ಶ್ರೀ ಗಣೇಶಚತುರ್ಥಿಯಂದು ಏಕೆ ಚಂದ್ರದರ್ಶನವನ್ನು ಮಾಡಬಾರದು ?

ಪುರಾಣದಲ್ಲಿ ಹೇಳಿರುವಂತೆ ಶ್ರೀ ಗಣೇಶಚತುರ್ಥಿಯಂದು ಚಂದ್ರದರ್ಶನ ಮಾಡಿದರೆ ಕಳ್ಳತನದ ಆರೋಪ ಬರುತ್ತದೆ. ಇದರ ನಿಜವಾದ ಅರ್ಥವೆಂದರೆ, ಮನಸ್ಸು ಸಂಶಯಕ್ಕೊಳಗಾಗುತ್ತದೆ, ಅಂದರೆ ಸಂಶಯಕ್ಕೆ ಆಮಂತ್ರಣ ನೀಡುವುದು.

ಶ್ರೀ ಗಣೇಶನಿಗೆ ಕೆಂಪು ಬಣ್ಣದ ವಸ್ತುಗಳನ್ನೇಕೆ ಅರ್ಪಿಸುತ್ತಾರೆ ?

ದಾಸವಾಳ ಹೂವಿನಲ್ಲಿರುವ ವರ್ಣಕಣ ಮತ್ತು ಗಂಧಕಣಗಳಿಂದಾಗಿ ಬ್ರಹ್ಮಾಂಡ ಮಂಡಲದಲ್ಲಿನ ಗಣೇಶ ತತ್ತ್ವದ ಪವಿತ್ರಕಗಳು ಹೂವಿನ ಕಡೆಗೆ ಆಕರ್ಷಿಸುತ್ತವೆ.

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಎಂಬ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಈ ಮೂರ್ತಿಯನ್ನು ಅಖಂಡ ‘ಕೃಷ್ಣಶಿಲೆ’ ಕಲ್ಲಿನಲ್ಲಿ ಕೆತ್ತಿ ನಿರ್ಮಿಸಲಾಗಿದೆ ಮತ್ತು ಅದರ ತೂಕ ೫೦೦ ಕಿಲೋದಷ್ಟಿದೆ. ಶ್ರೀ ಸಿದ್ಧಿವಿನಾಯಕನ ಮೂರ್ತಿಯು ಕಮಲದ ಆಸನದ ಮೇಲಿದೆ. ಸಪ್ತರ್ಷಿಗಳು ಮಾಡಿದ ಮಾರ್ಗದರ್ಶನಕ್ಕನುಸಾರ ಈ ಮೂರ್ತಿಯನ್ನು ತಯಾರಿಸಲಾಗಿದೆ. ಒಂದು ಶುಭಮುಹೂರ್ತದಲ್ಲಿ ಸನಾತನದ ರಾಮನಾಥಿ ಆಶ್ರಮದಲ್ಲಿ ಅದರ ಪ್ರಾಣಪ್ರತಿಷ್ಠಾಪನೆಯನ್ನು ಮಾಡಲಾಗುವುದು.

ಸನಾತನದ ರಾಮನಾಥಿ (ಗೋವಾ) ಆಶ್ರಮದಲ್ಲಿ ರಿದ್ಧಿ-ಸಿದ್ಧಿ ಸಹಿತ ಶ್ರೀ ಸಿದ್ಧಿವಿನಾಯಕ ಮೂರ್ತಿಯ ಶುಭಾಗಮನದ ಸಮಯದಲ್ಲಿ ಬಂದ ಅನುಭೂತಿಗಳು

ಶ್ರೀ ಗಣೇಶಮೂರ್ತಿಯ ಪೂಜೆಯನ್ನು ಶ್ರೀಸತ್‌ಶಕ್ತಿ ಸೌ. ಬಿಂದಾ ಸಿಂಗಬಾಳ ಇವರು ಭಾವಪೂರ್ಣವಾಗಿ ಮಾಡಿದ್ದರಿಂದ, ಅಲ್ಲದೇ ಮೂರ್ತಿಗೆ ಪರಾತ್ಪರ ಗುರು ಡಾ. ಆಠವಲೆಯವರು ಪುಷ್ಪಗಳನ್ನು ಅರ್ಪಿಸಿದ್ದರಿಂದ ಅದರಲ್ಲಿನ ಗಣೇಶತತ್ತ್ವ ಶೇ. ೧ ರಷ್ಟು ಹೆಚ್ಚಾಯಿತು. ಹಾಗೆಯೇ ಅದರಿಂದ ಪ್ರಕ್ಷೇಪಿತವಾಗುವ ಆನಂದದ ಸ್ಪಂದನಗಳೂ ಹೆಚ್ಚಾದವು. ಇದರಿಂದ ಪೂಜೆಯ ಬಳಿಕ ಎಲ್ಲರಿಗೂ ಆಶ್ರಮದ ವಾತಾವರಣದಲ್ಲಿ ಆನಂದದ ಲಹರಿಗಳು ಅರಿವಾಗತೊಡಗಿದವು.

ಕೊರೋನಾದ ಸಂಕಟಕಾಲದಲ್ಲಿ ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು ?

ಸದ್ಯ ಕೊರೋನಾ ವೈರಾಣುವಿನ ಹಾವಳಿ ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದರಿಂದ ಕೆಲವು ಸ್ಥಳಗಳಲ್ಲಿ ಮನೆಯಿಂದ ಹೊರಗೆ ಬರುವುದನ್ನೂ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಪದ್ಧರ್ಮ ಮತ್ತು ಧರ್ಮಶಾಸ್ತ್ರಗಳನ್ನು ಜೊತೆ ಗೂಡಿಸಿ ದೃಶ್ಯಾವಳಿ, ದೀಪಾಲಂಕಾರ ಇತ್ಯಾದಿಗಳನ್ನು ಮಾಡದೇ ಸರಳವಾಗಿ ಮಣ್ಣಿನ ಸಿದ್ಧಿವಿನಾಯಕನ ವ್ರತವನ್ನು ಮುಂದಿನ ಪದ್ಧತಿಯಿಂದ ಮಾಡಬಹುದು.

ಶ್ರೀ ಗಣೇಶನ ಪೂಜೆಯಲ್ಲಿ ಉಪಯೋಗಿಸುವ ವಿಶಿಷ್ಟ ವಸ್ತು – ದೂರ್ವೆ

ಗಣಪತಿಯು ತನ್ನನ್ನು ಮದುವೆಯಾಗಬೇಕೆಂದು ಓರ್ವ ಅಪ್ಸರೆಯು ಧ್ಯಾನಮಗ್ನನಾಗಿದ್ದ ಗಣಪತಿಯ ಧ್ಯಾನಭಂಗ ಮಾಡಿದಳು. ಗಣಪತಿಯು ವಿವಾಹಕ್ಕೆ ನಿರಾಕರಿಸಿದ್ದರಿಂದ ಅಪ್ಸರೆಯು ಗಣಪತಿಗೆ ಶಾಪ ಕೊಟ್ಟಳು. ಇದರಿಂದ ಗಣಪತಿಯ ತಲೆಯಲ್ಲಿ ಉಷ್ಣತೆಯ ಅರಿವಾಗತೊಡಗಿತು. ಇದನ್ನು ಕಡಿಮೆ ಮಾಡಿಕೊಳ್ಳಲು ಗಣಪತಿಯು ತಲೆಯ ಮೇಲೆ ದೂರ್ವೆಗಳನ್ನು ಧರಿಸಿದನು. ಈ ಕಾರಣಕ್ಕಾಗಿ ಗಣಪತಿಗೆ ದೂರ್ವೆಗಳನ್ನು ಅರ್ಪಿಸುತ್ತಾರೆ.

ಜೇಡಿಮಣ್ಣು ಅಥವಾ ಆವೆಮಣ್ಣನ್ನು ಬಿಟ್ಟು ಇತರ ವಸ್ತುಗಳಿಂದ ತಯಾರಿಸಿದ ಮೂರ್ತಿಯು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ !

ಇತ್ತೀಚೆಗೆ ತೆಂಗಿನಕಾಯಿ, ಬಾಳೆಹಣ್ಣು, ಅಡಿಕೆ, ನಾಣ್ಯ, ‘ಸಿರಿಂಜ್, ಕಾಗದ ಮುಂತಾದ ವಸ್ತುಗಳಿಂದಲೂ ಶ್ರೀ ಗಣೇಶನ ಮೂರ್ತಿಯನ್ನು ತಯಾರಿಸಲಾಗು ತ್ತದೆ. ಇಂತಹ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ. ಇಂತಹ ಮೂರ್ತಿಗಳ ಕಡೆಗೆ ಶ್ರೀ ಗಣೇಶನ ಪವಿತ್ರಕಗಳು ಆಕರ್ಷಿತವಾಗುವುದಿಲ್ಲ. ಕಲೆಯನ್ನು ಕೇವಲ ಕಲಾತ್ಮಕತೆಗಾಗಿ ಬಳಸುವುದರಿಂದ ಆ ಕಲಾಕೃತಿಯಲ್ಲಿ ದೈವೀ ಸ್ಪಂದನಗಳನ್ನು ಆಕರ್ಷಿಸುವ ಪ್ರಮಾಣ ಕಡಿಮೆಯಿರುತ್ತದೆ.

ಶಾಸ್ತ್ರಕ್ಕನುಸಾರ ತಯಾರಿಸಿದ ಮೂರ್ತಿಯು ಏಕೆ ಸಾತ್ತ್ವಿಕವಾಗಿರುತ್ತದೆ ?

ಮೂರ್ತಿಯು ದೇವತೆಯ ಮೂಲ ರೂಪದೊಂದಿಗೆ ಎಷ್ಟು ಹೋಲುತ್ತದೆಯೋ, ಅಷ್ಟೇ ಹೆಚ್ಚು ಪ್ರಮಾಣದಲ್ಲಿ ಆ ದೇವತೆಯ ತತ್ತ್ವವು ಮೂರ್ತಿಯ ಕಡೆಗೆ ಆಕರ್ಷಿತವಾಗುತ್ತದೆ. ಋಷಿಮುನಿಗಳು ಮತ್ತು ಸಂತರು ಶಾಸ್ತ್ರಗಳನ್ನು ಬರೆದಿದ್ದಾರೆ. ಅವರಿಗೆ ದೇವತೆಗಳ ಸಾಕ್ಷಾತ್ಕಾರವು ಹೇಗೆ ಆಗಿದೆಯೋ, ಹಾಗೇ ಅವರು ದೇವತೆಗಳನ್ನು ಶಾಸ್ತ್ರದಲ್ಲಿ ವರ್ಣಿಸಿದ್ದಾರೆ; ಆದುದರಿಂದ ಶಾಸ್ತ್ರದಲ್ಲಿ ಹೇಳಿದಂತೆ ಮೂರ್ತಿಯನ್ನು ತಯಾರಿಸಿದರೆ ಅದು ಸಾತ್ತ್ವಿಕವಾಗುತ್ತದೆ.

ಶ್ರೀ ಗಣೇಶಮೂರ್ತಿಯ ವಿವಿಧ ಭಾಗಗಳ ಅರ್ಥಗಳು

ಬಲಬದಿಗೆ ಸೊಂಡಿಲಿರುವ (ಬಲಮುರಿ) ಗಣಪತಿಯ ಮೂರ್ತಿ ಎಂದರೆ ದಕ್ಷಿಣಾಭಿಮುಖಿ ಮೂರ್ತಿ. ದಕ್ಷಿಣ ಎಂದರೆ ದಕ್ಷಿಣ ದಿಕ್ಕು ಅಥವಾ ಬಲಬದಿ. ದಕ್ಷಿಣ ದಿಕ್ಕು ಯಮಲೋಕದ ಕಡೆಗೆ ಕರೆದೊಯ್ಯುವುದಾಗಿದೆ ಮತ್ತು ಬಲಬದಿಯಲ್ಲಿ ಸೂರ್ಯನಾಡಿಯಿದೆ. ಯಾರು ಯಮಲೋಕದ ದಿಕ್ಕನ್ನು ಎದುರಿಸಬಲ್ಲರೋ ಅವರು ಶಕ್ತಿಶಾಲಿಯಾಗಿರುತ್ತಾರೆ. ಹಾಗೆಯೇ ಸೂರ್ಯನಾಡಿಯು ಕಾರ್ಯನಿರತವಾಗಿರುವವನು ತೇಜಸ್ವಿಯಾಗಿರುತ್ತಾನೆ. ಇವೆರಡೂ ಅರ್ಥಗಳಲ್ಲಿ ಬಲಗಡೆಗೆ ಸೊಂಡಿಲಿರುವ ಗಣಪತಿಯನ್ನು ‘ಜಾಗೃತ ಗಣಪತಿ ಎಂದು ಹೇಳುತ್ತಾರೆ.

ಗಣೇಶೋತ್ಸವದ ಆನಂದವನ್ನು ವೃದ್ಧಿಸುವ ಸನಾತನದ ಪ್ರಕಾಶನಗಳು !

ಶ್ರೀ ಗಣೇಶ ಮೂರ್ತಿಯು ಮಣ್ಣಿನ, ಚಿಕ್ಕದಾದ, ಮಣೆಯಮೇಲೆ ಕುಳಿತಿರುವ ಹೀಗೆ ಶಾಸ್ತ್ರಕ್ಕನುಸಾರವಾಗಿದ್ದರೆ, ಭಕ್ತರಿಗೆ ಗಣೇಶೋತ್ಸವದ ನಿಜವಾದ ಲಾಭವಾಗುತ್ತದೆ. ಈ ದೃಷ್ಟಿಯಿಂದ ವಿಗ್ರಹಕಾರರು, ಭಕ್ತರು ಮತ್ತು ಗಣೇಶೋತ್ಸವ ಮಂಡಳಿಯವರಿಗಾಗಿ ಪ್ರಬೋಧನೆ ಮಾಡಲಾಗಿದೆ. ಅದೇರೀತಿ ಆದರ್ಶವಾಗಿರುವ ಸನಾತನ-ನಿರ್ಮಿತ ಗಣೇಶಮೂರ್ತಿಯ ಅಳತೆಗಳನ್ನೂ ಕೊಡಲಾಗಿದೆ.