ಗಣೇಶೋತ್ಸವದ ಆನಂದವನ್ನು ವೃದ್ಧಿಸುವ ಸನಾತನದ ಪ್ರಕಾಶನಗಳು !

ಶ್ರೀ ಗಣೇಶನ ಉಪಾಸನೆಯ ಶಾಸ್ತ್ರವನ್ನು ಹೇಳುವ ಗ್ರಂಥಮಾಲಿಕೆ

ದೇವತೆಯ ವೈಶಿಷ್ಟ್ಯಗಳು ಮತ್ತು ಕಾರ್ಯವು ತಿಳಿದಾಗ ದೇವತೆಯ ಮಹಾತ್ಮೆ ತಿಳಿಯುತ್ತದೆ. ದೇವತೆಯ ಉಪಾಸನೆಯ ಹಿಂದಿನ ಶಾಸ್ತ್ರ ತಿಳಿದರೆ ಉಪಾಸನೆಯ ಕುರಿತು ಶ್ರದ್ಧೆ ಹೆಚ್ಚುತ್ತದೆ. ಶ್ರದ್ಧೆಯಿಂದಾಗಿ ಉಪಾಸನೆಯು ಭಾವಪೂರ್ಣವಾಗುತ್ತದೆ ಮತ್ತು ಭಾವಪೂರ್ಣ ಉಪಾಸನೆಯು ಅಧಿಕ ಫಲದಾಯಿಯಾಗಿದೆ. ಇದಕ್ಕಾಗಿ ಈ ಗ್ರಂಥ ಮಾಲಿಕೆಯನ್ನು ಓದಿರಿ !

ಶ್ರೀ ಗಣಪತಿ

  • ಭಾರತದಲ್ಲಿನ ಹನ್ನೆರಡು ಪ್ರಸಿದ್ಧ ಗಣಪತಿಯ ಸ್ಥಾನಗಳು ಯಾವುವು ?
  • ಗಣಪತಿಗೆ ಕೆಂಪು ಹೂವು ಮತ್ತು ಗರಿಕೆ ಏಕೆ ಅರ್ಪಿಸುತ್ತಾರೆ ?
  • ಗಣೇಶೋತ್ಸವ : ಹೇಗೆ ಇರಬಾರದು ಮತ್ತು ಹೇಗೆ ಇರಬೇಕು ?

ಕಿರುಗ್ರಂಥ!

ಶ್ರೀ ಗಣೇಶಮೂರ್ತಿಯು ಶಾಸ್ತ್ರಕ್ಕನುಸಾರ ಇರಬೇಕು !

ಶ್ರೀ ಗಣೇಶ ಮೂರ್ತಿಯು ಮಣ್ಣಿನ, ಚಿಕ್ಕದಾದ, ಮಣೆಯಮೇಲೆ ಕುಳಿತಿರುವ ಹೀಗೆ ಶಾಸ್ತ್ರಕ್ಕನುಸಾರವಾಗಿದ್ದರೆ, ಭಕ್ತರಿಗೆ ಗಣೇಶೋತ್ಸವದ ನಿಜವಾದ ಲಾಭವಾಗುತ್ತದೆ. ಈ ದೃಷ್ಟಿಯಿಂದ ವಿಗ್ರಹಕಾರರು, ಭಕ್ತರು ಮತ್ತು ಗಣೇಶೋತ್ಸವ ಮಂಡಳಿಯವರಿಗಾಗಿ ಪ್ರಬೋಧನೆ ಮಾಡಲಾಗಿದೆ. ಅದೇರೀತಿ ಆದರ್ಶವಾಗಿರುವ ಸನಾತನ-ನಿರ್ಮಿತ ಗಣೇಶಮೂರ್ತಿಯ ಅಳತೆಗಳನ್ನೂ ಕೊಡಲಾಗಿದೆ.

ಶ್ರೀ ಗಣೇಶಪೂಜಾ ವಿಧಿ (ಕೆಲವು ಮಂತ್ರಗಳ ಅರ್ಥಸಹಿತ)

ಅರ್ಥವನ್ನು ಅರಿತು ಪೂಜಾ ವಿಧಿ ಮಾಡಿದರೆ ಅದು ಅಧಿಕ ಭಾವಪೂರ್ಣ ರೀತಿಯಲ್ಲಿ ಆಗಿ ದೇವತೆಯ ಕೃಪೆ ಆಗುತ್ತದೆ. ಶ್ರೀ ಗಣೇಶ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಿಂದ ಉತ್ತರ ಪೂಜೆಯವರೆಗಿನ ಎಲ್ಲ ವಿಧಿಗಳನ್ನು ಯೋಗ್ಯ ರೀತಿಯಲ್ಲಿ ಹೇಗೆ  ಮಾಡಬೇಕು, ಗಣೇಶ ಪೂಜೆಗಾಗಿ ಯಾವ ವಸ್ತುಗಳು ಎಷ್ಟು ಪ್ರಮಾಣದಲ್ಲಿರಬೇಕು, ಎಂಬ ಕುರಿತು ವಿವೇಚನೆಯನ್ನು ಈ ಕಿರುಗ್ರಂಥದಲ್ಲಿ ಅರ್ಥಸಹಿತ ಕೊಡಲಾಗಿದೆ.

ಶ್ರೀ ಗಣಪತಿ ಅಥರ್ವಶೀರ್ಷ ಮತ್ತು ಸಂಕಟನಾಶನಸ್ತೋತ್ರ (ಅರ್ಥಸಹಿತ)

ಗಣೇಶಸ್ತೋತ್ರದ ಪಠಣ ಮಾಡಿದರೆ ಜ್ಞಾಪಕಶಕ್ತಿಯು ಬೆಳೆಯುತ್ತದೆ ಮತ್ತು ಶರೀರದ ಸುತ್ತಲು ಸೂಕ್ಷ್ಮ ಸಂರಕ್ಷಣಾ-ಕವಚವು ನಿರ್ಮಾಣವಾಗುತ್ತದೆ. ಸ್ತೋತ್ರದಲ್ಲಿನ ಸಂಸ್ಕೃತ ಭಾಷೆಯಿಂದಾಗಿ ಉಚ್ಚಾರವೂ ಸುಧಾರಿಸುತ್ತದೆ. ಇದಕ್ಕಾಗಿ ಪ್ರತಿನಿತ್ಯ ಗಣೇಶಸ್ತೋತ್ರದ ಪಠಣ ಮಾಡಿರಿ ಮತ್ತು ಮಕ್ಕಳಿಂದ ಮಾಡಿಸಿಕೊಳ್ಳಿರಿ !

ಸನಾತನದ ಗ್ರಂಥ ಮತ್ತು ಉತ್ಪಾದನೆಯನ್ನು ‘ಆಲ್‌ಲೈನ್ ಖರೀದಿಗಾಗಿ SanatanShop.com