ಮುಸಲ್ಮಾನೇತರರನ್ನು ಇಸ್ಲಾಂನಲ್ಲಿ ತರಲು ಕೊನೆಯ ಪರ್ಯಾಯವೆಂದರೆ ಯುದ್ಧ ಮಾಡುವುದು – ಡಾ. ಶಫಿ ಅಲ್ ಹಜರಿ

ಕತಾರ ವಿಶ್ವವಿದ್ಯಾಲಯದ `ಇಸ್ಲಾಂ’ ಪ್ರಾಧ್ಯಾಪಕ ಡಾ. ಶಫಿ ಅಲ್ ಹಜರಿ ಇವರ ಹೇಳಿಕೆ

ದೋಹಾ(ಕತಾರ)– ಕತಾರ ವಿಶ್ವವಿದ್ಯಾಲಯದ `ಇಸ್ಲಾಂ’ ವಿಷಯದ ಪ್ರಾಧ್ಯಾಪಕ ಡಾ. ಶಫಿ ಅಲ್ ಹಜರಿ ಕತಾರನ `ಅಲ್ ರೆಯಾನ ಟಿವ್ಹಿ’ ಈ ವಾಹಿನಿಯ ಒಂದು ಕಾರ್ಯಕ್ರಮದಲ್ಲಿ ದೇಶದಲ್ಲಿರುವ ಮುಸಲ್ಮಾನೇತರರಿಂದ ತೆರಿಗೆಯನ್ನು ವಸೂಲಿ ಮಾಡುವುದನ್ನು ಸಮರ್ಥಿಸಿದ್ದಾರೆ. ಹಾಗೆಯೇ ಅವರು ಮುಸಲ್ಮಾನೇತರರನ್ನು ಇಸ್ಲಾಂ ಧರ್ಮಕ್ಕೆ ಕರೆತರಲು 3 ಹಂತದಲ್ಲಿ ಪ್ರಯತ್ನಿಸಲು ಹೇಳಿದ್ದು, ಕೊನೆಯ ಹಂತದಲ್ಲಿ ತಲವಾರಿನ ಬಲಪ್ರಯೋಗದ ಮೇಲೆ ಇಸ್ಲಾಂ ಪ್ರಸಾರ ಮಾಡಬೇಕು ಎಂದು ಅವರು ಹೇಳಿದರು. ಪ್ರಾಧ್ಯಾಪಕ ಡಾ. ಶಫಿ ಅಲ್ ಹಜರಿ ಇವರು ಹೇಳಿರುವುದೇನೆಂದರೆ, ಮೊದಲ ಹಂತದಲ್ಲಿ ಮುಸಲ್ಮಾನೇತರರಿಗೆ ಪ್ರೀತಿಯಿಂದ ಇಸ್ಲಾಂ ಸ್ವೀಕರಿಸಲು ಹೇಳಬೇಕು.

ಅವರನ್ನು ಅದಕ್ಕಾಗಿ ಆಮಂತ್ರಿಸಬೇಕು. ಒಂದು ವೇಳೆ ಅವರು ಕೇಳಿಸಿಕೊಳ್ಳದಿದ್ದರೆ, ಅವರ ಮೇಲೆ ಜಿಝಿಯಾ ತೆರಿಗೆಯನ್ನು ಹೇರಬೇಕು ಮತ್ತು ಅವರಿಗೆ ಇಸ್ಲಾಂ ಸ್ವೀಕರಿಸುವಂತೆ ಒತ್ತಡ ಹೇರಬೇಕು. ಆದಾಗ್ಯೂ ಅವರು ಇಸ್ಲಾಂ ಸ್ವೀಕರಿಸದಿದ್ದರೆ, ಅವರೊಂದಿಗೆ ಕೊನೆಯ ಪರ್ಯಾಯವೆಂದರೆ ಯುದ್ಧ ಮಾಡಬೇಕು. ತಲವಾರಿನ ಶಕ್ತಿಯ ಮೇಲೆ ಇಸ್ಲಾಂ ಪ್ರಸಾರ ಮಾಡುವುದು ಸೂಕ್ತವೆಂದು ಅವರು ಹೇಳಿದರು.

ಸಂಪಾದಕೀಯ ನಿಲುವು

  • ಡಾ.ಶಫಿ ಅಲ್ ಹಜರಿ ಏನು ಹೇಳಿದ್ದಾರೆಯೋ, ಅದೇ ರೀತಿಯಲ್ಲಿ ಕಳೆದ 1 ಸಾವಿರದ 400 ವರ್ಷಗಳಲ್ಲಿ ಜಗತ್ತಿನಲ್ಲಿ ಇಸ್ಲಾಂ ಪ್ರಸಾರವಾಗಿದೆ, ಯಾರೊಬ್ಬರೂ ಸ್ವಂತ ಮನಸ್ಸಿನಿಂದ ಮತ್ತು ಆನಂದದಿಂದ ಇಸ್ಲಾಂ ಸ್ವೀಕರಿಸಿಲ್ಲ ಎನ್ನುವುದು ಇತಿಹಾಸ ಮತ್ತು ವರ್ತಮಾನವಾಗಿದೆ. ಹಾಗಾಗಿ ಇಂದಿಗೂ ಜಿಹಾದಿಗಳ ಮಾನಸಿಕತೆ ಇದೇ ಆಗಿದೆ.
  • ನಾಳೆ ಭಾರತದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಳವಾದರೆ, ಇಲ್ಲಿ ಇದೇ ರೀತಿ ನಡೆಯಲಿದೆ ಎಂಬುದರಲ್ಲಿ ಸಂಶಯವಿಲ್ಲ, ಕಾಶ್ಮೀರದಲ್ಲಿ ಹಿಂದೂಗಳ ಸಂದರ್ಭದಲ್ಲಿ ಇದೇ ಆಗಿತ್ತು ಎನ್ನುವುದೇ ಇತ್ತೀಚಿನ ಇತಿಹಾಸವಾಗಿದೆ.