ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!

೪ ಮಂದಿ ಬಂಧನ!

ಸುಪೌಲ್ (ಬಿಹಾರ) – ಇಲ್ಲಿನ ನೇಪಾಳದ ಮಿಷನರಿಗಳು ಸ್ಥಳೀಯ ಹಿಂದೂ ಗ್ರಾಮಸ್ಥರಿಗೆ ಉತ್ತಮ ಆಹಾರ, ಉಚಿತ ಶಿಕ್ಷಣ ಮತ್ತು ಕಾಯಿಲೆಗಳಿಂದ ಮುಕ್ತಿಯ ಆಮಿಷವೊಡ್ಡಿ ಕ್ರೈಸ್ತ ಪಂಥವನ್ನು ಸ್ವೀಕರಿಸುವಂತೆ ಮಾಡಲು ಪ್ರಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ. ಜಾಗರೂಕ ಗ್ರಾಮಸ್ಥರು ಮಿಷನರಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು.

೧. ಮಿಷನರಿಗಳ ಗುಂಪೊಂದು ನೇಪಾಳದ ಭಂಟಾಬಾರಿಯಿಂದ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಭೀಮನಗರಕ್ಕೆ (ಬಿಹಾರ) ತಲುಪಿತು. ಅಲ್ಲಿಂದ ಈ ಗುಂಪು ಬನೈಲಿಪಟ್ಟಿಯ ಹಿಂದೂ ವಸತಿಗೆ ತಲುಪಿತು.

೨. ಇಲ್ಲಿ ಕಿಶುನ್‌ದೇವ್ ರಾಮ್ ಎಂಬ ವ್ಯಕ್ತಿಯ ಮನೆಯಲ್ಲಿ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಗೆ ೩೦ ರಿಂದ ೪೦ ಜನರು ಹಾಜರಿದ್ದರು. ಇಲ್ಲಿ ಮಿಷನರಿಗಳು ಗ್ರಾಮಸ್ಥರಿಗೆ ಹಣದ, ಕಾಯಿಲೆ ವಾಸಿ ಮಾಡುವ ಮತ್ತು ಉತ್ತಮ ಆಹಾರದ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡಲು ಅವರ ಬ್ರೈನ್ ವಾಶ್ ಮಾಡಲು ಆರಂಭಿಸಿದರು.

೩. ಈ ವಿಷಯ ತಿಳಿಯುತ್ತಿದ್ದಂತೆ ಇತರ ಗ್ರಾಮಸ್ಥರು ಸ್ಥಳಕ್ಕೆ ತಲುಪಿದರು. ಅವರು ಮಿಷನರಿಗಳ ಮತಾಂತರದ ಪ್ರಯತ್ನವನ್ನು ತೀವ್ರವಾಗಿ ವಿರೋಧಿಸಿದರು.

೪. ಈ ವಿಷಯವನ್ನು ಪೊಲೀಸರಿಗೂ ತಿಳಿಸಲಾಯಿತು. ಪೊಲೀಸರು ೪ ಮಿಷನರಿಗಳನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ವೀರಪುರ ಪೊಲೀಸ್ ಠಾಣೆಗೆ ಕರೆದೊಯ್ದರು.

೫. ಗ್ರಾಮಸ್ಥರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಧರ್ಮಸ್ವಾತಂತ್ರ್ಯದ ಲಾಭ ಪಡೆದು ಕ್ರೈಸ್ತ ಮಿಷನರಿಗಳು ಹಾಗೂ ಜಿಹಾದಿಗಳು ಹಿಂದೂಗಳನ್ನು ಬಲವಂತವಾಗಿ ಮತಾಂತರಗೊಳಿಸುತ್ತಾರೆ; ಆದರೆ ಯಾವುದೇ ಸರಕಾರ ಇದನ್ನು ತಡೆಯಲು ಸಾಧ್ಯವಿಲ್ಲ. ಇದಕ್ಕಾಗಿಯೇ ಹಿಂದೂ ರಾಷ್ಟ್ರ ಬೇಕು!