ವರ್ಷ ೨೦೨೩ ರಲ್ಲಿನ ಶನಿಗ್ರಹದ ಬದಲಾವಣೆ

‘ಪುಷ್ಯ ಕೃಷ್ಣ ದಶಮಿ, ಮಂಗಳವಾರ, ೧೭.೧.೨೦೨೩ ರಂದು ಸಾಯಂಕಾಲ ೬ ಗಂಟೆ ೦೧ ನಿಮಿಷಕ್ಕೆ ಶನಿ ಕುಂಭ ರಾಶಿಯಲ್ಲಿ ಪ್ರವೇಶ ಮಾಡಿದನು. ೧೭.೧.೨೦೨೩ ರಿಂದ ಮೀನ ರಾಶಿಗೆ ಸಾಡೇಸಾತಿ ಆರಂಭವಾಯಿತು. ಮಕರ ಮತ್ತು ಕುಂಭ ಈ ರಾಶಿಗಳಿಗೂ ಸಾಡೇಸಾತಿ ಇರಲಿದೆ ಮತ್ತು ಈ ದಿನ ಧನು ರಾಶಿಯ ಸಾಡೇಸಾತಿ ಮುಗಿಯುತ್ತದೆ.’  – ಆಧಾರ : ದಾತೆ ಪಂಚಾಂಗ

೧. ಶನಿ ಗ್ರಹ ಬದಲಾವಣೆಯ ಜ್ಯೋತಿಷ್ಯಶಾಸ್ತ್ರಕ್ಕನುಸಾರ ಮಹತ್ವ

೧ ಅ. ಶನಿಗ್ರಹದ ಬದಲಾವಣೆಯ ನಂತರ ಕೂಡಲೇ ಅದರ ಶುಭ ಅಥವಾ ಅಶುಭ ಫಲಗಳು ಸಿಗುವುದಿಲ್ಲ, ಕೊನೆಯ ೬ ತಿಂಗಳುಗಳಲ್ಲಿ ಅದರ ಅನುಭವ ತೀವ್ರವಾಗಿ ಬರುವುದು : ‘ಪುಷ್ಯ ಕೃಷ್ಣ ದಶಮಿ, ಮಂಗಳವಾರ, ೧೭.೧.೨೦೨೩ ರಂದು ಸಾಯಂಕಾಲ ೬ ಗಂಟೆ ೦೧ ನಿಮಿಷಕ್ಕೆ ಶನಿ ಕುಂಭ ರಾಶಿಯಲ್ಲಿ ಪ್ರವೇಶಿಸಿದನು. ಅವನ ಪುಣ್ಯಕಾಲ ಮಂಗಳವಾರ ಮಧ್ಯಾಹ್ನ ೩.೦೭ ನಿಮಿಷಗಳಿಂದ ರಾತ್ರಿ ೮.೫೫ ರ ವರೆಗಿತ್ತು. ಈ ಪುಣ್ಯಕಾಲದಲ್ಲಿ ಜಪ, ದಾನ, ಪೂಜೆ ಇತ್ಯಾದಿ ಪುಣ್ಯ ಕರ್ಮಗಳನ್ನು ಮಾಡುವುದು ಪುಣ್ಯಕರ ಮತ್ತು ಪೀಡಾಪರಿಹಾರಕವಾಗಿದೆ. ಇದು ಶನಿ ಗ್ರಹ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವ ಸಂಧಿಕಾಲವಾಗಿದೆ. ಸಂಧಿಕಾಲದಲ್ಲಿ ಮಾಡಿದ ಸಾಧನೆಯಿಂದ ಅನೇಕ ಪಟ್ಟು ಹೆಚ್ಚು ಲಾಭ ಸಿಗುತ್ತದೆ. ಶನಿ ಗ್ರಹಕ್ಕೆ ‘ಮಂದ ಗ್ರಹ’ ಎನ್ನುತ್ತಾರೆ; ಏಕೆಂದರೆ ಶನಿಯು ಒಂದು ರಾಶಿಯಲ್ಲಿ ಎರಡುವರೆ ವರ್ಷ ಇರುತ್ತಾನೆ. ಆದುದರಿಂದ ಶನಿಗ್ರಹ ಬದಲಾವಣೆಯ ನಂತರ ಕೂಡಲೇ ಅದರ ಶುಭ ಅಥವಾ ಅಶುಭ ಫಲಗಳು ಸಿಗುವುದಿಲ್ಲ, ಕೊನೆಯ ೬ ತಿಂಗಳುಗಳಲ್ಲಿ ಅದರ ಅನುಭವಗಳು ತೀವ್ರವಾಗಿ ಬರುತ್ತವೆ.

೧ ಆ. ಶನಿ ಗ್ರಹದಿಂದ ಚಿಂತನೆ ಯೋಗ್ಯ ರೀತಿಯಲ್ಲಿ ಆಗಲು ಸಹಾಯವಾಗುವುದು : ಕುಂಭ ರಾಶಿಯು ಶನಿಯ ‘ಸ್ವ’ರಾಶಿಯಾಗಿರುವುದರಿಂದ ಕುಂಭ ರಾಶಿಯಲ್ಲಿ ಶನಿಯ ಆಗಮನವು ಶುಭವಾಗಿದೆ. ಶನಿ ಗ್ರಹವು ಕರ್ಮದ ಅಧಿಪತಿ ಆಗಿದ್ದು ಅವನು ಅಹಂಕಾರವನ್ನು ನಾಶಗೊಳಿಸುತ್ತಾನೆ. ಶನಿಯು ಸಂವೇದನೆಗಳ ಕಾರಕಗ್ರಹವಾಗಿದೆ. ಶನಿಯು ಚಿಂತನಶೀಲ ಗ್ರಹವಾಗಿರುವುದರಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಪ್ರಯತ್ನಿಸುತ್ತಿರುವ ಸಾಧಕರಿಗೆ ಸಾಧನೆಯ ಪ್ರಯತ್ನದಲ್ಲಿ ಯಶಸ್ಸನ್ನು ನೀಡುತ್ತಾನೆ. ಶನಿಗ್ರಹದಿಂದ ಯೋಗ್ಯ ರೀತಿಯಲ್ಲಿ ಚಿಂತನೆ ಮಾಡಲು ಸಹಾಯವಾಗುತ್ತದೆ.

೨. ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ಶನಿಗ್ರಹದ ಮಹತ್ವ

೨ ಅ. ಶನಿ ಗ್ರಹವು ಪೂರ್ವಪುಣ್ಯವನ್ನು ತೋರಿಸುವ ಮತ್ತು ಮೋಕ್ಷದ ದಾರಿಯನ್ನು ತೋರಿಸುವ ಗ್ರಹವಾಗಿದೆ : ಹಿಂದೂ ಧರ್ಮದಲ್ಲಿ ಗ್ರಹಗಳನ್ನು ದೇವತೆಗಳೆಂದು ನಂಬಲಾಗಿದೆ. ಶನಿಯು  ಪಾಪ ಗ್ರಹ (ಅಶುಭ ಗ್ರಹ) ಆಗಿದ್ದು ಎಲ್ಲ ಗ್ರಹಗಳಲ್ಲಿ ಈ ಗ್ರಹಕ್ಕೆ ಲೌಕಿಕದೃಷ್ಟಿಯಲ್ಲಿ ಅಸಾಧಾರಣ ಮಹತ್ವವಿದೆ. ಮಕರ ಮತ್ತು ಕುಂಭ ಇವು ಶನಿಗ್ರಹದ ರಾಶಿಗಳಾಗಿವೆ. ಶನಿಯು ತುಲಾ ರಾಶಿಯಲ್ಲಿ ಉಚ್ಚನಾಗುತ್ತಾನೆ. ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳನ್ನು ಉಚ್ಚ ಮತ್ತು ನೀಚ ರಾಶಿ ಎಂದು ನಿರ್ಧರಿಸಲಾಗಿದೆ. ‘ಗ್ರಹ ಯಾವಾಗ ಉಚ್ಚರಾಶಿಯಲ್ಲಿರುತ್ತದೆಯೋ, ಆಗ ಅದು ಯಾವ ವಿಷಯದ ಕಾರಕ ಆಗಿದೆಯೋ ಮತ್ತು ಜಾತಕದಲ್ಲಿ ಯಾವ ಸ್ಥಾನದ ಸ್ವಾಮಿ ಆಗಿದೆಯೋ, ಅದಕ್ಕನುಸಾರ ಶುಭ ಫಲಕಾರಿಯಾಗುತ್ತದೆ, ಹೀಗೆ ನಿಯಮವಿದೆ. ಈ ಗ್ರಹವು ವಾಯುತತ್ತ್ವದ್ದಾಗಿದ್ದು ಮನುಷ್ಯನನ್ನು ಆಸಕ್ತಿಯಿಂದ ವಿರಕ್ತಿಯ ಕಡೆಗೆ ಒಯ್ಯುತ್ತದೆ. ಮಾನವನ ಜೀವನದಲ್ಲಿ ಮಾನ, ಅಪಮಾನ, ಅವಹೇಳನ ಇವುಗಳಿಂದ ಈ ಗ್ರಹ ಪರಮಾರ್ಥದ ಕಡೆಗೆ ಹೊರಳಿಸುತ್ತದೆ. ಈ ಗ್ರಹವು ಪೂರ್ವಪುಣ್ಯವನ್ನು ತೋರಿಸುವ ಮತ್ತು ಮೋಕ್ಷದ ದಾರಿಯನ್ನು ತೋರಿಸುವ ಗ್ರಹವಾಗಿದೆ.

೨ ಆ. ಶನಿಯು ಅನುಭವದಿಂದ ಶಿಕ್ಷಣವನ್ನು ನೀಡುವ ಶಿಕ್ಷಕನಾಗಿದ್ದು ಅವಿಚಾರದಿಂದ ಮಾಡಿದ ಕರ್ಮಗಳ ಫಲ ಸಾಡೇಸಾತಿಯಲ್ಲಿ ಕೊಡುವುದು ಕಾಣಿಸುತ್ತದೆ : ಜ್ಯೋತಿಷ್ಯಶಾಸ್ತ್ರಕ್ಕನುಸಾರ ಪ್ರತಿಯೊಂದು ಗ್ರಹದ ಶುಭ (ಗುಣ) ಮತ್ತು ಅಶುಭ (ದೋಷ) ಹೀಗೆ ಎರಡು ಬದಿಗಳಿರುತ್ತವೆ. ಯಾವುದೇ ಗ್ರಹ ಕೇವಲ ಶುಭ ಅಥವಾ ಅಶುಭವೇ ಆಗಿರುತ್ತದೆ, ಎಂದೇನಿಲ್ಲ. ಈ ನಿಯಮಕ್ಕನುಸಾರ ಶನಿ ಗ್ರಹಕ್ಕೂ ಎರಡು ಬದಿಗಳಿವೆ; ಆದರೆ ಶನಿ ಗ್ರಹದ ಕೇವಲ ಒಂದೇ ಬದಿಯ ವಿಚಾರವನ್ನು ಮಾಡಲಾಗುತ್ತದೆ; ಹೀಗಾಗಿ ಜನರ ಮನಸ್ಸಿನಲ್ಲಿ ಶನಿಗ್ರಹದ ಬಗ್ಗೆ ಭಯ ನಿರ್ಮಾಣವಾಗುತ್ತದೆ. ಶನಿ ಗ್ರಹ ಗರ್ವ, ಅಹಂಕಾರ, ಪೂರ್ವಗ್ರಹ ಮುಂತಾದವುಗಳನ್ನು ದೂರ ಮಾಡಿ ಮನುಷ್ಯನಿಗೆ ಮನುಷ್ಯತ್ವವನ್ನು ಕಲಿಸುತ್ತದೆ ಮತ್ತು ಅಂತರಂಗದಲ್ಲಿನ ಉಚ್ಚ ಗುಣಗಳನ್ನು ಪರಿಚಯಿಸುತ್ತದೆ. ಶನಿಯು ಅನುಭವದಿಂದ ಶಿಕ್ಷಣವನ್ನು ನೀಡುವ ಶಿಕ್ಷಕನಾಗಿದ್ದಾನೆ. ಯಾರು ಶಿಸ್ತುಬದ್ಧ, ವಿನಯಶೀಲ ಮತ್ತು ನಮ್ರವಾಗಿರುತ್ತಾರೆಯೋ, ಅವರನ್ನು ಶನಿ ಉಚ್ಚ ಮಟ್ಟಕ್ಕೆ ಒಯ್ಯುತ್ತಾನೆ ಮತ್ತು ಯಾರು ಅಹಂಕಾರಿ ಗರ್ವಿಷ್ಠ ಮತ್ತು ಸ್ವಾರ್ಥಿಯಾಗಿರುತ್ತಾರೆಯೋ, ಅವರಿಗೆ ಶನಿ ತೊಂದರೆಗಳನ್ನು ಕೊಡುತ್ತಾನೆ.

ಇಂತಹ ಕೆಟ್ಟ ಕಾಲದಲ್ಲಿಯೆ ಮನುಷ್ಯನ ನಿಜವಾದ ಪರೀಕ್ಷೆಯಾಗುತ್ತದೆ. ಈ ಕಾಲದಲ್ಲಿ ವ್ಯಕ್ತಿಗೆ ಸ್ವಕೀಯರ-ಪರಕೀಯರ ಅರಿವಾಗುತ್ತದೆ. ತನ್ನ ಗುಣ-ದೋಷಗಳು ಗಮನಕ್ಕೆ ಬರುತ್ತವೆ, ಗರ್ವಹರಣವಾಗುತ್ತದೆ ಮತ್ತು ಅಹಂಕಾರ ನಾಶವಾಗುತ್ತದೆ. ಮನುಷ್ಯತ್ವದ ಅರಿವಾಗುತ್ತದೆ. ಒಬ್ಬ ಮನುಷ್ಯನೆಂದು ಹೇಗೆ ಜೀವಿಸಬೇಕು ಎಂಬುದರ ಜ್ಞಾನವಾಗುತ್ತದೆ. ಅವಿಚಾರದಿಂದ ಮಾಡಿದ ಕರ್ಮದ ಫಲಗಳು ಸಾಡೆಸಾತಿ ನಡೆದಾಗ ಅನುಭವಕ್ಕೆ ಬರುತ್ತವೆ.

೩. ರಾಶಿಗನುಸಾರ ಶನಿಯ ಸ್ಥಾನಗಳು

‘ಕುಂಭ ರಾಶಿಯಲ್ಲಿ ಪ್ರವೇಶಿಸುವ ಶನಿಯು ಕುಂಭ ರಾಶಿಗೆ ಮೊದಲನೆ, ಮಕರ ರಾಶಿಗೆ ಎರಡನೆ, ಧನು ರಾಶಿಗೆ ಮೂರನೆ, ವೃಶ್ಚಿಕ ರಾಶಿಗೆ ನಾಲ್ಕನೆ, ತುಲಾ ರಾಶಿಗೆ ಐದನೆ, ಕನ್ಯಾ ರಾಶಿಗೆ ಆರನೆ, ಸಿಂಹ ರಾಶಿಗೆ ಏಳನೆ, ಕರ್ಕ ರಾಶಿಗೆ ಎಂಟನೆ, ಮಿಥುನ ರಾಶಿಗೆ ಒಂಭತ್ತನೆ, ವೃಷಭ ರಾಶಿಗೆ ಹತ್ತನೆ, ಮೇಷ ರಾಶಿಗೆ ಹನ್ನೊಂದನೆ ಮತ್ತು ಮೀನ ರಾಶಿಗೆ ಹನ್ನೆರಡನೆಯವನಾಗಿರುತ್ತಾನೆ.’ – ಆಧಾರ : ದಾತೆ ಪಂಚಾಂಗ

೪. ಶನಿ ಬದಲಾದ ನಂತರ ಶನಿ ಪ್ರತಿಯೊಂದು ರಾಶಿಯಲ್ಲಿ ಯಾವ ಪಾದದಿಂದ ಪ್ರವೇಶ ಮಾಡುತ್ತಾನೆ ಮತ್ತು ಅದರ ಫಲ

– ಆಧಾರ : ದಾತೆ ಪಂಚಾಂಗ

೫. ಅಶುಭ ಸ್ಥಾನಗಳು

ಸ್ವಜನ್ಮ ರಾಶಿಯಿಂದ ೧, ೨, ೪, ೫, ೭, ೮, ೯, ೧೨ ಈ ಸ್ಥಾನಗಳಲ್ಲಿರುವ ಶನಿ ಗ್ರಹವು ಪೀಡೆಯನ್ನು ನೀಡುವುದಾಗಿವೆ. ಪೀಡೆಗಳ ಪರಿಹಾರಕ್ಕಾಗಿ ಪುಣ್ಯಕಾಲದಲ್ಲಿ ಜಪ, ದಾನ, ಮತ್ತು ಪೂಜೆಯನ್ನು ಮಾಡುವುದು ಪುಣ್ಯದಾಯಕ ಮತ್ತು ಪೀಡಾಪರಿಹಾರವಾಗಿದೆ.

೬. ಶನಿ ಗ್ರಹ ಬದಲಾವಣೆಯಕಾಲದಲ್ಲಿ ಮಾಡಬೇಕಾದ ಸಾಧನೆ

೬ ಅ. ಶನಿಯ ಪೀಡೆಗಳ ಪರಿಹಾರಕ್ಕಾಗಿ ದಾನ : ಸುವರ್ಣ, ಕಬ್ಬಿಣ, ನೀಲಮಣಿ, ಉದ್ದು, ಎಮ್ಮೆ, ಎಣ್ಣೆ, ಕಪ್ಪು ಕಂಬಳಿ, ಕಪ್ಪು ಅಥವಾ ನೀಲಿ ಹೂವು.

೬ ಆ. ಜಪಸಂಖ್ಯೆ : ೨೩ ಸಾವಿರ

೬ ಇ. ಪೂಜೆಗಾಗಿ ಶನಿಯ ಕಬ್ಬಿಣದ ಮೂರ್ತಿಯನ್ನು ಉಪಯೋಗಿಸಬೇಕು.

೬ ಈ. ಶನಿಯ ಪೌರಾಣಿಕ ಮಂತ್ರ :

ನೀಲಾಞ್ಜನಸಮಾಭಾಸಂ ರವಿಪುತ್ರಂ ಯಮಾಗ್ರಜಮ್‌ |

ಛಾಯಾಮಾರ್ತಣ್ಡಸಮ್ಭುತಂ ತಂ ನಮಾಮಿ ಶನೈಶ್ಚರಮ್‌ || – ನವಗ್ರಹಸ್ತೋತ್ರ, ಶ್ಲೋಕ ೭

ಅರ್ಥ : ಶನಿದೇವನು ನೀಲಿ ಅಂಜನದಂತೆ ಭಾಸವಾಗುತ್ತಾನೆ. ಅವನು ಭಗವಾನ ಸೂರ್ಯನಾರಾಯಣನ ಪುತ್ರನಾಗಿದ್ದು ಸಾಕ್ಷಾತ್‌ ಯಮದೇವನ ಹಿರಿಯ ಸಹೋದರನಾಗಿದ್ದಾನೆ. ದೇವಿ ಛಾಯಾ ಮತ್ತು ಭಗವಾನ ಸೂರ್ಯ ಇವರಿಂದ ಉತ್ಪನ್ನನಾದ ಶನಿದೇವನಿಗೆ ನಾನು ನಮಸ್ಕಾರ ಮಾಡುತ್ತೇನೆ.

೬ ಉ : ಶನಿಯ ಕಬ್ಬಿಣದ ಮೂರ್ತಿಯ ಪೂಜೆಯ ಮತ್ತು ದಾನದ ಸಂಕಲ್ಪ :

‘ಮಮ ಜನ್ಮರಾಶೆ: ಸಕಾಶಾತ್‌ ಅನಿಷ್ಟಸ್ಥಾನಸ್ಥಿತಶನೆ; ಪೀಡಾಪರಿಹಾರ್ತಾಮ್‌ ಏಕಾದಶಸ್ಥಾನವತ್‌ ಶುಭಫಲಪ್ರಾಪ್ತ್ಯರ್ಥಂ ಲೋಹಪ್ರತಿಮಾಯಾಂ ಶನೈಶ್ಚರಪೂಜನಂ ತತ್ಪ್ರೀತಿಕರಂ (ಇಂತಹ ಒಂದು) (ಟಿಪ್ಪಣಿ) ದಾನಂ ಚ ಕರಿಷ್ಯೆ |

ಅರ್ಥ : ನಾನು ನನ್ನ ಜಾತಕದಲ್ಲಿ ಅನಿಷ್ಟಸ್ಥಾನದಲ್ಲಿದ್ದ ಶನಿಯ ಪೀಡೆ ದೂರವಾಗಬೇಕು ಮತ್ತು ಅವನು ಹನ್ನೊಂದನೆಯ ಸ್ಥಾನದಲ್ಲಿರುವ ಹಾಗೆ ಶುಭಫಲವನ್ನು ಕೊಡುವವನಾಗಲಿ. ಇದಕ್ಕಾಗಿ ಶನಿಯ ಕಬ್ಬಿಣದ ಮೂರ್ತಿಯ ಪೂಜೆ ಮತ್ತು ಶನಿದೇವನು ಪ್ರಸನ್ನನಾಗಬೇಕೆಂದು ‘ಇಂತಹ ಒಂದು’ ವಸ್ತುವನ್ನು ದಾನ ಮಾಡುತ್ತೇನೆ.

ಟಿಪ್ಪಣಿ – ‘ಇಂತಹ ಒಂದು’ ಈ ಶಬ್ದದ ಸ್ಥಾನದಲ್ಲಿ ಯಾವ ವಸ್ತುವನ್ನು ದಾನ ಮಾಡಲಿಕ್ಕಿದೆಯೊ, ಆ ವಸ್ತುವಿನ ಹೆಸರನ್ನು ಉಲ್ಲೇಖಿಸಬೇಕು.

ಧ್ಯಾನ

ಅಹೋ ಸೌರಾಷ್ಟ್ರಸಜ್ಞಾತ ಛಾಯಾಪುತ್ರ ಸತುರ್ಭುಜ |

ಕೃಷ್ಣವರ್ಣಾರ್ಕಗೋತ್ರೀಯ ಬಾಣಹಸ್ತ ಧನುರ್ಧರ ||

ತ್ರಿಶೂಲಿಶ್ಚ ಸಮಾಗಚ್ಛ ವರದೋ ಗೃಧ್ರವಾಹನ |

ಪ್ರಜಾಪತೇ ತು ಸಂಪೂಜ್ಯಃ ಸರೋಜೆ ಪಶ್ಚಿಮೆ ದಲೆ ||

ಅರ್ಥ : ಶನಿದೇವನು ಸೌರಾಷ್ಟ್ರದೇಶದಲ್ಲಿ ಅವತಾರ ತಾಳಿದನು. ಅವನು ಸೂರ್ಯ ಮತ್ತು ಛಾಯಾದೇವಿ ಇವರ ಪುತ್ರನಾಗಿದ್ದಾನೆ. ಅವನಿಗೆ ನಾಲ್ಕು ಕೈಗಳಿವೆ. ಅವನ ಬಣ್ಣ ಕಪ್ಪಾಗಿದೆ. ಅವನ ಒಂದು ಕೈಯಲ್ಲಿ ಧನುಷ್ಯ ಮತ್ತು ಒಂದು ಕೈಯಲ್ಲಿ ಬಾಣ ಮತ್ತು ಒಂದು ಕೈಯಲ್ಲಿ ತ್ರಿಶೂಲವಿದೆ, ಅವನ ನಾಲ್ಕನೇಯ ಕೈಯು ವರ ಕೊಡುವುದಾಗಿದೆ. ‘ಹದ್ದು’ ಅವನ ವಾಹನವಾಗಿದೆ. ಅವನು ಎಲ್ಲ ಪ್ರಜೆಗಳ ಪಾಲನಕರ್ತನಾಗಿದ್ದಾನೆ. ಅವನನ್ನು ನವಗ್ರಹಗಳ ಕಮಲದಲ್ಲಿ ಹಿಂದಿನ ಎಸಳಿನ ಮೇಲೆ ಸ್ಥಾಪಿಸಲಾಗುತ್ತದೆ. ಈ ರೀತಿ ಶನಿದೇವನ ಆರಾಧನೆಯನ್ನು ಮಾಡಬೇಕು.

೬ ಊ. ದಾನದ ಶ್ಲೋಕ

ಶನೈಶ್ಚರಪ್ರೀತಿಕರಂ ದಾನಂ ಪೀಡಾನಿವಾರಕಮ್‌ |

ಸರ್ವಾಪತ್ತಿವಿನಾಶಾಯ ದ್ವಿವಿಜಾಗ್ಯ್ರಾಯ ದದಾಮ್ಯಹಮ್‌ ||

ಅರ್ಥ : ಶನಿದೇವನಿಗೆ ಪ್ರಿಯವಾಗಿರುವ ದಾನವನ್ನು ನೀಡಿದ ಮೇಲೆ ಪೀಡೆಗಳ ಮತ್ತು ಎಲ್ಲ ಆಪತ್ತುಗಳ ನಿವಾರಣೆ ಆಗುತ್ತದೆ. ಇಂತಹ ಈ ದಾನವನ್ನು ನಾನು ಶ್ರೇಷ್ಠ ಬ್ರಾಹ್ಮಣನಿಗೆ ನೀಡುತ್ತಿದ್ದೇನೆ.

– ಸೌ. ಪ್ರಾಜಕ್ತಾ ಜೋಶಿ (ಜ್ಯೋತಿಷ್ಯ ಫಲಿತ ವಿಶಾರದೆ), ಮಹರ್ಷಿಅಧ್ಯಾತ್ಮ ವಿಶ್ವವಿದ್ಯಾಲಯ (೨೮.೧೨.೨೦೨೨)

೬ ಎ. ಶನಿಸ್ತೋತ್ರ

ಕೋಣಸ್ಥಃ ಪಿಂಗಲೋ ಬಭ್ರುಃ ಕೃಷ್ಣೋ ರೌದ್ರೋನ್ತಕೋ ಯಮಃ |

ಸೌರಿಃ ಶನೈಶ್ಚರೋ ಮಂದಃ ಪಿಪ್ಪಲಾದೇನ ಸಂಸ್ತುತಃ ||

ಎತಾನಿ ದಶ ನಾಮಾನಿ ಪ್ರಾತರುತ್ಥಾಯ ಯಃ ಪಠೇತ್‌ |

ಶನೈಶ್ವರಕೃತಾ ಪೀಡಾ ನ ಕದಾಚಿತ್‌ ಭವಿಷ್ಯತಿ ||

ಪಿಪ್ಪಲಾದ ಉವಾಚ |

ನಮಸ್ತೆ ಕೋಣಸಂಸ್ಥಾಯ ಪಿಙ್ಗಲಾಯ ನಮೋಸ್ತುತೆ |

ನಮಸ್ತೆ ಬಭ್ರುರೂಪಾಯ ಕೃಷ್ಣಾಯ ಚ ನಮೋಸ್ತುತೆ ||೧||

ನಮಸ್ತೆ ರೌದ್ರದೇಹಾಯ ನಮಸ್ತೆ ಚಾಂತಕಾಯ ಚ |

ನಮಸ್ತೇ ಯಮಸಂಜ್ಞಾಯ ನಮಸ್ತೆ ಸೌರಯೇ ವಿಭೋ ||೨||

ನಮಸ್ತೆ ಮಂದಸಂಜ್ಞಾಯ ಶನೈಶ್ಚರ ನಮೋಸ್ತುತೆ |

ಪ್ರಸಾದಂ ಕುರು ದೆವೆಶ ದೀನಸ್ಯ ಪ್ರಣತಸ್ಯ ಚ ||೩||

ಅರ್ಥ : ಕೋಣಸ್ಥ, ಪಿಂಗಲ, ಬಭ್ರು, ಕೃಷ್ಣ, ರೌದ್ರ, ಅಂತಕ, ಯಮ, ಸೌರಿ, ಶನೈಶ್ಚರ ಮತ್ತು ಮಂದ ಈ ೧೦ ಹೆಸರುಗಳಿಂದ ಪಿಪ್ಪಲಾದ ಋಷಿಗಳು ಶನಿದೇವರನ್ನು ಸ್ತುತಿಸಿದರು. ಈ ೧೦ ಹೆಸರುಗಳನ್ನು ಬೆಳಗ್ಗೆ ಎದ್ದ ನಂತರ ಯಾರು ಹೇಳುವರೋ, ಅವರಿಗೆ ಎಂದಿಗೂ ಶನಿಗ್ರಹದ ಬಾಧೆ ಆಗಲಿಕ್ಕಿಲ್ಲ.

ಪಿಪ್ಪಲಾದ ಋಷಿ ಹೇಳುತ್ತಾರೆ, ”ಈ ಕೋನದಲ್ಲಿ ಇರುವ ಕೋಣಸ್ಥಾ, ಹೇ ಪಿಂಗಲಾ, ಹೇ ಬಭ್ರು, ಹೇ ಕೃಷ್ಣಾ, ಹೇ ರೌದ್ರದೇವಾ, ಹೇ ಅಂತಕಾ, ಹೇ ಯಮಾ, ಹೇ ಸೌರೀ, ಹೇ ವಿಭೋ, ಹೇ ಮಂದಾ, ಹೇ ಶನಿದೇವಾ, ನಾನು ನಿನಗೆ ನಮಸ್ಕಾರ ಮಾಡುತ್ತೇನೆ. ನಾನು ದೀನ, ನಿನಗೆ ಶರಣಾಗಿದ್ದೇನೆ. ನೀವು ನನ್ನ ಮೇಲೆ ಪ್ರಸನ್ನರಾಗಿ.’’

ಈ ಸ್ತೋತ್ರವನ್ನು ನಿತ್ಯ ಪ್ರಾತಃಕಾಲ ಪಠಣ ಮಾಡಬೇಕು.

೭. ಸಾಡೇಸಾತಿ ಇರುವವರು ಮಾಡಬೇಕಾದ ಉಪಾಯ

ಅ. ಯಾರಿಗೆ ಸಾಡೇಸಾತಿ (ಶನಿದೋಷ) ಇದೆಯೋ, ಅವರು ಶನಿಸ್ತೋತ್ರವನ್ನು ಪ್ರತಿದಿನ ಪಠಿಸಬೇಕು.

ಆ. ಶನಿಯ ಶನಿದೋಷ ನಿವಾರಣೆಗಾಗಿ ಜಪ, ದಾನ ಮತ್ತು ಪೂಜೆಯನ್ನು ಅವಶ್ಯ ಮಾಡಬೇಕು.

ಇ. ಪೀಡಾಪರಿಹಾರಕ್ಕಾಗಿ ಶನಿವಾರ ಅಭ್ಯಂಗ ಸ್ನಾನ ಮಾಡಿ ನಿತ್ಯ ಶನಿಸ್ತೋತ್ರ ಪಠಣ ಮಾಡಬೇಕು. ಶನಿವಾರ ಶನಿಯ ದರ್ಶನ ಪಡೆದು ಶನಿದೇವರಿಗೆ ಉದ್ದು ಮತ್ತು ಉಪ್ಪನ್ನು ಅರ್ಪಣೆ ಮಾಡಬೇಕು. ತೈಲಾಭಿಷೇಕ ಮಾಡಬೇಕು. ಕಪ್ಪು ಹೂವುಗಳನ್ನು ಅರ್ಪಿಸಿದರೆ ಪೀಡೆಯ ಪರಿಹಾರವಾಗುವುದು. ಕಪ್ಪು ಹೂವುಗಳು ಸಿಗದಿದ್ದರೆ ನೀಲಿ ಬಣ್ಣದ ಉದಾ. ಶಂಖಪುಷ್ಪ, ಕೃಷ್ಣಕಮಲ, ಅಸ್ಟರ ಇತ್ಯಾದಿ ಹೂವುಗಳನ್ನು ಅರ್ಪಿಸಬೇಕು.

ಉ. ಸಾಧ್ಯವಾದರೆ ಶನಿವಾರ ಏಕಭುಕ್ತರಾಗಿರಬೇಕು (ಒಪ್ಪೊತ್ತು ಭೋಜನ ಮಾಡುವುದು)

ಊ. ನೀಲಮಣಿಯ ಉಂಗುರವನ್ನು ಧರಿಸಬೇಕು.’

– ಸೌ. ಪ್ರಾಜಕ್ತಾ ಜೋಶಿ (ಜ್ಯೋತಿಷ್ಯ ಫಲಿತ ವಿಶಾರದೆ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ (೨೮.೧೨.೨೦೨೨)