ಲಂಡನಲ್ಲಿನ ಬಿಬಿಸಿಯ ಕಾರ್ಯಾಲಯದ ಹೊರಗೆ ಭಾರತೀಯ ಮೂಲದ ಹಿಂದುಗಳಿಂದ ಪ್ರತಿಭಟನೆ !

ಬಿಬಿಸಿಯ ಹಿಂದೂದ್ವೇಷಿ ಸಾಕ್ಷ್ಯಚಿತ್ರದ ಪ್ರಕರಣ

ಲಂಡನ (ಬ್ರಿಟನ) – ಗುಜರಾತ ಗಲಭೆಯ ಪ್ರಕರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಹಿಂದೂ ಇವರನ್ನು ದ್ವೇಷಿಸುವ ಬಿಬಿಸಿ ನ್ಯೂಸ್ ನ ಸಾಕ್ಷ್ಯಚಿತ್ರದ ಹಿನ್ನೆಲೆಯಲ್ಲಿ ದೇಶ ವಿದೇಶದಲ್ಲಿ ವಿವಾದ ನಡೆಯುತ್ತಿದ್ದು ಲಂಡನ್ ನಲ್ಲಿ ಭಾರತೀಯ ಮೂಲದ ಹಿಂದೂ ನಾಗರೀಕರು ಬಿಬಿಸಿಯ ಕಾರ್ಯಾಲಯದ ಹೊರಗೆ ಪ್ರತಿಭಟನೆ ನಡೆಸಿದರು. ಅವರು ಈ ಸಾಕ್ಷ್ಯಚಿತ್ರವನ್ನು ನಿಷೇಧಿಸುವಂತೆ ಆಗ್ರಹಿಸಿದರು. ಪ್ರತಿಭಟನೆ ನಡೆಸುವ ಹಿಂದುಗಳು, ನ್ಯಾಯಾಲಯದಿಂದ ಗುಜರಾತ ಗಲಭೆಯ ಪ್ರಕರಣದಲ್ಲಿ ಪ್ರಧಾನಮಂತ್ರಿ ಮೋದಿ ಇವರನ್ನು ಖುಲಾಸೆಗೊಳಿಸಿದ್ದರೂ ಈ ರೀತಿಯ ಕಿರುಚಿತ್ರ ತಯಾರಿಸಿದ್ದಾರೆ. ಬಿಬಿಸಿ ಬ್ರಿಟಿಷರ ಸಾಮ್ರಾಜ್ಯಶಾಹಿ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸುವುದೆ ? ಬಿಬಿಸಿಯು ಗೋದ್ರಾದಲ್ಲಿ ಸುಟ್ಟಿರುವ ಕಾರ ಸೇವಕರ ಕುಟುಂಬದವರ ಸಂದರ್ಶನ ಏಕೆ ತೆಗೆದುಕೊಳ್ಳಲಿಲ್ಲ ? ಬಿಬಿಸಿ ಕೇವಲ ಪ್ರಧಾನಮಂತ್ರಿ ಮೋದಿ ಮತ್ತು ಭಾರತವನ್ನು ಅಪಕೀರ್ತಿಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.