
೧. ದೇಶದ ಪ್ರತಿಯೊಂದು ಹಳ್ಳಿಯಲ್ಲಿಯೂ ಗೋಶಾಲೆ ಬೇಕು !
ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಸ್ಥಾಪಿಸಿದರೂ ಸಾಕಾಗುವುದಿಲ್ಲ. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಮಾತ್ರವಲ್ಲದೆ ಗ್ರಾಮ ಮಟ್ಟದಲ್ಲೂ ಗೋಶಾಲೆಗಳನ್ನು ಸ್ಥಾಪಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
೨. ನಿದ್ರಿಸುತ್ತಿರುವ ರೈಲ್ವೆ ಆಡಳಿತ !
ಬೆಂಗಳೂರಿನ ರೈಲು ನಿಲ್ದಾಣದ ಪ್ಲಾಟ್ ಫಾರಂ ನಂ.೫ ರಲ್ಲಿ ಕೂಲಿಗಳ ವಿಶ್ರಾಂತಿ ಕೊಠಡಿಯನ್ನು ಪ್ರಾರ್ಥನಾ ಸ್ಥಳವನ್ನಾಗಿ ಮಾಡಿಕೊಂಡಿರುವುದು ಬಹಿರಂಗವಾಗಿದೆ. ಇದಕ್ಕೆ ಹಿಂದುತ್ವನಿಷ್ಠ ಸಂಘಟನೆಗಳು ವಿರೋಧಿಸಿದ ನಂತರ ಅದನ್ನು ಬದಲಾಯಿಸಲಾಯಿತು.
೩. ಪಾಕಿಸ್ತಾನದಲ್ಲಿರುವ ಹಿಂದೂಗಳ ರಕ್ಷಣೆ ಯಾವಾಗ ?
ಪಾಕಿಸ್ತಾನದ ಡಹಾರಕಿ ನಗರದಿಂದ ೨ ಕಿ.ಮೀ ದೂರದಲ್ಲಿ ಸುತಾನ್ ಲಾಲ್ ದಿವಾನ್ ಎಂಬ ಹಿಂದೂ ವ್ಯಾಪಾರಿಯನ್ನು ಅಜ್ಞಾತರು ಗುಂಡಿಕ್ಕಿ ಕೊಂದಿದ್ದಾರೆ. ‘ಜೀವಂತವಾಗಿರಲು ಬಯಸುತ್ತಿದ್ದರೆ ಭಾರತಕ್ಕೆ ತೆರಳಿ’ ಎಂದು ಸುತಾನ್ಗೆ ಬೆದರಿಕೆ ಒಡ್ಡಲಾಗುತ್ತಿತ್ತು.
೪. ಢೋಂಗಿ ಜಾತ್ಯತೀತ ಕಾಂಗ್ರೆಸ್ !
ನಾನು ಹಿಂದೂ ಎಂಬ ಕಾರಣಕ್ಕೆ ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯ ಕಣದಿಂದ ಹೊರಹಾಕಲಾಗಿದೆ ಎಂದು ಪಂಜಾಬ್ನ ಕಾಂಗ್ರೆಸ್ ನಾಯಕ ಸುನೀಲ್ ಜಾಖಡ ಹೇಳಿದ್ದಾರೆ. ಪಂಜಾಬ್ ಸಿಕ್ಖ್ ಬಹುಸಂಖ್ಯಾತ ರಾಜ್ಯವಾಗಿದೆ. ಕಾಂಗ್ರೆಸ್ನಿಂದ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
೫. ಇದು ಪ್ರಜಾಪ್ರಭುತ್ವದ ದುರಂತವಲ್ಲವೇ ?
ಉತ್ತರಪ್ರದೇಶದಲ್ಲಿ ಮೊದಲ ಹಂತದ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಶೇ.೭೫, ರಾಷ್ಟ್ರೀಯ ಲೋಕದಳ ಶೇ. ೫೯, ಭಾಜಪವು ಶೇ.೫೧, ಕಾಂಗ್ರೆಸ್ ಶೇ.೩೬, ಬಿಎಸ್ಪಿ ಶೇ.೩೪ ಮತ್ತು ಆಪ್ ಶೇ.೧೫ ರಷ್ಟು ಅಪರಾಧಿ ಹಿನ್ನೆಲೆಯಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
೬. ಭಾರತದ ಜಾತ್ಯತೀತವಾದಿಗಳು ಈ ಬಗ್ಗೆ ಏಕೆ ಮೌನವಾಗಿದ್ದಾರೆ ?
ಫ್ರಾನ್ಸ್ನಲ್ಲಿ ಹೆಚ್ಚುತ್ತಿರುವ ಇಸ್ಲಾಮಿ ಮತಾಂಧತೆಯ ಕುರಿತಾದ ಮಾಹಿತಿಯನ್ನು ವಾರ್ತಾವಾಹಿಯಲ್ಲಿ ತೋರಿಸಿದ್ದಕ್ಕಾಗಿ ‘ಕೆನಾಲ್ ಪ್ಲಸ್’ ವಾರ್ತಾವಾಹಿನಿಯ ಮಹಿಳಾ ಪತ್ರಕರ್ತೆ ಒಫೆಲಿ ಮೆಯೂನೀರ್ಗೆ ಬೆದರಿಕೆ ಹಾಕಲಾಗಿದೆ.
೭. ಮತಾಂಧರ ಕಾಮವನ್ನು ತಿಳಿಯಿರಿ !
೧೯೭೦ ರ ದಶಕದಲ್ಲಿ ಅಪ್ರಾಪ್ತ ಬಾಲಕಿ ಮತ್ತು ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಬ್ರಿಟಿಷ್ ಸಂಸತ್ತಿನ ಜೀವಾವಧಿ ಸದಸ್ಯ ಲಾರ್ಡ್ ನಜೀರ್ ಅಹ್ಮದ್ ಅವರಿಗೆ ಐದೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.
|
ಹಿಂದೂಗಳಲ್ಲಿ ಕೇವಲ ಅಸ್ತಿತ್ವ ಮತ್ತು ಅರಿವು ಮಾತ್ರ ಉಳಿದುಕೊಂಡಿದೆ; ಆದರೆ ಅವರಲ್ಲಿ ಜಾಗೃತಿಯು ಇಲ್ಲದಿರು ವುದರಿಂದ ಹಿಂದೂ ಧರ್ಮದ ಮೇಲೆ ನಿರಂತರವಾಗಿ ಆಕ್ರಮಣಗಳು ಆಗುತ್ತಿವೆ. – ಶ್ರೀ ಶ್ರೀ ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಕರ್ನಾಟಕ |
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation
ಪಾಕಿಸ್ತಾನಿ ಸೈನಿಕರಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪೆಟ್ರೋಲ್ ಬಂಕ್ ಲೂಟಿ!