Kargil War2 Prediction : ಎರಡನೆಯ ಕಾರ್ಗಿಲ್ ಯುದ್ಧ ಮಾಡುವ ಯೋಚನೆಯಲ್ಲಿ ಪಾಕಿಸ್ತಾನ !

ಜಮ್ಮು ಕಾಶ್ಮೀರದ ಮಾಜಿ ಪೊಲೀಸ ಅಧಿಕಾರಿ ಎಸ್.ಪಿ. ವೇದ ಇವರ ದಾವೆ !

ಜಮ್ಮು – ಜಮ್ಮು ಕಾಶ್ಮೀರದ ಮಾಜಿ ಪೊಲೀಸ ಅಧಿಕಾರಿ ಎಸ್.ಪಿ. ವೇದ ಇವರ ಪ್ರಕಾರ, ಪಾಕಿಸ್ತಾನ ಮತ್ತೊಮ್ಮೆ ಕಾರ್ಗಿಲ್ ಯುದ್ಧದಂತೆ ಷಡ್ಯಂತ್ರ ರಚಿಸುತ್ತಿದೆ. ಕಾಶ್ಮೀರ ಕಣಿವೆಯಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನಿ ಸೈನ್ಯದ ಅಧಿಕಾರಿ ಆದಿಲ ರಹಮನಿ ಇವರ ಕೈವಾಡವಿದೆ. ಆದಿಲ್ ರಹಮಾನಿ ಇವರ ನೇತೃತ್ವದಲ್ಲಿ ‘ಸ್ಪೆಷಲ್ ಸರ್ವಿಸ್ ಗ್ರೂಪ್’ನ (ಎಸ್.ಎಸ್.ಜಿ. ಯ) ಸುಮಾರು ೬೦೦ ಕಮಾಂಡೋಗಳು ಇದಕ್ಕಾಗಿ ಸಿದ್ಧಗೊಳಿಸಲಾಗಿದೆ. ಈ ಕಮಾಂಡೋಗಳು ಉನ್ನತ ತರಬೇತಿ ಪಡೆದಿದ್ದಾರೆ ಮತ್ತು ಅವರಲ್ಲಿ ಅನೇಕರು ಭಾರತದಲ್ಲಿ ನುಗ್ಗಿದ್ದಾರೆ. ಈಗ ಜಮ್ಮು ಕಾಶ್ಮೀರದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯಲ್ಲಿ ಇದೇ ತಂಡದ ಕೈವಾಡವಿದೆ.

ವೇದ ಇವರು, ನಸುಳಿರುವ ಕಮಾಂಡೋಗಳಿಗೆ ಕಣಿವೆಯಲ್ಲಿನ ಸಕ್ರಿಯ ಸ್ಥಳೀಯ ಜನರೂ ಪರಿಸರದ ಮಾಹಿತಿ ಮತ್ತು ಆವಶ್ಯಕ ಸಹಾಯ ಮಾಡುತ್ತಿದ್ದಾರೆ. (ಕಾಶ್ಮೀರ ಕಣಿವೆಯಲ್ಲಿನ ಸಂಬಂಧಿತ ಸ್ಥಳೀಯರಿಗೆ ಹುಡುಕಿ ಗಲ್ಲಿಗೇರಿಸಲು ಭಾರತ ಸರಕಾರ ಪ್ರಯತ್ನ ಮಾಡಬೇಕು, ಹೀಗೆ ಸೂಕ್ಷ್ಮಸಂವೇದನೆಯ ಪ್ರತಿಕ್ರಿಯೆ ಭಾರತೀಯ ಹಾಗೂ ಭಾರತೀಯ ಸೈನಿಕರು ವ್ಯಕ್ತಪಡಿಸಿದರೆ, ಅದರಲ್ಲಿ ಆಶ್ಚರ್ಯ ಅನಿಸಬಾರದು ! – ಸಂಪಾದಕರು) ಅವರ ಭಾರತೀಯ ಸೈನ್ಯದ ‘೧೫ ಕೋರ್’ ಮತ್ತು ‘೧೬ ಕೋರ್’ ಈ ತುಕಡಿಗಳ ಮೇಲೆ ದಾಳಿ ನಡೆಸುವ ಪ್ರಯತ್ನವಿದೆ. ಇದಲ್ಲದೆ ಈ ತಂಡದ ಇನ್ನು ೨ ಬಟಾಲಿಯನ್ (೨ ಸಾವಿರ ಸೈನಿಕರು) ಸಜ್ಜಾಗಿದ್ದಾರೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನ ಎರಡನೆಯ ಕಾರ್ಗಿಲ್ ಯುದ್ಧ ಮಾಡುವ ಷಡ್ಯಂತ್ರ ರಚಿಸುತ್ತಿದೆ ಮತ್ತು ಭಾರತ ಯುದ್ಧ ನಡೆಯುವ ದಾರಿ ಕಾಯುತ್ತಿದೆ ಇದು ಲಜ್ಜಾಸ್ಪದ ! ಹೀಗೆ ಇನ್ನೂ ಎಷ್ಟು ವರ್ಷ ನಡೆಯುವುದು ?