
‘ಆಯುರ್ವೇದದಲ್ಲಿ ವಾತ, ಪಿತ್ತ ಮತ್ತು ಕಫ ಇವುಗಳಿಗೆ ‘ದೋಷ’ ಎಂದು ಕರೆಯಲಾಗುತ್ತದೆ. ವಾತ, ಪಿತ್ತ ಮತ್ತು ಕಫ ಈ ದೋಷಗಳ ಕಾರ್ಯದಲ್ಲಿ ತೊಡಕುಂಟಾಗುವುದು, ಅಂದರೆ ರೋಗ ! ಆಯುರ್ವೇದಕ್ಕನುಸಾರ ಸರಿಯಾದ ಸಮಯದಲ್ಲಿ ಊಟ ಮಾಡುವುದು, ಪಚನವಾಗುವುದನ್ನೇ ತಿನ್ನುವುದು, ದೇಹಕ್ಕಾಗಿ ಅಹಿತಕರ ಪದಾರ್ಥಗಳನ್ನು ತಡೆಯುವುದು ಇತ್ಯಾದಿ ಆಹಾರದ ನಿಮಯಗಳನ್ನು ಪಾಲಿಸುವುದರಿಂದ ವಾತಾದಿ ದೋಷಗಳ ಕಾರ್ಯದಲ್ಲಿ ಸಮೋತಲನವಾಗಿದ್ದು ಆರೋಗ್ಯ ಚೆನ್ನಾಗಿರುತ್ತದೆ; ಆದರೆ ಅನೇಕ ಬಾರಿ ಊಟದ ಸಂದರ್ಭದ ನಿಮಯಗಳನ್ನು ಪಾಲಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ದೇಹವನ್ನು ಆರೋಗ್ಯವಂತವಾಗಿಡಲು ಸರ್ವೋತ್ತಮ ಮಾರ್ಗವೆಂದರೆ ‘ವ್ಯಾಯಾಮ ಮಾಡುವುದು’. ಆಹಾರದ ನಿಮಯಗಳನ್ನು ಪಾಲಿಸದಿರುವುದರಿಂದ ವಾತಾದಿ ದೋಷಗಳು ಅಸಮತೋಲನವಾಗಿದ್ದರೂ, ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಅದು ಪುನಃ ಸಮತೋಲನವಾಗಲು ಸಹಾಯವಾಗುತ್ತದೆ. ಆದುದರಿಂದ ದೇಹವು ಆರೋಗ್ಯವಾಗಿಡಲು ಪ್ರತಿದಿನ ಕಡಿಮೆ ಪಕ್ಷ ಅರ್ಧ ಗಂಟೆ ವ್ಯಾಯಾಮ ಮಾಡಿರಿ !’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೮.೨೦೨೨)
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಮನುಷ್ಯ, ಮನಸ್ಸು ಹಾಗೂ ಆಹಾರ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ