
ಮಾರ್ಗರೇಟ್ ಎಲಿಝಾಬೆತ್ ನೋಬಲ ಇವಳು ಐರ್ಲ್ಯಾಂಡನ ನಿವಾಸಿಯಾಗಿದ್ದಳು. ಅವಳು ನಂತರ ಸ್ವಾಮಿ ವಿವೇಕಾನಂದರ ಶಿಷ್ಯೆಯಾದಳು ಹಾಗೂ ಭಗಿನಿ ನಿವೇದಿತಾ ಎಂದು ಪ್ರಸಿದ್ಧಳಾದಳು.
ಮಿದನಾಪುರದಲ್ಲಿ ಸ್ವಾಮೀಜಿಯವರ ಭಾಷಣ ನಡೆಯುತ್ತಿತ್ತು ಎಲ್ಲರೂ ಮಂತ್ರಮುಗ್ಧರಾಗಿ ಕೇಳುತ್ತಿದ್ದರು ಕೆಲವು ಯುವಕರು ಸಂತೋಷದಿಂದ ಹಿಪ್ ಹಿಪ್ ಹುರ್ರೆಯ ಜಯಘೋಷ ಮಾಡಿದರು. ಇದಕ್ಕೆ ಸ್ವಾಮೀಜಿಯವರು ಭಾಷಣವನ್ನು ಮಧ್ಯದಲ್ಲಿ ನಿಲ್ಲಿಸಿ ಅವರಿಗೆ ಗದರಿಸುತ್ತಾ “ಸುಮ್ಮನಿರಿ ನಾಚಿಕೆಯಾಗಬೇಕು. ನಿಮಗೆ ನಮ್ಮ ಭಾಷೆಯ ಸ್ವಲ್ಪವು ಅಭಿಮಾನವಿಲ್ಲವೇ ? ನಿಮ್ಮ ತಂದೆ ಆಂಗ್ಲರೆ ? ನಿಮ್ಮ ತಾಯಿ ಬಿಳಿ ಚರ್ಮದ ಯುರೋಪಿಯನ್ ಆಗಿದ್ದಳೇ ? ನಿಮಗೆ ಆಂಗ್ಲರ ಅನುಕರಣೆ ಮಾಡುವುದು ಶೋಭಿಸುತ್ತದೆಯೇ ?”, ಎಂದರು. ಇದನ್ನು ಕೇಳಿದ ಯುವಕರು ಸುಮ್ಮನಾದರು. ಎಲ್ಲರೂ ತಲೆಕೆಳಗೆ ಹಾಕಿದರು. ನಂತರ ಭಗಿನಿ ನಿವೇದಿತಾರು “ಭಾಷಣದಲ್ಲಿ ಯಾವುದೇ ವಿಷಯವು ಒಳ್ಳೆಯದೆನಿಸಿದರೆ ಸ್ವಭಾಷೆಯಲ್ಲಿ, ಸಚ್ಚಿದಾನಂದ ಪರಮಾತ್ಮಾ ಕೀ ಜೈ, ಭಾರತಮಾತಾ ಕೀ ಜೈ, ಸದ್ಗುರು ಕೀ ಜೈ, ಎಂದು ಜಯಘೋಷ ಮಾಡಿ” ಎಂದರು. ಯುವಕರು ಕೂಡಲೇ ಆ ನಿರ್ದೇಶನ ಪಾಲಿಸಿದರು. ಭಾರತದಲ್ಲಿ ಪ್ರಾಚೀನ ಕಾಲದಲ್ಲಿಯೂ ಪ್ರಸನ್ನತೆಯ ಪ್ರಸಂಗದಲ್ಲಿ ಸಾಧೋ, ಸಾಧೋ ಎಂದು ಹೇಳುವ ಪದ್ಧತಿಯಿತ್ತು. ಅದು ಪಾಶ್ಚಾತ್ಯ ಅಂಧಾನುಕರಣೆಯಿಂದ ಲೋಪವಾಯಿತು.
(ಆಧಾರ : ಮಾಸಿಕ ಋಷಿಪ್ರಸಾದ, ನವೆಂಬರ್ ೧೯೯೯)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !