ತೆಲಂಗಾಣ ಹೈಕೋರ್ಟ್ ಮಹಿಳೆಯೊಬ್ಬರ ವಿಚ್ಛೇದನ ಅರ್ಜಿಯನ್ನು ಸ್ವೀಕರಿಸುವಾಗ ನೀಡಿದ ಪ್ರಮುಖ ವೀಕ್ಷಣೆ

ಭಾಗ್ಯನಗರ (ತೆಲಂಗಾಣ) – ರಾಜ್ಯದ ವಿಚ್ಛೇದನ ಪ್ರಕರಣವೊಂದರಲ್ಲಿ ತೆಲಂಗಾಣ ಹೈಕೋರ್ಟ್ ಮಹತ್ವದ ವೀಕ್ಷಣೆಯನ್ನು ಮಾಡಿದೆ. ಪತಿಯು ವಯಸ್ಸಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿದ್ದರಿಂದ, ಪತ್ನಿಯು ವಯಸ್ಸಿನ ಹೊಂದಾಣಿಕೆ ಮತ್ತು ಜ್ಯೋತಿಷ್ಯಶಾಸ್ತ್ರದ (ಜಾತಕ) ಹೊಂದಾಣಿಕೆಯ ತಪ್ಪು ಕಲ್ಪನೆಯಿಂದ ಮದುವೆಗೆ ಒಪ್ಪಿಗೆ ನೀಡಿದ್ದರು ಎಂದು ನ್ಯಾಯಾಲಯ ಹೇಳಿದೆ. ಇದು ವಂಚನೆಯಾಗಿದೆ. ಈ ಪ್ರಕರಣದಲ್ಲಿ ಹೈಕೋರ್ಟ್ ಸಂಬಂಧಪಟ್ಟ ಮಹಿಳೆಯ ವಿಚ್ಛೇದನ ಅರ್ಜಿಯನ್ನು ಪುರಸ್ಕರಿಸಿದೆ. ಪತಿಯು ತಪ್ಪು ಜನ್ಮದಿನಾಂಕವನ್ನು ಹೇಳಿದ್ದರಿಂದ ಜಾತಕ ಹೊಂದಾಣಿಕೆಯಲ್ಲಿ ತಪ್ಪಾಗಿತ್ತು ಎಂದು ಮಹಿಳೆ ವಾದಿಸಿದ್ದರು.
೧. ನ್ಯಾಯಮೂರ್ತಿ ಕೆ. ಲಕ್ಷ್ಮಣ್ ಮತ್ತು ನ್ಯಾಯಮೂರ್ತಿ ಬಿ.ಆರ್. ಮಧುಸೂದನ ರಾವ್ ಅವರ ಪೀಠವು, ‘ಹಿಂದೂ ವಿವಾಹ ಕಾಯ್ದೆ, 1955’ ರ ಸೆಕ್ಷನ್ 12(1)(ಸಿ) ಅಡಿಯಲ್ಲಿ ಪತ್ನಿಯ ಅರ್ಜಿಯನ್ನು ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು.
೨. ಈ ದಂಪತಿಗಳ ವಿವಾಹವು 2018 ರಲ್ಲಿ ನಡೆದಿತ್ತು. ಪತಿಯ ನಿಜವಾದ ಜನ್ಮದಿನಾಂಕ 9 ಫೆಬ್ರವರಿ 1974 ಆಗಿದ್ದರೂ, ಆತ 9 ಫೆಬ್ರವರಿ 1981 ಎಂದು ಸುಳ್ಳು ಹೇಳಿದ್ದನು. ಇದು ತನಗೆ ತಡವಾಗಿ ತಿಳಿಯಿತು ಎಂದು ಪತ್ನಿ ಹೇಳಿದ್ದಾರೆ.
೩. ವಿಚ್ಛೇದನ ಆದೇಶವನ್ನು ನೀಡುವಾಗ ಹೈಕೋರ್ಟ್, ಶಾಶ್ವತ ಜೀವನಾಂಶ, ಚಿನ್ನದ ಒಡವೆಗಳನ್ನು ಮರಳಿ ನೀಡುವುದು ಮತ್ತು ರಾಜಿ ಸಂಧಾನದಂತಹ ವಿಷಯಗಳ ಕುರಿತು ಸೂಕ್ತ ವೇದಿಕೆಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಇದರಲ್ಲಿ ಪತ್ನಿಯು ಪತಿಯ ವಿರುದ್ಧ ದಾಖಲಿಸಿರುವ ಕೌಟುಂಬಿಕ ದೌರ್ಜನ್ಯದ ಬಾಕಿ ಇರುವ ಪ್ರಕರಣವೂ ಸೇರಿದೆ.
ಜೂನ್ 22 ರಿಂದ 24 ರ ಅವಧಿಯಲ್ಲಿ ಶ್ರೀ ವಿಠ್ಠಲ-ರುಕ್ಮಿಣೀ ದೇವಿಯ ಮೂರ್ತಿಗಳ ಸಂರಕ್ಷಣಾ ಕಾರ್ಯ!
ವಾಯುಪಡೆಯ ವಿಮಾನ ಪತನ: 5 ಸೈನಿಕರ ವೀರಮರಣ
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!
ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ! – ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಗ್ರಹ
ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ನಿವಾಸಗಳ ಮೇಲೆ ಇಡಿ ದಾಳಿ
ಈಗ ಶತ್ರುಗಳ ಕ್ಷಿಪಣಿಗಳು ಗಾಳಿಯಲ್ಲೇ ನಾಶ !