ಚೀನಾದ ಕಂಪನಿಗಳನ್ನು ಭಾರತದಿಂದ ಹೊರದಬ್ಬಿ !

೧. ಇಡೀ ದೇಶದಲ್ಲಿ ಇಂತಹ ಯೋಜನೆಯನ್ನು ಜಾರಿಗೊಳಿಸಿ !

ಉತ್ತರಾಖಂಡದ ಭಾಜಪ ಸರಕಾರವು ಅನಾಥ ಗೋವುಗಳ ಆರೈಕೆಯ ಜವಾಬ್ದಾರಿಯನ್ನು ಗ್ರಾಮ ಗೋರಕ್ಷಾ ಸಮಿತಿಗಳಿಗೆ ನೀಡಲಿದೆ. ಇದಕ್ಕಾಗಿ ಸಮಿತಿಯ ಪ್ರತಿಯೊಬ್ಬ ಸದಸ್ಯರಿಗೆ ಮಾಸಿಕ ೫ ಸಾವಿರ ರೂಪಾಯಿ ವೇತನ ನೀಡಲಾಗುವುದು, ನಿರುದ್ಯೋಗಿಗಳು ಇದರ ಲಾಭ ಪಡೆಯಬಹುದಾಗಿದೆ.

೨. ಇಂತಹ ಮತಾಂಧರಿಗೆ ಕಠಿಣ ಶಿಕ್ಷೆ ವಿಧಿಸಿ !

ಕನ್ಹಯ್ಯಾಲಾಲ್ ಹತ್ಯೆಯ ವಿರುದ್ಧ ಫೇಸ್‌ಬುಕ್ ಪೋಸ್ಟ್ ಮಾಡಿದ ಮುಂಬೈನ ಅಪ್ರಾಪ್ತ ಹಿಂದೂ ಹುಡುಗಿಗೆ ಜೀವಬೆದರಿಕೆ ಹಾಕಿದ್ದ ಕಾಶ್ಮೀರದ ಫೈಯಾಜ್ ಅಹ್ಮದ್ ಭಟ್ ಇವನನ್ನು ಮುಂಬೈ ಪೊಲೀಸರು ಕಾಶ್ಮೀರದಿಂದ ಬಂಧಿಸಿದ್ದಾರೆ.

೩. ಚೀನಾದ ಕಂಪನಿಗಳನ್ನು ಭಾರತದಿಂದ ಹೊರದಬ್ಬಿ !

ಆದಾಯ ಗುಪ್ತಚರ ನಿರ್ದೇಶನಾಲಯ (ಡಿ.ಆರ್.ಐ.)ವು ಸಂಚಾರವಾಣಿ ತಯಾರಕ ಚೀನಾದ ಒಪ್ಪೋ ಕಂಪನಿಯು ೪ ಸಾವಿರದ ೩೮೯ ಕೋಟಿ ರೂಪಾಯಿ ಮೌಲ್ಯದ ಕಸ್ಟಮ್ಸ್ ಸುಂಕವನ್ನು ವಂಚಿಸಿದೆ ಎಂದು ಆರೋಪಿಸಿದೆ.

೪. ಹಿಂದೂಗಳೇ ಭಾರತವನ್ನು ‘ಇಸ್ಲಾಮಿಕ್ ರಾಷ್ಟ್ರ’ ಮಾಡುವ ಮತಾಂಧರ ಷಡ್ಯಂತ್ರವನ್ನು ತಿಳಿಯಿರಿ !

ವಿವಿಧ ರಾಜ್ಯಗಳ ಮುಸಲ್ಮಾನ ಯುವಕರಿಗೆ ಕರಾಟೆ ತರಬೇತಿ ನೀಡುವ ಹೆಸರಿನಲ್ಲಿ ಶಸ್ತ್ರಾಸ್ತ್ರದ ತರಬೇತಿ ನೀಡುತ್ತಿದ್ದ ಇಬ್ಬರು ಮತಾಂಧರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ‘೨೦೪೭ ರ ವೇಳೆಗೆ ಭಾರತವನ್ನು ‘ಇಸ್ಲಾಮಿ ರಾಷ್ಟ್ರ’ವನ್ನಾಗಿ ಮಾಡಲು ಅವರು ಸಂಚು ರೂಪಿಸಿದ್ದರು’, ಎಂದು ಪೊಲೀಸರು ತಿಳಿಸಿದ್ದಾರೆ.

೫. ಕಾವಡ್ ಯಾತ್ರೆ ಭಾರತದಲ್ಲಿ ಇದೆಯೇ ಪಾಕಿಸ್ತಾನದಲ್ಲಿಯೇ ?

ಉತ್ತರಭಾರತದಲ್ಲಿ ಆರಂಭವಾಗಿರುವ ಕಾವಡ್ ಯಾತ್ರೆ ಮೇಲೆ ಜಿಹಾದಿಗಳು ದಾಳಿ ನಡೆಸುವ ಸಾಧ್ಯತೆಯಿದ್ದು, ರಾಜ್ಯಗಳಿಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. ಕೂಡಲೇ ಈ ಯಾತ್ರಾರ್ಥಿಗಳ ಭದ್ರತೆಯನ್ನು ಹೆಚ್ಚಿಸುವಂತೆ ಆದೇಶವನ್ನೂ ನೀಡಲಾಗಿದೆ.

೬. ಹಿಂದೂಗಳು ಅಲ್ಪಸಂಖ್ಯಾತರಾದಾಗ ಅಗುವ ಪರಿಣಾಮ ತಿಳಿಯಿರಿ !

ಗಢವಾ (ಜಾರ್ಖಂಡ್) ದ ಶೇ.೯೦ ರಷ್ಟು ಮುಸಲ್ಮಾನರಿರುವ ಮಾನಪೂರ ಗ್ರಾಮದ ಸರಕಾರಿ ಶಾಲೆಯು ಹಿಂದೂ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನಿರಾಕರಿಸಿದೆ, ಹಾಗೆಯೇ ಶಾಲೆಯ ೫ ಹಿಂದೂ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಿದೆ.

೭. ಈ ಬಗ್ಗೆ ಭಾರತ ಏಕೆ ಮೌನವಾಗಿದೆ?

ಬಾಂಗ್ಲಾದೇಶದ ಹಿಂದೂ ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಪ್ರವಾದಿ ಪೈಗಂಬರ ಅವರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಾನೆಂದು ಆರೋಪಿಸಿ ಸ್ಥಳೀಯ ಮತಾಂಧರು ಆತನ ಮನೆ ಸೇರಿದಂತೆ ಹಿಂದೂಗಳ ೨೧ ಮನೆಗಳನ್ನು ಸುಟ್ಟುಹಾಕಿದ್ದಾರೆ, ೩೭ ಅಂಗಡಿಗಳನ್ನು ಲೂಟಿ ಮಾಡಿದ್ದಾರೆ, ೯ ದೇವಾಲಯಗಳನ್ನು ಧ್ವಂಸಗೊಳಿಸಿ ದೇವತೆಗಳ ವಿಗ್ರಹಗಳಿಗೆ ಅವಮಾನ ಮಾಡಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿ ಎಡಪಂಥೀಯ ವಿಚಾರಧಾರೆಗೆ ರಾಜಾಶ್ರಯ !

ಕಾಂಗ್ರೆಸ್ ಆಡಳಿತದಲ್ಲಿ ಎಡಪಂಥೀಯ ವಿಚಾರಧಾರೆಗಳಿಗೆ ಆಶ್ರಯ ಸಿಕ್ಕಿದ್ದರಿಂದ ವಿವಿಧ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಮೂಲಕ ಸಮಾಜದಲ್ಲಿ ಹಿಂದೂವಿರೋಧಿ ಸಿದ್ಧಾಂತವನ್ನು ಸ್ಥಾಪಿಸಿದ್ದಾರೆ. ಇದರ ಪರಿಣಾಮವಾಗಿ ಇಂದು ಟಿಕಲಿ ಅಥವಾ ಕುಂಕುಮ ಇಲ್ಲದ ಜಾಹೀರಾತುಗಳು ಪ್ರಸಾರವಾಗುತ್ತಿವೆ. ಅವುಗಳ ಅಧ್ಯಯನ ಮಾಡಿ ವಿರೋಧಿಸಬೇಕು.

– ನ್ಯಾಯವಾದಿ ಸತೀಶ ದೇಶಪಾಂಡೆ, ಇತಿಹಾಸ ತಜ್ಞರು.