ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಬ್ರಹ್ಮೋತ್ಸವರೂಪಿ’ ೮೧ ನೇ ಜನ್ಮೋತ್ಸವದ ಬಗ್ಗೆ ಕು. ಮಧುರಾ ಭೋಸಲೆ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆ !

‘ವೈಶಾಖ ಕೃಷ್ಣ ಪಕ್ಷ ಷಷ್ಠಿಯ ಶುಭತಿಥಿಯಂದು ಗೋವಾದ ಫರ್ಮಾಗುಡಿ, ಇಂಜನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೮೧ ನೇ ಜನ್ಮೋತ್ಸವವು ‘ಬ್ರಹ್ಮೋತ್ಸವ’ದ ರೂಪದಲ್ಲಿ ಅತ್ಯಂತ ಹರ್ಷೋಲ್ಲಾಸದಿಂದ ನೆರೆವೇರಿತು. ಈ ಸಮಾರಂಭವು ಎಷ್ಟೊಂದು ಭವ್ಯ ಮತ್ತು ದಿವ್ಯವಾಗಿತೆಂದರೆ, ಈ ಸಮಾರಂಭಕ್ಕೆ ಉಪಸ್ಥಿತರಿದ್ದ ಸಾಧಕರಿಗೆ ಈ ಬ್ರಹ್ಮೋತ್ಸವವು ‘ಇದೇ ದೇಹದಿಂದ ಇದೇ ಕಣ್ಣುಗಳಿಂದ’ ನೋಡಿ ಸಂಪೂರ್ಣ ಸಮಾಧಾನ ಸಿಕ್ಕಿತು. ದೇವರ ಕೃಪೆಯಿಂದ ಬುದ್ಧಿಅಗಮ್ಯವಾಗಿರುವ ಈ ಅಲೌಕಿಕ, ದಿವ್ಯ ಮತ್ತು ಭವ್ಯ ಬ್ರಹ್ಮೋತ್ಸವದ ಸೂಕ್ಷ್ಮ ಪರೀಕ್ಷಣೆಯನ್ನು ಶಬ್ದಗಳಲ್ಲಿ ಹೇಳುವುದು ಕಠಿಣವಾಗಿದೆ. ಆದ್ದರಿಂದ ಬ್ರಹ್ಮೋತ್ಸವದ ಅನುಭೂತಿಯನ್ನು ಪಡೆಯುವುದೇ ಒಳ್ಳೆಯದು, ಆದರೂ ಶ್ರೀ ಗುರುಗಳ ಆಜ್ಞಾಪಾಲನೆ ಮಾಡಲು ನನ್ನ ಅಲ್ಪ ತಿಳುವಳಿಕೆಗೆ ಏನು ಅರಿವಾಯಿತೋ ಅದನ್ನು ಇಲ್ಲಿ ಲೇಖನದ ರೂಪದಲ್ಲಿ ಬರೆದು ಈ ಲೇಖನರೂಪಿ ಭಾವಸುಮನಾಂಜಲಿಯನ್ನು ಶ್ರೀ ಗುರುಗಳ ಪರಮ ಪಾವನ ಚರಣಗಳಲ್ಲಿ ಅರ್ಪಿಸುತ್ತಿದ್ದೇನೆ.

೧. ವಿವಿಧ ಬಣ್ಣಗಳ ಪ್ರಕಾಶಜ್ಯೋತಿಗಳು ಪೃಥಿಗೆ ಬಂದಿದ್ದರಿಂದ ಪೃಥ್ವಿಯ ಸ್ಥಳ ಮತ್ತು ವಾಯುಮಂಡಲ ಶುದ್ಧಿಯಾಗುವುದು

ಕು. ಮಧುರಾ ಭೋಸಲೆ

೧೧.೫.೨೦೨೩ ರಂದು ಬೆಳಗ್ಗಿನಿಂದ ಸಾಯಂಕಾಲದವರೆಗೆ ಆಕಾಶದಿಂದ ಪೃಥ್ವಿಯ ಮೇಲೆ ತಿಳಿಹಳದಿ, ತಿಳಿನೀಲಿ, ಗುಲಾಬಿ, ನಸುಗೆಂಪು ಮತ್ತು ಬಿಳಿ ಈ ರೀತಿಯ ವಿವಿಧ ಬಣ್ಣಗಳ ದೈವೀ ಪ್ರಕಾಶಗಳ ಜ್ಯೋತಿಗಳು ಬರುತ್ತಿದ್ದವು. ಇದರಿಂದ ‘ಸ್ವರ್ಗಲೋಕ, ಮಹರ್ಲೋಕ, ಜನಲೋಕ, ತಪೋಲೋಕ ಮತ್ತು ಸತ್ಯಲೋಕ ಈ ಉಚ್ಚ ಲೋಕಗಳಲ್ಲಿ’, ವಾಸಿಸುತ್ತಿರುವ ವಿವಿಧ ದೈವೀ ಶಕ್ತಿಗಳ ಪ್ರವಾಹಗಳು ಪ್ರಕಾಶಜ್ಯೋತಿಗಳ ಮಾಧ್ಯಮದಿಂದ ಪೃಥ್ವಿಗೆ ಶುಭಾಗಮನ ಮಾಡಿರುವ ಮತ್ತು ಅವರೆಲ್ಲರೂ ಶ್ರೀವಿಷ್ಣುವಿನ ಆಗಮನಕ್ಕಾಗಿ ಮೊದಲೇ ಸಿದ್ಧರಾಗಿದ್ದಾರೆ ಎಂದು ಅರಿವಾಯಿತು, ಹಾಗೆಯೇ ಈ ಪ್ರಕಾಶಜ್ಯೋತಿಗಳಿಂದ ಉಚ್ಚ ಲೋಕಗಳಲ್ಲಿನ ಚೈತನ್ಯದ ಪ್ರವಾಹ ಪೃಥ್ವಿಗೆ ಬಂದು ಪೃಥ್ವಿಯ ಸ್ಥಳ ಮತ್ತು ವಾಯುಮಂಡಲ ಶುದ್ಧವಾಗಿರುವುದು ಅರಿವಾಯಿತು.

೨. ಬ್ರಹ್ಮೋತ್ಸವ

೨ ಅ. ಬ್ರಹ್ಮೋತ್ಸವ ಅಥವಾ ಆನಂದೋತ್ಸವ ಇವುಗಳ ಅರ್ಥ : ಯಾವಾಗ ಆಧ್ಯಾತ್ಮಿಕ ಉನ್ನತರಲ್ಲಿರುವ ಪರಮೇಶ್ವರೀ ತತ್ತ್ವವು ಪ್ರಕಟವಾಗಿ ಜಾಗೃತವಾಗುತ್ತದೆಯೋ, ಆಗ ಅವರಿಂದ ಸಂಪೂರ್ಣ ವಿಶ್ವದಲ್ಲಿ ಚೈತನ್ಯ, ಆನಂದ ಮತ್ತು ಶಾಂತಿಯ ಲಹರಿಗಳು ಪ್ರಕ್ಷೇಪಣೆಯಾಗಿ ಅನಂತ ಕೋಟಿ ಜೀವಗಳಿಗೆ ಅದರ ಅನುಭೂತಿ ಬರುತ್ತದೆ ಮತ್ತು ಬ್ರಹ್ಮಾನಂದವನ್ನು ಅನುಭವಿಸುವ ಜೀವಗಳು ಪರಮೇಶ್ವರನ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಈ ಉತ್ಸವವನ್ನು ಆಚರಿಸುತ್ತವೆ. ಆದ್ದರಿಂದ ಈ ಉತ್ಸವಕ್ಕೆ ‘ಬ್ರಹ್ಮೋತ್ಸವ’ ಅಥವಾ ‘ಆನಂದೋತ್ಸವ’ ಎಂದು ಕರೆಯುತ್ತಾರೆ.

೨ ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ದಿನ ಅವರಲ್ಲಿನ ಪರಮೇಶ್ವರೀ ತತ್ತ್ವ, ಅಂದರೆ ಬ್ರಹ್ಮತತ್ತ್ವವು ಪ್ರಕಟವಾದುದರಿಂದ ಅವರು ಪರಬ್ರಹ್ಮಸ್ವರೂಪರಾದರು. ಆದ್ದರಿಂದ ಅವರ ಜನ್ಮೋತ್ಸವವನ್ನು ಸಪ್ತರ್ಷಿಗಳು ನಾಡೀಪಟ್ಟಿಯ ಮಾಧ್ಯಮದಿಂದ ಮಾಡಿದ ಮಾರ್ಗದರ್ಶನಕ್ಕನುಸಾರ ‘ಬ್ರಹ್ಮೋತ್ಸವ’ ದ ಸ್ವರೂಪದಲ್ಲಿ ಆಚರಿಸಲಾಯಿತು.

೩. ವಿವಿಧ ಪ್ರಕಾರದ ಉಪಉತ್ಸವಗಳು ಮತ್ತು ಅವುಗಳ ಸ್ವರೂಪ !

೩ ಅ. ರಥೋತ್ಸವ

ಶ್ರೀವಿಷ್ಣುವಿನ ಅವತಾರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಭೂದೇವಿಯ ಅವತಾರವಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀದೇವಿಯ ಅವತಾರವಾಗಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರೊಂದಿಗೆ ಚಿನ್ನದ ಬಣ್ಣದ ರಥದಲ್ಲಿ ಆರೂಢರಾಗಿ ಸಮಾರಂಭದ ಸ್ಥಳಕ್ಕೆ ಬಂದರು. ಈ ರಥದ ಆಧ್ಯಾತ್ಮಿಕ ವೈಶಿಷ್ಯಗಳು ಮುಂದಿನಂತಿವೆ.

೩ ಅ ೧. ಸಾಕ್ಷಾತ್ ದೇವಶಿಲ್ಪಿ ವಿಶ್ವಕರ್ಮನು ರಥವನ್ನು ರಚಿಸಿದುದರಿಂದ ಅದರಲ್ಲಿ ವೈಕುಂಠದಲ್ಲಿನ ಶ್ರೀವಿಷ್ಣುವಿನ ದಿವ್ಯ ರಥದ ಶೇ. ೩೦ ರಷ್ಟು ತತ್ತ್ವ ಕಾರ್ಯನಿರತವಾಗುವುದು : ಸಾಕ್ಷಾತ್ ದೇವಶಿಲ್ಪಿ ವಿಶ್ವಕರ್ಮ ಇವರು ಕರ್ನಾಟಕ ರಾಜ್ಯದಲ್ಲಿನ ಶಿವಮೊಗ್ಗ ಜಿಲ್ಲೆಯಲ್ಲಿನ ಸಂತರಾದ ಪೂ. ಕಾಶಿನಾಥ ಕವಟೆಕರ ಇವರ ಮಾಧ್ಯಮದಿಂದ ಸನಾತನದ ಸಾಧಕರಿಗೆ ಮಾರ್ಗದರ್ಶನ ಮಾಡಿ ಅವರಿಂದ ಈ ರಥವನ್ನು ತಯಾರಿಸಿಕೊಂಡಿದ್ದಾರೆ. ಆದ್ದರಿಂದ ಈ ರಥದಲ್ಲಿ ವೈಕುಂಠದಲ್ಲಿನ ಶ್ರೀವಿಷ್ಣುವಿನ ದಿವ್ಯ ರಥದ ಶೇ. ೩೦ ರಷ್ಟು ತತ್ತ್ವ ಆಕರ್ಷಿತವಾಗಿ ಅದು ಬಹಳಷ್ಟು ಪ್ರಮಾಣದಲ್ಲಿ ಕಾರ್ಯನಿರತವಾಗಿದೆ. ಆದ್ದರಿಂದ ಸ್ಥೂಲ ಕಣ್ಣುಗಳಿಗೆ ಕಾಣುವ ಈ ಭೂಲೋಕದ ರಥವೆಂದರೆ, ಸಾಕ್ಷಾತ್ ಶ್ರೀವಿಷ್ಣುವಿನ ವೈಕುಂಠದಲ್ಲಿನ ದಿವ್ಯ ಸುವರ್ಣ ರಥವೇ ಆಗಿದೆ.

೩ ಅ ೨. ಶ್ರೀವಿಷ್ಣುರಥದ ಮೇಲೆ ಹಾರಿಸಿದ ಚಿನ್ನದ ಬಣ್ಣದ ಧ್ವಜದ ಮೇಲೆ ಒಂದು ಬದಿಯಲ್ಲಿ ‘ಸೂರ್ಯನಾರಾಯಣ’ ಮತ್ತು ಇನ್ನೊಂದು ಬದಿಯಲ್ಲಿ ‘ಓಂ’ ಈ ಚಿಹ್ನೆಯನ್ನು ಕೆತ್ತಿರುವುದರ ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವ : ಶ್ರೀವಿಷ್ಣುರಥದ ಮೇಲೆ ಹಾರಿಸಿದ ಚಿನ್ನದ ಬಣ್ಣದ ಧ್ವಜದ ಮೇಲೆ ಒಂದು ಬದಿಗೆ ‘ಸೂರ್ಯನಾರಾಯಣ’ ಮತ್ತು ಇನ್ನೊಂದು ಬದಿಗೆ ‘ಓಂ’ ಈ ಚಿಹ್ನೆಗಳನ್ನು ಹಾಕಲಾಗಿತ್ತು. ಸೂರ್ಯನಾರಾಯಣನ ಚಿಹ್ನೆಯಿಂದ ಸಗುಣ-ನಿರ್ಗುಣ ಮತ್ತು ‘ಓಂ’ ಚಿಹ್ನೆಯಿಂದ ನಿರ್ಗುಣ-ಸಗುಣ ಸ್ತರದ ದೈವೀ ಶಕ್ತಿ ಮತ್ತು ಚೈತನ್ಯವು ವಾತಾವರಣದಲ್ಲಿ ಕಾರ್ಯನಿರತವಾಗಿತ್ತು. ಶ್ರೀವಿಷ್ಣುವಿನ ಅವತಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಜ್ಞಾನ, ಮೋಕ್ಷ, ಅವತಾರೀ, ಸಮಷ್ಟಿ, ವಿಶ್ವ ಮತ್ತು ಜಗದ್ಗುರುಗಳಾಗಿರುವುದರಿಂದ ಅವರು ಸಗುಣ ಸ್ತರದಲ್ಲಿ ಸೂರ್ಯನಾರಾಯಣನಂತೆ ಮತ್ತು ನಿರ್ಗುಣ ಸ್ತರದಲ್ಲಿ ‘ಓಂ’ಕಾರದಂತೆ ಸಂಪೂರ್ಣ ಸೃಷ್ಟಿಯ ಕಲ್ಯಾಣಕ್ಕಾಗಿ ದೈವೀ ಕಾರ್ಯವನ್ನು ನಿರಂತರವಾಗಿ ಮಾಡುತ್ತಾರೆ. ಆದ್ದರಿಂದ ಅವರು ಅಖಿಲ ಬ್ರಹ್ಮಾಂಡದ ‘ಬ್ರಹ್ಮಾಂಡಗುರು’ಗಳಾಗಿದ್ದಾರೆ.

೩ ಅ ೩. ‘ಬ್ರಹ್ಮಾಂಡದಲ್ಲಿನ ಪುಣ್ಯಾತ್ಮರು, ಧರ್ಮಾತ್ಮರು ಮತ್ತು ಋಷಿಮುನಿಗಳು ಸಾಧಕರ ರೂಪದಲ್ಲಿ ಶ್ರೀವಿಷ್ಣುವಿನ ಅವತಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಆರೂಢರಾಗಿರುವ ದಿವ್ಯ ರಥವನ್ನು ಎಳೆಯುತ್ತಿದ್ದಾರೆ’, ಎಂದು ಅರಿವಾಗುವುದು : ಈ ದಿವ್ಯ ರಥವು ಮೈದಾನದಲ್ಲಿ ನಿಗದಿಪಡಿಸಲಾದ ಮಾರ್ಗದಲ್ಲಿ ಸಾಗುವಾಗ ‘ಓಡಿಸಾ ರಾಜ್ಯದಲ್ಲಿನ ಶ್ರೀ ಜಗನ್ನಾಥಪುರಿಯಲ್ಲಿನ ಶ್ರೀ ಜಗನ್ನಾಥ ದೇವರ ರಥವನ್ನು ಶ್ರೀಮನ್ನಾರಾಯಣನ ಭಕ್ತರು ಯಾವ ರೀತಿ ಎಳೆಯುತ್ತಿರುತ್ತಾರೆಯೋ’, ಅದೇ ರೀತಿ ‘ಬ್ರಹ್ಮಾಂಡದಲ್ಲಿನ ಪುಣ್ಯಾತ್ಮರು, ಧರ್ಮಾತ್ಮರು ಮತ್ತು ಋಷಿಮುನಿಗಳು ಸಾಧಕರ ರೂಪದಲ್ಲಿ ಶ್ರೀವಿಷ್ಣುವಿನ ಅವತಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಆರೂಢವಾಗಿರುವ ದಿವ್ಯ ರಥವನ್ನು ಎಳೆಯುತ್ತಿದ್ದಾರೆ’, ಎಂದು ನನಗೆ ಅರಿವಾಯಿತು, ಹಾಗೆಯೇ ತಿರುಪತಿ ಬಾಲಾಜಿಯ ಬ್ರಹ್ಮೋತ್ಸವವನ್ನು ಹೇಗೆ ಆಚರಿಸಲಾಗುತ್ತದೆಯೋ, ಅದೇ ರೀತಿ ಶ್ರೀವಿಷ್ಣುವಿನ ಅಂಶಾವತಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಈ ಬ್ರಹ್ಮೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಆದ್ದರಿಂದ ಶ್ರೀವಿಷ್ಣುವಿನ ಶ್ರೀ ಜಗನ್ನಾಥ ಮತ್ತು ಶ್ರೀ ತಿರುಪತಿ ಬಾಲಾಜಿ ಈ ಇಬ್ಬರ ರೂಪಗಳು ಭವ್ಯ ಮತ್ತು ದಿವ್ಯ ಸ್ವರೂಪವು ಒಗ್ಗೂಡಿದಂತಹ ಶ್ರೀವಿಷ್ಣುವಿನ ಅವತಾರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವರೂಪಿ ಈ ದಿವ್ಯ ಸಮಾರಂಭವನ್ನು ನೋಡಲು ‘ಸೂರ್ಯ, ಚಂದ್ರ, ಅಗ್ನಿ, ವಾಯು, ಪರ್ಜನ್ಯ, ಇಂದ್ರ, ಯಮ ಮತ್ತು ಕುಬೇರ’, ಈ ಅಷ್ಟಲೋಕಪಾಲಕರು (ಎಂಟು ಲೋಕಗಳ ಸ್ವಾಮಿಗಳು) ಹಾಗೆಯೇ ‘ಇಂದ್ರ, ಯಮ, ವರುಣ, ಕುಬೇರ, ಅಗ್ನಿ, ನೈರುತ್ಯ, ವಾಯು ಮತ್ತು ಈಶಾನ’ ಈ ಅಷ್ಟದಿಕ್ಪಾಲಕರು (ಎಂಟು ದಿಕ್ಕುಗಳ ಸ್ವಾಮಿಗಳು), ಆಪ, ಧ್ರುವ, ಸೋಮ, ಧರ್ಮ, ಅನಿಲ, ಅನಲ, ಪ್ರತ್ಯುಷ ಮತ್ತು ಪ್ರಭಾಸ’ ಈ ಅಷ್ಟವಸು (ಗಣದೇವತೆಗಳು) ಹಾಗೆಯೇ ಯಕ್ಷ, ಗಂಧರ್ವ, ಕಿನ್ನರ, ಋಷಿಮುನಿಗಳು, ದೇವತೆಗಳು ಮೊದಲಾದ ದೈವೀ ಶಕ್ತಿಗಳು ಆಕಾಶಮಂಡಲದಲ್ಲಿ ಸೇರಿರುವುದು ಅರಿವಾಯಿತು.

೩ ಅ ೪. ಮೈದಾನದಲ್ಲಿ ರಥವು ಸಂಚರಿಸುತ್ತಿರುವಾಗ ಈ ದಿವ್ಯ ರಥದಲ್ಲಿ ಆರೂಢರಾಗಿದ್ದ ಮೂವರು ಮೋಕ್ಷಗುರುಗಳು ಸಂಪೂರ್ಣ ಬ್ರಹ್ಮಾಂಡದ ವಿಹಾರ ಮಾಡಿ ಪ್ರತಿಯೊಂದು ಲೋಕದ ಜೀವಗಳನ್ನು ಪ್ರೀತಿಮಯ ದೃಷ್ಟಿಯಿಂದ ಅವಲೋಕಿಸುತ್ತಿರುವುದರ ಅರಿವಾಗುವುದು : ಈ ರಥವು ಯಾವಾಗ ಸಮಾರಂಭದ ಸ್ಥಳದಲ್ಲಿ ಸಂಚರಿಸುತ್ತಿತ್ತೋ, ಆಗ ‘ಶ್ರೀವಿಷ್ಣುವಿನ ಅವತಾರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಭೂದೇವಿಯ ಅವತಾರವಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀದೇವಿಯ ಅವತಾರವಾಗಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರೊಂದಿಗೆ ಸಂಪೂರ್ಣ ಬ್ರಹ್ಮಾಂಡದಲ್ಲಿ ವಿಹಾರ ಮಾಡಿ ಪ್ರತಿಯೊಂದು ಲೋಕದಲ್ಲಿನ ಜೀವಗಳನ್ನು ಪ್ರೀತಿಭರಿತ ದೃಷ್ಟಿಯಿಂದ ಅವಲೋಕಿಸುತ್ತಿದ್ದಾರೆ’, ಎಂದು ಅರಿವಾಯಿತು. ಈ ಮೂವರು ಮೋಕ್ಷಗುರುಗಳ ರೂಪದಲ್ಲಿ ವೈಕುಂಠವೇ ಪೃಥ್ವಿಯಲ್ಲಿ ಅವತರಿಸಿದ್ದು ಸಮಾರಂಭದ ಸ್ಥಳವು ‘ಭೂವೈಕುಂಠ’ವಾಗಿದೆ ಎಂದರಿವಾಯಿತು.

೩ ಅ ೫. ‘ಭಗವಂತನೊಂದಿಗೆ ಆತನ ಸಂಪೂರ್ಣ ವ್ಯೂಹವೇ ಪೃಥ್ವಿಯಲ್ಲಿ ಅವತರಿಸಿದೆ’, ಎಂದು ರಥೋತ್ಸವದ ಸಮಯದಲ್ಲಿ ಅನುಭುತಿ ಬರುವುದು : ರಥೋತ್ಸವದಲ್ಲಿ ಬ್ರಹ್ಮಾಂಡದ ಎಲ್ಲ ದೇವತೆಗಳು ಶ್ರೀಮನ್ನಾರಾಯಣನ ವೈಕುಂಠದಿಂದ ಪೃಥ್ವಿಯವರೆಗೆ, ಅಂದರೆ ಭೂಲೋಕದವರೆಗೆ ದಿವ್ಯ ಮೆರವಣಿಗೆ ಅಥವಾ ಶೋಭಾಯಾತ್ರೆಯನ್ನು ತೆಗೆದಿರುವುದು ಅರಿವಾಯಿತು. ಈ ರೀತಿ ಯಾವಾಗ ಅವತಾರವು ಭೂಲೋಕದಲ್ಲಿ ಅವತರಿಸುತ್ತದೆಯೋ, ಆಗ ಅವನಿಗೆ ಸಹಾಯ ಮಾಡುವ ದೈವೀ ಶಕ್ತಿಗಳೂ ವಿವಿಧ ರೂಪಗಳಲ್ಲಿ ಭೂಲೋಕದಲ್ಲಿ ಅವತರಿಸುತ್ತವೆ. ಇದಕ್ಕೇ ‘ಭಗವಂತನ ವ್ಯೂಹ ಧರಣಿಯ ಮೇಲೆ ಅವತರಿಸುವುದು’, ಎನ್ನುತ್ತಾರೆ.

೩ ಅ ೬. ವೀರ ಹನುಮಾನ, ಶ್ರೀವಿಷ್ಣುವಾಹನ ಗರುಡ ಮತ್ತು ಶ್ರೀವಿಷ್ಣುವಿನ ಶ್ರೇಷ್ಠ ಭಕ್ತನಾದ ದೇವರ್ಷಿ ನಾರದರು ಬ್ರಹ್ಮೋತ್ಸವದ ನಿವೇದನೆಯನ್ನು ಮಾಡುತ್ತಿರುವುದು ಅರಿವಾಗುವುದು : ಯಾವಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಆರೂಢವಾಗಿರುವ ದಿವ್ಯ ರಥವು ವೇದಿಕೆಯ ಮುಂದೆ ನಿಂತಿತೋ, ಆಗ ರಥದ ಮೇಲಿನ ಭಾಗದಲ್ಲಿ ಕೈಯಲ್ಲಿ ಗದೆಯನ್ನು ಹಿಡಿದು ರಥದ ರಕ್ಷಣೆಗಾಗಿ ವೀರ ಹನುಮಾನ, ರಥದ ಕೆಳಗಿನ ಭಾಗದಲ್ಲಿ ಕೈ ಜೋಡಿಸಿದ ಭಾವಮುದ್ರೆಯಲ್ಲಿನ ಶ್ರೀವಿಷ್ಣುವಾಹನ ಗರುಡ ಮತ್ತು ರಥದ ಎಡಬದಿಗೆ ಮಂಜುಳ ಸ್ವರದಲ್ಲಿ ಗಾಯನದ ಸ್ವರೂಪದಲ್ಲಿ ಶ್ರೀವಿಷ್ಣುವಿನ ಸ್ತುತಿ ಮಾಡುವ ಮಹಾಮುನಿಗಳಾದ ತುಂಬರು ಮತ್ತು ಬಲಬದಿಗೆ ಶ್ರೀವಿಷ್ಣುನಾಮದ ನಿರಂತರ ಗುಣಗಾನ ಮಾಡುವ ಮತ್ತು ವೀಣಾವಾದನ ಮಾಡುವ ಪರಮ ಶ್ರೀವಿಷ್ಣುಭಕ್ತನಾದ ಮಹರ್ಷಿ ನಾರದರು ಸಾಕ್ಷಾತ್ ಉಪಸ್ಥಿತರಿದ್ದು ಬ್ರಹ್ಮೋತ್ಸವದ ನಿವೇದನೆಯನ್ನು ಮಾಡುತ್ತಿರುವುದು ಅರಿವಾಯಿತು.

೩ ಅ ೭. ದೇವತೆಗಳು ಮತ್ತು ಅಸುರರ ನಡುವೆ ಬ್ರಹ್ಮೋತ್ಸವದ ಸಮಯದಲ್ಲಾದ ಸೂಕ್ಷ್ಮ ಯುದ್ಧ : ಬ್ರಹ್ಮೋತ್ಸವ ನಡೆಯುತ್ತಿರುವಾಗ ೭ ನೇ ಪಾತಾಳದಲ್ಲಿನ ಮಾಯಾವಿ ಅಸುರೀ ಶಕ್ತಿಗಳು ಸಮಾರಂಭದ ಸ್ಥಳದ ಮೇಲೆ ಸೂಕ್ಷ್ಮದಿಂದ ಆಕ್ರಮಣ ಮಾಡಿದವು. ಆಗ ರಥದ ಸುತ್ತಲೂ ಬ್ರಹ್ಮಚೈತನ್ಯದ ಚಿನ್ನದ ಬಣ್ಣದ ತಾರಕ ಮತ್ತು ದಿವ್ಯ ಶಕ್ತಿಯ ಕೆಂಪು ಬಣ್ಣದ ಮಾರಕ ಈ ಎರಡೂ ತತ್ತ್ವಗಳ ಸಂರಕ್ಷಣಕವಚಗಳು ಕಾರ್ಯನಿರತವಾಗಿದ್ದವು. ಆದ್ದರಿಂದ ರಥದ ಸುತ್ತಲೂ ಕಾರ್ಯನಿರತವಾಗಿರುವ ಚಿನ್ನದ ಬಣ್ಣದ ಬ್ರಹ್ಮಚೈತನ್ಯದ ಸಂರಕ್ಷಣೆಯ ಕವಚವು ಮಾಯಾವಿ ಶಕ್ತಿಗಳ ಮಾಯಾವಿ ಸಿದ್ಧಿಯನ್ನು ಆಕರ್ಷಣ ಶಕ್ತಿಯ ಸಹಾಯದಿಂದ ಎಳೆದುಕೊಂಡು ಕೆಟ್ಟ ಶಕ್ತಿಗಳ ಮಾಯಾವಿ ಸ್ವರೂಪದ ಆಕ್ರಮಣವನ್ನು ನಿಷ್ಫಲಗೊಳಿಸಿತು. ದೈವೀ ಮತ್ತು ಕೆಟ್ಟ ಶಕ್ತಿಗಳಲ್ಲಾದ ತೀವ್ರ ಸಂಘರ್ಷದಿಂದ ರಥದಿಂದ ಸೂಕ್ಷ್ಮದಿಂದ ತುಂಬಾ ವೇಗದಿಂದ ಕಿಡಿಗಳು ಹೊರ ಬೀಳುತ್ತಿರುವ ಸೂಕ್ಷ್ಮದೃಶ್ಯ ಕಾಣಿಸಿತು, ಹಾಗೆಯೇ ರಥದ ಸುತ್ತಲೂ ಕಾರ್ಯನಿರತವಾಗಿರುವ ಕೆಂಪು ಬಣ್ಣದ ದಿವ್ಯ ಶಕ್ತಿಯ ಸಂರಕ್ಷಕಕವಚದಿಂದ ದೇವತೆಗಳ ಗದೆ, ಬಾಣ, ಖಡ್ಗ, ತ್ರಿಶೂಲ, ಪಾಶ, ಅಂಕುಶ, ಪರಶು, ದಂಡ ಇತ್ಯಾದಿ ದಿವ್ಯ ಶಸ್ತ್ರಾಸ್ತ್ರಗಳು ಕೆಟ್ಟ ಶಕ್ತಿಗಳ ದಿಶೆಯಲ್ಲಿ ಹೋಗಿ ಕೆಟ್ಟ ಶಕ್ತಿಗಳ ಸೈನ್ಯದ ಮೇಲೆ ಅವುಗಳ ಹೊಡೆತ ಬಿದ್ದು ಅವು ಹೆದರಿ ಯುದ್ಧಭೂಮಿಯಿಂದ (ಕಾರ್ಯಕ್ರಮದ ಸ್ಥಳದಿಂದ) ಓಡಿಹೋದವು. ದಿವ್ಯ ರಥದ ಮೇಲೆ ಶ್ರೀಮನ್ನಾರಾಯಣನ ಭವ್ಯ ಸುದರ್ಶನಚಕ್ರವು ನಿರ್ಗುಣ ಸ್ತರದ ಮತ್ತು ಶ್ರೀಸೂರ್ಯನಾರಾಯಣನ ಕೈಯಲ್ಲಿನ ಸುದರ್ಶನಚಕ್ರವು ಸಗುಣ ಸ್ತರದಿಂದ ದಿವ್ಯ ರಥದ ಮೇಲೆ ಸೂಕ್ಷ್ಮದಿಂದಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳನ್ನು ಹಿಮ್ಮೆಟ್ಟಿಸುತ್ತಿದ್ದವು. ಯಾವಾಗ ದಿವ್ಯ ರಥದ ಮೇಲೆ ‘ಡ್ರೋನ್’ ಈ ಆಕಾಶದಲ್ಲಿ ಹಾರುವ ಉಪಕರಣದ ಮೂಲಕ ಪುಷ್ಪವೃಷ್ಟಿಯನ್ನು ಮಾಡಲಾಯಿತೋ, ಆಗ ಆಕಾಶದಲ್ಲಿ ಹಾರುವ ಡ್ರೋನ್ ನಿಯಂತ್ರಣತಪ್ಪಿ ಅದು ರಥದ ಮೇಲೆ ಬೀಳದೇ ರಥದ ಮುಂಭಾಗದ ಎಡಬದಿಗೆ ಹೋಗಿ ಬಿದ್ದಿತು. ಈ ರೀತಿ ಕೆಟ್ಟ ಶಕ್ತಿಗಳು ಮಾಡಿದ ಸೂಕ್ಷ್ಮದಲ್ಲಿನ ಆಕ್ರಮಣಗಳನ್ನು ‘ಡ್ರೋನ್’ ಈ ಉಪಕರಣವು ತನ್ನ ಮೇಲೆ ಎಳೆದುಕೊಂಡು ಅದು ಮೂವರು ಮೋಕ್ಷಗುರುಗಳ ಮೇಲೆ ಸ್ಥೂಲದಿಂದಾಗುವ ಅಪಘಾತದಿಂದ ರಕ್ಷಣೆ ಮಾಡಿರುವುದರ ಅರಿವಾಯಿತು.

೩ ಅ ೮. ದಿವ್ಯ ರಥವು ವಿವಿಧ ಸ್ಥಳಗಳಲ್ಲಿ ಸೂಕ್ಷ್ಮದಿಂದ ಸಂಚರಿಸುವುದು : ಈ ದಿವ್ಯ ರಥವು ಕೆಲವೊಮ್ಮೆ ಭೂಮಿಯ ಮೇಲೆ, ಕೆಲವೊಮ್ಮೆ ಆಕಾಶದಲ್ಲಿ ಮೋಡುಗಳ ಮೇಲೆ ಸಂಚರಿಸಿ ಅಸುರಿ ಸೈನ್ಯದೊಂದಿಗೆ ಹೋರಾಡುತ್ತಿತ್ತು ಮತ್ತು ಕೆಲವೊಮ್ಮೆ ವಿವಿಧ ಲೋಕಗಳಲ್ಲಿ ಸಂಚರಿಸಿ ಆಕಾಶಮಂಡಲದಲ್ಲಿ ಸೇರಿರುವ ವಿವಿಧ ಭಕ್ತರ ಮೇಲೆ ಕೃಪೆ ಮಾಡುತ್ತಿತ್ತು.

೩ ಆ. ದೀಪೋತ್ಸವ

ಯಾವ ಉತ್ಸವವನ್ನು ಸಾತ್ತ್ವಿಕ ದೀಪಗಳ ಜ್ಯೋತಿಗಳನ್ನು ಪ್ರಜ್ವಲಿಸಿ ಆಚರಿಸಲಾಗುತ್ತದೆಯೋ, ಅದಕ್ಕೆ ‘ದೀಪೋತ್ಸವ’ ಎನ್ನುತ್ತಾರೆ. ಸಾಯಂಕಾಲ ಆಶ್ರಮದಲ್ಲಿ ಎಲ್ಲೆಡೆ ಸ್ಥೂಲದಲ್ಲಿ ಕಲಶ ಮತ್ತು ಇತರ ಆಕಾರದ ರಂಗೋಲಿಗಳ ಸುತ್ತಲೂ ಹಣತೆಗಳನ್ನು ಹಚ್ಚಿದ್ದರು. ಆದ್ದರಿಂದ ಆಶ್ರಮದಲ್ಲಿ ‘ದೀಪೋತ್ಸವ’ವನ್ನು ಆಚರಿಸುತ್ತಿರುವುದು ಅರಿವಾಯಿತು. ೨೧ ಸ್ವರ್ಗಲೋಕಗಳಲ್ಲಿನ ‘ಜ್ಯೋತ್ಸನಾಪುರ’ ಈ ಉಪಸ್ವರ್ಗಲೋಕದಲ್ಲಿನ ‘ಜೋತ್ಸಾನಾರೂಪ, ಅಂದರೆ ‘ಜ್ಯೋತಿಸ್ವರೂಪವಾಗಿರುವ ದೇವತೆಗಳ ಒಂದು ಸಮೂಹ’ವು ಈ ದೀಪಗಳ ಜ್ಯೋತಿಗಳಲ್ಲಿ ಸೂಕ್ಷ್ಮರೂಪದಿಂದ ಕಾರ್ಯನಿರತವಾಗಿತ್ತು. ಆದ್ದರಿಂದ ಸಂಪೂರ್ಣ ಆಶ್ರಮವು ಆನಂದಸ್ವರೂಪ ದಿವ್ಯ ತೇಜದಿಂದ ಪ್ರಕಾಶಮಾನವಾಗಿತ್ತು.

೩ ಇ. ದಿವ್ಯೋತ್ಸವ

ಯಾವ ಉತ್ಸವಕ್ಕೆ ಬ್ರಹ್ಮಾಂಡದಲ್ಲಿನ ಸಮಸ್ತ (ಎಲ್ಲ) ದೈವೀ ಶಕ್ತಿಗಳು ಉಪಸ್ಥಿತ ಇರುತ್ತವೆಯೋ, ಆ ಉತ್ಸವಕ್ಕೆ ‘ದಿವ್ಯೋತ್ಸವ’ ಎನ್ನುತ್ತಾರೆ. ಶ್ರೀವಿಷ್ಣುವಿನ ಅವತಾರ ಸಚ್ಚಿದಾನಂದ ಪರಬ್ರಹ್ಮ (ಡಾ.) ಆಠವಲೆಯವರ ಬ್ರಹ್ಮೋತ್ಸವದಲ್ಲಿ ನೈಮಿಷಾರಣ್ಯ, ಹಿಮಾಲಯ ಇವುಗಳ ಸಹಿತ ಸಂಪೂರ್ಣ ಬ್ರಹ್ಮಾಂಡದಲ್ಲಿನ ೮೮ ಸಾವಿರ ಋಷಿಮುನಿಗಳು, ಸ್ವರ್ಗಲೋಕದಲ್ಲಿನ ಎಲ್ಲ ದೇವದೇವತೆಗಳು ಮತ್ತು ಸಂಪೂರ್ಣ ವಿಶ್ವದಲ್ಲಿನ ದಿವ್ಯಾತ್ಮರು, ಪುಣ್ಯಾತ್ಮರು ಹಾಗೂ ಧರ್ಮಾತ್ಮರು, ಹಾಗೆಯೇ ವಿವಿಧ ಸಿದ್ಧಪುರುಷರು, ಯೋಗಿಗಳು, ತಪಸ್ವಿಗಳು ಮತ್ತು ಉನ್ನತರು ಪಾಲ್ಗೊಂಡಿದ್ದರು. ಆದ್ದರಿಂದ ಉತ್ಸವದಲ್ಲಿ ಬ್ರಹ್ಮಾಂಡದಲ್ಲಿನ ಸಮಸ್ತ ದೈವೀ ಶಕ್ತಿಗಳು ಕಾರ್ಯನಿರತವಾಗಿ ಈ ಉತ್ಸವಕ್ಕೆ ದೈವೀ ಸ್ವರೂಪವು ಪ್ರಾಪ್ತವಾಗಿ ಈ ಉತ್ಸವವು ‘ದಿವ್ಯೋತ್ಸವ’ವಾಗಿತ್ತು.

೪. ಬ್ರಹ್ಮೋತ್ಸವದಲ್ಲಿ ಘಟಿಸಿದ ಮುಖ್ಯ ಘಟನೆಗಳ ಸೂಕ್ಷ್ಮ ಪರೀಕ್ಷಣೆ

೪ ಅ. ಪುಷ್ಪವೃಷ್ಟಿ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲೆ ‘ಡ್ರೋನ್’ ಈ ಗಾಳಿಯಲ್ಲಿ ಹಾರುವ ಉಪಕರಣದಿಂದ ಎರಡು ಬಾರಿ ಪುಷ್ಪವೃಷ್ಟಿಯನ್ನು ಮಾಡಲಾಯಿತು. ಆಗ ಆಕಾಶದಲ್ಲಿರುವ ದೇವಗುರು ಬೃಹಸ್ಪತಿ, ಅರುಂಧತಿಸಹಿತ ಸಪ್ತರ್ಷಿ, ಬ್ರಹ್ಮರ್ಷಿ, ದೇವರ್ಷಿ, ರಾಜರ್ಷಿ, ಮಹರ್ಷಿ, ಶಿವ-ಪಾರ್ವತಿ, ಬಹ್ಮ-ವಿಷ್ಣು, ಶ್ರೀಗಣೇಶ ಮತ್ತು ರಿದ್ಧಿ-ಸಿದ್ಧಿ, ಕಾರ್ತಿಕೇಯ ಮತ್ತು ಕಾರ್ತಿಕೇಯನ ಇಬ್ಬರು ಪತ್ನಿಯರಾದ ದೇವಸೇನಾ ಮತ್ತು ವಲ್ಲಿ ಇವರು ಸ್ವರ್ಗದಲ್ಲಿನ ನಂದನವನದಲ್ಲಿ ಅರಳುವ ಅತ್ಯಂತ ವಿರಳ ಮತ್ತು ಪರಿಮಳವಿರುವ ಚಿನ್ನ ಮತ್ತು ಬೆಳ್ಳಿಯ ಬಣ್ಣದ ಕಮಲ, ಗುಲಾಬಿ ಇತ್ಯಾದಿ ಹೂವುಗಳನ್ನು ಅತ್ಯಂತ ಭಕ್ತಿಭಾವದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲೆ ವೃಷ್ಟಿಗೈದರು. ಪುಷ್ಪವೃಷ್ಟಿಯ ಸಮಯದಲ್ಲಿ ವಾಯುದೇವನು ತಂಪು ಗಾಳಿಯನ್ನು ಬೀಸಿ ವಾತಾವರಣವನ್ನು ತಂಪಾಗಿಸಿದನು ಮತ್ತು ಈ ದೈವೀ ಹೂವುಗಳ ಪರಿಮಳವನ್ನು ಎಲ್ಲೆಡೆ ಪಸರಿಸಿದನು. ಶ್ರೀವಿಷ್ಣುಸ್ವರೂಪ ಗುರುದೇವರ ಮೇಲಾದ ದೈವೀ ಪುಷ್ಪವೃಷ್ಟಿಯಿಂದ ಸಂಪೂರ್ಣ ಧರಣಿಯು (ಪೃಥ್ವಿ) ಪುಲಕಿತಗೊಂಡು ಭಾವಪರವಶವಾಯಿತು. ಪಂಚಮಹಾಭೂತಗಳು (ಪೃಥ್ವಿತತ್ತ್ವ, ಆಪತತ್ತ್ವ, ತೇಜತತ್ತ್ವ, ವಾಯುತತ್ತ್ವ ಮತ್ತು ಆಕಾಶತತ್ತ್ವ) ತಮ್ಮ ದಿವ್ಯಸ್ವರೂಪದಲ್ಲಿ ಈ ಉತ್ಸವದಲ್ಲಿ ಸೂಕ್ಷ್ಮ ರೂಪದಲ್ಲಿ ಉಪಸ್ಥಿತರಿದ್ದು ಈ ದಿವ್ಯ ಸಮಾರಂಭದಲ್ಲಿನ ಆನಂದದ ಸ್ವಾದವನ್ನು ಪಡೆಯುತ್ತಿದ್ದವು. ಆದ್ದರಿಂದ ಬ್ರಹ್ಮೋತ್ಸವದಿಂದಾಗಿ ಸಂಪೂರ್ಣ ಬ್ರಹ್ಮಾಂಡವೇ ಆನಂದದಿಂದ ತೂಗಾಡುತ್ತಿತ್ತು.

೪ ಇ. ಭೂದೇವಿಯ ಅವತಾರ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀದೇವಿಯ ಅವತಾರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶ್ರೀವಿಷ್ಣುವಿನ ಅವತಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪಾವನ ಚರಣಗಳಲ್ಲಿ ಪುಷ್ಪಾರ್ಚನೆಯನ್ನು ಮಾಡಿ ಅವರಿಗೆ ವಂದಿಸುವುದು : ಶ್ರೀವಿಷ್ಣುವಿನ ಅವತಾರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸೂರ್ಯನಾಡಿಯ ಪ್ರತೀಕವಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪರಮ ಪಾವನ ಬಲಚರಣದ ಮೇಲೆ ಐದು ಪ್ರಕಾರದ ಹೂವುಗಳನ್ನು ಅತ್ಯಂತ ಸಮರ್ಪಿತ ಮತ್ತು ಶರಣಾಗತಭಾವದಿಂದ ಅರ್ಪಿಸಿದರು. ಆದ್ದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸೂರ್ಯನಾಡಿ ಕಾರ್ಯನಿರತವಾಗಿ ಅದರಿಂದ ಬಹಳಷ್ಟು ಪ್ರಮಾಣದಲ್ಲಿ ಮಾರಕ ಶಕ್ತಿ ಸಂಪೂರ್ಣ ಬ್ರಹ್ಮಾಂಡದಲ್ಲಿ ಪ್ರಕ್ಷೇಪಿತವಾಯಿತು, ಇದರಿಂದ (ಇಷ್ಟು ವಿಷಯ ಬಿಟ್ಟುಹೋಗಿತ್ತು – ಡಾ.) ಬ್ರಹ್ಮಾಂಡದಲ್ಲಿ ಹೆಚ್ಚಾದ ತಮೋಗುಣಿ ಶಕ್ತಿಯ ಲಹರಿಗಳು ವಿಘಟನೆಯಾಗಿ ವಾತಾವರಣದಲ್ಲಿನ ಒತ್ತಡವು ಕಡಿಮೆಯಾಯಿತು.

ಶ್ರೀವಿಷ್ಣುವಿನ ಅವತಾರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚಂದ್ರನಾಡಿಯ ಪ್ರತೀಕವಾಗಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪರಮ ಪಾವನ ಎಡ ಚರಣದ ಮೇಲೆ ಐದು ಪ್ರಕಾರದ ಹೂವುಗಳನ್ನು ಅತ್ಯಂತ ಕೃತಜ್ಞತೆ ಮತ್ತು ಶರಣಾಗತ ಭಾವದಿಂದ ಅರ್ಪಿಸಿದರು. ಇದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚಂದ್ರನಾಡಿ ಕಾರ್ಯನಿರತವಾಗಿ ಅದರಿಂದ ಬಹಳಷ್ಟು ಪ್ರಮಾಣದಲ್ಲಿ ತಾರಕ ಶಕ್ತಿ ಸಂಪೂರ್ಣ ಬ್ರಹ್ಮಾಂಡದಲ್ಲಿ ಪ್ರಕ್ಷೇಪಿತವಾಯಿತು. ಅದರಿಂದ ಬ್ರಹ್ಮಾಂಡದಲ್ಲಿ ಹೆಚ್ಚಾದ ರಜೋಗುಣಿ ಶಕ್ತಿಯ ಲಹರಿಗಳ ವಿಘಟನೆಯಾಗಿ ವಾತಾವರಣದಲ್ಲಿನ ಉಷ್ಣತೆ ಕಡಿಮೆ ಆಯಿತು ಮತ್ತು ವಾತಾವರಣವು ಶೀತಲವಾಯಿತು.

ಯಾವಾಗ ಸದ್ಗುರುದ್ವಯಿಗಳು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ವಂದನಭಕ್ತಿಯಿಂದ ನಮಸ್ಕಾರ ಮಾಡಿದರೋ, ಆಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮನಾಡಿಯು ಕಾರ್ಯನಿರತವಾಗಿ ಅವರ ಸಹಸ್ರಾರದಲ್ಲಿನ ಬ್ರಹ್ಮಜ್ಞಾನದ ಪ್ರತೀಕವಾಗಿರುವ ಬ್ರಹ್ಮಕಮಲದಂತೆ ಕಾಣುವ ಸಹಸ್ರದಲಕಮಲ ಅರಳಿ ಅದರಿಂದ ನಿರ್ಗುಣ-ಸಗುಣ ಸ್ತರದಲ್ಲಿನ ಈಶ್ವರೀ ಚೈತನ್ಯದ ಜ್ಯೋತಿಯು ಹತ್ತುದಿಕ್ಕುಗಳಲ್ಲಿ ಸಂಪೂರ್ಣ ಬ್ರಹ್ಮಾಂಡದಲ್ಲಿ ಪ್ರಕ್ಷೇಪಿತವಾಯಿತು. ಇದರಿಂದ ಸಂಪೂರ್ಣ ಬ್ರಹ್ಮಾಂಡದಲ್ಲಿ ಸಾತ್ತ್ವಿಕತೆ ಮತ್ತು ಚೈತನ್ಯದ ಲಹರಿಗಳು ಕಾರ್ಯನಿರತವಾಗಿ ಅನೇಕ ಜೀವಗಳ ಉದ್ಧಾರವಾಯಿತು.

೪ ಊ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ದಿವ್ಯ ಸಮಾರಂಭದ ಸ್ಥಳದಿಂದ ಸನಾತನದ ರಾಮನಾಥಿ ಆಶ್ರಮಕ್ಕೆ ಹೊರಡುವುದು : ಯಾವಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ದಿವ್ಯ ಸಮಾರಂಭದ ಸ್ಥಳದಿಂದ ಹೊರಟರೋ, ಆಗ ಶ್ರೀದೇವಿ ಮತ್ತು ಭೂದೇವಿ ಇವರೊಂದಿಗಿರುವ ಶ್ರೀವಿಷ್ಣುವಿನ ಗರುಡನ ಮೇಲೆ ವಿರಾಜಮಾನವಾಗಿರುವ ದಿವ್ಯ ರೂಪದಿಂದ ಭೂಲೋಕದಿಂದ ವೈಕುಂಠದ ಕಡೆಗೆ ಸೂಕ್ಷ್ಮದಿಂದ ಹೊರಟರು. ಬ್ರಹ್ಮೋತ್ಸವದ ಸಮಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ಜಾಗೃತವಾಗಿರುವ ಮಹಾವಿಷ್ಣುವಿನ ತತ್ತ್ವವು ಕ್ರಮೇಣವಾಗಿ ಅಪ್ರಕಟ ಅವಸ್ಥೆಗೆ ಹೋಯಿತು ಮತ್ತು ಅವರ ಶೇಷಶಯನ ಎಂಬ ನಿರ್ಗುಣಾವಸ್ಥೆಯಲ್ಲಿನ ತತ್ತ್ವವು ಕಾರ್ಯನಿರತವಾಯಿತು. ಅದೇ ರೀತಿ ಭೂದೇವಿಯ ಅವತಾರ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀದೇವಿಯ ಅವತಾರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿ ಜಾಗೃತವಾಗಿರುವ ದೇವಿತತ್ತ್ವಗಳು ಕ್ರಮೇಣ ಅಜಾಗೃತ, ಅಂದರೆ ಅಪ್ರಕಟ ಅವಸ್ಥೆಯಲ್ಲಿ ಹೋದವು. ಹಾಗೆಯೇ ಬ್ರಹ್ಮೋತ್ಸವಕ್ಕೆ ಬಂದಿರುವ ವಿವಿಧ ದೈವೀ ಶಕ್ತಿಗಳು ಶ್ರೀವಿಷ್ಣುಸ್ವರೂಪ ಗುರುದೇವರನ್ನು ಭಾವಪೂರ್ಣವಾಗಿ ವಂದಿಸಿ ಅವರು ಸ್ವಲೋಕಕ್ಕೆ ಮರಳಿದರು.

೫. ಬ್ರಹ್ಮೋತ್ಸವದ ಸ್ವರೂಪವು ಅತ್ಯಂತ ದೈವೀ ಮತ್ತು ಪರಿಪೂರ್ಣವಾಗಿತ್ತು

ಸಂಪೂರ್ಣ ಬ್ರಹ್ಮೋತ್ಸವದ ಆಯೋಜನೆ, ನಿಯೋಜನೆ, ಧ್ವನಿಚಿತ್ರೀಕರಣ ಇತ್ಯಾದಿ ಎಲ್ಲ ಸೇವೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ, ಪರಿಪೂರ್ಣವಾಗಿ ಮತ್ತು ಭಾವಪೂರ್ಣವಾಗಿ ಮಾಡಿರುವುದು ಅರಿವಾಯಿತು. ಬ್ರಹ್ಮೋತ್ಸವದ ಸಂದರ್ಭದಲ್ಲಿ ಸಂಪೂರ್ಣ ಮೈದಾನದ ರಚನೆ, ಕುಳಿತುಕೊಳ್ಳುವ ವ್ಯವಸ್ಥೆ ಮತ್ತು ಪ್ರಸಾರದಿಂದ, ಅಂದರೆ ವಿವಿಧ ಜಿಲ್ಲೆಗಳಿಂದ ಬಂದಿರುವ ಸಾವಿರಾರು ಸಾಧಕರ ಆಯೋಜನೆಯು ಅತ್ಯುತ್ತಮವಾಗಿತ್ತು. ಬ್ರಹ್ಮೋತ್ಸವದ ಸ್ವರೂಪ, ಅಂದರೆ ಸಾಧಕರಿಗೆ ಹಿಂದು ರಾಷ್ಟ್ರದ ಕಾರ್ಯಪ್ರಣಾಲಿಯ ಒಂದು ಸಾಕಾರ ಸ್ವರೂಪದ ಅನುಭೂತಿ ಬಂದಿತು. ಸಾಧಕರು ಭಕ್ತಿಪೂರ್ವಕವಾಗಿ ಮಾಡಿದ ಸೇವೆಯಿಂದ ಬ್ರಹ್ಮೋತ್ಸವದ ಸ್ವರೂಪವು ಅತ್ಯಂತ ದೈವೀ ಮತ್ತು ಪರಿಪೂರ್ಣವಾಗಿತ್ತು.

ಕೃತಜ್ಞತೆ ಮತ್ತು ಪ್ರಾರ್ಥನೆ

ಶ್ರೀವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದಾದ ಈ ದಿವ್ಯ ಮತ್ತು ಭವ್ಯ ‘ಬ್ರಹ್ಮೋತ್ಸವ’ವು ‘ಇದೇ ದೇಹದಿಂದ ಇದೇ ಕಣ್ಣುಗಳಿಂದ ನೋಡುವ ಮಹಾಭಾಗ್ಯವು ನನಗೆ ಲಭಿಸಿತು’, ಅದರ ಬಗೆಗಿನ ಕೃತಜ್ಞತೆಗಳನ್ನು ನಾನು ಶಬ್ದಗಳಲ್ಲಿ ಎಂದಿಗೂ ವ್ಯಕ್ತಪಡಿಸಲು ಸಾಧ್ಯವಿಲ್ಲ. ನಮ್ಮೆಲ್ಲ ಸಾಧಕರ ಅಂತಃಕರಣದಲ್ಲಿನ ಶಬ್ದಾತೀತ (ಶಬ್ದಗಳ ಆಚೆಗಿರುವ) ಭಕ್ತಿಭಾವವು ಶ್ರೀಗುರುಚರಣಗಳ ಮೇಲೆ ಭಾವಸುಮನಾಂಜಲಿಯ ರೂಪದಲ್ಲಿ ಅರ್ಪಿಸುತ್ತಿದ್ದೇವೆ. ಇಂತಹ ಮಹಾನ ಮತ್ತು ಅವತಾರೀ ಬ್ರಹ್ಮಾಂಡಗುರುಗಳ ಕೃಪಾಶೀರ್ವಾದವು ನಮ್ಮೆಲ್ಲ ಸಾಧಕರಿಗೆ ಸತತವಾಗಿ ಲಭಿಸುತ್ತಿರಲಿ ಮತ್ತು ನಮ್ಮ ಮನುಷ್ಯಜನ್ಮವು ಸಾರ್ಥಕವಾಗಲಿ’, ಇದೇ ಶ್ರೀವಿಷ್ಣುಸ್ವರೂಪ ಗುರುದೇವರ ಚರಣಗಳಲ್ಲಿ ಶರಣಾಗತಭಾವದಿಂದ ಪ್ರಾರ್ಥನೆ.’

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ), (ಆಧ್ಯಾತ್ಮಿಕ ಮಟ್ಟ ಶೇ. ೬೪), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೫.೨೦೨೩)

ಮೂವರು ಮೋಕ್ಷಗುರುಗಳು ಸಾಧಕರ ಮೇಲೆ ಬೀರಿದ ಕೃಪಾದೃಷ್ಟಿಯ ಸಾಮರ್ಥ್ಯದಿಂದ ಸಾಧಕರ ಎಲ್ಲ ತಾಪ, ಸಂತಾಪ, ಪಾಪ, ವಿಘ್ನ, ಪೀಡೆ, ಕಷ್ಟ ಮತ್ತು ದುಃಖಗಳು ದೂರವಾದವು !

ಯಾವಾಗ ರಥವು ಮೈದಾನದಲ್ಲಿ ತಿರುಗುತ್ತಿತ್ತೋ, ಆಗ ಅದರಲ್ಲಿ ಆರೂಢರಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಶ್ರೀದೇವಿ ಹಾಗೂ ಭೂದೇವಿ ಸ್ವರೂಪ ಸದ್ಗುರುದ್ವಯಿಗಳ ಕೃಪಾಳು ದೃಷ್ಟಿಯು ಸಾಧಕರ ಮೇಲೆ ಬೀಳುತ್ತಿತ್ತು. ಆಗ ಸಾಧಕರಲ್ಲಿ ಮೂವರು ಮೋಕ್ಷಗುರುಗಳ ಬಗ್ಗೆ ಅನನ್ಯ (ಅದ್ವಿತೀಯ) ಕೃತಜ್ಞತಾಭಾವವು ಜಾಗೃತವಾಗಿ ಅವರ ಮೈ ರೋಮಾಂಚನವಾಗುತ್ತಿತ್ತು ಮತ್ತು ಕೆಲವರ ಕಂಠವು ತುಂಬಿ ಬರುತ್ತಿತ್ತು. ಈ ರೀತಿ ಮೂವರು ಮೋಕ್ಷಗುರುಗಳ ಪ್ರತ್ಯಕ್ಷ ದರ್ಶನವಾಗಿರುವುದರಿಂದ ಅನೇಕ ಸಾಧಕರ ಅಷ್ಟಸಾತ್ತ್ವಿಕಭಾವ (ಸ್ವೇದ (ಬೆವರು)), ಸ್ತಂಭ (ಕುಂಠಿತವಾಗುವುದು, ನಿಲ್ಲುವುದು, ಬೆರಗಾಗುವುದು), ರೋಮಾಂಚ, ಸ್ವರಭಂಗ (ಸ್ವರ ಥರಥರಿಸುವುದು), ಕಂಪ, ವೈವರ್ಣ (ವರ್ಣ, ಬಣ್ಣ ಬದಲಾಗುವುದು), ಕಣ್ಣೀರು ಮತ್ತು ಮೂರ್ಛೆ ಜಾಗೃತವಾಗಿದ್ದವು. ಮೂವರು ಮೋಕ್ಷಗುರುಗಳು ಸಾಧಕರ ಮೇಲೆ ಬೀರಿದ ಕೃಪಾಳು ದೃಷ್ಟಿಯ ಸಾಮರ್ಥ್ಯದಿಂದ ಸಾಧಕರ ಎಲ್ಲ ತಾಪ, ಸಂತಾಪ, ಪಾಪ, ವಿಘ್ನ, ಪೀಡೆ, ಕಷ್ಟ ಮತ್ತು ದುಃಖಗಳು ದೂರವಾದವು. – ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ), (ಆಧ್ಯಾತ್ಮಿಕ ಮಟ್ಟ ಶೇ. ೬೪), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೫.೨೦೨೩)

ಸಾಧಕ ಮತ್ತು ಸಾಧಕಿಯರ ರೂಪದಲ್ಲಿ ‘ಗಂಧರ್ವ, ಯಕ್ಷ, ಕಿನ್ನರ ಮತ್ತು ಅಪ್ಸರೆಯರು ಈ ಬ್ರಹ್ಮೋತ್ಸವದಲ್ಲಿ ಪಾಲ್ಗೊಂಡಿದ್ದಾರೆ ಎಂದು ಅರಿವಾಗುವುದು

ದಿವ್ಯ ರಥದ ಮುಂದೆ ಮತ್ತು ಹಿಂದೆ ನಡೆಯುವ ತಾಳ ಮತ್ತು ಧ್ವಜದ ಮೇಳದಲ್ಲಿನ ಸಾಧಕ ಮತ್ತು ಸಾಧಕಿಯರ ‘ಶ್ರೀಮನ್ನಾರಾಯಣ ನಾರಾಯಣ ಹರಿ ಹರಿ’ ಮತ್ತು ‘ಶ್ರೀಕೃಷ್ಣ ಗೋವಿಂದ ಹರೆ ಮುರಾರಿ’ ಈ ಹಾಡಿನ ನಾದದ ಮೇಲಾದ ಭಾವಪೂರ್ಣ ಮತ್ತು ಲಯಬದ್ಧ ಚಲನವಲನದಿಂದ ಅವರ ಹೃದಯದಿಂದ ತಾಳಬದ್ಧ ವಾಯುಮಯ ಹಾಗೂ ನಾದಮಯ ಸಾತ್ತ್ವಿಕ ಲಹರಿಗಳು ಸುತ್ತಲೂ ಹರಡಿದವು. ಆದ್ದರಿಂದ ಸಂಪೂರ್ಣ ವಾತಾವರಣ ಭಾವಲಹರಿಗಳಿಂದ ತುಂಬಿ ಅವರನ್ನು ನೋಡುವ ಸಾಧಕರ ಮನಸ್ಸು ಭಾವಲಹರಿಗಳಿಂದ ಪುಲಕಿತಗೊಂಡಿತು. ಆಗ ಸಾಧಕ ಮತ್ತು ಸಾಧಕಿಯರ ಜಾಗದಲ್ಲಿ ‘ಗಂಧರ್ವ, ಯಕ್ಷ, ಕಿನ್ನರ ಹಾಗೂ ಅಪ್ಸರೆಯರು ಶ್ರೀಮನ್ನಾರಾಯಣ, ಶ್ರೀದೇವಿ ಮತ್ತು ಭೂದೇವಿ ಇವರ ಬ್ರಹ್ಮೋತ್ಸವದಲ್ಲಿ ಸಹಭಾಗಿಗಳಾಗಿ ಅವರ ಮುಂದೆ ಕೃತಜ್ಞತಾಭಾವದಿಂದ ಸೇವೆಯನ್ನು ಸಾದರ ಪಡಿಸುತ್ತಿದ್ದಾರೆ’, ಎಂದು ಅರಿವಾಯಿತು.

ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ’ ಎನ್ನುತ್ತಾರೆ.

ಸೂಕ್ಷ್ಮಜ್ಞಾನದ ಚಿತ್ರ : ಕೆಲವು ಸಾಧಕರಿಗೆ ಯಾವುದಾದರೊಂದು ವಿಷಯದ ಬಗ್ಗೆ ಯಾವುದು ಅರಿವಾಗುತ್ತದೆಯೋ ಮತ್ತು ಅಂತರ್ದೃಷ್ಟಿಗೆ ಕಾಣಿಸುತ್ತದೆಯೋ, ಅದರ ಬಗ್ಗೆ ಅವರು ಕಾಗದದ ಮೇಲೆ ಬಿಡಿಸಿದ ಚಿತ್ರಕ್ಕೆ ‘ಸೂಕ್ಷ್ಮಜ್ಞಾನದ ಚಿತ್ರ’ ಎಂದು ಹೇಳುತ್ತಾರೆ.

ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

ಈ ವಾರದ ಸಂಚಿಕೆಯಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ’ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು