ಶ್ರೀರಾಮ ಮಂದಿರದಲ್ಲಿನ ಕಾಣಿಕೆ ಹಣ ಕಳ್ಳತನ ಪ್ರಕರಣದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಣೆ, ಅರ್ಜಿದಾರರಿಗೆ ತರಾಟೆ!

ನವದೆಹಲಿ – ಶ್ರೀರಾಮ ಮಂದಿರದಲ್ಲಿನ ಕಾಣಿಕೆ ಹಣ ಕಳ್ಳತನದ ಪ್ರಕರಣದ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ದಾಖಲಿಸಲಾಗಿತ್ತು. ಈ ಅರ್ಜಿಯಲ್ಲಿ ಸಿಬಿಐ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕೆಂದು ಮನವಿ ಮಾಡಲಾಗಿತ್ತು; ಆದರೆ ಸುಪ್ರೀಂ ಕೋರ್ಟ್ ಈ ಪ್ರಕರಣದ ತುರ್ತು ವಿಚಾರಣೆ ನಡೆಸಲು ನಿರಾಕರಿಸಿತು. ನ್ಯಾಯಾಲಯವು ಅರ್ಜಿದಾರರನ್ನು, ‘ಒಂದು ವೇಳೆ ಬೇಸಿಗೆಯ ರಜೆಯ ನಂತರ ನ್ಯಾಯಾಲಯದ ನಿಯಮಿತ ಕಲಾಪಗಳು ಪ್ರಾರಂಭವಾದಾಗ ಈ ಪ್ರಕರಣದ ವಿಚಾರಣೆ ನಡೆದರೆ, ಆಕಾಶವೇನೂ ಕಳಚಿ ಬೀಳುವುದಿಲ್ಲ, ಎಂದು ತರಾಟೆಗೆ ತೆಗೆದುಕೊಂಡಿದೆ. ನಿಮಗೇಕೆ ಇಷ್ಟೊಂದು ಗಡಿಬಿಡಿ? ನಿಗದಿತ ಪ್ರಕ್ರಿಯೆಯ ಪ್ರಕಾರವೇ ವಿಚಾರಣೆ ನಡೆಸಲಾಗುವುದು. ಈ ಅರ್ಜಿಯನ್ನು ಜುಲೈ ೧೨ ರಿಂದ ೧೭ ರ ವಾರದಲ್ಲಿ ಪರಿಗಣಿಸಲಾಗುವುದು’, ಎಂದು ಹೇಳುತ್ತಾ ತುರ್ತು ವಿಚಾರಣೆಯ ಮನವಿಯನ್ನು ತಿರಸ್ಕರಿಸಿತು.
ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಬ್ಬರು ವಕೀಲರ ಪರವಾಗಿ ಸಲ್ಲಿಸಲಾಗಿತ್ತು. ಉತ್ತರ ಪ್ರದೇಶ ಪೊಲೀಸರಿಂದ ನಡೆಯುತ್ತಿರುವ ತನಿಖೆಯ ಮೇಲೆ ನಂಬಿಕೆ ಇಡಲು ಸಾಧ್ಯವಿಲ್ಲ; ಏಕೆಂದರೆ ಪ್ರಮುಖ ಸಾಕ್ಷ್ಯಗಳನ್ನು ಸರಿಯಾಗಿ ಸುರಕ್ಷಿತವಾಗಿಡುತ್ತಿಲ್ಲ ಎಂದು ಈ ಅರ್ಜಿಯಲ್ಲಿ ತಿಳಿಸಲಾಗಿತ್ತು.
ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು! – ರಾಜ್ಯ ಗೃಹ ಇಲಾಖೆಯ ವರದಿಯ ಮಾಹಿತಿ
ಅಚಲಪುರ (ಅಮರಾವತಿ ಜಿಲ್ಲೆ) ಇಲ್ಲಿನ ಐತಿಹಾಸಿಕ ಶ್ರೀರಾಮ ಮಂದಿರ ಸಂಸ್ಥಾನದ 10 ಕೋಟಿ ರೂಪಾಯಿ ಮೌಲ್ಯದ ಭೂಮಿಯ ಮೇಲಿನ ಅತಿಕ್ರಮಣದಾರರ ದಾವೆ ವಜಾ! : Achalapur Sri Rama Temple
ರಿವಾ (ಮಧ್ಯಪ್ರದೇಶ)ದಲ್ಲಿ ಗೋ-ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಮುಸ್ಲಿಂ ಸಹೋದರಿಯರನ್ನು ಹಿಡಿದ ಗ್ರಾಮಸ್ಥರು : Rewa Beef Smuggling Arrests
man ki baat : ಇಂಧನ ಉಳಿತಾಯ ಮಾಡಿ ಮತ್ತು ಚಿನ್ನ ಖರೀದಿ ಸೀಮಿತವಾಗಿಡಿ !
ಫೋರ್ಟ್ (ಮುಂಬಯಿ) ನಲ್ಲಿನ ಸರಕಾರಿ ಜಾಗದ ಪ್ರಕರಣದಲ್ಲಿ ಚರ್ಚ್ಗೆ ಜಿಲ್ಲಾಧಿಕಾರಿಗಳಿಂದ ಬಾಕಿ ಹಣ ವಸೂಲಾತಿಯ ನೋಟಿಸ್ !
ರಾ.ಸ್ವ. ಸಂಘದಲ್ಲಿ ಜನಸಂದಣಿ ಹೆಚ್ಚಾದ ಕಾರಣ ಒಳ್ಳೆಯ ಜನರ ಕೊರತೆಯಾಗಿದೆ !