
ಮಗಳಿಗೆ ಅವಳ ಪತಿಯನ್ನು ಆಯ್ಕೆ ಮಾಡುವ, ಅವನಿಗೆ ವಿವಿಧ ಪ್ರಶ್ನೆಗಳನ್ನು ಕೇಳುವ ಅಧಿಕಾರ ಇರಬೇಕು, ಇದಕ್ಕೆ ಎರಡು ಮಾತಿಲ್ಲ; ಆದರೆ ಕೆಲವು ಯುವತಿಯರು ವಿವಾಹದ ಮೊದಲೇ ಯುವಕನಿಗೆ ಅವನ ತಂದೆ-ತಾಯಿಯರಿಂದ ವಿಭಕ್ತವಾಗಿರಲು ಷರತ್ತು ಹಾಕುತ್ತಾರೆ, ಮನೆಯಲ್ಲಿ ಎಷ್ಟು ‘ಕಸದ ಬುಟ್ಟಿಗಳು’ (ಡಸ್ಟಬಿನ್ಸ್) ಅಂದರೆ ವೃದ್ಧ ತಂದೆ-ತಾಯಿ ಅಥವಾ ಆಪ್ತೇಷ್ಟರಿದ್ದಾರೆಯೇ, ಎಂದು ಕೇಳುತ್ತಾರೆ. ಇಷ್ಟೊಂದು ನಿರ್ಲಜ್ಜತನ ಮತ್ತು ಸಂಸ್ಕಾರಶೂನ್ಯತೆ ಈ ಯುವತಿಯರಲ್ಲಿ ಎಲ್ಲಿಂದ ಬಂದಿತು ? ಅವರ ತಂದೆ-ತಾಯಿ ಆ ಮಕ್ಕಳ ಮೇಲೆ ಯಾವುದೇ ಸುಸಂಸ್ಕಾರಗಳನ್ನು ಮಾಡಿಯೇ ಇಲ್ಲವೇನು ? ತಂದೆ-ತಾಯಿ ಅನೇಕ ಸಂಕಟಗಳನ್ನು ಸಹಿಸಿ ಮಗನನ್ನು ಚಿಕ್ಕಂದಿನಿಂದ ದೊಡ್ಡವನನ್ನಾಗಿ ಮಾಡಿರುತ್ತಾರೆ, ಉಚ್ಚ ಶಿಕ್ಷಣವನ್ನು ನೀಡಲು ಸಾಲ ಮಾಡಿರುತ್ತಾರೆ ಅಂತಹ ತಂದೆ-ತಾಯಿಯರ ಋಣವನ್ನು ಏಳು ಜನ್ಮಗಳಲ್ಲಿಯೂ ತೀರಿಸಲು ಸಾಧ್ಯವಿಲ್ಲ, ಅಂತಹ ಮಗನ ತಂದೆ-ತಾಯಿಯ ಕುರಿತು ಇಷ್ಟೊಂದು ಕೀಳುಭಾವನೆಯನ್ನು ಬಹಿರಂಗವಾಗಿ ತೋರಿಸುವ ಹುಡುಗಿಯು ಮುಂದೆ ಏನೆಲ್ಲ ಮಾಡಬಹುದು ? ಒಂದು ಕುಟುಂಬಕ್ಕಾಗಿ ಸವೆಯಲು ಇಚ್ಛಿಸದವಳು ಸಮಾಜಕ್ಕಾಗಿ, ದೇಶಕ್ಕಾಗಿ ಯಾವ ತ್ಯಾಗವನ್ನು ಮಾಡಬಹುದು ?
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !