ದೇಶದ ಯುವಕರ ಮನಸ್ಸಿನಲ್ಲಿ ಸಾವರಕರರಂತಹ ರಾಷ್ಟ್ರಭಕ್ತಿಯ ಬೀಜವನ್ನು ಬಿತ್ತಬೇಕು – ಉದಯ ಮಾಹುರಕರ

ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಸಾವರಕರರ ವಿಚಾರವನ್ನು ಕಾಂಗ್ರೆಸ ಹಾಗೂ ದೇಶವು ಕೇಳಿದ್ದರೆ ಆಗ ದೇಶದ ವಿಭಜನೆಯಾಗುತ್ತಿರಲಿಲ್ಲ ಇಂದು ದೇಶದ ಎರಡನೆ ವಿಭಜನೆಯು ಬೇಡವೆಂದಾದರೆ ಸ್ವಾತಂತ್ರ್ಯವೀರ ಸಾವರಕರರ ಹಿಂದೂ ರಾಷ್ಟ್ರವಾದಿ ವಿಚಾರವನ್ನು ಮೈಗೂಡಿಸಿಕೊಂಡು ಅದನ್ನು ಅನುಸರಿಸಿ ಕೊಂಡು ಹೋಗುವ ಆವಶ್ಯಕತೆಯಿದೆ. ಅವರ ವಿಚಾರಗಳನ್ನು ಪ್ರಚಾರ ಮಾಡಬೇಕು. ಹಾಗೆಯೇ ನಮ್ಮ ದೇಶದ ಯುವಕರ ಮನಸ್ಸಿನಲ್ಲಿ ಸ್ವಾತಂತ್ರ್ಯವೀರ ಸಾವರಕರರಲ್ಲಿರುವಂತಹ ರಾಷ್ಟ್ರಭಕ್ತಿಯ ಬೀಜವನ್ನು ಬಿತ್ತಬೇಕು.