ಭಾರತದಲ್ಲಿ ಹಿಂದೂ ಹಬ್ಬಗಳನ್ನು ಪೊಲೀಸ್ ಭದ್ರತೆಯಲ್ಲಿ ಏಕೆ ಆಚರಿಸಬೇಕಾಗುತ್ತದೆ ? – ‘ವಾಯ್ಸ್ ಆಫ್ ‘ಬಾಂಗ್ಲಾದೇಶಿ ಹಿಂದೂಸ್’ನ ಪ್ರಶ್ನೆ

ಬಾಂಗ್ಲಾದೇಶದಲ್ಲಿ ಟ್ವಿಟರ್ ಖಾತೆಯಿಂದ ಇಂತಹ ಪ್ರಶ್ನೆಯನ್ನು ಕೇಳುವುದು ಇದು ಭಾರತದಲ್ಲಿನ ಹಿಂದೂಗಳಿಗೆ ಮತ್ತು ಸರಕಾರಿ ಸಂಸ್ಥೆಗಳಿಗೆ ನಾಚಿಕೆಗೇಡಿನ ಸಂಗತಿ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶವು ಇಸ್ಲಾಮಿಕ್ ದೇಶವಾಗಿದೆ. ನಾವು ಬಾಂಗ್ಲಾದೇಶದಲ್ಲಿ ನಮ್ಮ ಧಾರ್ಮಿಕ ಹಬ್ಬಗಳನ್ನು ಪೊಲೀಸ್ ಮತ್ತು ಭದ್ರತಾ ಪಡೆಗಳ ರಕ್ಷಣೆಯಲ್ಲಿ ಆಚರಿಸುತ್ತೇವೆ; ಆದರೆ ಭಾರತದಲ್ಲಿ ಹಿಂದೂಗಳಿಗೆ ತಮ್ಮ ಧಾರ್ಮಿಕ ಹಬ್ಬಗಳನ್ನು ಆಚರಿಸಲು ಪೊಲೀಸ್ ರಕ್ಷಣೆ ಮತ್ತು ಭದ್ರತೆ ಏಕೆ ಬೇಕು ?, ಎಂದು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಟ್ವಿಟರ್ ಖಾತೆಯಲ್ಲಿ ಪ್ರಶ್ನಿಸಲಾಗಿದೆ. ಭಾರತದಲ್ಲಿ ಮತಾಂಧ ಮುಸ್ಲಿಮರು ಶ್ರೀರಾಮನವಮಿಯ ಮೆರವಣಿಗೆಯ ಮೇಲೆ ದಾಳಿ ಮಾಡಿದ ನಂತರ ಹನುಮಾನ ಜಯಂತಿ ಮೆರವಣಿಗೆಯಲ್ಲಿ ಪೊಲೀಸ್ ಭದ್ರತೆ ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿ ಈ ಟ್ವೀಟ್ ಮಾಡಲಾಗಿದೆ.