
ಸ್ವೇಚ್ಛೆಯ ಎರಡು ವಿಧಗಳು !
ಸಾಧನೆ ಮಾಡುವವರು ಮುಂದೆ ಜನ್ಮ ಬೇಡ; ಸಾಧನೆ ಮಾಡಿ ಈ ಜನ್ಮದಲ್ಲಿಯೇ ಮೋಕ್ಷ ಪಡೆಯಬೇಕು, ಎಂಬ ಇಚ್ಛೆಯನ್ನು ಇಟ್ಟುಕೊಂಡಿರುತ್ತಾರೆ. ತದ್ವಿರುದ್ಧ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ಜನರಿಗೆ, ಧರ್ಮಕಾರ್ಯ ಮಾಡುವುದಕ್ಕಾಗಿ ಮತ್ತೆ-ಮತ್ತೆ ಜನ್ಮಕ್ಕೆ ಬರಬೇಕು ಎಂದೆನಿಸುತ್ತದೆ. ಒಂದು ವೇಳೆ ಇದನ್ನು ಸ್ವೇಚ್ಛೆ ಎನ್ನುವುದಾದರೆ ಮುಂದಿನ ಜನ್ಮ ಬೇಡ, ಎನ್ನುವುದು ಸಹ ಸ್ವೇಚ್ಛೆಯೇ ಆಗಿದೆ.
ಧರ್ಮದ ಬಗ್ಗೆ ಎಳ್ಳಷ್ಟೂ ಅಧ್ಯಯನ ಇಲ್ಲದಿರುವ ನಿರರ್ಥಕ ಬುದ್ಧಿವಾದಿಗಳು !
ಆದಿ ಶಂಕರಾಚಾರ್ಯರು ವಿರೋಧಿ ಪಂಡಿತರೊಂದಿಗೆ ವಾದ ಮಾಡಿ ಅವರನ್ನು ಪರಾಜಯಗೊಳಿಸಿದರು; ಆದರೆ ಇಂದಿನ ಬುದ್ಧಿವಾದಿಗಳೊಂದಿಗೆ ಮತ್ತು ಧರ್ಮದ್ರೋಹಿಗಳೊಂದಿಗೆ ವಾದ ಮಾಡಿ ಅವರನ್ನು ಪರಾಜಯಗೊಳಿಸಲು ಸಾಧ್ಯವಿಲ್ಲ; ಏಕೆಂದರೆ ಅವರಲ್ಲಿ ಧರ್ಮದ ಬಗ್ಗೆ ಎಳ್ಳಷ್ಟೂ ಅಧ್ಯಯನ ಇಲ್ಲದಿರುವ ಕಾರಣ ಅವರು ವಾದ ಮಾಡಲು ಮುಂದೆ ಬರುವುದಿಲ್ಲ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !