
‘ಸಾಧಕನು ಸಾಧನೆಯನ್ನು ಮಾಡುವಾಗ ಸಾಧನೆಯ ಮಟ್ಟದಲ್ಲಿ ಎಷ್ಟೇ ಕೃತಿಗಳನ್ನು ಮಾಡಿದರೂ ಯಾವಾಗ ಅವನಿಗೆ ಆತ್ಮದ ನಿಜವಾದ ಸ್ವರೂಪದ ಜ್ಞಾನವಾಗುತ್ತದೆಯೋ, ಅದುವೇ ಸರ್ವಶ್ರೇಷ್ಠವಾಗಿರುತ್ತದೆ. ವಿವಿಧ ವಿದ್ಯೆಗಳ ಮಾಧ್ಯಮದಿಂದಲೇ ಈ ಜ್ಞಾನ ಸಿಗುತ್ತಿರುತ್ತದೆ’.
– (ಪರಾತ್ಪರ ಗುರು) ಡಾ. ಆಠವಲೆ (೧೧.೧.೨೦೨೨)
ಪ್ರತಿಯೊಬ್ಬ ಜಿಜ್ಞಾಸುವಿನ ಉದ್ಧಾರಕ್ಕಾಗಿಯೇ ಸನಾತನದ ಕಾರ್ಯವಿರುತ್ತದೆ !
‘ಭಗವಂತನು ತನ್ನ ಕೇವಲ ಒಬ್ಬನೇ ಭಕ್ತನಿಗಾಗಿಯೂ ಅವತರಿಸುತ್ತಾನೆ’. ಇದೇ ತತ್ತ್ವದೊಂದಿಗೆ ಸನಾತನದ ಕಾರ್ಯವು ನಡೆಯುತ್ತಿದೆ, ಉದಾ. ಸನಾತನ ಸಂಸ್ಥೆಯ ಅಧ್ಯಾತ್ಮಪ್ರಚಾರ ಕಾರ್ಯಕ್ಕೆ ಒಂದೆಡೆ ಉತ್ತಮ ಬೆಂಬಲ ಸಿಗದಿದ್ದರೂ ಆ ಪ್ರದೇಶದಲ್ಲಿರುವ ಒಬ್ಬ ಜಿಜ್ಞಾಸುವಿಗಾಗಿ ಅಲ್ಲಿ ಕಾರ್ಯವನ್ನು ಮಾಡಲಾಗುತ್ತದೆ. ಆ ಒಬ್ಬ ಜಿಜ್ಞಾಸುವಿನ ಆಧ್ಯಾತ್ಮಿಕ ಪ್ರಗತಿಯಾಗುವುದು ಮಹತ್ವದ್ದಾಗಿದೆ. ಯಾವುದಾದರೊಂದು ಗ್ರಂಥವನ್ನು ಮುದ್ರಿಸಿದಾಗ, ಅದು ತುಂಬಾ ಮಾರಾಟವಾಗದಿದ್ದರೂ ನಡೆಯುತ್ತದೆ; ಆದರೆ ‘ಯಾವ ಜಿಜ್ಞಾಸುವಿಗೆ ಅದರ ಅವಶ್ಯಕತೆಯಿದೆಯೋ ಆತನಿಗೆ ಅದು ಸಿಗಬೇಕು’ ಎಂಬ ಉದ್ದೇಶದಿಂದ ಅದನ್ನು ಮುದ್ರಿಸಲಾಗುತ್ತದೆ.
– (ಪರಾತ್ಪರ ಗುರು) ಡಾ. ಆಠವಲೆ (೨೫.೧.೨೦೨೨)
ಆಧ್ಯಾತ್ಮಿಕ ಸಾಮರ್ಥ್ಯವಿಲ್ಲದವರಿಗೆ ಸಂತರ ‘ಸಂತತ್ವ’ವನ್ನು ಗುರುತಿಸಲು ಸಾಧ್ಯವಿರುವುದಿಲ್ಲ, ಅವರು ಸಂತರನ್ನು ‘ಅವರು ಸಂತರಲ್ಲ’ ಎಂದು ಹೇಳುವುದು ಎಂದರೆ, ವೈದ್ಯಕೀಯ ಶಿಕ್ಷಣ ಇಲ್ಲದವರು ಒಬ್ಬ ವೈದ್ಯರನ್ನು ‘ಅವರು ವೈದ್ಯರಲ್ಲ’, ಎಂದು ಹೇಳುವ ಹಾಗೆ ಹಾಸ್ಯಾಸ್ಪದವಿದೆ.
– (ಪರಾತ್ಪರ ಗುರು) ಡಾ. ಆಠವಲೆ (೮.೧.೨೦೨೨)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !