
‘ಶ್ರೀ ಗಣೇಶ ಚತುರ್ಥಿಯನ್ನು ‘ಕಳಂಕಿತ ಚತುರ್ಥಿ’ ಎಂದೂ ಕರೆಯುತ್ತಾರೆ. ಈ ಚತುರ್ಥಿಯಂದು ಚಂದ್ರನನ್ನು ನೋಡುವುದು ನಿಷೇಧಿಸಲಾಗಿದೆ. ಚತುರ್ಥಿಯಂದು ಚಂದ್ರನನ್ನು ತಪ್ಪಿಯೂ ನೋಡಿದರೆ, ‘ಶ್ರೀಮದ್ ಭಾಗವತ’ದ 10ನೇ ಸ್ಕಂಧದಲ್ಲಿ 56-57 ನೇ ಅಧ್ಯಾಯದಲ್ಲಿ ನೀಡಿರುವ ‘ಶ್ಯಮಂತಕ ಮಣಿಯ ಕಳ್ಳತನ’ದ ಕಥೆಯನ್ನು ಗೌರವದಿಂದ ಓದಬೇಕು ಅಥವಾ ಕೇಳಬೇಕು. ಭಾದ್ರಪದ ಶುಕ್ಲ ತೃತೀಯ ಅಥವಾ ಪಂಚಮಿಯ ಚಂದ್ರನನ್ನು ನೋಡಬೇಕು. ಇದರಿಂದಾಗಿ ಚತುರ್ಥಿಯಂದು ಚಂದ್ರದರ್ಶನ ಆಗಿದ್ದರೇ ಅದರ ಹೆಚ್ಚಿನ ಅಪಾಯ ಉಳಿಯುವುದಿಲ್ಲ.
ಆಕಸ್ಮಿಕ ಚಂದ್ರನ ದರ್ಶನವಾದರೆ, ಈ ಕೆಳಗಿನ ಮಂತ್ರದಿಂದ ಅಭಿಮಂತ್ರಿಸಿದ ಪವಿತ್ರ ನೀರನ್ನು ಸೇವಿಸಬೇಕು. ಈ ಮಂತ್ರವನ್ನು 21, 54 ಅಥವಾ 108 ಬಾರಿ ಜಪಿಸಬೇಕು.
ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತಃ |
ಸುಕುಮಾರಕ ಮಾರೋಧಿಃ ತವಹ್ಯೇಷಃ ಸ್ಯಮಂತಕಃ || – ಬ್ರಹ್ಮವೈವರ್ತ ಪುರಾಣ, ಅಧ್ಯಾಯ 78
(ಅರ್ಥ: ಸಿಂಹವು ಪ್ರಸೇನನನ್ನು ಕೊಂದಿತು. ಸಿಂಹವು ಜಾಂಬವಂತನಿಂದ ಕೊಲ್ಲಲ್ಪಟ್ಟಿತು. ಮಗುವೇ, ಅಳಬೇಡ ಈ ಸ್ಯಮಂತಕ ಮಣಿ ನಿನ್ನದೇ.)
ಆಧಾರ – ‘ಋಷಿ ಪ್ರಸಾದ್’ ಆಗಸ್ಟ್ 2011
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !
ಪ್ರದಕ್ಷಿಣೆಯ ಶಾಸ್ತ್ರವನ್ನು ತಿಳಿದುಕೊಂಡು ಪ್ರದಕ್ಷಿಣೆಗಳನ್ನು ಹಾಕಿ ಮತ್ತು ಚೈತನ್ಯ ಪಡೆಯಿರಿ !
ರಾಜ್ಯದಲ್ಲಿನ ಪ್ರಾರ್ಥನಾ ಸ್ಥಳಗಳ ಮೇಲಿನ ಧ್ವನಿವರ್ಧಕಗಳ ಶಬ್ದವನ್ನು ಸೀಮಿತವಾಗಿಡಿ !
ಆಭರಣಗಳನ್ನು ಉಪಯೋಗಿಸುವ ಮಹತ್ವ
ಅಕ್ಷಯ ತದಿಗೆಯ ದಿನ ಪುಣ್ಯವನ್ನು ಹೇಗೆ ಪಡೆಯುವಿರಿ ?