ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಹರ್ಷಿಗಳ ಆಜ್ಞೆಗನುಸಾರ ವಿವಿಧ ದೇವತೆಗಳಂತೆ ವೇಷಭೂಷವನ್ನು ಮಾಡುವುದರ ಕಾರಣ

ಶ್ರೀ ವಿಷ್ಣುವಿನ ವೇಷಭೂಷಗಳನ್ನು ಧರಿಸಿರವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು
ಶ್ರೀ ಕೃಷ್ಣನ ವೇಷಭೂಷಗಳನ್ನು ಧರಿಸಿರವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು

‘ನಾನು ರಾಮ, ಕೃಷ್ಣ ಮತ್ತು ವಿಷ್ಣು ಇವರ ವೇಷಭೂಷಗಳನ್ನು ಧರಿಸಿದ ನಂತರ ಕೆಲವರು ನನ್ನನ್ನು ಟೀಕಿಸುತ್ತಾರೆ ಮತ್ತು ‘ಡಾಕ್ಟರರು ತಮ್ಮನ್ನು ರಾಮ, ಕೃಷ್ಣ ಮತ್ತು ವಿಷ್ಣು ಎಂದು ತಿಳಿಯುತ್ತಾರೆ, ಎಂದು ಮಾತನಾಡುತ್ತಾರೆ ! ಕೇವಲ ಮಹರ್ಷಿಗಳ ಆಜ್ಞಾಪಾಲನೆ ಎಂದು ನಾನು ಈ ವೇಷಭೂಷಗಳನ್ನು ಧರಿಸುತ್ತೇನೆ, ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಅದರ ಹಿಂದಿನ ಅಧ್ಯಾತ್ಮಶಾಸ್ತ್ರವು ಮುಂದಿನಂತಿದೆ.

‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ, ಹೀಗೆ ಅಧ್ಯಾತ್ಮದಲ್ಲಿ ಒಂದು ಸಿದ್ಧಾಂತವಿದೆ. ಈ ಸಿದ್ಧಾಂತಕ್ಕನುಸಾರ ನಾವು ಯಾವಾಗ ಯಾವುದಾದರೊಂದು ದೇವತೆಯ ಹೆಸರನ್ನು ಉಚ್ಚರಿಸುತ್ತೇವೆಯೋ, ಆಗ ಆ ದೇವತೆಯ ತತ್ತ್ವವು ಅಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಾರ್ಯನಿರತವಾಗುತ್ತದೆ ಮತ್ತು ನಮಗೆ ಅದರ ಲಾಭವಾಗುತ್ತದೆ. ಇದೇ ಉದ್ದೇಶದಿಂದ ಮಕ್ಕಳಿಗೆ ದೇವತೆ ಗಳ ಹೆಸರುಗಳನ್ನು ಇಡುವ ಪದ್ಧತಿಯಿದೆ. ಅದೇ ರೀತಿ ಯಾವುದಾದರೊಂದು ದೇವತೆಯಂತೆ ಉಡುಪುಗಳನ್ನು ಧರಿಸಿದಾಗಲೂ ಆ ದೇವತೆಯ ತತ್ತ್ವದ ಲಾಭವಾಗುತ್ತದೆ. ಇದೇ ಉದ್ದೇಶದಿಂದ ಮಹರ್ಷಿಗಳು ನನಗೆ ವಿವಿಧ ದೇವತೆಗಳ ಉಡುಪುಗಳನ್ನು ಧರಿಸಲು ಆಜ್ಞೆಯನ್ನು ಮಾಡಿದರು.

ಇದರಲ್ಲಿ ಗಮನದಲ್ಲಿಡುವ ಮಹತ್ವದ ಅಂಶವೆಂದರೆ, ಆಧ್ಯಾತ್ಮಿಕ ಮಟ್ಟ ಕಡಿಮೆ ಇದ್ದಾಗ ಯಾರಾದರೊಬ್ಬರು ಉಚ್ಚ ದೇವತೆಯ ಹೆಸರಿನ ಜಪವನ್ನು ಮಾಡಿದರೆ ಅಥವಾ ಆ ದೇವತೆಯ ಉಡುಪುಗಳನ್ನು ಧರಿಸಿದರೆ ಅವರಿಗೆ ಆ ಶಕ್ತಿ ಸಹನೆಯಾಗದೇ ಅದರ ತೊಂದರೆಯೂ ಆಗಬಹುದು. ಸಂತರ, ಉನ್ನತರ ಆಜ್ಞೆಯೆಂದು ಹಾಗೆ ಮಾಡಿದರೆ ಅವರ ಸಂಕಲ್ಪಶಕ್ತಿಯಿಂದ ಸಂಬಂಧಪಟ್ಟ ದೇವತೆಯ ಶಕ್ತಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಅದರ ಲಾಭವೂ ಆಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧೨.೫.೨೦೨೩)