

ಬ್ರಹ್ಮೋತ್ಸವ ಮುಗಿದ ನಂತರ ದಿವ್ಯ
* ಬ್ರಹ್ಮೋತ್ಸವದ ಸ್ಥಳಕ್ಕೆ ಹೋಗುವ ದಾರಿಯಲ್ಲಿ ಚತುಷ್ಚಕ್ರ ಹಾಗೂ ಬಸ್ಗಳ ಬಹುದೊಡ್ಡ ಸಾಲಿತ್ತು. ಅವುಗಳಿಗೆ ಕೇಸರಿ ಧ್ವಜಗಳನ್ನು ಅಳವಡಿಸಲಾಗಿತ್ತು. ಅವುಗಳ ಹಿಂದೆಯೇ ಹೋಗುವಾಗ ‘ಬ್ರಹ್ಮೋತ್ಸವದ ವಾಹನಮೆರವಣಿಗೆ ಹೋಗುತ್ತಿದೆ, ಎಂದು ಅನಿಸುತ್ತಿತ್ತು.
* ಬ್ರಹ್ಮೋತ್ಸವಕ್ಕೆ ಬಂದಿರುವ ಎಲ್ಲ ಸಾಧಕರ ಮುಖದಲ್ಲಿ ಭಾವ, ಆನಂದ ಹಾಗೂ ಉತ್ಸಾಹವು ತುಂಬಿ ತುಳುಕುತ್ತಿತ್ತು. ಪ್ರತಿಯೊಬ್ಬರೂ ಸ್ವಯಂಸ್ಫೂರ್ತಿಯಿಂದ ಸಮಾರಂಭವು ಸುಂದರವಾಗಬೇಕೆಂದು ಪ್ರಯತ್ನಿಸುತ್ತಿದ್ದರು.
* ಬ್ರಹ್ಮೋತ್ಸವ ಪ್ರಾರಂಭವಾಗುವ ಮೊದಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಈ ಹಿಂದೆ ತೆಗೆದುಕೊಂಡ ಸಭೆಗಳ ಧ್ವನಿಚಿತ್ರಸುರುಳಿಗಳನ್ನು (ವಿಡಿಯೋ) ಹಾಕಲಾಗಿತ್ತು. ಅದರಿಂದ ವಾತಾವರಣದಲ್ಲಿ ಅವರ ಅಸ್ತಿತ್ವದ ಅರಿವಾಗುತ್ತಿತ್ತು.
* ಕೇಸರಿ ಬಣ್ಣದ ಮುಂಡಾಸಿನಲ್ಲಿ ಸಾಧಕರು, ಹಳದಿ ಮುಂಡಾಸು ಧರಿಸಿದ ಸಂಯೋಜಕರು ಹಾಗೂ ಸಂಪೂರ್ಣ ಮಂಟಪದಲ್ಲಿ ಹಚ್ಚಿದ ಕೇಸರಿ ಧ್ವಜ, ‘ಗೋವಿಂದಾ ಗೋವಿಂದಾದ ಭಾವಪೂರ್ಣ ಜಯಘೋಷ ಇತ್ಯಾದಿಗಳು ‘ಹಿಂದೂ ರಾಷ್ಟ್ರ ಬೇಗನೆ ಅವತರಿಸಲಿದೆ ! ಎಂಬುದನ್ನು ತೋರಿಸುತ್ತಿತ್ತು.
* ಈ ಬ್ರಹ್ಮೋತ್ಸವಕ್ಕೆ ಕರ್ನಾಟಕದಿಂದ ಅನೇಕ ಸಾಧಕರು ಬಂದಿದ್ದರು. ಆಗ ಬ್ರಹ್ಮೋತ್ಸವ ಪ್ರತ್ಯಕ್ಷ ಆರಂಭವಾಗುವ ಮೊದಲು ನಿರೂಪಕರಾದ ಶ್ರೀ. ವಿನಾಯಕ ಶಾನಭಾಗ ಇವರು ಒಮ್ಮೆ ಕನ್ನಡ ಭಾಷೆಯಲ್ಲಿ ನಿರೂಪಣೆ ಮಾಡಿದರು. ಅವರು ಇದರಿಂದ ತಮ್ಮಲ್ಲಿರುವ ವ್ಯಾಪಕತೆಯನ್ನು ತೋರಿಸಿದರು, ಅದರಿಂದ ಅವರ ಸಮಯಪ್ರಜ್ಞೆಯ ಅರಿವಾಯಿತು.
* ಬ್ರಹ್ಮೋತ್ಸವದ ಮೊದಲು ಇತರ ಸಮಾರಂಭಗಳ ಧ್ವನಿಚಿತ್ರಸುರುಳಿಗಳನ್ನು ತೋರಿಸಲಾಗುತ್ತಿತ್ತು. ಆಗ ಸಾಧಕರ ಚಲನವಲನ ನಡೆಯುತ್ತಿತ್ತು. ‘ಸಚ್ಚಿದಾನಂದ ಪರಬ್ರಹ್ಮ ಗುರುದೇವರ ರಥವು ಕಾರ್ಯಸ್ಥಳಕ್ಕೆ ಆಗಮಿಸಿದಾಗ ಎಲ್ಲೆಡೆ ಶಾಂತಿ ಹರಡಿತು. ಎಲ್ಲರೂ ಸ್ತಬ್ಧರಾದರು.
* ಬ್ರಹ್ಮೋತ್ಸವ ಮುಗಿದು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ರಥದಿಂದ ಇಳಿದು ಇನ್ನೊಂದು ವಾಹನದಲ್ಲಿ ಸಾಧಕರಿಗೆ ದರ್ಶನ ನೀಡುತ್ತಾ ಕಾರ್ಯಸ್ಥಳದಿಂದ ಹೊರಟರು, ಆಗ ಪುನಃ ಸಾಧಕರ ಭಾವಾಶ್ರು ಉಮ್ಮಳಿಸಿತು.
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !