‘ದೇವಾಲಯಗಳು ಮತ್ತು ಅವುಗಳ ಸಂಪತ್ತನ್ನು ಸಮಾಜದ ವಿಕಾಸಕ್ಕಾಗಿ ಉಪಯೋಗಿಸುವಂತೆ ಉಪಯೋಗಿಸಲಾಗುತ್ತಿಲ್ಲ !’(ಅಂತೆ)

ಶ್ರೀ  ಸಂಸ್ಥಾನ ಟ್ರಸ್ಟ್, ಶಿರ್ಡಿಯ ಮಾಜಿ ಅಧ್ಯಕ್ಷರು ಡಾ. ಸುರೇಶ ಹಾವೆರೆ ಹೇಳಿಕೆ !

ಶಿರ್ಡಿಯ ಮಾಜಿ ಅಧ್ಯಕ್ಷರು ಡಾ. ಸುರೇಶ ಹಾವೆರೆ

ನಾಗಪುರ – ದೇಶಾದ್ಯಂತ ೩೦ ಲಕ್ಷ ದೇವಾಲಯಗಳಿವೆ. ಚಿಕ್ಕ-ದೊಡ್ಡ ಮಂದಿರಗಳು ಸೇರಿ ಒಟ್ಟು ಸುಮಾರು ೧ ಕೋಟಿ ದೇವಾಲಯಗಳಿವೆ. ಅವುಗಳಿಗೆ ನಿತ್ಯ ನೀಡಲಾಗುವ ದೇಣಿಗೆ ಕೋಟಿಗಟ್ಟಲೆಯಾಗಿದೆ; ಆದರೆ ಸುಸೂತ್ರತೆ, ಸೂಕ್ತ ನಿರ್ವಹಣೆಯ ಕೊರತೆಯಿಂದ ದೇವಸ್ಥಾನಗಳು ಮತ್ತು ಸಂಪತ್ತು ಸಮಾಜದ ಪ್ರಗತಿಗಾಗಿ ನಿರೀಕ್ಷಿಸಿದ ರೀತಿ ಬಳಕೆಯಾಗುತ್ತಿಲ್ಲ. ಇದಕ್ಕಾಗಿ ವಿಶ್ವವಿದ್ಯಾಲಯಗಳು ‘ಟೆಂಪಲ್ ಮ್ಯಾನೇಜ್ ಮೆಂಟ್ ’ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಬೇಕು. ಇದರಿಂದ ರೂಪುಗೊಳ್ಳುವ ಹೊಸ ತಲೆಮಾರು ಈ ಕಾರ್ಯಕ್ಕೆ ಮುಂದಾದರೆ ಇದೇ ೩೦ ಲಕ್ಷ ದೇವಾಲಯಗಳು ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಹುದು ಎಂದು ಶಿರಡಿಯ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನ ಮಾಜಿ ಅಧ್ಯಕ್ಷ ಹಾಗೂ ಪರಮಾಣು ವಿಜ್ಞಾನಿ ಡಾ. ಸುರೇಶ ಹಾವರೆ ಸಂದರ್ಶನವೊಂದರಲ್ಲಿ ಪ್ರತಿಪಾದಿಸಿದರು. ಅವರು ‘ದೇವಾಲಯ ನಿರ್ವಹಣೆ’ (Temple Management) ಎಂಬ ಕುರಿತ ಪುಸ್ತಕವನ್ನೂ ಬರೆದಿದ್ದಾರೆ.

ಅವರು ತಮ್ಮ ಮಾತನ್ನು ಮುಂದುವರೆಸುತ್ತಾ…

೧. ಈ ಪಠ್ಯಕ್ರಮವನ್ನು ದೇಶದ ವಿಶ್ವವಿದ್ಯಾನಿಲಯಗಳು ಅಂಗೀಕರಿಸಬೇಕೆಂಬುವುದಕ್ಕಾಗಿ ನಾಗಪುರ, ಅಮರಾವತಿ, ಪುಣೆ ಮತ್ತು ಮುಂಬಯಿನ ಕುಲಪತಿಗಳೊಂದಿಗೆ ಚರ್ಚೆ ನಡೆಸಲಾಗಿದೆ.

೨. ‘ಎಂ.ಬಿ.ಎ. ಇನ್ ಟೆಂಪಲ್ ಮ್ಯಾನೇಜ್ ಮೆಂಟ್’ ಈ ಪಠ್ಯಕ್ರಮವನ್ನು ಆರಂಭಿಸಿದರೆ ಈ ಕ್ಷೇತ್ರದ ವಿಷಯಗಳ ಜ್ಞಾನವಿರುವ ಪೀಳಿಗೆಯ ನಿರ್ಮಾಣವಾಗುವುದು. ಅಪಾರ ಪ್ರಮಾಣದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಯಾಗುವುದರೊಂದಿಗೆ ದೇವಾಲಯಗಳ ಸಂಪತ್ತು ಸಮಾಜಕ್ಕೆ ಸದ್ಬಳಕೆಯಾಗುವುದು ಮತ್ತು ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗುವುದು.

೩. ದೇವಾಲಯಗಳ ಮುಖವು ಸೇವಾಭಿಮುಖವೂ, ಸಮಾಜಾಭಿಮುಖವೂ ಆಗಿರಬೇಕು. (ದೇವಸ್ಥಾನಗಳ ಮುಖವು ಧರ್ಮಾಭಿಮುಖವಾಗಿರಬೇಕೆಂದು ಹಿಂದೂಗಳಿಗನಿಸುತ್ತದೆ – ಸಂಪಾದಕರು) ಎಲ್ಲಾ ದೇವಾಲಯಗಳ ಮೂಲಕ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ಉತ್ತಮ ನಿರ್ವಹಣೆಯ ಅಗತ್ಯವಿದೆ. ಇದನ್ನು ಪಠ್ಯಕ್ರಮದ ಮೂಲಕ ಪೂರ್ಣಗೊಳಿಸಬಹುದು. (ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ಸಾಮಾಜಿಕ ಅಥವಾ ಸೇವಾಭಾವಿ ಸಂಸ್ಥೆಗಳಿರುತ್ತವೆ; ಆದರೆ ಧರ್ಮರಕ್ಷಣೆ ಮಾಡುವವರು ಯಾರೂ ಇಲ್ಲ. ದೇವಾಲಯಗಳ ಪಠ್ಯಕ್ರಮವು ಧರ್ಮಾಧಿಷ್ಠಿತವಾಗಿರಬೇಕು ! – ಸಂಪಾದಕರು)

೪. ದೇವಸ್ಥಾನಗಳನ್ನು ಸರಿಯಾಗಿ ಬಳಸಿಕೊಂಡರೆ ‘ದೇಣಿಗೆ ಪೆಟ್ಟಿಗೆ ಏಕೆ ಬೇಕು’ ಎಂದು ಕೇಳುವವರಿಗೆ ಉತ್ತರ ಸಿಗುವುದು. (ದೇವಸ್ಥಾನದಲ್ಲಿರುವ ಕಾಣಿಕೆ ಪೆಟ್ಟಿಗೆಯನ್ನು ಧಾರ್ಮಿಕ ಕಾರ್ಯಗಳಿಗೆ ಹಾಗೂ ಧರ್ಮರಕ್ಷಣೆ ಧರ್ಮಜಾಗೃತಿಗಳಿಗೆ ಮಾತ್ರ ಬಳಸಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

  • ದೇವಾಲಯಗಳು ಹಿಂದೂ ಧರ್ಮದೊಂದಿಗೆ ಸಂಬಂಧ ಹೊಂದಿವೆ. ಆದ್ದರಿಂದ ಅವುಗಳನ್ನು ಸಮಾಜದ ಪ್ರಗತಿಗಿಂತ ಧಾರ್ಮಿಕ ಕಾರ್ಯಗಳಿಗೆ ಬಳಸುವುದೇ ಸೂಕ್ತ !
  • ಇಂದು ಧರ್ಮವು ಅವನತಿಯತ್ತ ಸಾಗುತ್ತಿದೆ. ಧರ್ಮವನ್ನು ನಾಶಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಹೀಗಿರುವಾಗ ದೇವಾಲಯಗಳು ಮತ್ತು ಅವುಗಳ ಆಸ್ತಿಯನ್ನು ಧರ್ಮದ ರಕ್ಷಣೆಗಾಗಿ ವಿನಿಯೋಗಿಸುವುದು ಪ್ರತಿಯೊಬ್ಬ ಹಿಂದೂವಿನ ಧರ್ಮಕರ್ತವ್ಯವಾಗಿದೆ. ಆದ್ದರಿಂದ ಸುರೇಶ ಹಾವರೆ ಅವರು ಸಮಾಜಕ್ಕಿಂತ ಧರ್ಮಕ್ಕೆ ಅದರ ಗತವೈಭವವನ್ನು ಒದಗಿಸಿಕೊಡುವ ದೃಷ್ಟಿಯಿಂದ ದೇವಸ್ಥಾನಗಳನ್ನು ಹೇಗೆ ಉಪಯೋಗಿಸಬಹುದು ಎಂಬುದರ ಅಭ್ಯಾಸಮಾಡಿ ಪ್ರಯತ್ನಿಸಬೇಕು ಎಂದು ಧರ್ಮಪ್ರೇಮಿ ಹಿಂದೂಗಳಿಗನುಸುತ್ತದೆ !
  • ‘ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರ ಮಾಡಿ ಸಾರ್ವಜನಿಕರನ್ನು ಲೂಟಿ ಮಾಡುತ್ತಿರುವ ಹೆಚ್ಚಿನ ರಾಜಕಾರಣಿಗಳಿಂದ ಆ ಹಣವನ್ನು ವಸೂಲಿ ಮಾಡಿ ಅದನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು’, ಎಂಬ ವಿಚಾರವನ್ನು ಹಾವರೆ ಅವರು ಏಕೆ ಮಂಡಿಸುವುದಿಲ್ಲ ?