ಬಿಸೂರ (ಸಾಂಗ್ಲಿ) ಇಲ್ಲಿ ಮತಾಂಧರ ಕಿರುಕುಳದಿಂದ ಗ್ರಾಮದಿಂದ ಪಲಾಯನ ಮಾಡಲು ಸಿದ್ಧತೆಯಲ್ಲಿ 10 ಹಿಂದೂ ಕುಟುಂಬಗಳು !

  • ಮತಾಂಧರನ್ನು ಮಟ್ಟ ಹಾಕುವುದಾಗಿ ‘ಹಿಂದೂ ಏಕತಾ ಆಂದೋಲನ’ದ ಎಚ್ಚರಿಕೆ!

  • ಮಸೀದಿಯಲ್ಲಿ ಹೊರರಾಜ್ಯಗಳ ಮುಸಲ್ಮಾನರ ಸುಳಿದಾಟ!

ಸಾಂಗ್ಲಿ, ಜೂನ್ 27 (ಸುದ್ದಿ) – ಜಿಲ್ಲೆಯ ಬಿಸೂರ ಗ್ರಾಮದಲ್ಲಿ ಮಸೀದಿಗೆ ಬರುವ ಹೊರರಾಜ್ಯಗಳ ಮತ್ತು ಹೊರ ಜಿಲ್ಲೆಗಳ ಮತಾಂಧರದಿಂದಾಗಿ ಸ್ಥಳೀಯ ಹಿಂದೂ ಕುಟುಂಬಗಳು ಅತ್ಯಂತ ಭಯದ ನೆರಳಿನಲ್ಲಿ ಬದುಕುತ್ತಿದ್ದಾರೆ. ಮಸೀದಿಯ ಪಕ್ಕದಲ್ಲಿ ವಾಸಿಸುವ ಹಿಂದೂಗಳಿಗೆ ಕಿರುಕುಳ ನೀಡುವುದು, ಹಿಂದೂ ಮಹಿಳೆಯರತ್ತ ನೋಡಿ ಅಶ್ಲೀಲ ಸನ್ನೆಗಳನ್ನು ಮಾಡುವುದು ಮತ್ತು ಹಿಂದೂ ಧರ್ಮದ ವಿರುದ್ಧ ವಿಷ ಕಾರುವುದು, ಇಂತಹ ಆಕ್ರೋಶ ಹುಟ್ಟಿಸುವ ಕೃತ್ಯಗಳು ಈ ಮತಾಂಧರಿಂದ ನಡೆಯುತ್ತಿವೆ. ಈ ಕಿರುಕುಳಕ್ಕೆ ಬೇಸತ್ತು ಗ್ರಾಮದ 10 ಹಿಂದೂ ಕುಟುಂಬಗಳು ತಮ್ಮ ಮನೆಗಳನ್ನು ಬಿಟ್ಟು ಗ್ರಾಮದಿಂದ ಪಲಾಯನ ಮಾಡಲು ಸಿದ್ಧವಾಗಿವೆ.

ಮಸೀದಿಯ ಮರೆಯಲ್ಲಿ ಹಿಂದೂಗಳಿಗೆ ಕಿರುಕುಳ!

ಬಿಸೂರ ಗ್ರಾಮದ ಮಸೀದಿಯಲ್ಲಿ ಹೊರಗಿನಿಂದ ಮತ್ತು ಹೊರರಾಜ್ಯಗಳಿಂದ 20-20 ಜನರ ಗುಂಪುಗಳು ಬರುತ್ತಿವೆ. ಮಸೀದಿಯ ಪಕ್ಕದಲ್ಲಿ ವಾಸಿಸುವ ಹಿಂದೂಗಳ ಶಾಂತಿ ಮತ್ತು ಸುರಕ್ಷತೆಗೆ ಧಕ್ಕೆ ಉಂಟಾಗಿದೆ. ಸ್ಥಳೀಯ ಮುಸಲ್ಮಾನರಾದ ಶೇಖ್, ನದಾಫ್, ಸಯ್ಯದ್ ಮತ್ತು ಹೊರರಾಜ್ಯಗಳಿಂದ ಬಂದಿರುವ ಹಾಫೀಜ್ ಅವರು ಮಸೀದಿಯಲ್ಲಿ ಜೋರಾಗಿ ಮಾತನಾಡುವುದು, ಹಾಗೆಯೇ ಮೊಬೈಲ್‌ನಲ್ಲಿ ದೊಡ್ಡ ಧ್ವನಿಯಲ್ಲಿ ಹಾಡುಗಳನ್ನು ಹಾಕಿ ಹಿಂದೂಗಳಿಗೆ ತೊಂದರೆ ಕೊಡುವುದು, ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ. ಮಸೀದಿಯ ಪರಿಸರದಿಂದ ಓಡಾಡುವ ಹಿಂದೂ ಮಹಿಳೆಯರು ಮತ್ತು ಹುಡುಗಿಯರನ್ನು ನೋಡಿ ಈ ಮತಾಂಧರು ಅಶ್ಲೀಲ ಸನ್ನೆಗಳನ್ನು ಮಾಡುತ್ತಾರೆ, ಹಾಗೂ ಹಿಂದೂ ಧರ್ಮದ ಬಗ್ಗೆ ಅತ್ಯಂತ ಹೀನಾಯವಾಗಿ ಅವಾಚ್ಯ ಶಬ್ದಗಳನ್ನು ಬಳಸುತ್ತಾರೆ.

ತೊಂದರೆಯಾಗುತ್ತಿದ್ದರೆ, ಬಾಗಿಲು-ಕಿಟಕಿಗಳನ್ನು ಮುಚ್ಚಿಕೊಂಡು ಒಳಗೆ ಕುಳಿತುಕೊಳ್ಳಿ! – ಹಿಂದೂಗಳಿಗೆ ಬೆದರಿಕೆ

ಸಂತ್ರಸ್ತ ಹಿಂದೂ ಕುಟುಂಬಗಳು ಈ ಉದ್ಧಟತನದ ನಡವಳಿಕೆಯನ್ನು ಪ್ರತಿಭಟಿಸಿದಾಗ, ‘ತೊಂದರೆಯಾಗುತ್ತಿದ್ದರೆ, ನಿಮ್ಮ ಬಾಗಿಲು-ಕಿಟಕಿಗಳನ್ನು ಮುಚ್ಚಿಕೊಂಡು ಒಳಗೆ ಕುಳಿತುಕೊಳ್ಳಿ’, ಎಂದು ಮತಾಂಧರು ಹಿಂದೂಗಳಿಗೆ ಬೆದರಿಕೆ ಹಾಕಿದ್ದಾರೆ. ಗ್ರಾಮದ ಮುಖಂಡರು, ರಾಜಕಾರಣಿಗಳು ಮತ್ತು ಪ್ರತಿಷ್ಠಿತ ವ್ಯಕ್ತಿಗಳಿಗೆ ಹಿಂದೂಗಳು ಪದೇ ಪದೇ ದೂರು ನೀಡಿದ್ದರೂ ಅವರು ಇದನ್ನು ನಿರ್ಲಕ್ಷಿಸಿದ್ದಾರೆ.

ಹೊರಗಿನ ವ್ಯಕ್ತಿಗಳ ವಿಚಾರಣೆ ನಡೆಸಿ! – ಹಿಂದೂ ಏಕತಾ ಆಂದೋಲನದ ಬೇಡಿಕೆ

ಈ ಗಂಭೀರ ಪರಿಸ್ಥಿತಿಯನ್ನು ಗಮನಕ್ಕೆ ತೆಗೆದುಕೊಂಡು ‘ಹಿಂದೂ ಏಕತಾ ಆಂದೋಲನ’ದ ಪದಾಧಿಕಾರಿಗಳು ಆಕ್ರೋಶಗೊಂಡಿದ್ದಾರೆ. ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ತಕ್ಷಣವೇ ಹಸ್ತಕ್ಷೇಪ ಮಾಡುವಂತೆ ಒತ್ತಾಯಿಸಿದ್ದಾರೆ.

‘ಬಿಸೂರ ಗ್ರಾಮದ ಮಸೀದಿಯಲ್ಲಿ ಹೊರರಾಜ್ಯಗಳಿಂದ ಮತ್ತು ಜಿಲ್ಲೆಗಳಿಂದ ಬರುವ ಸಂಶಯಾಸ್ಪದ ಜನರು ಯಾರು? ಅವರ ಬಗ್ಗೆ ತಕ್ಷಣವೇ ಆಳವಾದ ತನಿಖೆಯಾಗಬೇಕು. ಅವರಿಂದಾಗಿ ಗ್ರಾಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಗಂಭೀರ ಸಮಸ್ಯೆ ನಿರ್ಮಾಣವಾಗಬಹುದು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದರಲ್ಲಿ ವೈಯಕ್ತಿಕವಾಗಿ ಗಮನಹರಿಸಿ ಸಂತ್ರಸ್ತ ಹಿಂದೂ ಕುಟುಂಬಗಳಿಗೆ ರಕ್ಷಣೆ ನೀಡಬೇಕು ಮತ್ತು ಅವರ ಪಲಾಯನವನ್ನು ತಡೆಯಬೇಕು. ಒಂದು ವೇಳೆ ಪೊಲೀಸರು ಸಮಯಕ್ಕೆ ಸರಿಯಾಗಿ ಕಾನೂನು ಕ್ರಮ ಕೈಗೊಳ್ಳದಿದ್ದರೆ, ಆ ಮುಸಲ್ಮಾನ್ ಸಮುದಾಯವನ್ನು ಹಿಂದೂ ಏಕತಾ ಆಂದೋಲನದ ಪದಾಧಿಕಾರಿಗಳು ತಮ್ಮದೇ ಶೈಲಿಯಲ್ಲಿ ಮಟ್ಟ ಹಾಕಲಿದ್ದಾರೆ’, ಎಂದು ಹಿಂದೂ ಏಕತಾ ಆಂದೋಲನದ ಪ್ರದೇಶಾಧ್ಯಕ್ಷ ಹಾಗೂ ಮಾಜಿ ಶಾಸಕರಾದ ಶ್ರೀ. ನಿತಿನ್ ಶಿಂದೆ ಅವರು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಹಿಂದೂ ಏಕತಾ ಆಂದೋಲನದ ಶ್ರೀ. ದತ್ತಾತ್ರೇಯ ಭೋಕರೆ, ನಗರಾಧ್ಯಕ್ಷ ಶ್ರೀ. ಅನಿರುದ್ಧ ಕುಂಭಾರ, ಪೈ. ಪ್ರದೀಪ ನಿಕಮ್, ಮನೋಜ ಸಾಳುಂಖೆ, ಸೋಮನಾಥ ಗೋಟಖಿಂಡೆ, ಪ್ರಸಾದ ರಿಸವಡೆ, ಭೂಷಣ ಗುರವ, ದಿಗ್ವಿಜಯ ಶಿಂದೆ, ಗಜಾನನ ಮಾನೆ, ಹರಪಿತಸಿಂಗ್ ಗೌಡ, ಸುಮಿತ ಶಿಂಗೆ, ಅನಿಕೇತ ಆಂಬರುಳೆ, ಅವಧೂತ ಜಾಧವ, ರಾಜು ಜಾಧವ, ರಾಮ ಕಾಳೆ, ಅಕ್ಷಯ ಪವಾರ, ಕೃಷ್ಣ ನಾಯ್ಡು ಸೇರಿದಂತೆ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಂಪಾದಕೀಯ ನಿಲುವು

  • ಹಿಂದೂಗಳು ಪಲಾಯನ ಮಾಡುವಂತಾಗಲು ಬಿಸೂರ ಗ್ರಾಮವು ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆಯೇ? ಹಿಂದೂಗಳು ಸುರಕ್ಷಿತ ಜೀವನವನ್ನು ನಡೆಸಲು ಸಾಧ್ಯವಾಗುವಂತೆ, ಹಿಂದೂ ರಾಷ್ಟ್ರದ ಸ್ಥಾಪನೆಯು ಅನಿವಾರ್ಯವಾಗಿದೆ!
  • ಈ ಪ್ರಕರಣದಲ್ಲಿ ನಿಷ್ಕ್ರಿಯರಾಗಿರುವವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು!