ಯುಗಾದಿ ಹಬ್ಬದಂದು ವರ್ಷಫಲ ಶ್ರವಣ ಮಾಡುವುದರ ಲಾಭ !

‘ವರ್ಷಾರಂಭದಲ್ಲಿ ವರ್ಷದಲ್ಲಾಗುವ ಒಳ್ಳೆಯ-ಕೆಟ್ಟ ಚಲನವಲನೆಗಳನ್ನು ತಿಳಿದುಕೊಂಡರೆ ಅದರಂತೆ ಪರಿಹಾರೋಪಾಯಗಳನ್ನು  ಮುಂಚಿತವಾಗಿ ಆಯೋಜನೆ ಮಾಡಿಡಲು ಸುಲಭವಾಗುತ್ತದೆ. ಇದೇ ವರ್ಷಫಲವನ್ನು ಕೇಳುವ ನಿಜವಾದ ಲಾಭವಾಗಿದೆ; ಆದ್ದರಿಂದ ಯುಗಾದಿ ಹಬ್ಬದಂದು ವರ್ಷಫಲವನ್ನು ಕೇಳಬೇಕು. ಇದರ ಕೆಲವು ಉದಾಹರಣೆಗಳು ಹೀಗಿವೆ.

ಎ.ಐ.ನಿರ್ಮಿತ ಚಿತ್ರ

೧. ಮಳೆಯು ಬೇಗ ಪ್ರಾರಂಭವಾಗುವುದಿದ್ದರೆ, ಆ ಯೋಜನೆಯಂತೆ ಹೊಲವನ್ನು ಮುಂಚಿತವಾಗಿ ಉಳುಮೆ ಮಾಡಬಹುದು.

೨. ಮಳೆ ನಿಂತರೆ ಅಥವಾ ಮಳೆಯ ಪ್ರಮಾಣ ಕಡಿಮೆಯಾದರೆ, ಬಾವಿ ಇತ್ಯಾದಿಗಳ ಉಪಯೋಗಕ್ಕೆ ಬೇಕಾಗುವ ಚಿಕ್ಕ ಕಾಲುವೆ, ಮಡಿ ಇತ್ಯಾದಿಗಳ ಎಲ್ಲ ಸಾಹಿತ್ಯಗಳನ್ನು ಜೋಡಿಸಿಡಬಹುದು.

೩. ಬರಗಾಲ ಬೀಳುವುದಿದ್ದರೆ, ಧಾನ್ಯ ಮತ್ತು ಮೇವುಗಳ ಮಿತವ್ಯಯ ಮಾಡಿ ಅಥವಾ ಯಾವ ದೇಶಗಳಲ್ಲಿ ಸಮೃದ್ಧಿ ಆಗುವುದಿದ್ದರೆ ಅಥವಾ ಆಗಿದ್ದರೆ ಅಲ್ಲಿಂದ ಧಾನ್ಯ, ಮೇವು ತಂದು ಸಂಗ್ರಹಿಸಿಡಬಹುದು ಮತ್ತು ಅಡಚಣೆಯ ಸಮಯಕ್ಕಾಗಿ ವ್ಯವಸ್ಥೆ ಮಾಡಿ ಇಡಬಹುದು.

೪. ಯಾವ ಬೆಳೆಗಳು ಬೆಳೆಯುವ ಸಾಧ್ಯತೆ ಇರುತ್ತದೆಯೋ, ಅದನ್ನು ತಿಳಿದುಕೊಂಡು ಅದರಂತೆ ಬೀಜ, ಗೊಬ್ಬರ ಇತ್ಯಾದಿಗಳನ್ನು ತಂದು ಇಡಬಹುದು.’