
ಭಕ್ತನು ಭಗವಂತನಿಗೆ (ಪಾಂಡುರಂಗನಿಗೆ) ಯಾವುದರಿಂದ ಆನಂದವಾಗುತ್ತದೆ, ಆ ರೀತಿಯಲ್ಲಿ ವರ್ತಿಸುವುದು ಆವಶ್ಯಕವಿದೆ. ಇದಕ್ಕಾಗಿ ಅವನು ಭಾವಸ್ಥರದಲ್ಲಿದ್ದು ಪ್ರತಿಯೊಂದು ಕಾರ್ಯವನ್ನು ಮಾಡಬೇಕು. ವಾರಕರಿಗಳು ದೇವರನ್ನು ಭೇಟಿಯಾಗಲು ಉತ್ಸುಕರಾಗಿರುವುದರಿಂದ ಅವರು ಹಾಗೆ ಮಾಡುತ್ತಾರೆ. ಅವರು ಪಾಂಡುರಂಗನ ಹೆಸರನ್ನು ಜಪಿಸುತ್ತಾ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಾ ಭಗವಂತನನ್ನು ಭೇಟಿಯಾಗಲು ಆನಂದದಿಂದ ಹೋಗುವಾಗ ದಾರಿಯಲ್ಲಿ ಅವರು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ; ಆದರೆ ಪಾಂಡುರಂಗನ ಭೇಟಿಯ ಉತ್ಸುಕತೆಯಿಂದಾಗಿ ವಾರಕರಿಗಳಿಗೆ ಅದೇನು (ಸಂಕಟದ) ಅನಿಸುವುದಿಲ್ಲ. ಭಗವಂತನು ಅವರಲ್ಲಿರುವ ಭಾವವನ್ನು ಅರಿತು ಅವರ ಭೇಟಿಗಾಗಿ ಉತ್ಸುಕನಾಗಿರುತ್ತಾನೆ.
ಹೇಗೆ ತಾವರೆಯ ಎಲೆಯು ನೀರಿನಲ್ಲಿದ್ದರು ಅದಕ್ಕೆ ನೀರಿನ ಸ್ಪರ್ಶವಾಗುವುದಿಲ್ಲ, ಅದೇ ರೀತಿಯಲ್ಲಿ ಪ್ರತಿಯೊಂದು ಕಾರ್ಯ ಮಾಡುವಾಗ ಶಾಶ್ವತ ಚೈತನ್ಯದ ಸಾನಿಧ್ಯದಲ್ಲಿದ್ದರೆ ಆ ಜೀವವು ಮಾಯೆಯ ಭೌತಿಕ ಭೋಗಗಳ ಭವಬಂಧನದಿಂದ ತೇಲಿ ಹೋಗಿ ನಿರಂತರ ಆನಂದದಲ್ಲಿರುತ್ತದೆ. ಅಂತಹ ಭಕ್ತನು ಭಗವಂತನಿಗೆ ಪ್ರಿಯನಾಗಿರುತ್ತಾನೆ.
– ಪರಾತ್ಪರ ಗುರು ಪರಶರಾಮ ಮಾಧವ ಪಾಂಡೆ
(ಆಧಾರ : ಸನಾತನದ ನಿರ್ಮಿತ ಮರಾಠಿ ಗ್ರಂಥ – ಪಂಡರಿಯ ಮೊದಲ ವಾರಕರಿ (ಪಾಂಡುರಂಗ) ಪಾಂಡುರಂಗನ ಮಾಹತ್ಮೆ ಮತ್ತು ಪಂಢರಿಯ ಕಾಲ್ನಡಿಗೆಯ ವೈಶಿಷ್ಟ್ಯ ಸಹಿತ)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !