ಸಿಕ್ಖ್ ಪಂಥವನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ನೋಡುವವರಿಗೆ ಇದರ ಬಗ್ಗೆ ಏನು ಹೇಳಲಿಕ್ಕಿದೆ ?

‘ನಿಹಂಗಾ ಸಿಕ್ಖ್‌ರು ಅಯೋಧ್ಯೆಯಲ್ಲಿನ ವಿವಾದಿತ ಕಟ್ಟಡವನ್ನು ತಮ್ಮ ಹತೋಟಿಯಲ್ಲಿ ತೆಗೆದುಕೊಂಡು ಅಲ್ಲಿ ಪೂಜೆಯನ್ನು ಮಾಡಿದ್ದರು. ಹಾಗೆಯೇ ಅಲ್ಲಿನ ಎಲ್ಲ ಗೋಡೆಗಳ  ಮೇಲೆ ‘ಜಯ ಶ್ರೀರಾಮ’ ಎಂದು ಬರೆದಿದ್ದರು. ಆದುದರಿಂದ ಫಕೀರ ಸಿಂಹ ಖಾಲಸಾ ಇವರ ವಿರುದ್ಧ ೨೮ ನವೆಂಬರ್ ೧೮೫೮ ರಲ್ಲಿ ಪ್ರಥಮ ಮಾಹಿತಿ ವರದಿಯನ್ನು (ಎಫ್.ಐ.ಆರ್) ನೋಂದಾಯಿಸಲಾಗಿತ್ತು. ಸಿಕ್ಖ್ ಪಂಥವನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ನೋಡುವವರು ಗಮನಿಸಬೇಕಾದ ಅಂಶವೆಂದರೆ, ಶ್ರೀರಾಮಮಂದಿರದ ಆಂದೋಲನದಲ್ಲಿ ಮೊದಲ ‘ಎಫ್.ಐ.ಆರ್’ ಹಿಂದೂ ವಿರುದ್ಧವಲ್ಲ, ಸಿಕ್ಖ್‌ರ ವಿರುದ್ಧವಾಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕು. ಇದರಿಂದ ‘ಸಿಕ್ಖ್‌ರು ಸನಾತನ ಹಿಂದೂ ಧರ್ಮದ ಅವಿಭಾಜ್ಯ ಅಂಗ ಮತ್ತು ಧರ್ಮರಕ್ಷಣೆಯ ಯೋಧರಾಗಿದ್ದಾರೆ’, ಎಂಬುದು ಸಿದ್ಧವಾಗುತ್ತದೆ’.