|

ಬೆರೂತ (ಲೆಬನಾನ್) – ಇಸ್ರೇಲ್ನ ನೆರೆಯ ರಾಷ್ಟ್ರವಾದ ಲೆಬನಾನ್ನಲ್ಲಿ ಸೆಪ್ಟೆಂಬರ್ 17 ರಂದು ಹಿಜ್ಬುಲ್ಲಾ ಭಯೋತ್ಪಾದಕರ ಬಳಿಯಿದ್ದ ಪೇಜರ್ಗಳಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು 4 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇವರಲ್ಲಿ 400 ಜನರ ಸ್ಥಿತಿ ಚಿಂತಾಜನಕವಾಗಿದೆಯೆಂದು ಹೇಳಲಾಗಿದೆ. ಗಾಯಗೊಂಡವರಲ್ಲಿ ಲೆಬನಾನನಲ್ಲಿ ಇರಾನ್ನ ರಾಯಭಾರಿಯೂ ಸೇರಿದ್ದಾರೆ. ಹೆಚ್ಚಿನ ಪೇಜರ್ಗಳು ಜನರ ಕೈಯಲ್ಲಿ ಅಥವಾ ಕಿಸೆಯಲ್ಲಿರುವಾಗ ಸ್ಫೋಟಗೊಂಡವು. ಈ ಸ್ಫೋಟದಲ್ಲಿ 500 ಕ್ಕೂ ಹೆಚ್ಚು ಹಿಜ್ಬುಲ್ಲಾ ಭಯೋತ್ಪಾದಕರು ತಮ್ಮ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಈ ಸ್ಫೋಟಗಳ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಹಿಜ್ಬುಲ್ಲಾ ಸಂಘಟನೆಯು ಸಂಭಾಷಣೆ ನಡೆಸಲು ಪೇಜರ್ಗಳನ್ನು ಅತ್ಯಂತ ಸುರಕ್ಷಿತ ಸಾಧನವಾಗಿ ಉಪಯೋಗಿಸುತ್ತಿತ್ತು. ಹಿಜ್ಬುಲ್ಲಾ ಈ ಪ್ರಕರಣದಲ್ಲಿ ಇಸ್ರೇಲನ್ನು ಆರೋಪಿಸಿದೆ. ಈ ಬಗ್ಗೆ ಇಸ್ರೇಲ್ನಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಿಜ್ಬುಲ್ಲಾ ‘ಈ ದಾಳಿಗೆ ಇಸ್ರೇಲ್ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ’, ಬೆದರಿಕೆ ಹಾಕಿದೆ.
Hezbollah Threatens Israel#HEZBOLLAH , a terrorist organization, threatens revenge for the Pager attack
In Lebanon, the Pager explosions have claimed the lives of 11 people so far, with more than 4,000 injured.
Israel is being accused of orchestrating the explosions.
There… pic.twitter.com/m9GTkhFXGU
— Sanatan Prabhat (@SanatanPrabhat) September 18, 2024
ಪೇಜರ್ ಎಂದರೇನು ?
ಪೇಜರ್ ಒಂದು ವಾಯರ್ಲೆಸ್ ಉಪಕರಣವಾಗಿದೆ. ಇದನ್ನು ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಬಳಸಲಾಗುತ್ತದೆ. ಇದು ಸಾಮಾನ್ಯವಾಗಿ ಸಣ್ಣ ಪರದೆ ಮತ್ತು ಸೀಮಿತ ‘ಕೀಪ್ಯಾಡ್’ನೊಂದಿಗೆ ಬರುತ್ತದೆ. ಇದರ ಸಹಾಯದಿಂದ ಸಂದೇಶಗಳನ್ನು ಅಥವಾ ಎಚ್ಚರಿಕೆಗಳನ್ನು ತ್ವರಿತವಾಗಿ ಸ್ವೀಕರಿಸಬಹುದು. ಮೊಬೈಲ್ ಫೋನಗಿಂತಲೂ ಮೊದಲು ಪೇಜರ್ ಗಳ ಬಳಕೆ ಪ್ರಚಲಿತದಲ್ಲಿತ್ತು. ನಂತರ ಅದರ ಬಳಕೆ ಕ್ರಮೇಣ ಕಡಿಮೆಯಾಯಿತು. ಲೆಬನಾನ್ನಲ್ಲಿ ಈಗಲೂ ಅವುಗಳನ್ನು ಬಳಸಲಾಗುತ್ತದೆ.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!