ಭಾರತೀಯರ ಸೀಮೋಲ್ಲಂಘನ !
ಇಂದಿಗೂ ಅನೇಕ ಭಾರತೀಯರು ಶಿಕ್ಷಣಕ್ಕಾಗಿ ಅಥವಾ ನೌಕರಿಗಾಗಿ ವಿದೇಶಗಳಿಗೆ ಹೋಗುತ್ತಾರೆ, ಹಾಗೆಯೇ ಸೀಮೋಲ್ಲಂಘನ ಮಾಡುತ್ತಾರೆ. ಅವರು ಭಾರತದ ಉಜ್ವಲ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕು.
ಇಂದಿಗೂ ಅನೇಕ ಭಾರತೀಯರು ಶಿಕ್ಷಣಕ್ಕಾಗಿ ಅಥವಾ ನೌಕರಿಗಾಗಿ ವಿದೇಶಗಳಿಗೆ ಹೋಗುತ್ತಾರೆ, ಹಾಗೆಯೇ ಸೀಮೋಲ್ಲಂಘನ ಮಾಡುತ್ತಾರೆ. ಅವರು ಭಾರತದ ಉಜ್ವಲ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕು.
ದೇವಿಯು ರಾಕ್ಷಸರೊಂದಿಗೆ ೧೦ ದಿನಗಳ ಕಾಲ ಯುದ್ಧ ಮಾಡಿ ದಸರಾದಂದು ವಿಜಯವನ್ನು ಸಾಧಿಸಿದಳು. ಕೆಲವರು, ‘ಪಾಂಡವರು ತಮ್ಮ ವನವಾಸ ಮತ್ತು ಅಜ್ಞಾತವಾಸವನ್ನು ಮುಗಿಸಿ ದಸರಾದ ದಿನ ಯುದ್ಧಕ್ಕೆ ಸಿದ್ಧರಾಗಿದ್ದರು’, ಎಂದು ಹೇಳುತ್ತಾರೆ.
ವಿಜಯದಶಮಿಯು ಸೀಮೋಲ್ಲಂಘನೆ ಮಾಡುವ ದಿನವಾಗಿದೆ. ‘ಆಪರೇಷನ್ ಸಿಂಧೂರ’ವು ಶತ್ರುವಿನ ಗಡಿಗಳನ್ನು ಸೀಮೋಲ್ಲಂಘನೆ ಮಾಡಿ ‘ಶತ್ರುರಾಷ್ಟ್ರವನ್ನು ಗೆಲ್ಲಲು ಭಾರತೀಯ ಸೇನೆಯು ಸಮರ್ಥ ವಾಗಿದೆ’ ಎಂದು ಸಾಬೀತುಪಡಿಸಿದೆ.
ಆಶ್ವಯುಜ ಶುಕ್ಲ ದಶಮಿಯನ್ನು ‘ವಿಜಯದಶಮಿ’ ಅಥವಾ ‘ದಸರಾ’ ಎಂದು ಕರೆಯುತ್ತಾರೆ. ಆಶ್ವಯುಜ ಶುಕ್ಲ ಪ್ರತಿಪದೆಯಿಂದ ನವಮಿಯವರೆಗೆ ದೇವಿಯ ನವರಾತ್ರಿ ಇರುತ್ತದೆ. ಇದರ ಮುಕ್ತಾಯ ಈ ದಿನದಂದು ಆಗುತ್ತದೆ.
ತ್ರೇತಾಯುಗದಲ್ಲಿ ಅನ್ಯಾಯೀ ಮತ್ತು ಅಧರ್ಮಿ ರಾಜನಾಗಿದ್ದ ರಾವಣನನ್ನು ಪ್ರಭು ಶ್ರೀರಾಮನು ಸಂಹರಿಸಿದನು. ಈ ಐತಿಹಾಸಿಕ ಘಟನೆಯಿಂದ ಪ್ರೇರಣೆ ಸಿಗಬೇಕೆಂದು, ದುಷ್ಟ ನಾಶದ ಸಂಕೇತವೆಂದು, ರಾವಣನನ್ನು ಸುಡುವ ಸಂಪ್ರದಾಯವು ಪ್ರತಿ ವರ್ಷವೂ ಭಾರತದ ಅನೇಕ ಭಾಗಗಳಲ್ಲಿ ನೂರಾರು ವರ್ಷ ಗಳಿಂದ ನಿರ್ವಿಘ್ನವಾಗಿ ನಡೆದಿದೆ
ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿನ ಚಾಮುಂಡೇಶ್ವರಿಯ ದೇವಸ್ಥಾನದಲ್ಲಿ ಚಾಮುಂಡೇಶ್ವರಿ ದೇವಿಯ ಪೂಜೆಯೊಂದಿಗೆ ಉತ್ಸವ ಆರಂಭವಾಗುತ್ತದೆ. ದೇವಿಯ ಮೂರ್ತಿ ಅಂಬಾರಿಯಲ್ಲಿ ಇಡುವ ಮೊದಲು ಒಡೆಯರ ಮನೆತನದ ರಾಜ ದಂಪತಿಗಳಿಂದ ದೇವಿಯ ವಿಧಿವತ್ತಾದ ಪೂಜೆ ನಡೆಯುತ್ತದೆ.
‘ಇದು ವಿಜಯೋತ್ಸವವಾಗಿರುವುದರಿಂದ ರಾಜರು ತಮ್ಮ ಕುದುರೆಗಳನ್ನು ಸುಂದರವಾಗಿ ಅಲಂಕರಿಸ ಬೇಕು, ‘ನೀರಾಜನ’ ಎಂಬ ವಿಧಿಯನ್ನು ಮಾಡಬೇಕು, ಶಸ್ತ್ರಾಸ್ತ್ರಗಳನ್ನು ಪೂಜಿಸಬೇಕು ಮತ್ತು ವಿಜಯಕ್ಕಾಗಿ ಹೊರಡಬೇಕು’, ಎಂದು ಹೇಳಲಾಗಿದೆ.
ಪ್ರಾಚೀನ ಕಾಲದಿಂದಲೂ ಕ್ಷತ್ರಿಯರು ಯುದ್ಧಕ್ಕೆ ಹೋಗಲು ದಸರಾ ದಿನವನ್ನು ಆರಿಸುತ್ತಿದ್ದರು. ‘ದಸರಾದಂದು ಮಾಡಿದ ಯುದ್ಧದಲ್ಲಿ ಖಂಡಿತವಾಗಿ ವಿಜಯ ಸಿಗುತ್ತದೆ’ ಎಂದು ನಂಬಿದ್ದರು.