ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿ !

‘ದೇವರಪೂಜೆಯಲ್ಲಿ ಬಳಸುವ ವಸ್ತ್ರಗಳನ್ನು ಉದಾ. ದೇವರನ್ನು ಒರೆಸುವ ಬಟ್ಟೆ, ದೇವರಕೋಣೆಯಲ್ಲಿ ದೇವತೆಗಳಿಗೆ ಆಸನವೆಂದು ಉಪಯೋಗಿಸಿದ ಬಟ್ಟೆಗಳನ್ನು ಇತರ ಬಟ್ಟೆಗಳೊಂದಿಗೆ ಒಗೆಯಬಾರದು. ಅವುಗಳನ್ನು ಯಾವಾಗಲೂ ಪ್ರತ್ಯೇಕವಾಗಿ ಒಗೆಯಬೇಕು. ದೇವತೆಗಳಿಗಾಗಿ ಉಪಯೋಗಿಸಿದ ಬಟ್ಟೆಗಳು ದೇವರ ಪೂಜೆಯಿಂದ ಸಾತ್ತ್ವಿಕವಾಗಿರುತ್ತವೆ. ಅವುಗಳನ್ನು ನಮ್ಮ ಇತರ ಬಟ್ಟೆಗಳೊಂದಿಗೆ ಒಗೆದರೆ ನಮ್ಮ ಬಟ್ಟೆಗಳಲ್ಲಿನ ರಜ-ತಮದಿಂದ ಆ ಬಟ್ಟೆಗಳಲ್ಲಿನ ಸಾತ್ತ್ವಿಕತೆ ಕಡಿಮೆಯಾಗುತ್ತದೆ. ಇದೇ ರೀತಿ ಸಂತರ ಬಟ್ಟೆಗಳ ಸಂದರ್ಭದಲ್ಲಿಯೂ ಆಗುತ್ತದೆ. ಆದ್ದರಿಂದ ಸಂತರ ಬಟ್ಟೆಗಳನ್ನೂ ಪ್ರತ್ಯೇಕವಾಗಿ ಒಗೆಯಬೇಕು. ವಾಚಕರೂ ಈ ಚೌಕಟ್ಟನ್ನು ಓದಿ ಮೇಲಿನಂತೆ ಕೃತಿಯನ್ನು ಅವಶ್ಯವಾಗಿ ಮಾಡಬೇಕು, ಅದರೊಂದಿಗೆ ಇತರರಿಗೂ ಪ್ರಬೋಧನೆ ಮಾಡಬೇಕು.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧೫.೧೨.೨೦೨೨)
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !