ಜಕಾರ್ತಾ (ಇಂಡೋನೇಷ್ಯಾ) ದಲ್ಲಿ ನಡೆದ ಪ್ರವಚನದಲ್ಲಿ ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಗಳ ದಾವೆ

ಜಕಾರ್ತಾ (ಇಂಡೋನೇಷ್ಯಾ) – ಶ್ರೀರಾಮ ಮಂದಿರದ ಪ್ರಸ್ತುತ ಪರಿಸ್ಥಿತಿಯನ್ನು ನೋಡುವುದು ಯಾವುದೇ ಸನಾತನಿ ವ್ಯಕ್ತಿಗೆ ಅಸಹನೀಯವಾಗಿದೆ. ಶ್ರೀರಾಮ ಮಂದಿರದಲ್ಲಿ ಇಂತಹ ಪರಿಸ್ಥಿತಿ ನೋಡಿ ಭಕ್ತರ ಮನಸ್ಸಿಗೆ ಎಷ್ಟು ನೋವಾಗುತ್ತಿರಬಹುದು?, ಇದನ್ನು ಪದಗಳಲ್ಲಿ ವಿವರಿಸಲು ಕಷ್ಟ. ಜನರು, ‘ಬಾಬಾ ಏನೂ ಮಾತನಾಡುತ್ತಿಲ್ಲ. ಬಾಬಾ ನಿಮಗೆ ಎಲ್ಲವೂ ತಿಳಿದಿದೆ, ಹಾಗಾಗಿ ಚೀಟಿ ತೆರೆಯಿರಿ ಮತ್ತು ಯಾರ ಹೆಸರು ಇದೆ ಎಂದು ಹೇಳಿ.’, ಎಂದು ಹೇಳುತ್ತಾರೆ. ಒಂದು ವೇಳೆ ನಾವು ಈಗ ಚೀಟಿ ತೆರೆದು ಹೆಸರು ಹೇಳಿದರೆ, ಅವರು (ದೋಷಿಗಳು) ನಮ್ಮನ್ನು ಮುಗಿಸಿಬಿಡುತ್ತಾರೆ. ಇಂದು ಇಲ್ಲದಿದ್ದರೂ ನಾಳೆ ಮುಗಿಸುತ್ತಾರೆ; ಆಗ ನಾವು ಇತರರ ಹೆಸರುಗಳನ್ನು ಹೇಳಲು ಬದುಕಿರುವುದಿಲ್ಲ; ಅದಕ್ಕಾಗಿಯೇ ಕೆಲವು ಕಡೆ ನಮ್ಮ ಮೌನವೇ ಶ್ರೇಯಸ್ಕರವಾಗಿದೆ ಎಂದು ಬಾಗೇಶ್ವರ ಧಾಮದ ಮುಖ್ಯಸ್ಥ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಗಳು ಇಲ್ಲಿ ನಡೆದ ಪ್ರವಚನವೊಂದರಲ್ಲಿ ಹೇಳಿದರು.
ಪ್ರಸ್ತುತ ಕೇವಲ ಸಣ್ಣ ಮೀನುಗಳು ಸಿಕ್ಕಿಬಿದ್ದಿವೆ!
ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಗಳು ಮಾತು ಮುಂದುವರೆಸುತ್ತಾ, ಭಾರತದ ಕಾನೂನು ಬಲೆಯಂತಿದೆ, ಇದರಲ್ಲಿ ಕೇವಲ ಸಣ್ಣ ಮೀನುಗಳು ಸಿಕ್ಕಿಹಾಕಿಕೊಳ್ಳುತ್ತವೆ ಮತ್ತು ದೊಡ್ಡ ಮೊಸಳೆಗಳು ಸುಲಭವಾಗಿ ನುಣುಚಿಕೊಳ್ಳುತ್ತವೆ. ಈ ಸಂಪೂರ್ಣ ಪ್ರಕರಣದ ದೋಷಿಗಳನ್ನು ನಾನು ಚೆನ್ನಾಗಿ ಬಲ್ಲೆ. ನಾನು ಪ್ರಸ್ತುತ ದೊಡ್ಡ ಧರ್ಮಸಂಕಟದಲ್ಲಿದ್ದೇನೆ; ಏಕೆಂದರೆ ಸತ್ಯ ಹೇಳಿದರೆ ಜೀವಕ್ಕೆ ಅಪಾಯವಿದೆ ಮತ್ತು ಸುಮ್ಮನಿದ್ದರೆ ಜನರು ನನ್ನ ಶಕ್ತಿಯ ಮೇಲೆ ಪ್ರಶ್ನೆ ಎತ್ತುತ್ತಾರೆ, ಎಂದು ಹೇಳಿದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಲ್ಲಿ ಮುಸ್ಲಿಮರು ಇದ್ದಿದ್ದರೆ, ಕಳ್ಳತನದ ಆರೋಪದ ಮೇಲೆ ಅವರ ‘ಎನ್ಕೌಂಟರ್’ ಮಾಡಲಾಗುತ್ತಿತ್ತು!’
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation