ಪೋಪ್ ಫ್ರಾನ್ಸಿಸ್ ಇವರು ಹಿಂದೂಗಳಲ್ಲಿ ಕ್ಷಮೆ ಯಾಚಿಸಬೇಕು ! – ವಿಹಿಂಪ

ಕ್ರೈಸ್ತರು ಹಿಂದೂಗಳ ಮೇಲೆ ಕಳೆದ ೩೫೦ ವರ್ಷಗಳಿಂದ ದೌರ್ಜನ್ಯ ನಡೆಸಿರುವ ಸಂದರ್ಭದಲ್ಲಿ ಬೇಡಿಕೆಯನ್ನು ಇಟ್ಟರು !

ವಿಹಿಂಪ ಈ ರೀತಿಯ ಬೇಡಿಕೆ ಇಡುವ ಸಮಯ ಬರಬಾರದು. ಕೇಂದ್ರ ಸರಕಾರವು ತಾವಾಗಿಯೇ ಈ ಅಂಶವನ್ನು ನೋಡಬೇಕಿತ್ತು !

ಕರ್ಣಾವತಿ (ಗುಜರಾತ) – ದೇವಸ್ಥಾನಗಳ ಸರಕಾರಿಕರಣದಿಂದ ಮುಕ್ತಗೊಳಿಸುವುದು, ಮತಾಂತರಿತ ಹಿಂದೂಗಳನ್ನು ಪುನಃ ಹಿಂದೂ ಧರ್ಮಕ್ಕೆ ತರಬೇಕು ಮುಂತಾದ ವಿಷಯಗಳ ಮೇಲೆ ವಿಶ್ವ ಹಿಂದೂ ಪರಿಷದ್ ಗುಜರಾತನ ಜುನಾಗಡದಲ್ಲಿ ಮೂರು ದಿನಗಳ ಸಮ್ಮೇಳನ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ವಿಹಿಂಪ ಕ್ರೈಸ್ತರ ಸರ್ವೋಚ್ಚ ಧರ್ಮಗುರುಗಳು ಪೋಪ್ ಫ್ರಾನ್ಸಿಸ್ ಭಾರತದ ಪ್ರವಾಸಕ್ಕೆ ಬರುವ ಸಂದರ್ಭದಲ್ಲಿ, ‘ಕ್ರೈಸ್ತರು ಕಳೆದ ೩೫೦ ವರ್ಷಗಳಿಂದ ನಡೆಸಿರುವ ಅತ್ಯಾಚಾರಗಳ ಬಗ್ಗೆ ಕ್ಷಮೆ ಯಾಚಿಸಬೇಕು’, ಎಂದು ಒತ್ತಾಯಿಸಿದೆ ಹಾಗೂ ‘ಭಾರತದಲ್ಲಿ ಹಿಂದೂಗಳನ್ನು ಮತಾಂತರ ಮಾಡುವುದಿಲ್ಲ’, ಎಂಬ ಘೋಷಣೆಯೂ ನೀಡಬೇಕೆಂದು ಹೇಳಿದೆ, ವಿಹಿಂಪನ ಸಮ್ಮೇಳನದಲ್ಲಿ ವಿವಿಧ ಹಿಂದೂ ಸಂಘಟನೆಗಳು, ಧರ್ಮಾಚಾರ್ಯರು ಮುಂತಾದವರು ಭಾಗವಹಿಸಲಿದ್ದಾರೆ. ೨೦೨೪ ರಲ್ಲಿ ವಿಹಿಂಪಗೆ ೬೦ ವರ್ಷ ಪೂರ್ಣವಾಗುತ್ತದೆ. ಅದಕ್ಕಾಗಿ ಸಮ್ಮೇಳನದ ವಿಸ್ತರಣೆಗಾಗಿ ವಿಹಿಂಪನ ವಿಸ್ತಾರದ ಮೇಲೆಯೂ ಚರ್ಚೆ ನಡೆಯಲಿದೆ.