ಜಾತಕವನ್ನು ಮಾಡಿಸಿಕೊಳ್ಳುವುದರ ಮಹತ್ವವನ್ನು ತಿಳಿದುಕೊಳ್ಳಿರಿ !

‘ಹಿಂದೂ ಸಮಾಜದಲ್ಲಿ ಮಗುವಿನ ಜನ್ಮವಾದ ನಂತರ ಜ್ಯೋತಿಷ್ಯರಿಂದ ಮಗುವಿನ ಜಾತಕವನ್ನು ಮಾಡಿಸಿಕೊಳ್ಳಲಾಗುತ್ತದೆ. ಬಹಳಷ್ಟು ಜನರಿಗೆ ಜಾತಕದಲ್ಲಿ ಏನು ಮಾಹಿತಿ ಇರುತ್ತದೆ ? ಇದರ ಬಗ್ಗೆ ಉತ್ಸುಕತೆ ಇರುತ್ತದೆ. ಈ ಲೇಖನದ ಮೂಲಕ ‘ಜಾತಕ ಅಂದರೆ ಏನು ? ಮತ್ತು ಜಾತಕದಲ್ಲಿ ಏನು ಮಾಹಿತಿ ಇರುತ್ತದೆ ?’, ಎಂಬುದನ್ನು ತಿಳಿದುಕೊಳ್ಳೋಣ.

೧. ಜಾತಕ ಅಂದರೆ ಏನು ?

ಜಾತಕ ಅಂದರೆ ವ್ಯಕ್ತಿಯ ಜನ್ಮದ ಸಮಯದಲ್ಲಿ ಆಕಾಶದಲ್ಲಿರುವ ಗ್ರಹ-ನಕ್ಷತ್ರಗಳ ಸ್ಥಿತಿಯ ಬಗ್ಗೆ ಮಾಹಿತಿಯನ್ನು ನೀಡುವ ಒಂದು ಚಿಕ್ಕ ಪುಸ್ತಕ. ಹೇಗೆ ವೈದ್ಯಕೀಯ ವರದಿಯಲ್ಲಿ ವ್ಯಕ್ತಿಯ ಶರೀರದ ಘಟಕಗಳ ವಿಷಯದಲ್ಲಿನ ಮಾಹಿತಿ ಇರುತ್ತದೆಯೋ, ಹಾಗೆಯೇ ವ್ಯಕ್ತಿಯ ಜಾತಕದಲ್ಲಿ ಅವನ ಜನ್ಮ ಸಮಯದಲ್ಲಿನ ಖಗೋಲ ಘಟನೆಗಳ ವಿಷಯದಲ್ಲಿನ ಮಾಹಿತಿಯನ್ನು ನೀಡಲಾಗಿರುತ್ತದೆ. ಜಾತಕದಲ್ಲಿನ ಮಾಹಿತಿಯನ್ನು ಉಪಯೋಗಿಸಿ ಜ್ಯೋತಿಷಿಗಳು ಭವಿಷ್ಯವನ್ನು ಹೇಳುತ್ತಾರೆ. ಜಾತಕದಲ್ಲಿನ ಕೆಲವು ಮಾಹಿತಿಗಳು ಸ್ವತಃ ಆ ವ್ಯಕ್ತಿಗೂ ಉಪಯುಕ್ತವಾಗಿರುತ್ತವೆ. ಅದರ ವಿವರಣೆಯನ್ನು ಮುಂದೆ ಕೊಡಲಾಗಿದೆ.

ಶ್ರೀ. ರಾಜ ಕರ್ವೆ

೧ ಅ. ಸಾಮಾನ್ಯ ಮಾಹಿತಿ : ಜಾತಕದ ಆರಂಭದಲ್ಲಿ ಸಂಬಂಧಪಟ್ಟ ವ್ಯಕ್ತಿಯ ಹೆಸರು, ಜನನ ದಿನಾಂಕ, ಜನ್ಮ ಸಮಯ ಮತ್ತು ಜನ್ಮಸ್ಥಳವನ್ನು ಬರೆದಿರುತ್ತದೆ.

೧ ಆ. ಜನ್ಮದಿನದ ಪಂಚಾಂಗ : ಪುಸ್ತಕದಲ್ಲಿ ವ್ಯಕ್ತಿಯ ಜನ್ಮದ ಸಮಯದಲ್ಲಿದ್ದ ‘ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ’ ಈ ೫ ಅಂಶಗಳನ್ನು ಬರೆದಿರುತ್ತದೆ.

೧ ಇ. ಕಾಲಮಾಪನದ ಘಟಕಗಳು : ವ್ಯಕ್ತಿಯ ಜನ್ಮದ ಸಮಯದಲ್ಲಿದ್ದ ಸಂವತ್ಸರ (ವರ್ಷ), ಅಯನ (ಉತ್ತರಾಯಣ-ದಕ್ಷಿಣಾಯನ), ಋತು (ವಸಂತ, ಗ್ರೀಷ್ಮ ಇತ್ಯಾದಿ), ಮಾಸ (ತಿಂಗಳು) ಮತ್ತು ಪಕ್ಷ ಇವುಗಳ ಮಾಹಿತಿಯು ಜಾತಕದಲ್ಲಿ ಇರುತ್ತದೆ.

೧ ಈ. ಜನ್ಮನಕ್ಷತ್ರದ ವೈಶಿಷ್ಟ್ಯಗಳು : ಜನ್ಮದ ಸಮಯದಲ್ಲಿ ಚಂದ್ರನು ಯಾವ ನಕ್ಷತ್ರದಲ್ಲಿರುತ್ತಾನೆಯೋ, ಅದು ವ್ಯಕ್ತಿಯ ‘ಜನ್ಮನಕ್ಷತ್ರ ಆಗಿರುತ್ತದೆ. ಎಲ್ಲ ಗ್ರಹಗಳ ತುಲನೆಯಲ್ಲಿ ಚಂದ್ರನು ಪೃಥ್ವಿಗೆ ಅತ್ಯಂತ ಸಮೀಪದಲ್ಲಿರುವುದರಿಂದ ಅವನ ಸೂಕ್ಷ್ಮ ಊರ್ಜೆ (ಆಪತತ್ತ್ವದ) ಮತ್ತು ಸ್ಥೂಲ ಊರ್ಜೆಯ (ಗುರುತ್ವಾಕರ್ಷಣದ) ಹೀಗೆ ಎರಡೂ ಸ್ತರಗಳಲ್ಲಿನ ಊರ್ಜೆಗಳಿಂದ ಪೃಥ್ವಿಯ ಮೇಲೆ ಹೆಚ್ಚು ಪರಿಣಾಮವಾಗುತ್ತದೆ. ಆದುದ ರಿಂದ ಜ್ಯೋತಿಷ್ಯಶಾಸ್ತ್ರದಲ್ಲಿ ಚಂದ್ರನಕ್ಷತ್ರಕ್ಕೆ (ಜನ್ಮನಕ್ಷತ್ರಕ್ಕೆ) ಹೆಚ್ಚು ಮಹತ್ವವನ್ನು ನೀಡಲಾಗಿದೆ. ಜನ್ಮನಕ್ಷತ್ರಕ್ಕೆ ಸಂಬಂಧಿಸಿದ ದೇವತೆ, ದಾನವಸ್ತು, ಆರಾಧ್ಯವೃಕ್ಷ, ವರ್ಣಾಕ್ಷರ ಇತ್ಯಾದಿಗಳ ಮಾಹಿತಿಯನ್ನು ಜಾತಕದಲ್ಲಿ ನೀಡಲಾಗಿರುತ್ತದೆ. ಅವು ವಿವಿಧ ಪ್ರಸಂಗಗಳಲ್ಲಿ ಉಪಯೋಗಕ್ಕೆ ಬರುತ್ತವೆ.

೧ ಉ. ಫಲಿತ : ಕೆಲವು ಜಾತಕಗಳಲ್ಲಿ ಮುದ್ರಿಸಿದ ಫಲಿತವನ್ನು (ಭವಿಷ್ಯವನ್ನು) ನೀಡಲಾಗಿರುತ್ತದೆ. ಆ ಫಲಿತಗಳನ್ನು ಗಣಕೀಯ ತಂತ್ರಾಂಶದಿಂದ (‘ಸಾಫ್ಟವೇರ್ಮೂಲಕ) ತಯಾರಿ ಸಿದ್ದರಿಂದ ಅದರಲ್ಲಿ ಸತ್ಯಾಂಶ ಬಹಳ ಕಡಿಮೆಯಿರುತ್ತದೆ; ಆದರೆ ಯಾವ ಜಾತಕದಲ್ಲಿ ಜ್ಯೋತಿಷಿಗಳು ಸ್ವತಃ ಅಧ್ಯಯನ ಮಾಡಿ ಜಾತಕದ ಫಲಿತವನ್ನು ಬರೆದಿರುತ್ತಾರೆಯೋ, ಆ ಫಲಿತದಿಂದ ಆ ವ್ಯಕ್ತಿಗೆ ಜೀವನದಲ್ಲಿ ಮಾರ್ಗಕ್ರಮಣ ಮಾಡುವಾಗ ಉಪಯೋಗವಾಗುತ್ತದೆ.

೨. ಕುಂಡಲಿ ಅಂದರೆ ಏನು ?

ಕುಂಡಲಿಯು ಜಾತಕದಲ್ಲಿನ ಮುಖ್ಯ ಭಾಗವಾಗಿದೆ. ಕುಂಡಲಿ ಅಂದರೆ ಆಕಾಶದ ಆಕೃತಿಬದ್ಧ ನಕಾಶೆ. ಕುಂಡಲಿಯಲ್ಲಿನ ೧೨ ಸ್ಥಾನಗಳಲ್ಲಿ ಗ್ರಹ ಮತ್ತು ರಾಶಿಗಳನ್ನು ತೋರಿಸಲಾಗಿರುತ್ತದೆ. ಜನ್ಮಕುಂಡಲಿಯಿಂದ ‘ವ್ಯಕ್ತಿಯ ಜನ್ಮದ ಸಮಯದಲ್ಲಿ ಆಕಾಶದಲ್ಲಿ ಯಾವ ಗ್ರಹಗಳು ಯಾವ ದಿಕ್ಕಿನಲ್ಲಿದ್ದವು ? ಅವು ಯಾವ ರಾಶಿಯಲ್ಲಿದ್ದವು ? ಅವು ಪರಸ್ಪರ ಎಷ್ಟು ಅಂಶ ದೂರದಲ್ಲಿ ಇದ್ದವು ?’, ಇತ್ಯಾದಿ ಮಾಹಿತಿಯು ಕೂಡಲೇ ತಿಳಿಯುತ್ತದೆ. ಪತ್ರಿಕೆಯಲ್ಲಿ ಲಗ್ನಕುಂಡಲಿ, ರಾಶಿಕುಂಡಲಿ, ವರ್ಗಕುಂಡಲಿ ಇತ್ಯಾದಿ ವಿವಿಧ ಪ್ರಕಾರದ ಕುಂಡಲಿಗಳನ್ನು ಕೊಡಲಾಗಿರುತ್ತದೆ. ಅವುಗಳನ್ನು ಜ್ಯೋತಿಷಿಗಳು ಭವಿಷ್ಯವನ್ನು ಹೇಳುವಾಗ ವಿವಿಧ ಕಾರಣಗಳಿಗಾಗಿ ಉಪಯೋಗಿಸುತ್ತಾರೆ.

೩. ಮಗುವಿನ ಜನ್ಮವಾದ ನಂತರ ಎಷ್ಟು ದಿನಗಳಲ್ಲಿ ಜಾತಕವನ್ನು ಮಾಡಿಸಿಕೊಳ್ಳಬೇಕು ?

ಮಗುವಿನ ಜನ್ಮವಾದ ನಂತರ ಕೂಡಲೇ, ಅಂದರೆ ೨-೩ ದಿನಗಳಲ್ಲಿ ಜಾತಕವನ್ನು ಮಾಡಿಸಿಕೊಳ್ಳಬೇಕು; ಏಕೆಂದರೆ, ಜನ್ಮಪತ್ರಿಕೆಯನ್ನು ಮಾಡುವಾಗ ‘ಮಗುವಿನ ಜನ್ಮ ಯಾವ ಯೋಗದಲ್ಲಿ ಆಗಿದೆ ?’, ಎಂಬುದನ್ನು ಜ್ಯೋತಿಷಿಗಳು ನೋಡುತ್ತಾರೆ. ಯಾವುದಾದರು ಅಶುಭ ತಿಥಿ, ಅಶುಭ ನಕ್ಷತ್ರ ಮತ್ತು ಅಶುಭ ಯೋಗದಲ್ಲಿ ಜನ್ಮವಾಗಿದ್ದರೆ, ಮಗುವಿಗೆ ಅದರಿಂದ ತೊಂದರೆಯಾಗಬಾರದೆಂದು ಶಾಸ್ತ್ರದಲ್ಲಿ ಜನನಶಾಂತಿಯನ್ನು ಮಾಡಲು ಹೇಳಲಾಗಿದೆ. ಈ ಜನನಶಾಂತಿಯನ್ನು ಜನ್ಮದ ನಂತರ ಹನ್ನೆರಡನೆ ದಿನ ಮಾಡಲಾಗುತ್ತದೆ. ಜಾತಕವನ್ನು ಮಾಡಿಸಿಕೊಳ್ಳಲು ತಡವಾದರೆ ಜನನಶಾಂತಿಯನ್ನು ಮಾಡಲು ತಡವಾಗುತ್ತದೆ. ಜನನಶಾಂತಿಯನ್ನು ಹೆಚ್ಚು ತಡಮಾಡಿ ಮಾಡಿದರೆ ಅದರಿಂದ ಕಡಿಮೆ ಪರಿಣಾಮವಾಗುತ್ತದೆ.

೪. ಜಾತಕವನ್ನು ಮಾಡುವ ಜ್ಯೋತಿಷಿಗಳಿಗೆ ಯಾವ ಮಾಹಿತಿಯನ್ನು ಕೊಡಬೇಕು ?

ಜಾತಕದ ಒಳ್ಳೆಯ ಅಧ್ಯಯನವಿರುವ ಮತ್ತು ಸದಾಚರಣಿ ಜ್ಯೋತಿಷಿಯಿಂದ ಜಾತಕವನ್ನು ಮಾಡಿಸಿಕೊಳ್ಳಬೇಕು. ಜ್ಯೋತಿಷಿಗೆ ಮಗುವಿನ ಜನ್ಮದಿನಾಂಕ, ಜನ್ಮದ ಸಮಯ ಮತ್ತು ಜನ್ಮಸ್ಥಳವನ್ನು ಸರಿಯಾಗಿ ಹೇಳಬೇಕು; ಏಕೆಂದರೆ ಈ ಮೂರು ವಿಷಯಗಳ ಮೇಲಿನಿಂದ ಜಾತಕವನ್ನು ತಯಾರಿಸ ಲಾಗುತ್ತದೆ. ನವಜಾತ ಶಿಶುವಿನ ವಿಷಯದಲ್ಲಿ ಏನಾದರೂ ವಿಚಿತ್ರ (ವೈಚಿತ್ರ್ಯ) ವಿಷಯಗಳಿದ್ದರೆ ಅವುಗಳನ್ನೂ ಕೂಡ ಜ್ಯೋತಿಷ್ಯರಿಗೆ ಹೇಳಬೇಕು, ಉದಾ. ಮಗುವಿಗೆ ಜನ್ಮದಿಂದಲೇ ಹಲ್ಲುಗಳಿರುವುದು, ಹೆಚ್ಚು ಅವಯವಗಳಿರುವುದು ಅಥವಾ ಕಡಿಮೆ ಅವಯವಗಳಿರುವುದು ಇತ್ಯಾದಿ.

೫. ಜಾತಕವನ್ನು ಮಾಡಿಸಿಕೊಳ್ಳುವುದರ ಮಹತ್ವ

ಜನ್ಮಕುಂಡಲಿಯು ದಿಶೆ ಮತ್ತು ಕಾಲ ಇವುಗಳ ಮನುಷ್ಯ ನಿಗಿರುವ ಸಂಬಂಧವನ್ನು ತೋರಿಸುತ್ತದೆ. ಪೂರ್ವಜನ್ಮದಲ್ಲಿ ಮಾಡಿದ ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಫಲವನ್ನು ಮನುಷ್ಯನು ಪ್ರಾರಬ್ಧರೂಪದಲ್ಲಿ ಮುಂದಿನ ಜನ್ಮದಲ್ಲಿ ಭೋಗಿಸುತ್ತಾನೆ. ವ್ಯಕ್ತಿಯ ಪ್ರಾರಬ್ಧವನ್ನು ತಿಳಿದುಕೊಳ್ಳಲು ಜಾತಕವು ಒಂದು ಮಾಧ್ಯಮವಾಗಿದೆ. ಜನ್ಮಕುಂಡಲಿಯಿಂದ ಜೀವನದಲ್ಲಿ ಲಭಿಸಿದ ಸೌಲಭ್ಯ, ಕಾಲದ ಅನುಕೂಲತೆ ಮತ್ತು ಪ್ರತಿಕೂಲತೆ, ಸುಖ-ದುಃಖ, ಅನಿಷ್ಟ ಇತ್ಯಾದಿಗಳು ತಿಳಿಯುತ್ತವೆ. ಆದ್ದರಿಂದ  ನಮಗೆ ನಮ್ಮ ಜೀವನದ ಸ್ವರೂಪ ತಿಳಿಯಲು ಜಾತಕ ಸಹಾಯಕವಾಗುತ್ತದೆ.

೬. ಜಾತಕವನ್ನು ಜೋಪಾನವಾಗಿ ಮತ್ತು ಸಹಜ ಕೈಗೆ ಸಿಗುವಂತಹ ಸ್ಥಳದಲ್ಲಿಡಬೇಕು.

ಉಪನಯನ, ವಿವಾಹ ಇತ್ಯಾದಿ ಮಂಗಲಕಾರ್ಯಗಳ ಪ್ರಸಂಗಗಳಲ್ಲಿ, ಹಾಗೆಯೇ ಕೆಲವೊಮ್ಮೆ ಆಪತ್ಕಾಲೀನ ಪರಿಸ್ಥಿತಿಯಲ್ಲಿ ಜಾತಕದ ಆವಶ್ಯಕತೆ ಇರುತ್ತದೆ. ಜಾತಕವನ್ನು ಸರಿಯಾಗಿ ಇಡದಿದ್ದರೆ ಅಥವಾ ಕಳೆದುಹೋದರೆ ಅಡಚಣೆಯಾಗುತ್ತದೆ, ಮತ್ತು ಅದನ್ನು ಪುನಃ ಮಾಡಿಸಿಕೊಳ್ಳಲು ಸಮಯ ಮತ್ತು ಹಣ ಖರ್ಚಾಗುತ್ತದೆ. ಆದ್ದರಿಂದ ಜಾತಕವನ್ನು ಜೋಪಾನಮಾಡಿ ಇಡಬೇಕು ಮತ್ತು ಸಹಜವಾಗಿ ಕೈಗೆ ಸಿಗುವಂತಹ ಸ್ಥಳದಲ್ಲಿಡಬೇಕು.’

ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೨.೧೦.೨೦೨೨)