕವಾಗಿದೆ. ಯಾವಾಗ ನಾವು ಈ ಎರಡೂ ದೇವಸ್ಥಾನಗಳಲ್ಲಿ ಪೂಜೆಯನ್ನು ಮಾಡುತ್ತೇವೆಯೋ, ಆಗ ಅವುಗಳಿಗೆ ಅಂಟಿಕೊಂಡಿರುವ ಮಸೀದಿಗಳು ‘ನಾವು ಇನ್ನೂ ಗುಲಾಮರಾಗಿದ್ದೇವೆ’ ಎಂಬುದನ್ನೇ ಹೇಳುತ್ತವೆ.
‘ಶ್ರೀರಾಮಜನ್ಮಭೂಮಿ ರಾಮಲಲ್ಲಾನಿಗೇ ಸೇರಿದ್ದು ! ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದ ನಂತರ ಆಗಸ್ಟ್ ೫ ರಂದು ಅಯೋಧ್ಯೆಯಲ್ಲಿನ ಶ್ರೀರಾಮಮಂದಿರ ಸ್ಥಾಪನೆಗಾಗಿನ ಭೂಮಿಪೂಜೆಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು.
‘ಬಾಬರಿ ಮಸೀದಿ ಇತ್ತು, ಇದೆ ಮತ್ತು ಅದು ಇರಲಿದೆ. ಇನ್ಶಾ ಅಲ್ಲಾ’, ಎಂದು ಎಂಐಎಂ ನ ಅಧ್ಯಕ್ಷ ಸಾಂಸದ ಅಸದುದ್ದೀನ್ ಓವೈಸಿ ಇವರು ಟ್ವೀಟ್ ಮಾಡಿದ್ದಾರೆ. ಹಾಗೆಯೇ ಅದರೊಂದಿಗೆ ಅವರು ಬಾಬ್ರಿಯ ಹಳೆಯ ಛಾಯಾಚಿತ್ರಗಳು ಹಾಗೂ ರಾಮ ಜನ್ಮಭೂಮಿ ಆಂದೋಲನದ ಸಮಯದಲ್ಲಿ ಬಾಬರಿಯನ್ನು ಕೆಡಹುವ ಸಮಯದಲ್ಲಿನ ಛಾಯಾಚಿತ್ರಗಳನ್ನೂ ಅವರು ಪ್ರಸಾರ ಮಾಡಿದ್ದಾರೆ.
ನಮಗೆ ರಾಮ ಮಂದಿರದ ಭೂಮಿಪೂಜೆಯ ಸಮಾರಂಭವನ್ನು ನೋಡಲು ಸಿಕ್ಕಿತು, ಇದು ನಮ್ಮೆಲ್ಲರ ಪರಮಭಾಗ್ಯವಾಗಿದೆ. ಈಗ ದೇಶದಲ್ಲಿ ರಾಮರಾಜ್ಯವನ್ನು ತರಲು ಪತಂಜಲಿ ಯೋಗಪೀಠವು ಅಯೋಧ್ಯೆಯಲ್ಲಿ ಒಂದು ಭವ್ಯದಿವ್ಯ ಗುರುಕುಲವನ್ನು ನಿರ್ಮಿಸುವುದು ಎಂದು ಯೋಗಋಷಿ ರಾಮದೇವ ಬಾಬಾರವರು ಇಲ್ಲಿ ಘೋಷಿಸಿದರು.
ಜಗತ್ತಿನ ಭೂಪಟದಿಂದ ಈಗ ಒಂದು ಅತ್ಯಂತ ಹಳೆಯ ಜಾತ್ಯತೀತ ರಾಷ್ಟ್ರವನ್ನು ತೆಗೆದುಹಾಕಲಾಗಿದೆ. ಭಾರತ ಈಗ ಹಿಂದುತ್ವನಿಷ್ಠ ದೇಶವಾಗಿದೆ. ಅದು ಈಗ ‘ರಾಮನಗರ’ ಆಗಿದೆ, ಎಂದು ಪಾಕಿಸ್ತಾನದ ಮಂತ್ರಿ ಶೇಖ್ ರಶೀದ್ ಅಹ್ಮದ್ ಇವರು ಒಂದು ‘ವಿಡಿಯೋ’ ಪ್ರಸಾರ ಮಾಡುವ ಮೂಲಕ ತಮ್ಮ ದ್ವೇಷವನ್ನು ಪ್ರಕಟಿಸಿದ್ದಾರೆ.
ಕೋಟಿಗಟ್ಟಲೆ ಹಿಂದೂಗಳ ಕನಸಾಗಿದ್ದ ಅವಧಪುರಿ(ಅಯೋಧ್ಯೆ)ಯಲ್ಲಿನ ರಾಮಮಂದಿರದ ಭೂಮಿಪೂಜೆಯ ಸಮಾರಂಭವು ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು. ಇದನ್ನು ೫ ಶತಕಗಳ ಹಿಂದೂಗಳ ಸುಧೀರ್ಘ ಸಂರ್ಘಷದ ಫಲ ಎಂದು ಹೇಳಬೇಕಾಗುವುದು.
ಆಗಸ್ಟ್ ೫ ರಂದು ರಾಮ ಮಂದಿರದ ಭೂಮಿ ಪೂಜೆಯ ಮುಹೂರ್ತವನ್ನು ತೆಗೆದಿದ್ದ ಅರ್ಚಕನಿಗೆ ಬೆದರಿಕೆಯೊಡ್ಡಲಾಗಿದೆ, ಎಂಬ ವಾರ್ತೆಯು ಪ್ರಸಾರವಾಗಿದೆ. ಮುಹೂರ್ತ ತೆಗೆದಾಗಿನಿಂದ ಈ ಮುಹೂರ್ತಕ್ಕೆ ಕೆಲವು ಜನರು ವಿರೋಧಿಸಿದ್ದಾರೆ. ದ್ವಾರಕಾ ಹಾಗೂ ಜ್ಯೋತಿಷ ಪೀಠಗಳ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರೂ ಇದನ್ನು ವಿರೋಧಿಸಿದ್ದಾರೆ.
ಆಗಸ್ಟ್ ೫ ರಂದು ಪ್ರಧಾನಿ ನರೇಂದ್ರ ಮೋದಿಯವರ ಹಸ್ತಗಳಿಂದ ರಾಮ ಮಂದಿರದ ಭೂಮಿ ಪೂಜೆಯು ನೆರವೇರಲಿದೆ. ಇದಕ್ಕಾಗಿ ಬಿಗಿ ಭದ್ರತೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ಸಾಧಾರಣ ಮೂರು ಗಂಟೆಗಳ ಕಾಲ ಇರಲಿದ್ದಾರೆ.
ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರೋನಾ ಸೋಂಕು ದೃಢಪಟ್ಟಿದೆ. ಅವರು ಸ್ವತಃ ಈ ಮಾಹಿತಿಯನ್ನು ಟ್ವೀಟ್ ಮಾಡಿ ತಿಳಿಸಿದ್ದಾರೆ. ‘ನನ್ನ ಕರೋನಾ ಪರೀಕ್ಷೆಯು ಸಕಾರಾತ್ಮಕವಾಗಿದೆ ಆದುದರಿಂದ ವೈದ್ಯರ ಸಲಹೆಯಂತೆ ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದಿರುವ ಜನರಲ್ಲಿ ಕರೋನಾದ ಯಾವುದೇ ಲಕ್ಷಣಗಳು ಕಂಡುಬಂದರೆ ಅವರು ತಮ್ಮನ್ನು ಪ್ರತ್ಯೇಕೀಕರಣದಲ್ಲಿ ಇರಬೇಕು’,