ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿ !

‘ದೇವರಪೂಜೆಯಲ್ಲಿ ಬಳಸುವ ವಸ್ತ್ರಗಳನ್ನು ಉದಾ. ದೇವರನ್ನು ಒರೆಸುವ ಬಟ್ಟೆ, ದೇವರಕೋಣೆಯಲ್ಲಿ ದೇವತೆಗಳಿಗೆ ಆಸನವೆಂದು ಉಪಯೋಗಿಸಿದ ಬಟ್ಟೆಗಳನ್ನು ಇತರ ಬಟ್ಟೆಗಳೊಂದಿಗೆ ಒಗೆಯಬಾರದು. ಅವುಗಳನ್ನು ಯಾವಾಗಲೂ ಪ್ರತ್ಯೇಕವಾಗಿ ಒಗೆಯಬೇಕು. ದೇವತೆಗಳಿಗಾಗಿ ಉಪಯೋಗಿಸಿದ ಬಟ್ಟೆಗಳು ದೇವರ ಪೂಜೆಯಿಂದ ಸಾತ್ತ್ವಿಕವಾಗಿರುತ್ತವೆ. ಅವುಗಳನ್ನು ನಮ್ಮ ಇತರ ಬಟ್ಟೆಗಳೊಂದಿಗೆ ಒಗೆದರೆ ನಮ್ಮ ಬಟ್ಟೆಗಳಲ್ಲಿನ ರಜ-ತಮದಿಂದ ಆ ಬಟ್ಟೆಗಳಲ್ಲಿನ ಸಾತ್ತ್ವಿಕತೆ ಕಡಿಮೆಯಾಗುತ್ತದೆ. ಇದೇ ರೀತಿ ಸಂತರ ಬಟ್ಟೆಗಳ ಸಂದರ್ಭದಲ್ಲಿಯೂ ಆಗುತ್ತದೆ. ಆದ್ದರಿಂದ ಸಂತರ ಬಟ್ಟೆಗಳನ್ನೂ ಪ್ರತ್ಯೇಕವಾಗಿ ಒಗೆಯಬೇಕು. ವಾಚಕರೂ ಈ ಚೌಕಟ್ಟನ್ನು ಓದಿ ಮೇಲಿನಂತೆ ಕೃತಿಯನ್ನು ಅವಶ್ಯವಾಗಿ ಮಾಡಬೇಕು, ಅದರೊಂದಿಗೆ ಇತರರಿಗೂ ಪ್ರಬೋಧನೆ ಮಾಡಬೇಕು.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧೫.೧೨.೨೦೨೨)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !