ಭಾರತದಲ್ಲಿ ಮಸೀದಿ ಇತ್ಯಾದಿ ಮಾಧ್ಯಮಗಳಿಂದ ಸಂಗ್ರಹಿಸಿದ ಹಣವು ಉಗ್ರವಾದಿ ಕೃತ್ಯಗಳಿಗೆ ಬಳಕೆ !

‘ಎಫ್‌.ಎ.ಟಿ.ಎಫ್‌.’ ಎಂಬ ಜಾಗತಿಕ ಸಂಸ್ಥೆಯ ವರದಿಯಲ್ಲಿ ಮಾಹಿತಿ !

ನವ ದೆಹಲಿ – ಇತ್ತೀಚೆಗೆ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವ ದೇಶಗಳ ಮೇಲೆ ಕ್ರಮ ಕೈಗೊಳ್ಳುವ ‘ಎಫ್‌.ಎ.ಟಿ.ಎಫ್‌.’ ಅಂದರೆ ‘ಫೈನಾನ್ಶಿಯಲ್‌ ಆಕ್ಷನ್‌ ಟಾಸ್ಕ್ ಫೋರ್ಸ್‌’ ಈ ಜಾಗತಿಕ ಸಂಸ್ಥೆಯು ‘ಕ್ರೌಡ್‌ ಫಂಡಿಂಗ್‌ ಫಾರ್‌ ಟೆರರಿಸಂ ಫೈನಾನ್ಸಿಂಗ್’ (ಸಮಾಜಕ್ಕೆ ಹಣ ನೀಡಲು ಕರೆ ನೀಡಿ ಆ ಹಣವನ್ನು ಭಯೋತ್ಪಾದನೆಯನ್ನು ಹೆಚ್ಚಿಸಲು ಬಳಸುವುದು) ಹೆಸರಲ್ಲಿ ಒಂದು ವರದಿಯನ್ನು ಪ್ರಕಟಿಸಿದೆ. ಈ ವರದಿಯ ಪುಟ ಸಂಖ್ಯೆ ೩೮ ರಲ್ಲಿ ಭಾರತೀಯ ಅಧಿಕಾರಿಗಳು ನೀಡಿರುವ ಮಾಹಿತಿಯ ಉಲ್ಲೇಖವಿದೆ. ಇದರಲ್ಲಿ ಭಾರತದ ಒಂದು ಮೂಲಭೂತವಾದಿ ಸಂಘಟನೆಯು ಯೋಜನಾಬದ್ಧವಾಗಿ ಜಾಲವನ್ನು ಹೆಣೆದು ದೇಶಾದ್ಯಂತ ಹಣ ಸಂಗ್ರಹಿಸಿದೆ. ಮಸೀದಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ದೇಣಿಗೆ ನೀಡುವಂತೆ ಆಗ್ರಹಿಸಿ ಪ್ರತ್ಯಕ್ಷವಾಗಿ ಹಾಗೂ ಆನ್‌ಲೈನ್‌ ಪದ್ಧತಿಯಿಂದ ಹಣವನ್ನು ಸಂಗ್ರಹಿಸಲಾಗಿದೆ. ಇದಕ್ಕಾಗಿ ೩ ಸಾವಿರ ಬ್ಯಾಂಕ್‌ ಖಾತೆಗಳನ್ನು ಬಳಸಲಾಗಿದೆ. ಜನರಿಗೆ ‘ಕ್ಯೂಆರ್‌ ಕೋಡ್’ ಮತ್ತು ಬ್ಯಾಂಕ್‌ ಖಾತೆ ಇವುಗಳ ವಿವರಗಳನ್ನು ನೀಡಿ ಹಣವನ್ನು ಕಳುಹಿಸುವಂತೆ ಕರೆ ನೀಡಲಾಯಿತು. ಇವುಗಳ ಮೂಲಕ ಸಂಗ್ರಹವಾದ ಹಣವನ್ನು ಶಸ್ತ್ರಾಸ್ತ್ರಗಳನ್ನು ಖರೀದಿಸಲು ಮತ್ತು ಭಯೋತ್ಪಾದಕರನ್ನು ಸೃಷ್ಟಿಸಲು ಬಳಸಲಾಗುತ್ತಿದೆ.

ಈ ವರದಿಯಲ್ಲಿ ಸಂಬಂಧಿಸಿದ ಸಂಘಟನೆಯ ಹೆಸರನ್ನು ಉಲ್ಲೇಖಿಸದಿದ್ದರೂ, ‘ಇಂಡಿಯನ್‌ ಎಕ್ಸ್‌ಪ್ರೆಸ್’ ಆಂಗ್ಲ ದಿನಪತ್ರಿಕೆಯು ಈ ಸಂಘಟನೆಯನ್ನು ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ’ (ಪಿ.ಎಫ್‌.ಐ.) ಆಗಿದೆಯೆಂದು ಹೇಳಲಾಗಿದೆ. ಈ ಜಿಹಾದಿ ಭಯೋತ್ಪಾದಕ ಸಂಘಟನೆಯನ್ನು ಕಳೆದ ವರ್ಷ ಕೇಂದ್ರ ಸರಕಾರವು ನಿಷೇಧಿಸಿದೆ. ಈ ಹಣದಿಂದ ನಿಯಮಿತ ಆದಾಯವನ್ನು ಪಡೆಯಲು ಭೂಮಿ ಖರೀದಿ-ಮಾರಾಟ ಮತ್ತು ಇತರ ವ್ಯವಹಾರಗಳಲ್ಲಿ ಹೂಡಿಕೆ ಮಾಡಲಾಯಿತು. ಈ ಪ್ರಕರಣದಲ್ಲಿ ೮ ಮೂಲಭೂತವಾದಿಗಳನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸುವುದರೊಂದಿಗೆ ಅವರಿಂದ ಮೂರೂವರೆ ಕೋಟಿ ರೂಪಾಯಿಗಳನ್ನು ವಶಪಡಿಸಿ ಕೊಂಡಿರುವುದಾಗಿ ‘ಎಫ್‌.ಎ.ಟಿ.ಎಫ್‌.’ನ ವರದಿಯಲ್ಲಿ ನಮೂದಿಸಲಾಗಿದೆ.

ಸಂಪಾದಕೀಯ ನಿಲುವು

‘ಭಯೋತ್ಪಾದನೆಗೆ ಧರ್ಮವಿರುವುದಿಲ್ಲ’ ಎಂದು ಕಿರುಚಾಡುವ ಕಾಂಗ್ರೆಸ್ಸಿಗರು ‘ಕೇಸರಿ ಭಯೋತ್ಪಾದನೆ’ ಹೆಸರಿನಿಂದ ಹಿಂದೂಗಳನ್ನು ಅಪರಾಧಿಗಳೆಂದು ನಿರ್ಧರಿಸುತ್ತಾರೆ. ಈಗ ಹಿಂದೂಗಳು ‘ಎಫ್‌.ಎ.ಟಿ.ಎಫ್‌.’ನ ವರದಿಯಿಂದ ಕಾಂಗ್ರೆಸ್ಸಿಗರಿಗೆ ಪ್ರಶ್ನಿಸಬೇಕು. ಜಾತ್ಯತೀತದ ಬುರ್ಖಾ ತೊಟ್ಟು ಮುಸಲ್ಮಾನರನ್ನು ಓಲೈಸುವ ಈಗಿನ ಭಾರತೀಯ ವ್ಯವಸ್ಥೆಯಿಂದ ಜಿಹಾದಿ ಭಯೋತ್ಪಾದನೆಯ ಬೇರುಗಳ ನಾಶವಾಗುವುದು ಅಸಾಧ್ಯವಾಗಿದೆ ! ಅದಕ್ಕಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿ !