ಹಿಂದೂಗಳು ಆರೋಪಿಗಳನ್ನು ಕ್ಷಮಿಸಿದ್ದಾರೆ ಎಂದು ಸರಕಾರದ ಹೇಳಿಕೆ !
|
* ಇದರಿಂದ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಅನ್ಯಾಯದ ವಿರುದ್ಧ ನಡೆಸುವ ಕಾರ್ಯಾಚರಣೆಗಳು ಕೇವಲ ತೋರಿಕೆಗಾಗಿ ಇರುತ್ತದೆ, ಎಂಬುದು ಸಾಬೀತಾಗುತ್ತದೆ ! ಭಾರತವು ಇದನ್ನು ಖಂಡಿಸಿ ಪಾಕಿಸ್ತಾನವು ಅಪರಾಧಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಬೇಕು, ಆಗಲೇ ಅಲ್ಲಿಯ ಹಿಂದೂಗಳಿಗೆ ಭಾರತದ ಆಧಾರವೆನಿಸಬಹುದು ! * ಇಸ್ಲಾಮಿ ದೇಶ ಪಾಕಿಸ್ತಾನದಲ್ಲಿ ಹೀಗಾಗುವುದರಲ್ಲಿ ಆಶ್ವರ್ಯವೇನಿಲ್ಲ !ಈಗ ಈ ಬಗ್ಗೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ, ಭಾರತದಲ್ಲಿನ ಜಾತ್ಯತೀತವಾದಿ ಹಾಗೂ ಪ್ರಗತಿ(ಅಧೋಗತಿ)ಪರರು ಏನೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! |

ಪೇಶಾವರ (ಪಾಕಿಸ್ತಾನ) – ಕಳೆದ ವರ್ಷ ಇಲ್ಲಿ ಒಂದು ಹಿಂದೂಗಳ ದೇವಸ್ಥಾನಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪಾಕಿಸ್ತಾನ ಖೈಬರ ಪಖ್ತುಲ್ ಪ್ರದೇಶದ ೩೫೦ ಆರೋಪಿಗಳ ಅಪರಾಧವನ್ನು ಹಿಂಪಡೆಯುವ ನಿರ್ಧಾರವನ್ನು ಸರಕಾರವು ಕೈಗೊಂಡಿದೆ. ಸರಕಾರವು, ‘ಸ್ಥಳೀಯ ಹಿಂದೂಗಳು ಈ ಆರೋಪಿಗಳನ್ನು ಕ್ಷಮಿಸಿದ್ದರಿಂದ ಅವರ ಮೇಲಿನ ಅಪರಾಧವನ್ನು ಹಿಂಪಡೆಯಲಾಗಿದೆ.’ ಎಂದು ಹೇಳಿಕೊಂಡಿದೆ. ಪ್ರಾಂತ್ಯದ ಆಂತರಿಕ ವಿಭಾಗದ ಮೂಲಗಳ ಪ್ರಕಾರ, ಈ ಪ್ರಕರಣವನ್ನು ಬಗೆಹರಿಸಲು ಸರಕಾರದಿಂದ ಆಯೋಜಿಸಲಾಗಿದ್ದ ಒಂದು ಸಭೆಯಲ್ಲಿ ಹಿಂದೂಗಳು ಆರೋಪಿಗಳಿಗೆ ಕ್ಷಮೆ ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಸರಕಾರದ ಆಶ್ವಾಸನೆಯ ನಂತರವೂ ಕೂಡ ದೇವಸ್ಥಾನದ ಪುನಃ ನಿರ್ಮಾಣಕ್ಕೆ ತಡವಾಗುತ್ತಿದೆ. ಆದ್ದರಿಂದ ಹಿಂದೂಗಳಲ್ಲಿ ಅಸಮಾಧಾನವಿದೆ ಎಂದು ಹಿಂದೂಗಳು ಹೇಳಿದ್ದಾರೆ.
Pakistan: Provincial govt withdraws cases against 350 accused in the Krishna temple demolition case claiming Hindus have ‘pardoned’ themhttps://t.co/tf0OYtjru5
— OpIndia.com (@OpIndia_com) July 14, 2021
೧. ಇಲ್ಲಿನ ಮಾನವಹಕ್ಕುಗಳ ಕಾರ್ಯಕರ್ತ ಹಾರುನ ಸರಾಬ ದಿಯಾಲ ಅವರು, ನಾವು ಶಾಂತಿಯ ವಿರುದ್ಧ ಇಲ್ಲ; ಆದರೆ ಅಪರಾಧವನ್ನು ಹಿಂಪಡೆಯುವ ಬಗ್ಗೆ ಮಾಡಲಾದ ಪ್ರಯತ್ನವು ಅಯೋಗ್ಯವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪಾಕಿಸ್ತಾನ ಹಿಂದೂ ಕೌನ್ಸಿಲ್’ನ ಅಧ್ಯಕ್ಷ ಡಾ. ರಮೇಶ ವಾಂಕವಾಣಿಯವರನ್ನು ಹೊರತು ಪಡಿಸಿ ಇತರ ಹಿಂದೂಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ.
೨. ಟೆರಿ ಕಾರಕ ಜಿಲ್ಲೆಯ ಪರಮಹಂಸ ಇವರ ಸಮಾಧಿ ಮತ್ತು ದೇವಸ್ಥಾನಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೩೫೦ ಜನರ ಮೇಲೆ ಅಪರಾಧ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ೯೨ ಪೊಲೀಸರನ್ನು ಅಮಾನತು ಮಾಡಲಾಗಿತ್ತು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!