18 ವರ್ಷದ ಸನಾತನ ವಿಜ್ಞಾನಿ ವಿವಾನ್ ಕರುಳ್ಕರ್ ಬರೆದ ಎಲಾನ್ ಮಸ್ಕ್ ಜೀವನ ಚರಿತ್ರೆ!

  • ಸನಾತನ ಧರ್ಮ ಮತ್ತು ವಿಜ್ಞಾನ-ತಂತ್ರಜ್ಞಾನದ ಕುರಿತು 2 ಪುಸ್ತಕಗಳನ್ನು ಬರೆದಿದ್ದಾರೆ!

  • ‘ನಾಸಾ’ಗೂ ಸವಾಲಾಗುವ ಖಗೋಳಶಾಸ್ತ್ರೀಯ ಸಂಶೋಧನೆ!

  • ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಗೂ ಸವಾಲು ಹಾಕುವ ಸನಾತನ ವಿಜ್ಞಾನಿ ವಿವಾನ್ ಕರುಳ್ಕರ್

ವಿವಾನ್ ಕರುಳ್ಕರ್ ಮತ್ತು ಅವರು ಎಲಾನ್ ಮಸ್ಕ್ ಕುರಿತು ಬರೆದ ಪುಸ್ತಕ

ಮುಂಬಯಿ – ಚಿಕ್ಕ ವಯಸ್ಸಿನಲ್ಲಿಯೇ ವಿಜ್ಞಾನ ಮತ್ತು ಅಧ್ಯಾತ್ಮದ ಬಗ್ಗೆ ಆಳವಾದ ಅಧ್ಯಯನ ಮಾಡಿ, ಸಂಶೋಧನೆ ಮಾಡಿ ಪುಸ್ತಕಗಳನ್ನು ಬರೆಯುವ ವ್ಯಕ್ತಿಗಳು ಅಪರೂಪ. ಅಂತಹ 18 ವರ್ಷದ ಯುವಕ (ಟೀನೇಜರ್) ಮುಂಬಯಿನ ಬರಹಗಾರ ಮತ್ತು ವಿಜ್ಞಾನಿ ವಿವಾನ್ ಕರುಳ್ಕರ್! ವಿಶ್ವದ ಅತಿ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರ ಕುರಿತಾದ ‘ಎಲಾನ್ ಮಸ್ಕ್: ದಿ ಮ್ಯಾನ್ ಹೂ ಬೆಂಡ್ಸ್ ರಿಯಾಲಿಟಿ’ (ಎಲಾನ್ ಮಸ್ಕ್: ವಾಸ್ತವವನ್ನು ಬಗ್ಗಿಸಿದ ಮನುಷ್ಯ) ಎಂಬ ವಿವಾನ್ ಅವರ ಮೂರನೇ ಪುಸ್ತಕವು ಜೂನ್ 28 ರಂದು ಪ್ರಕಟವಾಯಿತು. ಈ ಪುಸ್ತಕದಲ್ಲಿ ವಿವಾನ್ ಮಸ್ಕ್ ಅವರ ಜೀವನ ಚರಿತ್ರೆಯನ್ನೇ ಬರೆದಿದ್ದಾರೆ ಎಂದು ಅವರು ಹೇಳಿದ್ದಾರೆ. ಜೂನ್ 28 ಮಸ್ಕ್ ಅವರ ಹುಟ್ಟುಹಬ್ಬವಾಗಿದ್ದು, ಆ ನಿಮಿತ್ತ ಈ ಪುಸ್ತಕವನ್ನು ಮುಂಬಯಿನಲ್ಲಿ ಬಿಡುಗಡೆ ಮಾಡಲಾಯಿತು (ಸಾಫ್ಟ್ ಲಾಂಚ್).

ವಿವಾನ್ ಅವರ ಇತ್ತೀಚೆಗೆ ಒಂದು ವಿಡಿಯೋ ಬಿಡುಗಡೆಯಾಯಿತು. ಅದರಲ್ಲಿ ಅವರು 8ನೇ ವಯಸ್ಸಿನಿಂದಲೂ ಮಸ್ಕ್ ಅವರನ್ನು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮಾನವೀಯತೆಗಾಗಿ ಮಸ್ಕ್ ಮಾಡುತ್ತಿರುವ ಅಮೂಲ್ಯ ಕೊಡುಗೆಯಿಂದ ಅವರು ಸ್ಫೂರ್ತಿ ಪಡೆದರು. ಮಸ್ಕ್ ಅವರ ಕಾರ್ಯದಿಂದ ಪ್ರಭಾವಿತರಾಗಿ ವಿವಾನ್ ‘ಕೇವಲ 15ನೇ ವಯಸ್ಸಿನಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಗೂ ಸವಾಲು ಹಾಕುವ ವಿಶ್ವಪ್ರಸಿದ್ಧ ಸಂಶೋಧನೆಯನ್ನು ಮಾಡಿದರು’ ಎಂದು ಈ ವಿಡಿಯೋದಲ್ಲಿ ಹೇಳುತ್ತಾರೆ.

ಸನಾತನ ಧರ್ಮದ ಮಹತ್ವವನ್ನು ವಿವರಿಸುವ ಎರಡು ಪುಸ್ತಕಗಳನ್ನು ಸಹ ವಿವಾನ್ ಬರೆದಿದ್ದಾರೆ. ಮಸ್ಕ್ ಅವರ ಜೀವನದ ಕುರಿತಾದ ಇದು ಅವರ ಮೂರನೇ ಪುಸ್ತಕ! ಅವರು ಈ ಪುಸ್ತಕವನ್ನು ಅಮೆರಿಕದಲ್ಲಿರುವ ಮಸ್ಕ್ ಅವರಿಗೆ ಕಳುಹಿಸಿದ್ದಾರೆ. ಅವರು ಈ ಪುಸ್ತಕವನ್ನು ಓದುತ್ತಾರೆ ಎಂದು ಅವರಿಗೆ ಆಶಯವಿದೆ.

‘ಎಲಾನ್ ಮಸ್ಕ್: ದಿ ಮ್ಯಾನ್ ಹೂ ಬೆಂಡ್ಸ್ ರಿಯಾಲಿಟಿ’ ಪುಸ್ತಕದ ವೈಶಿಷ್ಟ್ಯ!

‘ಎಲಾನ್ ಮಸ್ಕ್: ದಿ ಮ್ಯಾನ್ ಹೂ ಬೆಂಡ್ಸ್ ರಿಯಾಲಿಟಿ’ ಪುಸ್ತಕದ ಮುಖಪುಟ

ಈ ಪುಸ್ತಕವು ಎಲಾನ್ ಮಸ್ಕ್ ಅವರ ಜೀವನದ ಅಜ್ಞಾತ ವಿಷಯಗಳು, ಅವರು ತೆಗೆದುಕೊಂಡ ಕ್ರಾಂತಿಕಾರಿ ನಿರ್ಧಾರಗಳ ಅಜ್ಞಾತ ಮಜಲುಗಳು ಮತ್ತು ಅವರ ಯಶಸ್ಸಿನ ಹಿಂದಿನ ಸ್ಪೂರ್ತಿದಾಯಕ ಪ್ರಯಾಣವನ್ನು ಅನಾವರಣಗೊಳಿಸುತ್ತದೆ. ಮಸ್ಕ್ ಅವರಿಗೆ ಸಂಬಂಧಿಸಿದ ಈ ಪುಸ್ತಕದಲ್ಲಿನ ವಿಷಯವು ಬೇರೆಲ್ಲಿಯೂ ಓದಲು ಸಿಗುವುದಿಲ್ಲ. ಈ ಪುಸ್ತಕವು ಇಂದಿನ ಯುವ ಪೀಳಿಗೆಗೆ ಸ್ಪೂರ್ತಿದಾಯಕವಾಗಿರಬಹುದು. ಇದರಲ್ಲಿ ವಿಜ್ಞಾನ, ಧರ್ಮ, ತಂತ್ರಜ್ಞಾನ ಮತ್ತು ಜಾಗತಿಕ ದೃಷ್ಟಿಕೋನಗಳ ಸುಂದರ ಸಂಗಮವನ್ನು ಕಾಣಬಹುದು.

‘ಎಲಾನ್ ಮ್ಯಾಸ್ಕ್: ದಿ ಮ್ಯಾನ್ ಹೂ ಬೆಂಡ್ಸ್ ರಿಯಾಲಿಟಿ’ ಪುಸ್ತಕದ ಹಿಂಬದಿ ಪುಟ

ವಿವಾನ್ ಕೇವಲ 15ನೇ ವಯಸ್ಸಿನಲ್ಲಿ ‘ನಿಯರ್ ಅರ್ಥ್ ಆಬ್ಜೆಕ್ಟ್ಸ್’ ಕುರಿತು ಪೇಟೆಂಟ್ ಪಡೆದರು!

ವಿವಾನ್ 15ನೇ ವಯಸ್ಸಿನಲ್ಲಿ ‘ನಿಯರ್ ಅರ್ಥ್ ಆಬ್ಜೆಕ್ಟ್ಸ್’ (NEO) ಭೂಮಿಯ ಸಮೀಪದ ವಸ್ತುಗಳ (ಉಲ್ಕೆಗಳು, ಧೂಮಕೇತುಗಳು, ಕ್ಷುದ್ರಗ್ರಹಗಳು ಇತ್ಯಾದಿ) ಹುಡುಕಾಟದ ಕುರಿತು ವಿಶೇಷ ಸಂಶೋಧನೆ ಮಾಡಿದರು. ಅದಕ್ಕಾಗಿ ಅವರಿಗೆ ‘ಪೇಟೆಂಟ್’ ಸಹ ದೊರೆಯಿತು. ಇಂತಹ ಪೇಟೆಂಟ್ ಪಡೆದ ವಿಶ್ವದ ಅತ್ಯಂತ ಕಿರಿಯ ಸಂಶೋಧಕರಲ್ಲಿ ಒಬ್ಬರಾದರು. ಅವರು ವಿಡಿಯೋದಲ್ಲಿ ಹೇಳಿದಂತೆ, ಭೂಮಿಯ ಸಮೀಪ ಬರುತ್ತಿರುವ ವಸ್ತುಗಳನ್ನು ಹುಡುಕಲು ‘ನಾಸಾ’ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ; ಆದರೆ ನನ್ನ ಸಂಶೋಧನೆಯಿಂದ ಆ ವಸ್ತುಗಳನ್ನು ಸುಲಭವಾಗಿ ಮತ್ತು ಉಚಿತವಾಗಿ ಹುಡುಕಬಹುದು.

ಆಧುನಿಕ ವಿಜ್ಞಾನವು ವೈದಿಕ ಜ್ಞಾನದ ಅನುಕರಣೆ ! – ವಿವಾನ್

ವಿವಾನ್ 16ನೇ ವಯಸ್ಸಿನಲ್ಲಿ ‘ದಿ ಸನಾತನ ಧರ್ಮ: ಟ್ರೂ ಸೋರ್ಸ್ ಆಫ್ ಆಲ್ ಸೈನ್ಸ್’ (ಸನಾತನ ಧರ್ಮ: ಸಮಗ್ರ ವಿಜ್ಞಾನದ ಮೂಲ ಮೂಲ) ಎಂಬ ಮೊದಲ ಪುಸ್ತಕವನ್ನು ಬರೆದರು. 46 ಅಧ್ಯಾಯಗಳ ಈ ಪುಸ್ತಕದಲ್ಲಿ ಅವರು ವೇದಗಳ ಉಲ್ಲೇಖಗಳನ್ನು ನೀಡಿ ಪಾಶ್ಚಾತ್ಯ ವಿಜ್ಞಾನದ ಸಂಶೋಧನೆಗಳಿಗೆ ಸವಾಲು ಹಾಕಿದರು. ‘ಆಧುನಿಕ ವಿಜ್ಞಾನವು ಕೇವಲ ವೈದಿಕ ಜ್ಞಾನದ ಅನುಕರಣೆ ಮಾತ್ರ’ ಎಂದು ಅವರು ಹೇಳಿದ್ದಷ್ಟೇ ಅಲ್ಲದೆ, ಅದನ್ನು ಸಾಬೀತುಪಡಿಸಿದ್ದಾರೆ. ಈ ಕುರಿತಾದ ಮಾಹಿತಿ ಈ ಪುಸ್ತಕದಲ್ಲಿದೆ.

(ಸೌಜನ್ಯ – Vivaan’s Proudcast)

ಈ ಪುಸ್ತಕವನ್ನು ಅಯೋಧ್ಯೆಯಲ್ಲಿ ಜನವರಿ 22, 2024 ರಂದು ನಡೆದ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಶ್ರೀರಾಮಲಲ್ಲನ ಚರಣಗಳಿಗೆ ಸಮರ್ಪಿಸಿ ಅನಾವರಣಗೊಳಿಸಲಾಯಿತು. ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮಹಾಸಚಿವ ಶ್ರೀ. ಚಂಪತ ರಾಯ್ ಅವರು ಸಹ ಈ ಪುಸ್ತಕವನ್ನು ಅವಲೋಕಿಸಿದ್ದಾರೆ.

ತಂತ್ರಜ್ಞಾನದ ಮೂಲ ಸನಾತನ ಧರ್ಮವೇ! – ವಿವಾನ್

17ನೇ ವಯಸ್ಸಿನಲ್ಲಿ ವಿವಾನ್ ಎರಡನೇ ಪುಸ್ತಕ ‘ದಿ ಸನಾತನ ಧರ್ಮ: ಟ್ರೂ ಸೋರ್ಸ್ ಆಫ್ ಆಲ್ ಟೆಕ್ನಾಲಜಿ’ (ಸನಾತನ ಧರ್ಮ: ಸಮಗ್ರ ತಂತ್ರಜ್ಞಾನದ ಮೂಲ ಮೂಲ) ಎಂಬ ಪುಸ್ತಕವನ್ನು ಬರೆದರು. ಈ ಪುಸ್ತಕವನ್ನು ನವೆಂಬರ್ 15, 2024 ರಂದು ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ‘ಇಸ್ರೋ’ ಅಧ್ಯಕ್ಷ ಎಸ್. ಸೋಮನಾಥ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಅವರ ಸಮ್ಮುಖದಲ್ಲಿ ಪ್ರಕಟಿಸಲಾಯಿತು. ಪುಸ್ತಕದ ಮರಾಠಿ ಆವೃತ್ತಿಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಗುಜರಾತಿ ಆವೃತ್ತಿಯನ್ನು ಕೇಂದ್ರ ಜಲಶಕ್ತಿ ಸಚಿವ ಮತ್ತು ಭಾಜಪದ ಗುಜರಾತ ಪ್ರದೇಶಾಧ್ಯಕ್ಷ ಸಿ.ಆರ್. ಪಾಟೀಲ್ ಅವರು ಅನಾವರಣಗೊಳಿಸಿದರು.

ವಿವಾನ್ ಕರುಳ್ಕರ್ ಅವರ ಕುಟುಂಬ ಮತ್ತು ಹಿಂದುತ್ವದ ಪರಂಪರೆ!

ವಿವಾನ್ ಪ್ರಖ್ಯಾತ ಉದ್ಯಮಿ ಮತ್ತು ಸಮಾಜ ಸೇವಕ ಶ್ರೀ. ಪ್ರಶಾಂತ ಕರುಳ್ಕರ್ ಮತ್ತು ಶೀತಲ ಕರುಳ್ಕರ್ ಅವರ ಪುತ್ರರಾಗಿದ್ದಾರೆ. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದ ಕರುಳ್ಕರ್ ಕುಟುಂಬದ ನಾಲ್ಕನೇ ಪೀಳಿಗೆಯವರಾಗಿದ್ದಾರೆ. ಅವರ ಕುಟುಂಬವು ದೇಶಹಿತಕ್ಕಾಗಿ ಮಾಡಿದ ಕೊಡುಗೆಯನ್ನು ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಅನೇಕ ಕಡೆಗಳಲ್ಲಿ ಗೌರವಿಸಲಾಗಿದೆ.

ಜಗತ್ತಿನಾದ್ಯಂತ ವಿವಾನ್ ಅವರ ಕಾರ್ಯವನ್ನು ಗೌರವಿಸಲಾಗಿದೆ!

1. ‘ವರ್ಲ್ಡ್ ರೆಕಾರ್ಡ್ಸ್ ಯೂನಿವರ್ಸಿಟಿ’ ಸನಾತನ ಧರ್ಮದ ಕುರಿತು ಪುಸ್ತಕ ಬರೆದ ಅತ್ಯಂತ ಕಿರಿಯ ಲೇಖಕ ಎಂದು ವಿವಾನ್‌ಗೆ ‘ಗೌರವ ಡಾಕ್ಟರೇಟ್’ (ಹಾನೊರಿಸ್ ಕೌಸಾ) ಪ್ರಶಸ್ತಿಯನ್ನು ನೀಡಿದೆ.

2. ವಿಶ್ವಸಂಸ್ಥೆಯಲ್ಲಿ ವಿಶೇಷ ಆಹ್ವಾನಿತರಾಗಿ ತಮ್ಮ ಪುಸ್ತಕವನ್ನು ಪ್ರಸ್ತುತಪಡಿಸಿದರು. ‘ಸೆಕ್ಯೂರಿಟಿ ಕೌನ್ಸಿಲ್ ಹಾಲ್’ನಲ್ಲಿ ಅವರ ಪುಸ್ತಕವನ್ನು ಪ್ರಕಟಿಸಲಾಯಿತು.

3. ಬಕಿಂಗ್‌ಹ್ಯಾಮ್ ಅರಮನೆಯಿಂದ ರಾಜಮನೆತನದ ಗೌರವ ಮತ್ತು ರಾಜಮನೆತನದ ನಾಣ್ಯವನ್ನು ನೀಡಿ ಅವರಿಗೆ ಸನ್ಮಾನಿಸಲಾಯಿತು.

4. ಬ್ರಿಟನ್‌ನ ಪ್ರಧಾನ ಮಂತ್ರಿ ಕೀಯರ್ ಸ್ಟಾರ್ಮರ್ ತಮ್ಮ ಪುಸ್ತಕವನ್ನು ಸಂಸತ್ತಿನಲ್ಲಿ ಉಲ್ಲೇಖಿಸಿ, ಅವರನ್ನು ’10, ಡೌನಿಂಗ್ ಸ್ಟ್ರೀಟ್’ಗೆ ಆಹ್ವಾನಿಸಿದರು.

5. ಬ್ರಿಟನ್ ಸಂಸತ್ತಿನ ‘ಹೌಸ್ ಆಫ್ ಕಾಮನ್ಸ್’ನ ಬ್ಯಾಡ್ಜ್ ಮತ್ತು ಗೌರವ ಚಿಹ್ನೆಯನ್ನು ನೀಡಿ ಕ್ಯಾಬಿನೆಟ್ ಮಂತ್ರಿ ಗ್ಯಾರೆತ್ ಥಾಮಸ್ ಅವರನ್ನು ಗೌರವಿಸಿದರು.

6. ಲಂಡನ್ ಮೇಯರ್ ಸಲೀಂ ಚೌಧರಿ ಮತ್ತು ಉಪಮೇಯರ್ ಅಂಜನಾ ಪಟೇಲ್ ಅವರು ಸಹ ಅವರನ್ನು ಸನ್ಮಾನಿಸಿದ್ದಾರೆ.

7. ಅವರ ಪುಸ್ತಕಗಳು ಸ್ವಿಟ್ಜರ್ಲೆಂಡ್, ಬ್ರಿಟನ್, ಐರ್ಲೆಂಡ್, ನೇಪಾಳ ಮತ್ತು ಶ್ರೀಲಂಕಾದ ಸಂಸತ್ತುಗಳು, ಹಾಗೆಯೇ ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯ, ಲಾಸ್ ಏಂಜಲೀಸ್, ನ್ಯೂಯಾರ್ಕ್ ಮತ್ತು ‘ವರ್ಲ್ಡ್ ಕಮ್ಯುನಿಕೇಷನ್ ಫೋರಂ, ದಾವೋಸ್’ (ಸ್ವಿಟ್ಜರ್ಲೆಂಡ್) ನಲ್ಲಿ ಮಾನ್ಯತೆ ಪಡೆದಿವೆ.

8. ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಧೀರಜ ಸೇಠ್ ಅವರು ಅವರಿಗೆ ಪ್ರಶಂಸಾಪತ್ರವನ್ನು ನೀಡಿ ಗೌರವಿಸಿದ್ದಾರೆ.

9. ಭಾಜಪದ ಪ್ರಧಾನ ಕಚೇರಿಯ ರಾಷ್ಟ್ರೀಯ ಗ್ರಂಥಾಲಯದಲ್ಲಿ ಅವರ ಪುಸ್ತಕವನ್ನು ಸೇರಿಸಲಾಗಿದೆ.

10. ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಮತ್ತು ಪ್ರಧಾನ ಮಂತ್ರಿಯ ಆರ್ಥಿಕ ಸಲಹೆಗಾರ ಸಂಜೀವ ಸನ್ಯಾಲ್ ಅವರು ವಿವಾನ್ ಅವರ ಇಲ್ಲಿಯವರೆಗಿನ ಕಾರ್ಯವನ್ನು ಶ್ಲಾಘಿಸಿದ್ದಾರೆ.

11. ಆಧ್ಯಾತ್ಮಿಕ ಸಂತ ಶ್ರೀ ಶ್ರೀ ರವಿಶಂಕರ, ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮುಂತಾದ ಸಂತರು ಸಹ ಅವರಿಗೆ ಆಶೀರ್ವಾದ ನೀಡಿದ್ದಾರೆ.

12. ಭಾರತೀಯ ಜೀವ ವಿಮಾ ನಿಗಮದ ಅಧ್ಯಕ್ಷ ಸಿದ್ಧಾರ್ಥ್ ಮೊಹಂತಿ ಅವರು ಅವರ ಕಾರ್ಯವನ್ನು ಅಭಿನಂದಿಸಿದ್ದಾರೆ.

13. ದೇಶಾದ್ಯಂತದ ಹಿರಿಯ ಸಚಿವರು, ‘ಐ.ಎ.ಎಸ್.’, ‘ಐ.ಆರ್.ಎಸ್.’ ಮತ್ತು ‘ಐ.ಪಿ.ಎಸ್.’ ಅಧಿಕಾರಿಗಳು ವಿವಾನ್ ಅವರ ಕಾರ್ಯದ ಬಗ್ಗೆ ಕಾಲಕಾಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.