ಪ್ರಸಾರದಲ್ಲಿನ ಮತ್ತು ಸನಾತನದ ಆಶ್ರಮಗಳಲ್ಲಿನ ಸಾಧಕರಿಗಾಗಿ ಸೂಚನೆ !

‘ಪ್ರಸಾರದಲ್ಲಿ, ಹಾಗೆಯೇ ಸನಾತನದ ಆಶ್ರಮಗಳಲ್ಲಿ ವಿವಿಧ ಕಾರ್ಯಕ್ರಮಗಳು ಅಥವಾ ಉಪಕ್ರಮಗಳು, ಉದಾ. ಸಂತರ ಸನ್ಮಾನ ಸಮಾರಂಭ, ಗ್ರಂಥಪ್ರಕಾಶನ ಸಮಾರಂಭ, ‘ಸನಾತನ ಪ್ರಭಾತ’ದ ನಿಯತಕಾಲಿಕೆಗಳ ವರ್ಧಂತ್ಯುತ್ಸವ ಸಮಾರಂಭಗಳು ಮುಂತಾದವುಗಳು ಆಗುತ್ತಿರುತ್ತವೆ. ಈ ಕಾರ್ಯಕ್ರಮಗಳ ಸಮಯದಲ್ಲಿ ಅನೇಕ ಸಾಧಕರು ವೇದಿಕೆಯ ಮೇಲೆ ಹೋಗಿ ತಮ್ಮ ಅನುಭವಕಥನ, ಹಾಗೆಯೇ ಕಲಿಯಲು ಸಿಕ್ಕಿದ ಅಂಶಗಳನ್ನು ಹೇಳುತ್ತಾರೆ. ವೇದಿಕೆಯ ಮೇಲೆ ಹೋಗುವಾಗ ಸಾಧಕರು ಮುಂದಿನ ಅಂಶಗಳನ್ನು ಗಮನದಲ್ಲಿಡಬೇಕು.
೧. ಸಾಧಕರು ವೇದಿಕೆಯ ಮೇಲಿನ ‘ಪೊಡಿಯಮ್’ನ ಹತ್ತಿರ ನಿಂತು ವೇದಿಕೆಯ ಮೇಲೆ ಆಸೀನರಾಗಿರುವ ಸಂತರು ಮತ್ತು ಗಣ್ಯರಿಗೆ ಕೈ ಜೋಡಿಸಿ ಎಲ್ಲರಿಗೂ ಒಟ್ಟಿಗೆ ನಮಸ್ಕಾರವನ್ನು ಮಾಡಬೇಕು.
೨. ಸಂತರಿಗೆ ಮತ್ತು ಗಣ್ಯರಿಗೆ ನಮಸ್ಕಾರವನ್ನು ಮಾಡುವಾಗ ಸಾಧಕರು ಎದುರಿಗೆ ಕುಳಿತಿರುವ ಶ್ರೋತೃಗಳಿಗೆ, ಸಾಧಕರಿಗೆ ಮುಂತಾದವರಿಗೆ ನಮಸ್ಕಾರವನ್ನು ಮಾಡಬೇಕು ಅನಂತರ ತಮ್ಮ ಅನುಭವವನ್ನು ಹೇಳಲು ಆರಂಭಿಸಬೇಕು.
೩. ನಮ್ಮ ಮಾತು ಮುಗಿದ ನಂತರ ಕೆಳಗೆ ಹೋಗುವ ಮೊದಲು ಸಾಧಕರು ಮತ್ತೊಮ್ಮೆ ಮೇಲಿನಂತೆ ಸಂತರು, ಗಣ್ಯರು ಮತ್ತು ಶ್ರೋತೃಗಳಿಗೆ ನಮಸ್ಕಾರ ಮಾಡಬೇಕು.’
– ಶ್ರೀಸತ್ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೫.೩.೨೦೨೨)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !