ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ

ಮೊಹಮ್ಮದ್ ಸಂಜೀತ್ ಅಲಿ ಮತ್ತು ಸಾಯಿ ಸುರಭಿ

ಚಿಕ್ಕಬಳ್ಳಾಪುರ – ಕೇರಳಮ್‌ನ ೨೬ ವರ್ಷದ ಮಹಮ್ಮದ್ ಸಂಜಿತ್ ಅಲಿ ಎಂಬ ಲವ್ ಜಿಹಾದಿಯು ಚಿಕ್ಕಬಳ್ಳಾಪುರದ ೨೬ ವರ್ಷದ ಫಿಸಿಯೋಥೆರಪಿಸ್ಟ್ (ಭೌತಿಕ ಚಿಕಿತ್ಸಕಿ) ಸಾಯಿ ಸುರಭಿ ಎಂಬಾಕೆಯನ್ನು ಹತ್ಯೆಗೈದನು. ಇಲ್ಲಿನ ಮನೆಯೊಂದರಲ್ಲಿ ಸುರಭಿಯ ಶವ ಪತ್ತೆಯಾಗಿದೆ. ಇಬ್ಬರ ನಡುವೆ ಪ್ರೇಮ ಸಂಬಂಧವಿತ್ತು. ಇದು ಲವ್ ಜಿಹಾದ್ ಪ್ರಕರಣವೇ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ ಮತ್ತು ಅಲಿ ಯುವತಿಯನ್ನು ಮಾದಕ ಪದಾರ್ಥಗಳಿಗೆ ದಾಸರನ್ನಾಗಿಸಿದ್ದನು ಎಂದು ಹೇಳಿದ್ದಾರೆ. ಇವರಿಬ್ಬರೂ ಕಾಲೇಜು ದಿನಗಳಿಂದ ಪರಿಚಯವಿದ್ದರು. ಈ ಹಿಂದೆ ಇಬ್ಬರೂ ಕೇರಳಮ್‌ಗೆ ಓಡಿ ಹೋಗಿದ್ದರು. ಅವರ ಈ ಸಂಬಂಧವನ್ನು ಸುರಭಿಯ ಕುಟುಂಬದವರು ವಿರೋಧಿಸಿದ್ದರು.

ಬಾಗಲಕೋಟೆಯಲ್ಲೂ ಮುಸಲ್ಮಾನನಿಂದ ಹಿಂದೂ ಯುವತಿಯ ಹತ್ಯೆ

ಬಾಗಲಕೋಟೆ ಜಿಲ್ಲೆಯ ಇಲಕಲ್‌ನಲ್ಲಿ ನೇಕಾರ ಕುಟುಂಬದ ಅಕ್ಷತಾ ಎಂಬ ಯುವತಿ ‘ಲವ್ ಜಿಹಾದ್’ ಪಿತೂರಿಯಿಂದಾಗಿ ಮೃತಪಟ್ಟಳು. ನಾನಾಸಾಬ್ ಬುಡ್ಡಾ ಎಂಬ ಮುಸಲ್ಮಾನ ಯುವಕ ಆಕೆಯೊಂದಿಗೆ ಸ್ನೇಹ ಬೆಳೆಸಿ ಬೆಂಗಳೂರಿಗೆ ಕರೆದೊಯ್ದಿದ್ದನು. ಆಕೆಯ ಅಶ್ಲೀಲ ಚಿತ್ರಗಳನ್ನು ತೆಗೆದಿದ್ದನು. ಆಕೆಯನ್ನು ೨ ವರ್ಷಗಳ ಕಾಲ ಮನೆಯೊಂದರಲ್ಲಿ ಬಂಧಿಸಿಟ್ಟಿದ್ದನು. ಈ ಅವಧಿಯಲ್ಲಿ ಅವನು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಇಸ್ಲಾಂ ಧರ್ಮ ಸ್ವೀಕರಿಸುವಂತೆ ಒತ್ತಾಯಿಸಿದನು. ಆಕೆಯ ಮತಾಂತರದಲ್ಲಿ ವಿಫಲನಾದ ಬಳಿಕ ಆತ ಆಕೆಯನ್ನು ಹತ್ಯೆಗೈದನು. ‘ಹಿಂದೂ ಜಾಗರಣ ವೇದಿಕೆ’ಯು ಈ ಘಟನೆಯನ್ನು ಖಂಡಿಸಿದೆ.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ ಮತಾಂಧರಿಗೆ ಮುಕ್ತ ಅವಕಾಶ ಸಿಕ್ಕಂತಾಗಿದೆ. ಅದಕ್ಕಾಗಿಯೇ ಅವರು ಹಿಂದೂಗಳನ್ನು ಬಹಿರಂಗವಾಗಿ ಹತ್ಯೆ ಮಾಡುತ್ತಿದ್ದಾರೆ. ಈ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರ ಬೇಕು!