
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಸರ್ವೋಚ್ಚ ನ್ಯಾಯಾಲಯದಲ್ಲಿ ಬೂಟು ಎಸೆದ ಘಟನೆ ಖಂಡನೀಯವಾಗಿದೆ. ಯಾರೂ ಅದನ್ನು ಸಮರ್ಥಿಸುವುದಿಲ್ಲ. ಪ್ರಧಾನಿ ಮತ್ತು ಮುಖ್ಯಮಂತ್ರಿ ಸಹ ಇದರ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ; ಆದರೆ ಈ ಸಂದರ್ಭದಲ್ಲಿ ದುರದೃಷ್ಟವಶಾತ್ ಮತ್ತೊಮ್ಮೆ ಒಂದು ವಿಷಯ ಗಮನ ಸೆಳೆಯುವುದೇನೆಂದರೆ, ಲಕ್ಷಾಂತರ ವರ್ಷಗಳ ಸನಾತನ ಸಂಸ್ಕೃತಿಯ ಪರಂಪರೆಯನ್ನು ಹೊಂದಿರುವ ಈ ದೇಶದಲ್ಲಿ ನಿರಂತರವಾಗಿ ಅದರ ಕುರಿತು ಏನಾದರೂ ಮಾತನಾಡಲಾಗುತ್ತಿದೆ. ಇಲ್ಲಿ ಯಾರನ್ನೂ ಸಮರ್ಥಿಸುವುದು ಅಥವಾ ಯಾರ ಪರವಾಗಿ ನಿಲ್ಲುವುದು ಮುಖ್ಯವಲ್ಲ; ಆದರೆ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ ಮತ್ತು ಕೆಲವು ಪ್ರಶ್ನೆಗಳು ಉತ್ತರವಿಲ್ಲದೆ ಉಳಿಯುತ್ತವೆ. ನಿಜ ಹೇಳಬೇಕೆಂದರೆ, ಭಾರತದಂತಹ ಅತ್ಯಂತ ಪ್ರಾಚೀನ ಪರಂಪರೆಯನ್ನು ಹೊಂದಿರುವ, ‘ಅತಿದೊಡ್ಡ ಪ್ರಜಾಪ್ರಭುತ್ವ’ ಎಂದು ಹೆಮ್ಮೆಪಡುವ ದೇಶಕ್ಕೆ ಇದು ಅಯೋಗ್ಯವಾಗಿದೆ.
ಪ್ರಜ್ಞೆ ಮತ್ತು ಸಂವೇದನಾಶೀಲತೆ !
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಎದುರಿಸಿದ ಈ ಕಷ್ಟದ ಪ್ರಸಂಗದ ನಂತರ ಅವರು ತೋರಿಸಿದ ಸಂಯಮವು ಅತ್ಯಂತ ಶ್ಲಾಘನೀಯವಾಗಿದೆ. ತಮ್ಮ ಮೇಲಾದ ಈ ಕಠಿಣ ಪ್ರಸಂಗದಲ್ಲಿ ವಿಚಲಿತರಾಗದೆ ಅವರು ಶಾಂತಿಯ ಮಾರ್ಗವನ್ನು ಆರಿಸಿಕೊಂಡಿದ್ದು ಒಳ್ಳೆಯದಾಯಿತು ಮತ್ತು ಇತರರಿಗೂ ಅವರು ಸಂಯಮದಿಂದ ಇರಲು ಮನವಿ ಮಾಡಿದರು. ವಿಶೇಷವೆಂದರೆ ಅವರು ಕಲಾಪಗಳನ್ನು ಮುಂದುವರಿಸಿದರು. ಬಹುಶಃ ಅವರಿಗೆ ಬೇರೆ ದಾರಿಯೂ ಇರಲಿಲ್ಲ. ಮಧ್ಯಪ್ರದೇಶದ ಖಜುರಾಹೊದಲ್ಲಿರುವ ಶ್ರೀವಿಷ್ಣುವಿನ ಮೂರ್ತಿಯನ್ನು ಪುನರ್ನಿರ್ಮಾಣ ಮಾಡುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅದರ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು, ‘ನೀವು ವಿಷ್ಣುಭಕ್ತರಾಗಿದ್ದರೆ, ನೀವು ಪ್ರಾರ್ಥಿಸಿ. ಧ್ಯಾನ ಮಾಡಿ. ಏನು ಮಾಡಬೇಕು ಎಂದು ದೇವರಲ್ಲಿ ನೀವೇ ಕೇಳಿ !’ ಎಂದು ಟಿಪ್ಪಣಿ ಮಾಡಿದರು. ‘ಈ ವಿಷಯ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ, ಅದರ ಪ್ರಕಾರ ಒಪ್ಪಿಗೆ ನೀಡಬಹುದೇ ಎಂದು ನೋಡಬೇಕಾಗುತ್ತದೆ,’ ಎಂಬುದು ಅರ್ಜಿದಾರರ ಪ್ರಶ್ನೆಗೆ ಮೂಲ ಉತ್ತರವಾಗಿತ್ತು. ಅವರು ಅದನ್ನು ಸಹ ನೀಡಿದರು; ಆದರೆ ಕೇವಲ ಅಷ್ಟೇ ಉತ್ತರವನ್ನು ನೇರವಾಗಿ ನೀಡಿದ್ದರೆ ಯಾವುದೇ ಪ್ರಶ್ನೆ ಇರುತ್ತಿರಲಿಲ್ಲ; ಆದರೆ ಆ ಸಮಯದಲ್ಲಿ ಮೇಲಿನ ಅನಗತ್ಯ ಟಿಪ್ಪಣಿಯನ್ನು ಮಾಡಿದರು. ಅದರಲ್ಲಿನ ಪದಗಳು ಸರಳವೆಂದು ತೋರಬಹುದು, ಆದರೆ ಅದು ತೋರುವಷ್ಟು ಸರಳವಾಗಿಲ್ಲ ಮತ್ತು ಅವು ಪ್ರತಿಕ್ರಿಯಾತ್ಮಕವಾಗಿತ್ತು. ಇದು ದೇವರ ಮೇಲಿನ ಶ್ರದ್ಧೆಯ ಕುರಿತು ಬಂದ ಉಪಹಾಸದ ಪ್ರತಿಕ್ರಿಯೆ ಮತ್ತು ಯಾವುದೇ ಭಕ್ತ ಇದರಿಂದ ನಿಸ್ಸಂದೇಹವಾಗಿ ದುಃಖಿತನಾಗಬಹುದು. ಇಂದಿಗೂ ಶೇ. ೯೮ ರಷ್ಟು ಹಿಂದೂಗಳು ಆಸ್ತಿಕರು. ಅವರ ಭಾವನೆಗಳನ್ನು ಈ ಸ್ಥಾನದಲ್ಲಿರುವ ವ್ಯಕ್ತಿ ಏಕೆ ಪರಿಗಣಿಸಲಿಲ್ಲ ? ಎಂಬ ಪ್ರಶ್ನೆ ಯಾರಿಗಾದರೂ ಬರಬಹುದು. ಮೂಲತಃ ದೇವತೆಯ ಭಗ್ನ ಮೂರ್ತಿ ಇರುವುದು ಅವಮಾನ. ಹಿಂದೂಗಳು ಇಂತಹ ನೂರಾರು ಅವಮಾನಗಳನ್ನು ನಿರಂತರವಾಗಿ ಸಹಿಸಿಕೊಳ್ಳುತ್ತಿದ್ದಾರೆ. ಖುಜೋರಾಹೊದಲ್ಲಿ ಪ್ರಾಚೀನ ವಾಸ್ತುಶಿಲ್ಪ, ಹಾಗೆಯೇ ದೊಡ್ಡ ಪ್ರವಾಸಿತಾಣವೂ ಇದೆ. ಆ ದೃಷ್ಟಿಯಿಂದಲೂ ಅಲ್ಲಿ ಮುಖವಿಲ್ಲದ ಶ್ರೀವಿಷ್ಣುವಿನ ಭಗ್ನ ಮೂರ್ತಿ ಇರಬಾರದು ಎಂಬ ಅರ್ಜಿದಾರರ ನಿಲುವು ಮುಖ್ಯವಾಗಿದೆ. ಹಿಂದೂಗಳ ಭಾವನೆಗಳು ಇದರ ಒಂದು ಭಾಗವೇ ಆಗಿದೆ; ಆದರೆ ಅದಕ್ಕಿಂತ ಹೆಚ್ಚಾಗಿ, ಒಬ್ಬ ತಟಸ್ಥ ವ್ಯಕ್ತಿಯಾಗಿ, ನ್ಯಾಯಪೀಠದಲ್ಲಿ ಕುಳಿತಿರುವ ವ್ಯಕ್ತಿಯಾಗಿ ಹಾಗೂ ವೃತ್ತಿಪರ ದೃಷ್ಟಿಯಿಂದ ಮತ್ತು ಭಾರತದ ಜಾಗತಿಕ ಪರಂಪರೆ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದಲೂ ಈ ಕುರಿತು ಸಂವೇದನಾಶೀಲತೆಯಿಂದ ಹೇಳಿಕೆ ನೀಡಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನು ? ಹಾಗಾಗಿ, ‘ಇದು ಉದ್ದೇಶಪೂರ್ವಕವಾಗಿ ಆಗಿದೆಯೇ ?’ ಎಂದು ಯಾರಿಗಾದರೂ ಅನಿಸಿದರೆ, ಅವರನ್ನು ದೂಷಿಸುವುದು ಎಷ್ಟು ಸರಿ ? ಏನಾಗುತ್ತದೆ ಅಂದರೆ, ಯಾರು ಬೇಕಾದರೂ ಹಿಂದೂಗಳ ಬಗ್ಗೆ, ಅವರ ದೇವರು ಮತ್ತು ಧರ್ಮದ ಬಗ್ಗೆ ಮಾತನಾಡಬಹುದು ಮತ್ತು ಹಿಂದೂಗಳು ಸಹಿಷ್ಣುರಾಗಿರುವುದರಿಂದ ಅದನ್ನು ಸುಮ್ಮನೆ ಸಹಿಸಿಕೊಳ್ಳಬೇಕು. ಇದೇ ವರ್ಷಗಳಿಂದ ನಡೆದುಕೊಂಡು ಬಂದಿದೆ. ದೇವರು ಮಾತನಾಡಲು ಸಾಧ್ಯವಿಲ್ಲ ಮತ್ತು ಮಾಡಬೇಕಾದ ಯಾವುದೇ ಕೃತಿಯನ್ನು ಭಕ್ತರೇ ಮಾಡಬೇಕು. ಆದ್ದರಿಂದ ಅರ್ಜಿದಾರರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಹಾಗಾಗಿ ಅದರ ಬಗ್ಗೆ ನ್ಯಾಯಕ್ಕೆ ಅನುಗುಣವಾಗಿ, ಸರಳವಾಗಿ ನಿರ್ಧಾರ ನೀಡುವುದು ನ್ಯಾಯಾಲಯದ ಕೆಲಸ. ನ್ಯಾಯಾಲಯಕ್ಕೆ ಟಿಪ್ಪಣಿ ಮಾಡುವ ಅಧಿಕಾರ ಖಂಡಿತ ಇದೆ. ನ್ಯಾಯಾಲಯಗಳು ಅದನ್ನು ಆಗಾಗ ಮಾಡುತ್ತವೆ; ಆದರೆ ಅದರಿಂದ ಕೋಟ್ಯಂತರ ಜನರ ಭಾವನೆಗಳು ನೋವಾಗುತ್ತಿದ್ದರೆ, ಆ ಟಿಪ್ಪಣಿಗಳು ಸಮಾಜಕ್ಕೆ ಉಪಯುಕ್ತವಾಗದೆ, ವೈಯಕ್ತಿಕ ಸ್ವರೂಪದ ಮತ್ತು ದ್ವೇಷಕ್ಕೆ ಮೂಲವಾಗುತ್ತವೆ, ಎಂಬುದಕ್ಕೆ ಇದು ದುರದೃಷ್ಟಕರ ಉದಾಹರಣೆಯಾಗಿದೆ. ನ್ಯಾಯಾಧೀಶರ ವೈಯಕ್ತಿಕ ಅಭಿಪ್ರಾಯಗಳು ಇರಬಹುದು; ಆದರೆ ನ್ಯಾಯ ನೀಡುವಾಗ ಅವರು ಅದನ್ನು ಈ ರೀತಿ ವ್ಯಕ್ತಪಡಿಸುವುದು ಯಾವ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ನೀತಿಗೆ ಅನುಗುಣವಾಗಿದೆ ? ಮುಖ್ಯ ನ್ಯಾಯಮೂರ್ತಿಗಳು ಇತ್ತೀಚೆಗೆ ಮಾರಿಷಸ್ನಲ್ಲಿ, ‘ಭಾರತದ ರಾಜ್ಯ ವ್ಯವಸ್ಥೆಯು ‘ಕಾನೂನಿನ ನಿಯಮ’ದ ಪ್ರಕಾರ ನಡೆಯುತ್ತದೆ, ‘ಬುಲ್ಡೋಜರ್ ನಿಯಮ’ದ ಪ್ರಕಾರ ಅಲ್ಲ’ ಎಂದು ಹೇಳಿಕೆ ನೀಡಿದ್ದರು. ಹಾಗಾದರೆ, ಯಾರ ಮನೆಗಳನ್ನು ಬುಲ್ಡೋಜರ್ನಿಂದ ಕೆಡವಲಾಗಿದೆಯೋ, ಆ ಮತಾಂಧರು ಹಿಂದೂಗಳ ಮೇಲೆ ಮಾಡಿದ ಭಾರಿ ಅನ್ಯಾಯಗಳನ್ನು ಯಾವ ಕಾನೂನಿನಡಿಯಲ್ಲಿ ಸಮರ್ಥಿಸಬಹುದು ? ಅವರ ಅನಧಿಕೃತ ಮನೆಗಳನ್ನು ಹೇಗೆ ಹಾಗೆಯೇ ಇರಲು ಬಿಡಬಹುದು ? ಇದು ಯಾವ ಕಾನೂನಿನಲ್ಲಿದೆ ? ಅವರ ಎಲ್ಲಾ ರೀತಿಯ ಕಾನೂನುಬಾಹಿರ ಕೃತ್ಯಗಳಿಗೆ ಕಳೆದ ೭೫ ವರ್ಷಗಳಲ್ಲಿ ‘ಕಾನೂನಿನ ನಿಯಮಗಳಿಂದ’ ಏಕೆ ಶಿಕ್ಷೆಯಾಗಿಲ್ಲ ? ಶಿಕ್ಷೆಗೊಳಪಡಿಸಲು ತೊಂದರೆಗಳು, ಮಿತಿಗಳು ಅಡ್ಡಿಯಾಗುತ್ತಿವೆ. ಅದಕ್ಕಾಗಿಯೇ ಅನಿವಾರ್ಯವಾಗಿ ‘ಬುಲ್ಡೋಜರ್ ನಿಯಮಗಳನ್ನು’ ಬಳಸುವ ಸಮಯ ಬಂದಿದೆ. ಇಡೀ ಜಗತ್ತು ಈ ಭಯೋತ್ಪಾದನೆಯ ವಿರುದ್ಧ ಇದೇ ನಿಯಮಗಳನ್ನು ಬಳಸುತ್ತಿದೆ. ಹಿಂದೂಗಳ ಮೇಲಿನ ದೈಹಿಕ ಮತ್ತು ಇಂತಹ ವೈಚಾರಿಕ ಆಘಾತಗಳು ಯಾವ ‘ಕಾನೂನಿನ ನಿಯಮಕ್ಕೆ’ ಒಳಪಡುತ್ತವೆ ? ಇಲ್ಲಿ ಹಿಂದೂಗಳಿಗೆ ಸಮಾನತೆ ಮತ್ತು ನ್ಯಾಯ ಏಕೆ ಸಿಗುತ್ತಿಲ್ಲ ?

ತಳಮಳವನ್ನು ನಿರ್ಲಕ್ಷಿಸಲಾಗದು !
ಬೂಟು ಎಸೆದ ವ್ಯಕ್ತಿ ನ್ಯಾಯವಾದಿ ರಾಕೇಶ ಕಿಶೋರ್ ಯಾರೋ ಸಾಮಾನ್ಯ ವ್ಯಕ್ತಿಯಲ್ಲ, ಆಡಳಿತ ಅಥವಾ ಮಾಧ್ಯಮ ಗಳು ಅನಿವಾರ್ಯವಾಗಿ ಅವರನ್ನು ‘ಮನೋರೋಗಿ’ ಎಂದು ಘೋಷಿಸುವ ಸಮಯ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಅವರು ತಲೆ ಕೆಟ್ಟು ಭಾವನೆಗಳ ಭರದಲ್ಲಿ ಅಥವಾ ಯಾರಿಂದಲೋ ಹಣ ಪಡೆದು ಇಂತಹ ಕೃತ್ಯ ಮಾಡಿರುವ ಯುವಕನೂ ಅಲ್ಲ, ಬದಲಿಗೆ ಅವರು ೭೧ ವರ್ಷದ ಅನೇಕ ಪದವಿಗಳನ್ನು ಹೊಂದಿರುವ ನ್ಯಾಯವಾದಿಗಳು ಮತ್ತು ಸ್ವತಃ ಸುವರ್ಣಪದಕ ವಿಜೇತರಾಗಿದ್ದಾರೆ. ತಾವು ಮಾಡಿದ ಕೃತ್ಯದ ಜವಾಬ್ದಾರಿಯನ್ನು ಅವರು ವಿವೇಚನೆಯಿಂದ ಒಪ್ಪಿಕೊಂಡಿದ್ದಾರೆ. ಅವರು ಯೋಚಿಸಿ ಈ ಕೃತ್ಯ ಮಾಡಿದ್ದಾರೆ. ತಾನು ಯಾವುದೇ ರೀತಿಯ ದುಶ್ಚಟವನ್ನು ಮಾಡಿಲ್ಲ ಎಂದು ಅವರು ಹೇಳಿದರು; ಅಂದರೆ, ಸಂಪೂರ್ಣ ವಿವೇಚನೆಯಿಂದ ಈ ಕೃತ್ಯ ಮಾಡಿದ್ದಾರೆ. ಅವರ ಬಳಿ ಸಿಕ್ಕ ಕಾಗದದಲ್ಲಿ, ನನ್ನ ಸಂದೇಶವು ಪ್ರತಿಯೊಬ್ಬ ಸನಾತನಿಗಾಗಿ ಇದೆ. ಹಿಂದುಸ್ಥಾನವು ಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲ ಎಂದು ಬರೆದಿದ್ದರು. ಮಾಧ್ಯಮಗಳಿಗೆ ಸಂದರ್ಶನ ನೀಡುವಾಗಲೂ ಅವರು ಸ್ಥಿರ ಮತ್ತು ಶಾಂತರಾಗಿದ್ದರು; ಆದರೆ ಸನಾತನ ಧರ್ಮದ ಅವಮಾನದ ಬಗ್ಗೆ ಅವರ ಅಸಮಾಧಾನ ಮತ್ತು ಸನಾತನ ಧರ್ಮದ ಅವಮಾನವಾಗಬಾರದೆಂಬ ತಳಮಳ ಸ್ಪಷ್ಟವಾಗಿ ಕಾಣುತ್ತಿತ್ತು. ನ್ಯಾಯಾಲಯದ ಟಿಪ್ಪಣಿಯಿಂದಾದ ನೋವಿಗೆ, ತಳಮಳದಿಂದ ಉತ್ತರ ನೀಡಲಾಯಿತು. ಅವರು ಮಾಡಿದ ಈ ಕೃತ್ಯ ಸಂವಿಧಾನಾತ್ಮಕವಾಗಿ ಅಸಮರ್ಪಕ ಅಥವಾ ಆಕ್ಷೇಪಾರ್ಹವೆಂದು ತೋರಬಹುದು, ಆದರೆ ಇದು ಅಷ್ಟು ಸುಲಭವಲ್ಲ, ಧೈರ್ಯದ್ದು ಎಂದು ಯಾರಾದರೂ ಒಪ್ಪಿಕೊಳ್ಳಬೇಕು. ಧರ್ಮದ ಬಗ್ಗೆ ತಳಮಳ ಮತ್ತು ಅಪಾರ ಅಭಿಮಾನವಿಲ್ಲದೆ ಈ ಧೈರ್ಯ ಯಾರಲ್ಲೂ ಬರಲು ಸಾಧ್ಯವಿಲ್ಲ. ಇದು ಯಾರಿಗಾದರೂ ಆತ್ಮಾವಲೋಕನ ಮಾಡಲು ಒತ್ತಾಯಿಸುವ ಕೃತ್ಯವಾಗಿದೆ. ಆದ್ದರಿಂದ, ಪ್ರಸ್ತುತ ಕೆಲವು ಮಿತಿಗಳಿಂದಾಗಿ ಎಲ್ಲರೂ ಇದರ ಬಗ್ಗೆ ಮೌನ ವಹಿಸಿದ್ದರೂ ಅಥವಾ ಖಂಡಿಸಿದ್ದರೂ; ಕಾಲ ಬದಲಾದಾಗ ಭವಿಷ್ಯದಲ್ಲಿ ಈ ಘಟನೆಯ ಪ್ರತಿಕ್ರಿಯೆಗಳು ಬಹುಶಃ ವಿಭಿನ್ನವಾಗಿರಬಹುದು. ನ್ಯಾಯವಾದಿ ರಾಕೇಶ ಕಿಶೋರ್ ಅವರ ಚಿಂತನೆ, ವಯಸ್ಸು, ಅನುಭವ, ವಿವೇಚನೆ, ತಳಮಳ, ಧೈರ್ಯ, ಧರ್ಮದ ಅಸ್ಮಿತೆ – ಈ ವಿಷಯಗಳನ್ನು ನಿರ್ಲಕ್ಷಿಸಲಾಗದು !
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ನ್ಯಾಯಾಲಯದ ಬೇಸಿಗೆ ರಜೆಗಳ ನಂತರ ವಿಚಾರಣೆಯಾದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ! : Supreme Court
ಬಿಸೂರ (ಸಾಂಗ್ಲಿ) ಇಲ್ಲಿ ಮತಾಂಧರ ಕಿರುಕುಳದಿಂದ ಗ್ರಾಮದಿಂದ ಪಲಾಯನ ಮಾಡಲು ಸಿದ್ಧತೆಯಲ್ಲಿ 10 ಹಿಂದೂ ಕುಟುಂಬಗಳು !
ತಂತ್ರಜ್ಞಾನ ಬಿಟ್ಟು ಜ್ಯೋತಿಷ್ಯದತ್ತ ಐಐಟಿ?