ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ

ಇಟಾನಗರ (ಅರುಣಾಚಲ ಪ್ರದೇಶ) – ಚೀನಾ ಸೇನೆಯು ಅರುಣಾಚಲ ಪ್ರದೇಶದೊಳಗೆ ನುಗ್ಗಿ ಭಾರತೀಯ ಭೂಮಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಅಲ್ಲಿ ಮಿಲಿಟರಿ ನೆಲೆಗಳನ್ನು ಸ್ಥಾಪಿಸಿದೆ ಎಂದು ಕೆಲವು ಮಾಧ್ಯಮಗಳ ವರದಿಗಳಲ್ಲಿ ಹೀಗೆಂದು ಹೇಳಲಾಗಿತ್ತು; ಆದರೆ ಈ ವರದಿಯು ತಪ್ಪು ಮತ್ತು ಆಧಾರರಹಿತವಾಗಿದೆ ಎಂದು ಭಾರತೀಯ ಸೇನೆಯು ಅಧಿಕೃತವಾಗಿ ಸ್ಪಷ್ಟಪಡಿಸಿದೆ.

ಅರುಣಾಚಲ ಪ್ರದೇಶದ ಅಪ್ಪರ್ ಸುಬನ್ಸಿರಿ ಜಿಲ್ಲೆಯ ‘ನಾಹ’ ಎಂಬ ಬುಡಕಟ್ಟು ಸಮುದಾಯದ ‘ನಾಹ ವೆಲ್ಫೇರ್ ಸೊಸೈಟಿ’ ಎಂಬ ಸಮಿತಿಯು ಸ್ಥಳೀಯ ಉಪ ಆಯುಕ್ತರಿಗೆ ಮನವಿಯೊಂದನ್ನು ಸಲ್ಲಿಸಿತ್ತು. ಅದರಲ್ಲಿ, ‘ಚೀನಾ ಸೇನೆಯು ಕ್ರಮೇಣ ಈ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸುತ್ತಿದೆ. ಕಳೆದ ೬ ವರ್ಷಗಳಲ್ಲಿ ನಾಹ ಸಮುದಾಯವು ಬೇಟೆಯಾಡುವ ಅಥವಾ ಜಾನುವಾರುಗಳನ್ನು ಮೇಯಿಸುವ ಮತ್ತು ಕೃಷಿ ಮಾಡುವ ಪ್ರದೇಶದಲ್ಲಿನ ದೊಡ್ಡ ಭಾಗವನ್ನು ಚೀನಾ ಸೇನೆಯು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ’, ಎಂದು ಹೇಳಲಾಗಿತ್ತು.