
ಸನಾತನ ಸಂಸ್ಥೆಯ ಒಂದು ಆಶ್ರಮದಲ್ಲಿನ ಓರ್ವ ಸಾಧಕರು ಸೇವೆಯ ಅನುಕುಲಕ್ಕಾಗಿ ‘ವಾಟ್ಸಆಪ್’ ನ ಒಂದು ಗುಂಪನ್ನು ತಯಾರಿಸಿದ್ದರು. ಅದರಲ್ಲಿ ಕೆಲವೊಂದು ಸಾಧಕರನ್ನು ಸೇವೆಯ ವರದಿಯನ್ನು ತೆಗೆದುಕೊಳ್ಳಲು ಸೇರಿಸಲಾಗಿತ್ತು; ಆದರೆ ಅದರಲ್ಲಿನ ಓರ್ವ ಸಾಧಕರ ಸಂಚಾರಿವಾಣಿ ಸಂಖ್ಯೆ ಪ್ರಸ್ತುತ ಬಳಕೆಯಲ್ಲಿರಲಿಲ್ಲ, ಅಂದರೆ ಅವರು ಅದನ್ನು ರದ್ದು ಮಾಡಿದ್ದರು, ಈಗ ಅದನ್ನು ಸಮಾಜದ ಬೇರೊಬ್ಬ ವ್ಯಕ್ತಿ ಬಳಸುತ್ತಿದ್ದರು. ಗುಂಪನ್ನು ತಯಾರಿಸುವ ಸಾಧಕನ ಬಳಿ ಆ ಸಾಧಕನ ೨ ಸಂಪರ್ಕ ಸಂಖ್ಯೆಗಳಿದ್ದವು. ಒಂದು ಸಂಖ್ಯೆ ಹೊಸದು ಮತ್ತು ಇನ್ನೊಂದು ಸಂಖ್ಯೆ ಹಳೆಯದಾಗಿತ್ತು. ಅವರು ತಮ್ಮ ಮೊಬೈಲ್ನಿಂದ ಹಳೆಯ ಸಂಖ್ಯೆಯನ್ನು ತೆಗೆದಿರಲಿಲ್ಲ (ಡಿಲೀಟ ಮಾಡಿರಲಿಲ್ಲ). ಗುಂಪನ್ನು ತಯಾರಿಸುವ ಸಾಧಕರು ಅವಸರದಲ್ಲಿ ಸಾಧಕನ ಹಳೆಯ ಸಂಖ್ಯೆಯನ್ನು ವಾಟ್ಸಆಪ್ ಗ್ರೂಪ್ನಲ್ಲಿ ಸೇರಿಸಿದರು. ಹಾಗಾಗಿ ಆ ಗುಂಪಿನಲ್ಲಿನ ಸಂಭಾಷಣೆಯನ್ನು (Chatting) ಓರ್ವ ಅಪರಿಚಿತ ವ್ಯಕ್ತಿ ನೋಡಿದರು ಮತ್ತು ಓದಿದರು. ಆ ವ್ಯಕ್ತಿ ೨-೩ ಸಲ ಗುಂಪು ತಯಾರಿಸಿದ ಸಾಧಕನಿಗೆ ಕರೆ ಮಾಡಿ ‘ನೀವು ನನ್ನ ಸಂಖ್ಯೆಯನ್ನು ಏಕೆ ಸೇರಿಸಿದ್ದೀರಿ ? ನೀವು ಪೊಲೀಸರಲ್ಲಿ ದೂರು ನೀಡಿ ನನ್ನನ್ನು ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸುವವರಿದ್ದೀರಿ, ಯಾವ ವ್ಯಕ್ತಿಯ ಸಂಖ್ಯೆ ಎಂದು ನೀವು ನನ್ನ ಸಂಖ್ಯೆಯನ್ನು ಸೇರಿಸಿರುವರೋ, ಆ ವ್ಯಕ್ತಿಯ ಹೊಸ ಸಂಖ್ಯೆಯನ್ನು ನನಗೆ ನೀಡಿ, ನನಗೆ ಅವರೊಂದಿಗೆ ಮಾತನಾಡುವುದಿದೆ’, ಇತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಅಪರಿಚಿತ ವ್ಯಕ್ತಿಯ ಸಂಪರ್ಕವಾದ ನಂತರ ನಾವು ನಮ್ಮದು ತಪ್ಪಾಗಿದೆ ಎಂದು ಹೇಳಿದ ಮೇಲೆಯೂ ಅವರಿಂದ ಪುನಃ ಪುನಃ ಕರೆ ಬರುತ್ತಿತ್ತು ಹಾಗೆಯೇ ಆ ಗುಂಪಿನಲ್ಲಿರುವ ಇನ್ನೊರ್ವ ಸಾಧಕಿಯನ್ನು ಸಹ ಅವರು ೩-೪ ಬಾರಿ ಸಂಪರ್ಕಿಸಲು ಪ್ರಯತ್ನಿಸಿದರು.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಯಾರಿಂದಲೂ ಆಗಬಾರದೆಂದು, ಸಾಧಕರು ತಮ್ಮ ಸಂಚಾರಿವಾಣಿಯಲ್ಲಿ ಉಪಯೋಗಿಸದಿರುವ ಹಳೆಯ ಸಂಖ್ಯೆಗಳನ್ನು ‘ಡಿಲೀಟ್’ ಮಾಡಬೇಕು ಹಾಗೆಯೇ ಯಾವುದೇ ಸಾಮಾಜಿಕ ಮಾಧ್ಯಮದ ಗುಂಪಿನಲ್ಲಿ ಸಂಖ್ಯೆಯನ್ನು ಸೇರಿಸುವಾಗ ಅದನ್ನು ಖಚಿತಪಡಿಸಿಯೇ (Confirm ಮಾಡಿಯೇ) ಸೇರಿಸಬೇಕು.
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !