‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)

ಕೇಂದ್ರ ಸರಕಾರವನ್ನು ಟೀಕಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು – ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ಕ್ವಾಂಟಮ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ (AI), ಅತ್ಯಾಧುನಿಕ ಸೆಮಿಕಂಡಕ್ಟರ್ ಮತ್ತು ಡೀಪ್-ಟೆಕ್ ದಿಕ್ಕಿನಲ್ಲಿ ವೇಗವಾಗಿ ಮುನ್ನಡೆಯುತ್ತಿದೆ. ಆದಾಗ್ಯೂ, ಭಾರತದ ಹೆಮ್ಮೆಯ ಪ್ರಮುಖ ಐಐಟಿ ಶೈಕ್ಷಣಿಕ ಸಂಸ್ಥೆಗಳನ್ನು ಪುನರ್ಜನ್ಮ, ಜ್ಯೋತಿಷ್ಯಶಾಸ್ತ್ರ ಮತ್ತು ಗೋ-ವಿಜ್ಞಾನದಂತಹ ವಿಷಯಗಳ ಕುರಿತು ಸಂಶೋಧನೆ ನಡೆಸಲು ಸರಕಾರವು ಒತ್ತಾಯಿಸುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಅವರು ಮಾತು ಮುಂದುವರೆಸಿ, “ಮೋದಿ ನೇತೃತ್ವದ ಕೇಂದ್ರ ಸರಕಾರವು ‘ಕೌ-ಪಥಿ’ (ಗೋ ಆಧಾರಿತ ಉತ್ಪನ್ನಗಳ ವಿಜ್ಞಾನ) ಸಂಶೋಧನೆಗಾಗಿ 98 ಕೋಟಿ ರೂಪಾಯಿಗಳನ್ನು ನೀಡಲು ನಿರ್ಧರಿಸಿದೆ. ದೇಶದ ಪ್ರತಿಷ್ಠಿತ ಐಐಟಿ ಸಂಸ್ಥೆಗಳಲ್ಲಿ ವಿಜ್ಞಾನದ ಹೆಸರಿನಲ್ಲಿ ಪುರಾಣಗಳನ್ನು ಕಲಿಸಲಾಗುತ್ತಿದೆ. ಇದು ಕಳವಳಕಾರಿಯಾಗಿದೆ. ನಮ್ಮ ಇತಿಹಾಸ, ಪರಂಪರೆ ಅಥವಾ ಪ್ರಾಚೀನ ಜ್ಞಾನ ಪದ್ಧತಿಗಳನ್ನು ಅಧ್ಯಯನ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ; ಆದರೆ ಇಂತಹ ಹುಸಿ ವಿಜ್ಞಾನ ಅಥವಾ ಮೂಢನಂಬಿಕೆಯನ್ನು ಅಧಿಕೃತವಾಗಿ ಸಾಂಸ್ಥಿಕಗೊಳಿಸುತ್ತಿರುವುದು ನಿಜವಾದ ಸಮಸ್ಯೆಯಾಗಿದೆ” ಎಂದು ಹೇಳಿದರು. (ಭಾರತದ ಪ್ರಾಚೀನ ಜ್ಞಾನ ಪದ್ಧತಿಗಳನ್ನು ಯಾವುದೇ ಆಧಾರವಿಲ್ಲದೆ ಮೂಢನಂಬಿಕೆ ಎಂದು ಕರೆಯುವುದು ಮೂಢನಂಬಿಕೆಯಲ್ಲವೇ? ಈ ಜ್ಞಾನ ಪದ್ಧತಿಗಳು ಹುಸಿ ವಿಜ್ಞಾನ ಎಂದು ಹೇಳಲು ಯಾವ ವೈಜ್ಞಾನಿಕ ಆಧಾರವಿದೆ? – ಸಂಪಾದಕರು) ಪ್ರತಿಷ್ಠಿತ ಐಐಟಿಗಳೊಳಗೆ ರಹಸ್ಯವಾಗಿ ನುಸುಳುತ್ತಿರುವ ಇಂತಹ ಪ್ರವೃತ್ತಿಗಳು ದೇಶದ ವೈಜ್ಞಾನಿಕ ಪ್ರಗತಿಯನ್ನು ಕುಂಠಿತಗೊಳಿಸುವಂತಿವೆ ಎಂದು ಅವರು ಅಭಿಪ್ರಾಯಪಟ್ಟರು.

ಸಂಪಾದಕೀಯ ನಿಲುವು

ಹಿಂದೂ ಧರ್ಮದ ಪ್ರಾಚೀನ ಜ್ಞಾನದ ಕುರಿತು ವೈಜ್ಞಾನಿಕ ಮಟ್ಟದಲ್ಲಿ ಅಧ್ಯಯನ ನಡೆಯುತ್ತಿದ್ದರೆ ಅದು ಸ್ವಾಗತಾರ್ಹ. ಭಾರತದ ಇದೇ ಐಐಟಿ ಸಂಸ್ಥೆಗಳು ಸೆಮಿಕಂಡಕ್ಟರ್‌ನಂತಹ ಅನೇಕ ಕ್ಷೇತ್ರಗಳಲ್ಲಿ ಸುಧಾರಿತ ಸಂಶೋಧನೆಗಳನ್ನು ಮಾಡುತ್ತಿವೆ. ಆದರೆ, ಹಿಂದೂದ್ವೇಷದ ಕಾಮಾಲೆ ರೋಗ ಪೀಡಿತರಾಗಿರುವ ಖರ್ಗೆ ಮತ್ತು ಅವರ ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ಶಾಸ್ತ್ರಗಳು ಮೌಢ್ಯತೆಯಿಂದ ಕೂಡಿವೆ ಎಂದು ಅನ್ನಿಸುವುದರಲ್ಲಿ ಆಶ್ಚರ್ಯವೇನಿದೆ?