ಯುಗಾದಿ ಪಾಡ್ಯದಂದು (ಏಪ್ರಿಲ್ ೧೩) ಮಾಡಬೇಕಾದ ಧಾರ್ಮಿಕ ಕೃತಿಗಳು

ಅಭ್ಯಂಗಸ್ನಾನ

ಶರೀರಕ್ಕೆ ಎಣ್ಣೆ ಹಚ್ಚಿ ಅದನ್ನು ತಿಕ್ಕಿ ತ್ವಚೆಯಲ್ಲಿ ಇಂಗಿಸಿ ನಂತರ ಬಿಸಿನೀರಿನಿಂದ ಸ್ನಾನ ಮಾಡುವುದೆಂದರೆ ಅಭ್ಯಂಗಸ್ನಾನ. ಯುಗಾದಿ ಪಾಡ್ಯದಂದು ಮುಂಜಾನೆ ಬೇಗನೇ ಎದ್ದು ಮೊದಲು ಅಭ್ಯಂಗ ಸ್ನಾನ ಮಾಡಬೇಕು. ಅಭ್ಯಂಗಸ್ನಾನ ಮಾಡುವಾಗ ದೇಶಕಾಲಕಥನ ಮಾಡಬೇಕು ತೋರಣ ಕಟ್ಟುವುದು ಸ್ನಾನದ ಬಳಿಕ ಮಾವಿನ ಎಲೆಯ ತೋರಣವನ್ನು ತಯಾರಿಸಿ ಕೆಂಪು ಹೂವುಗಳೊಂದಿಗೆ ಕಟ್ಟಬೇಕು; ಏಕೆಂದರೆ ಕೆಂಪು ಬಣ್ಣವು ಶುಭ ಸೂಚಕವಾಗಿದೆ.

ಸಂವತ್ಸರ ಪೂಜೆ

ಮೊದಲು ನಿತ್ಯಕರ್ಮ ಮಾಡಿ ದೇವರ ಪೂಜೆಯನ್ನು ಮಾಡಬೇಕು. ‘ವರ್ಷದ ಪಾಡ್ಯದಂದು ಮಹಾಶಾಂತಿ ಮಾಡಬೇಕು. ಶಾಂತಿಯ ಪ್ರಾರಂಭದಲ್ಲಿ ಬ್ರಹ್ಮದೇವನ ಪೂಜೆಯನ್ನು ಮಾಡಬೇಕು ಪೂಜೆಯಲ್ಲಿ ಅವನಿಗೆ ದವನವನ್ನು (ಸುವಾಸನೆಯ ಎಲೆಗಳನ್ನು) ಅರ್ಪಿಸಬೇಕು. ಅನಂತರ ಹೋಮ-ಹವನ ಮತ್ತು ಬ್ರಾಹ್ಮಣಸಂತರ್ಪಣೆ ಮಾಡಬೇಕು. ತರುವಾಯ ಅನಂತರೂಪಗಳಲ್ಲಿ ಅವತರಿಸುವ ಶ್ರೀವಿಷ್ಣುವಿನ ಪೂಜೆ ಯನ್ನು ಮಾಡಬೇಕು. ‘ನಮಸ್ತೇ ಬಹುರೂಪಾಯ ವಿಷ್ಣವೇ ನಮಃ |, ಎನ್ನುವ ಮಂತ್ರವನ್ನು ಹೇಳಿ ಅವನಿಗೆ ನಮಸ್ಕರಿಸಬೇಕು. ಅನಂತರ ಬ್ರಾಹ್ಮಣರಿಗೆ ದಕ್ಷಿಣೆಯನ್ನು ನೀಡಬೇಕು.

ಬ್ರಹ್ಮಧ್ವಜವನ್ನು ಏರಿಸುವುದು

೧. ಬ್ರಹ್ಮಧ್ವಜವನ್ನು ಸೂರ್ಯೋದಯದ ನಂತರ ಕೂಡಲೇ ನಿಲ್ಲಿಸಬೇಕಾಗಿರುತ್ತದೆ. ಅಪವಾದಾತ್ಮಕ ಸ್ಥಿತಿಯಲ್ಲಿ (ಉದಾ. ತಿಥಿಕ್ಷಯ) ಪಂಚಾಂಗವನ್ನು ನೋಡಿ ಬ್ರಹ್ಮಧ್ವಜವನ್ನು ನಿಲ್ಲಿಸಬೇಕು.

. ದೊಡ್ಡ ಕೋಲಿನ ತುದಿಗೆ ಹಸಿರು ಅಥವಾ ಹಳದಿ ಬಣ್ಣದ ಜರಿಯ ಖಣವನ್ನು ಕಟ್ಟುತ್ತಾರೆ. ಅದರ ಮೇಲೆ ಸಕ್ಕರೆಯ ಗಂಟು, ಬೇವಿನ ಚಿಗುರೆಲೆ, ಮಾವಿನ ಎಲೆ ಮತ್ತು ಕೆಂಪು ಹೂವುಗಳ ಹಾರವನ್ನು ಕಟ್ಟಿ ಮೇಲೆ ಬೆಳ್ಳಿಯ ಅಥವಾ ತಾಮ್ರದ ಕಲಶದಿಂದ ಶೃಂಗರಿಸಿ ಧ್ವಜವನ್ನು ನಿಲ್ಲಿಸುತ್ತಾರೆ. ಅದರ ಮುಂದೆ ಸುಂದರವಾದ ರಂಗೋಲಿ ಹಾಕುತ್ತಾರೆ.

. ‘ಬ್ರಹ್ಮಧ್ವಜಾಯ ನಮಃ ಎಂದು ಹೇಳಿ ಸಂಕಲ್ಪಪೂರ್ವಕ ಪೂಜಿಸಬೇಕು.

ಪಂಚಾಂಗ ಶ್ರವಣ

ಜ್ಯೋತಿಷಿಯ ಪೂಜೆ ಮಾಡಿ ಅವರಿಂದ ಅಥವಾ ಉಪಾಧ್ಯಾಯರಿಂದ ಹೊಸ ವರ್ಷದ ಪಂಚಾಂಗ ಅರ್ಥಾತ್ ವರ್ಷಫಲದ ಶ್ರವಣ ಮಾಡಬೇಕು.

ಬೇವಿನ ಪ್ರಸಾದ

ಕಹಿ ಬೇವಿನ ಹೂವು, ಚಿಗುರೆಲೆಗಳು, ನೆನೆಸಿದ ಕಡಲೆ ಕಾಳು ಅಥವಾ ಬೇಳೆ, ಜೇನು, ಜೀರಿಗೆ ಮತ್ತು ಸ್ವಲ್ಪ ಇಂಗು ಇವೆಲ್ಲವನ್ನು ಬೆರೆಸಿ ಪ್ರಸಾದ ತಯಾರಿಸುತ್ತಾರೆ ಮತ್ತು ಅದನ್ನು ಎಲ್ಲರಿಗೂ ಹಂಚುತ್ತಾರೆ.

ಭೂಮಿಯನ್ನು ಉಳುವುದು

ಯುಗಾದಿಯಂದು ಭೂಮಿಯನ್ನು ಉಳಬೇಕು. ಭೂಮಿಯನ್ನು ಉಳುವಾಗ ಕೆಳಗಿನ ಮಣ್ಣು ಮೇಲೆ ಬರುತ್ತದೆ. ಮಣ್ಣಿನ ಸೂಕ್ಷ್ಮ-ಕಣಗಳ ಮೇಲೆ ಪ್ರಜಾಪತಿ ಲಹರಿಗಳ ಸಂಸ್ಕಾರವಾಗಿ ಬೀಜದ ಮೊಳಕೆಯೊಡೆಯುವ ಭೂಮಿಯ ಸಾಮರ್ಥ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ. ಊಳಲು ಉಪಯೋಗಿಸಲ್ಪಡುವ ಸಲಕರಣೆ ಮತ್ತು ಎತ್ತುಗಳ ಮೇಲೆ ಪ್ರಜಾಪತಿ-ಲಹರಿಗಳನ್ನು ಉತ್ಪನ್ನ ಮಾಡುವ ಮಂತ್ರಸಹಿತ ಅಕ್ಷತೆ ಹಾಕಬೇಕು.

ದಾನ

ಯಾಚಕರಿಗೆ ಅನೇಕ ವಿಧದ ದಾನ ಕೊಡಬೇಕು, ಅರವಟಿಗೆ (ಜಲಮಂದಿರ) ನಿರ್ಮಿಸಿ ನೀರಿನ ದಾನ ಮಾಡಬೇಕು. ಇದರಿಂದ ಪಿತೃಗಳು ಸಂತುಷ್ಟರಾಗುತ್ತಾರೆ.

ಕೊರೋನಾದ ಸಂದರ್ಭದಲ್ಲಿ ಸರಕಾರದ ಎಲ್ಲ ನಿಯಮ ಪಾಲಿಸಿ ಯುಗಾದಿ ಆಚರಿಸೋಣ !

ಯುಗಾದಿಯ ಪೂಜೆಗೆ ಅವಶ್ಯಕ ಸಾಹಿತ್ಯ ಸಿಗದಿದ್ದರೆ ಏನು ಮಾಡಬೇಕು ಎಂದು ಇಲ್ಲಿ ನೀಡಲಾಗಿದೆ.

. ಬಿದಿರಿನ ಕೋಲು ಹೊಸದಾಗಿ ಸಿಗದಿದ್ದರೆ ಹಳೆಯ ಕೋಲನ್ನು ಸ್ವಚ್ಛ ಮಾಡಿ ಬಳಸಬಹುದು. ಅದೂ ಇರದಿದ್ದರೆ ಯಾವುದೇ ಕೋಲನ್ನು ಗೋಮೂತ್ರ ಮತ್ತು ವಿಭೂತಿ ಮಿಶ್ರಿತ ನೀರಿನಿಂದ ಸ್ವಚ್ಛಗೊಳಿಸಿ ಉಪಯೋಗಿಸಿ.

. ತೋರಣ ಕಟ್ಟಲು ಮಾವಿನೆಲೆ, ಬೇವಿನೆಲೆ ಸಿಗದಿದ್ದರೆ ಉಪಯೋಗಿಸದೇ ಇದ್ದರೂ ಆಗಬಹುದು.

೩. ಅಕ್ಷತೆಯಲ್ಲಿ ಎಲ್ಲ ರೀತಿಯ ಸ್ಪಂದನಗಳನ್ನು ಆಕರ್ಷಿಸುವ ಕ್ಷಮತೆ ಇದೆ. ಹಾಗಾಗಿ ವೀಳ್ಯೆದೆಲೆ, ಅಡಿಕೆ, ಫಲ-ಪುಷ್ಪಗಳು ಸಿಗದಿದ್ದರೆ ಅಕ್ಷತೆಯನ್ನು ಅರ್ಪಿಸಿ.

. ಪ್ರಸಾದ ತಯಾರಿಸಲು ಬೇವಿನೆಲೆ ಸಿಗದಿದ್ದರೆ ಸಿಹಿ ಪದಾರ್ಥದ ನೈವೇದ್ಯ ಮಾಡಿ. ಅದೂ ಇರದಿದ್ದರೆ ಬೆಲ್ಲ-ಸಕ್ಕರೆಯ ನೈವೇದ್ಯ ಮಾಡಿ.

ಧರ್ಮಕರ್ತವ್ಯವನ್ನು ಪಾಲಿಸುವಾಗ ರಾಷ್ಟ್ರಕರ್ತವ್ಯವನ್ನು ಮರೆಯದಿರೋಣ !